ಬದುಕೆಂದರೆ ನೋವು ಬದುಕೆಂದರೆ ನಲಿವು!


Team Udayavani, Jan 1, 2019, 12:30 AM IST

125.jpg

ಈಗ ಹಳೆಯದನ್ನೆಲ್ಲ ನೆನಪಿಸಿಕೊಂಡ್ರೆ ಎಷ್ಟೊಂದ್‌ ನಗು ಬರುತ್ತೆ ಅಂದ್ರೆ, ಎಲ್ಲರ ಜೊತೆ ನಕ್ಕು ನಕ್ಕು ಸುಸ್ತಾಗಿ, ಕೊನೆಗೆ ಒಬ್ಬಳೇ ಉಳಿದಾಗ, ನನ್ನ ಜೊತೆ ಇರೋದು ಬರೀ ಕಣ್ಣೀರು.

ನನ್ನ ಪ್ರೀತಿಯ ಹುಡುಗ ,
ದುಃಖದ ಕಡಲಿನಿಂದ ಈಗಷ್ಟೇ ಎದ್ದು ಬಂದೆ. ನನ್ನೆಲ್ಲಾ ದುಃಖದ ಮೂಲ, ನೀನಿನ್ನು ನನ್ನ ಬದುಕಿನಲ್ಲಿ ಬರಲಾರೆಯೆಂಬ ಒಂದೇ ಒಂದು ಸತ್ಯ. ನನಗೆಲ್ಲಾ ಅರ್ಥವಾಗುತ್ತೆ. ನಾನು ನೀನು ಜತೆಗಿದ್ದಾಗ ಕನಸು ಕಾಣುವುದು ಎಷ್ಟೊಂದು ಸುಲಭವಿತ್ತು. ಅದೇ ನೀನು ನಿನ್ನ ಮನೆಯಲ್ಲಿದ್ದಾಗ, ಮನೆಯವರು ಕಾಣುವ ಕನಸುಗಳಲ್ಲಿ ನೀನಿರುತ್ತೀಯ. ಅವರ ಕನಸುಗಳನ್ನು ನೀನು ಈಡೇರಿಸುತ್ತೀಯ ಎಂಬ ಅದಮ್ಯ ನಂಬಿಕೆ ಅವರಿಗಿದೆ. ಸಮಸ್ಯೆಯೆಂದರೆ, ಅವರ ಕನಸುಗಳಲ್ಲಿ ನಾನಿಲ್ಲ. ಅವರಿಗೆ ಅವರ ಕನಸುಗಳೇ ಪರಮ ಸತ್ಯ. ಆ ಸತ್ಯಗಳೇ ಅವರ ಸಂತೋಷದ‌ ಮೂಲವಸ್ತು. ಅದು ಚೂರು ಅತ್ತಿತ್ತಲಾದರೆ ಮನೆಯೆಂಬುದು ರಣರಂಗ. ನಿನ್ನನ್ನು ಮನೆಯವರೆಲ್ಲರೂ ಅದೆಷ್ಟು ಪ್ರೀತಿಸುತ್ತಾರೆ. ಅವರ ಪ್ರೀತಿಯ ಮುಂದೆ, ನಿನ್ನೆ ಮೊನ್ನೆ ಪರಿಚಯವಾದ ಹುಡುಗಿ ನಿನ್ನನ್ನು ಸಂಪೂರ್ಣವಾಗಿ ಬಯಸಿದ್ದು ತಪ್ಪಲ್ಲವಾ? 

ಹೌದೋ ಹುಡುಗ, ನೀನು ನನ್ನನ್ನು ದೂರ ಮಾಡಿ ಹೋಗುತ್ತಿರುವ ಕೋಪದಲ್ಲಿ, ನಿನ್ನನ್ನು ಮೋಸಗಾರ ಅಂತ ಹೇಳಿದ್ದೇನೋ ನಿಜ. ಆದರೆ, ನಿನ್ನ ಪರಿಸ್ಥಿತಿ ನನಗೆ ಅರ್ಥವಾಗುತ್ತೆ. ಸರಿ, ನೀನಿನ್ನು ಹೊರಡು. ನೀನು ನನ್ನ ಬದುಕಿಗೆ ದಕ್ಕಿದ್ದು ಇಷ್ಟೇ ಅಂದುಕೊಳ್ಳುತ್ತೇನೆ. ನೀನೊಂದು ಮುಗಿಯದ ಕನಸು. ಈ ಜಗತ್ತು ನನ್ನ ನಿನ್ನ ನಡುವೆ ತನಗಿಷ್ಟ ಬಂದಂತೆ ಒಂದು ಗೋಡೆ ಕಟ್ಟಿಬಿಟ್ಟಿದೆ. ನನಗೆ ಅದರ ಗೊಡವೆಯಿಲ್ಲ. ನೀನು ಯಾವತ್ತಿದ್ದರೂ ನನ್ನವನು. ನಿನ್ನ ಅನಿವಾರ್ಯತೆ, ನನ್ನ ನಿಸ್ಸಹಾಯಕತೆ ಎರಡೂ ನಮ್ಮಿಬ್ಬರ ಬಲಹೀನತೆಗಳು. ನಾವಿಬ್ಬರೂ ನಮ್ಮ ನಮ್ಮ ಪರಿಸ್ಥಿತಿಗೆ ಸೋತು ಶರಣಾದವರು. ನಾವಿಬ್ಬರೂ ಕೊಂಚ ಧೈರ್ಯ ಮಾಡಿದ್ದರೆ, ಈ ಬದುಕು ಹೇಗೋ ಇರುತ್ತಿತ್ತು. ನಾವಿಬ್ಬರೂ ಕಂಡ ಕನಸಿನಂತೆ. 

ಬಿಡು, ಈಗ ಅದೆಲ್ಲಾ ಆಗದ ಹೋಗದ ಮಾತುಗಳು. ನಿನ್ನ ಮದುವೆಯ ಸುದ್ದಿ ತಿಳಿಯಿತು. ನಂಗೆ ದುಃಖವಾಗಬೇಕಿತ್ತು. ಆದರೆ, ಒಳಗೆಲ್ಲೋ ಒಂದು ನಿರಾಳ ಭಾವ ನೆಲೆಸಿತು. ಯಾಕೋ ಗೊತ್ತಿಲ್ಲ! ನಿನ್ನ ಬದುಕಿನ ಹಾದಿಗೆ ನಾನು ಬಿಡಿಸಲಾಗದ ಬೇಲಿ, ಸರಿಸಲಾಗದ ಬಾಗಿಲಂತಾಗಿ ಬಿಟ್ಟಿದ್ದೇನೆಂಬ ಪಶ್ಚಾತ್ತಾಪ, ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆನೆಂಬ ತೊಳಲಾಟದಲ್ಲಿ ನೀ ನರಳಾಡುವಾಗ, ನನ್ನನ್ನು ಆವರಿಸಿ ಕಾಡುತ್ತಿತ್ತು. ಈಗ ನಿನ್ನ ನಿರಾಕರಣೆ ನನ್ನೊಳಗೆ ಒಂದು ನೆಮ್ಮದಿ ತಂದಿದೆ. ನಿನ್ನ ಪ್ರೀತಿಯಲ್ಲಿ ಕನಸುಗಳನ್ನಷ್ಟೇ ಕಂಡಿದ್ದ ನನಗೆ, ನಿನ್ನ ನಿರಾಕರಣೆಯಲ್ಲಿ ವಾಸ್ತವದ ಪರಿಚಯವಾಗುತ್ತಿದೆ. ಬದುಕೆಂದರೆ ಇಷ್ಟೇ ಅಲ್ಲ, ಅದು ನೋವು ನಲಿವುಗಳ ಸಂಗಮ. ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ನಡೆಯುವ ಪಯಣ… ಉಫ್… ಸದಾ ನಗುತ್ತಾ, ಬೇರೆಯವರ ಕಾಲೆಳೆದು ಖುಷಿ ಪಡುತ್ತಾ ಇದ್ದ ನನ್ನನ್ನು, ಈ ಬದುಕು ಎದುರು ಕೂರಿಸಿಕೊಂಡು, ಎಂಥಾ ಪಾಠ ಮಾಡಿತು! ಈಗ ಹಳೆಯದನ್ನೆಲ್ಲ ನೆನಪಿಸಿಕೊಂಡ್ರೆ ಎಷ್ಟೊಂದ್‌ ನಗು ಬರುತ್ತೆ ಅಂದ್ರೆ, ಎಲ್ಲರ ಜೊತೆ ನಕ್ಕು ನಕ್ಕು ಸುಸ್ತಾಗಿ, ಕೊನೆಗೆ ಒಬ್ಬಳೇ ಉಳಿದಾಗ, ನನ್ನ ಜೊತೆೆ ಇರೋದು ಬರೀ ಕಣ್ಣೀರು. ಥೂ, ಈ ಭಾವನೆಗಳಿಗೆ ಗುಲಾಮರಾಗ್ಬಾರ್ದು. 

ಲೋ ಹುಡ್ಗ ನೀನಾದ್ರೂ ಖುಷಿಯಾಗಿ ಚೆನ್ನಾಗಿರು. ನಿನ್ನ ನೆನಪೇ ನಂಗೆ ಸವಿಗನಸು. ಯಾವತ್ತಾದ್ರೂ ದುಃಖ ಆದಾಗ, ಅವಿÛಬೇìಕಿತ್ತು ಅಂತ ನನ್ನನ್ನ ಒಂದ್‌ ಕ್ಷಣ ನೆನಪು ಮಾಡ್ಕೊà. ನಂಗೆ ಅದಷ್ಟೇ ಸಾಕು.. ಮೈ ಡಿಯರ್‌ ಕೋತಿ, ಬಾಯ… ಬಾಯ್‌… 

ನಿನ್ನವಳು (?)

ಅಮ್ಮು, ಮಲ್ಲಿಗೆಹಳ್ಳಿ

ಟಾಪ್ ನ್ಯೂಸ್

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

7-brijesh

Brijesh Chowta; ಎ.4: ಅಧಿಕೃತ ನಾಮಪತ್ರ ಸಲ್ಲಿಕೆ; ಕ್ಯಾ| ಚೌಟರ ಆಸ್ತಿ ಇಷ್ಟು !

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

6-good-friday

Good Friday: ಕ್ರೈಸ್ತರಿಂದ ಕೊನೆಯ ಭೋಜನದ ಸ್ಮರಣೆ

Kannada Cinema: ತೆರೆಗೆ ಬಂತು ಯುವ, ತಾರಿಣಿ

Kannada Cinema: ತೆರೆಗೆ ಬಂತು ಯುವ, ತಾರಿಣಿ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.