ಹಾಡುಗಳು ಅಳಿಸುತ್ತಿವೆ,  ಸಂತೈಸುತ್ತಿವೆ


Team Udayavani, Jan 1, 2019, 12:30 AM IST

10.jpg

ಈ ಜಗತ್ತು ಯಾವಾಗ ಪ್ರೀತಿಸುವ ಜೀವಗಳನ್ನು ಒಂದು ಮಾಡಿದೆ ಹೇಳು? ನಿನ್ನ ಮನೆಯಲ್ಲಿ ನಿನ್ನನ್ನು ಕೂಡಿ ಹಾಕಿದರು. ನನ್ನ ಬೆನ್ನ ಮೇಲೆ ಬಾಸುಂಡೆಗಳು ಮೂಡಿದವು. ಆರ್ಕೆಸ್ಟ್ರಾದಿಂದ ಗೇಟ್‌ ಪಾಸ್‌ ನೀಡಲಾಯಿತು. ಏನೆಲ್ಲಾ ಆಗಿ ಹೋದವು ಆ ವಿಷಮ ಸನ್ನಿವೇಶದಲ್ಲಿ. ಆನಂತರ ಒಮ್ಮೆಯೂ ನಿನ್ನ ಮುಖ ನಾನು ಕಾಣಲೇ ಇಲ್ಲ.    

“ಕಾಣದ ಕಡಲಿಗೆ ಹಂಬಲಿಸಿದೆ ಮನ’ ಅಂತ ದೊಡ್ಡ ಧ್ವನಿಯಲ್ಲಿ, ಸಿ. ಅಶ್ವಥ್‌ ಅವರನ್ನೇ ಇಮಿಟೇಟ್‌ ಮಾಡುತ್ತಾ ಹಾಡುತ್ತಿದ್ದ ಘಳಿಗೆಯಲ್ಲೇ ಕಂಡವಳು ನೀನು. “ಅದೆಷ್ಟು ತನ್ಮಯತೆಯಿಂದ ಹಾಡ್ತೀರಿ ನೀವು’ ಅಂತ ನೀನು ಬೆನ್ನು ತಟ್ಟಿದ ಮೇಲೆ ಕಾಲು ನೆಲದ ಮೇಲೆ ನಿಲ್ಲಲಿಲ್ಲ. ಆಗಷ್ಟೇ ಅರಳಿದ ಕುಸುಮದ ಹಾಗೆ, ಮೊಗದ ಮೇಲೆ ತಾಜಾ ನಗು, ಬೆಳದಿಂಗಳಂಥ ಬಣ್ಣ, ನೋಡಿದಷ್ಟೂ ನಿಗೂಢವೆನಿಸುವ, ಏನನ್ನೂ ಬಿಟ್ಟು ಕೊಡದ ಬೊಗಸೆ ಕಣ್ಣುಗಳು, ಹಣೆ ಮೇಲೆ ಕಚಗುಳಿಯಿಡುತ್ತಿದ್ದ ಮುಂಗುರುಳು, ಕೆಂಪು ಚೂಡಿಯ ಮೇಲೆ ಬಿಳಿಯ ವೇಲ್‌ ಧರಿಸಿದ ನಿನ್ನನ್ನು ನೋಡಿದ ಮೇಲೆ, ಯಾವ ಹುಡುಗ ತಾನೆ ಪ್ರೀತಿಯಲ್ಲಿ ಬೀಳದೆ ಇರಬಲ್ಲ ಹೇಳು? ನನಗೂ ಅದೇ ಆಗಿದ್ದು! 

ವಿದ್ಯೆ ತಲೆಗೆ ಹತ್ತದೆ ಇದ್ದಾಗ, ತುತ್ತಿನ ಚೀಲ ತುಂಬಿಸಲು ನೆರವಾದದ್ದೇ ನನ್ನ ದನಿ. ಸ್ಥಳೀಯ ಆರ್ಕೆಸ್ಟ್ರಾದಲ್ಲಿ ಹಾಡುಗಾರನಾಗಿ ಸೇರಿ ಮದುವೆ, ರಿಸೆಪ್ಷನ್‌, ಮನರಂಜನಾ ಕಾರ್ಯಕ್ರಮಗಳಲ್ಲಿ ಹಾಡುತ್ತಲೇ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೆ.

ಅಂದು ನಮ್ಮಿಬ್ಬರ ಮಧ್ಯೆ ನಡೆದ ಮಾತು, ಅಭಿರುಚಿಗಳ ವಿನಿಮಯವೇ ಇಬ್ಬರನ್ನೂ ತೀರಾ ಹತ್ತಿರವಾಗಿಸಿತ್ತು. ಅದಾದ ನಂತರ ಪ್ರತಿ ಕಾರ್ಯಕ್ರಮದಲ್ಲೂ ನಿನ್ನ ಉಪಸ್ಥಿತಿ, ಹಾಡಿಗೆ ಮತ್ತಷ್ಟು ಹುರುಪು ನೀಡುತ್ತಿತ್ತು. “ಬಡವನಾದರೆ ಏನು ಪ್ರಿಯೆ, ಕೈತುತ್ತು ತಿನಿಸುವೆ’ ಎಂದು ನಾನು ಹಾಡುವಾಗ ನಿನ್ನ ಕಣ್ಣೊಳಗೆ ಸಣ್ಣಗೆ ಸುಳಿಯುವ ಚಕ್ರತೀರ್ಥ. “ನವಿಲೂರಿನೊಳಗೆಲ್ಲ ನೀನೆ ಬಲು ಚೆಲುವೆ ಅದಕೆ ನಮ್ಮಿಬ್ಬರಿಗೆ ನಾಳೆಯೇ ಮದುವೆ’ ಎಂದು ಹಾಡಿದಾಗ ನಾಚಿ ನೀರಾಗುತ್ತಿದ್ದ ನೀನು ಇನ್ನಷ್ಟು ಅಂದವಾಗಿ ಕಾಣುತ್ತಿದ್ದೆ. ನಾನು ಎದೆತುಂಬಿ ಹಾಡುತ್ತಿದ್ದ ಭಾವಗೀತೆಗಳೇ ನಮ್ಮಿಬ್ಬರ ಹೃದಯಗಳು ಒಂದಾಗಲು ಕಾರಣವಾಗಿದ್ದು ನನಗಿಂದಿಗೂ ಅಚ್ಚರಿ. 

ಕೇರಿಯ ಕೊನೆಯ ತಿರುವಿನಲ್ಲಿ ಈಗಲೋ ಆಗಲೋ ಬೀಳುತ್ತಿದ್ದ ಮುರುಕು ಗುಡಿಸಲಿನ ಹುಡುಗ ನಾನು. ನೀನೋ ಮಹಲಿನ ರಾಣಿ. ಆದರೆ ಪ್ರೀತಿ ಅರಳಲು ಅಂತಸ್ತು ಅಡ್ಡಿಯಾಗಲಿಲ್ಲ. “ನೀನು ಭಾವಗೀತೆಗಳನ್ನೇ ಏಕೆ ಹಾಡುತ್ತೀಯಾ?’ ಎಂದವಳಿಗೆ, “

ನನ್ನ ದುಃಖದ ಕ್ಷಣಗಳಲ್ಲಿ ಆಸರೆಯಾಗಿದ್ದು ಇದೇ ಭಾವಗೀತೆಗಳು. ಬದುಕಿನಿಂದ ಎದ್ದು ನಡೆದು ಬಿಡಬೇಕು ಅಂತ ತೀರಾ ಹತಾಶನಾದಾಗ ಕೈಡಿದು ಬದುಕಿಗೆ ಹುರುಪು ತುಂಬಿದ್ದೂ ಇವೇ ಗೀತೆಗಳು. ಈಗ ನೋಡು ನನಗೀಗ ಅವೇ ಅನ್ನ ಹಾಕುತ್ತಿವೆ’ ಅಂದಾಗ, “ಮೌನ ತಬ್ಬಿತು ನೆಲವ ಜುಮ್ಮೆನೆ ಪುಳಕಗೊಂಡಿತು ಧಾರಿಣಿ’ ಎನ್ನುವ ಹಾಗೆ ಗಟ್ಟಿಯಾಗಿ ತಬ್ಬಿಕೊಂಡ ನಿನ್ನ ತಲೆ ನೇವರಿಸುತ್ತಿದ್ದೆ.

ಭಾವಗೀತದ ದೋಣಿ ಹಾಯಾಗಿ ಹರಿಸುತ್ತಿದ್ದ ಘಳಿಗೆಯಲ್ಲೇ ಆಕಾಶ ಬಿಕ್ಕುವ ಸದ್ದು ಎದೆ ನಡುಗಿಸಿದ್ದು ಸುಳ್ಳಲ್ಲ. ಈ ಜಗತ್ತು ಯಾವಾಗ ಪ್ರೀತಿಸುವ ಜೀವಗಳನ್ನು ಒಂದು ಮಾಡಿದೆ ಹೇಳು? ನಿನ್ನ ಮನೆಯಲ್ಲಿ ನಿನ್ನನ್ನು ಕೂಡಿ ಹಾಕಿದರು. ನನ್ನ ಬೆನ್ನ ಮೇಲೆ ಬಾಸುಂಡೆಗಳು ಮೂಡಿದವು. ಆರ್ಕೆಸ್ಟ್ರಾದಿಂದ ಗೇಟ್‌ ಪಾಸ್‌ ನೀಡಲಾಯಿತು. ಏನೆಲ್ಲಾ ಆಗಿ ಹೋದವು ಆ ವಿಷಮ ಸನ್ನಿವೇಶದಲ್ಲಿ. ಆನಂತರ ಒಮ್ಮೆಯೂ ನಿನ್ನ ಮುಖ ನಾನು ಕಾಣಲೇ ಇಲ್ಲ. ಈಗ ಕೊರಳ ಸೆರೆಯುಬ್ಬಿ “ಹೇಳಿ ಹೋಗು ಕಾರಣ ಹೋಗುವ ಮೊದಲು’ ಅನ್ನುವ ಹಾಡನ್ನಷ್ಟೇ ಹಾಡುತ್ತಿದ್ದೇನೆ. ಸಾಂತ್ವನಗೈಯಲು ಯಾರೂ ಇಲ್ಲ. ನೀನುಳಿಸಿ ಹೋದ ಭಾವಗೀತೆಗಳ ವಿನಹ.  

ನಾಗೇಶ್‌ ಜೆ. ನಾಯಕ, ಉಡಿಕೇರಿ

ಟಾಪ್ ನ್ಯೂಸ್

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.