ಅವನು ಮೀನು ಪ್ರಿಯ ನಾನು ಕೋಳಿ ಪ್ರಿಯೆ!


Team Udayavani, Feb 12, 2019, 12:30 AM IST

x-8.jpg

“ನಿಮ್ಮ ಮನೆಯಲ್ಲಿ ಏನಂದ್ರು?’ ಅಂತ ನೀನು ಮೆಸೇಜ್‌ ಮಾಡಿದಾಗ, “ಗೊತ್ತಿಲ್ಲ’ ಎಂದು ಸುಳ್ಳು ಹೇಳಿದೆ. ಆದಾಗಲೇ ಮನೆಯಲ್ಲಿ ನಿನ್ನನ್ನು ಒಪ್ಪಾಗಿತ್ತು. ನನ್ನ ಒಪ್ಪಿಗೆಯ ಮುದ್ರೆಗಾಗಿ ಅವರೆಲ್ಲ ಕಾಯುತ್ತಿದ್ದರು. ಪರವಾಗಿಲ್ಲ, ಕಡೆಗೂ ನೀನು ನನ್ನ ಒಲಿಸಿಕೊಂಡುಬಿಟ್ಟೆ!

ದೂರದ ಮಾಯಾನಗರಿಯವಳು ನಾನು,  ಸಮುದ್ರ ತೀರದವನು ನೀನು. ನಮ್ಮಿಬ್ಬರ ಪರಿಚಯಕ್ಕೆ ದಾರಿ ಮಾಡಿಕೊಟ್ಟಿದ್ದೇ ನಮ್ಮ ಮನೆಯವರು. “ಸಾಕಿನ್ನು ನಿನ್ನ ಸಾಧನೆ-ಸಾಹಸ, ಇನ್ನಾದರೂ ಮದುವೆಯಾಗೇ’ ಎಂಬುದು ನನಗೆ ನಿತ್ಯದ ಉಪದೇಶವಾಗಿತ್ತು. ನಿಂಗೂ ಅಷ್ಟೇ ಅಂತ ಕೇಳ್ಪಟ್ಟೆ. ದೂರದ ಊರುಗಳಲ್ಲಿದ್ದ ನಮ್ಮಿಬ್ಬರ ಮನ ಒಂದಾಗಲು ಮೂರ್ನಾಲ್ಕು ತಿಂಗಳು ಬೇಕಾದವು. ಅಲ್ಲಿಯವರೆಗೂ ಅನುಮಾನ, ಗೊಂದಲಗಳಲ್ಲಿ ನಮ್ಮ ಮನಸ್ಸುಗಳು ಅನುಭವಿಸಿದ ಯಾತನೆಯ ಹಿತ ನಮಗಷ್ಟೇ ತಿಳಿದಿದೆ.

“ಅವನು ಸಮುದ್ರದೂರಿನವ, ನಾನು ಸದಾ ಓಡುತ್ತಲೇ ಇರುವ ಮಾಯಾನಗರಿಯವಳು. ನಮ್ಮಿಬ್ಬರ ಯೋಚನೆ-ಚಿಂತನೆ ಒಂದೇ ಬಗೆಯದ್ದಾಗಿರುತ್ತ? ನಾವಿಬ್ಬರು ಒಂದಾದರೆ ಬದುಕು ಚೆನ್ನಾಗಿರಬಹುದಾ?’ ಅಂತೆಲ್ಲಾ ತಲೆಯಲ್ಲಿ ಹುಳ ಬಿಟ್ಟುಕೊಂಡಿದ್ದಾಯಿತು. ಅವನು ಮೀನು ಪ್ರಿಯನಾದರೆ, ನಾನು ಕೋಳಿ ಪ್ರೇಮಿ. ಅವನು ಶಾಂತಸ್ವರದವನು. ನಾನೋ ಆರ್ಭಟಿಸುವ ಅಮ್ಮಣ್ಣಿ.  ಊಟ-ತಿಂಡಿ, ಉಡುಗೆ-ತೊಡುಗೆ, ಊರು-ಕೇರಿ, ಬೆಳೆದು ಬಂದ ಪರಿಸರ ಎಲ್ಲವೂ ಭಿನ್ನ ವಿಭಿನ್ನ. ಇಬ್ಬರಲ್ಲೂ ಹೇಳಿಕೊಳ್ಳುವಂಥ ಒಂದೇ ಒಂದು ಸಮಾನ ಅಂಶಗಳಿಲ್ಲ. ಹೀಗೆಂದುಕೊಂಡೇ ದಿನ ತಳ್ಳುತ್ತಿದ್ದೆ.

ಮಾರ್ಡನ್‌ ಉಡುಗೆ ಮೋಹ ನನಗೆ, ಸಾಂಪ್ರದಾಯಿಕ ಉಡುಗೆಯೆಂದರೆ ಅವನಿಗೆ ಪ್ರೀತಿ. ನಾನು ಬೋಲ್ಡ್‌, ಅವನು ಅಂಜುಬುರಕ. ನಾನು ಕಲ್ಲುಬಂಡೆಗೂ ಮಾತು ಬರಿಸುವಳು, ಅವನದು ಮೀನಿನ ಹೆಜ್ಜೆ ಕೇಳುವಂಥ ಮೌನ. ಹೀಗಿರುವ ನಾವು ಸಪ್ತಪದಿ ತುಳಿಯುವುದು ಹೇಗಪ್ಪಾ ಎಂದು ಹೆದರಿದ್ದೆ. ಆದರೆ ಅದ್ಯಾವ ಗಳಿಗೆಯಲ್ಲಿ ನಿನ್ನ ಮೇಲೆ ಧುಮ್ಮಿಕ್ಕುವ ಪ್ರೀತಿ ಮೂಡಿತೋ ತಿಳಿಯದು.

ಮೊದಲ ಬಾರಿಗೆ ನಿನ್ನೊಂದಿಗೆ ಮಾತಾಡಿದ ಆ ಘಳಿಗೆ ಎದೆಯಲ್ಲಿ ಸಣ್ಣ ಕಂಪನ. ಆದರೆ ನೀನೇ ಈ ಬದುಕಿನ ವಾರಸುದಾರ ಆಗುತ್ತೀಯೆಂಬ ಕಲ್ಪನೆ ಖಂಡಿತಾ ಇರಲಿಲ್ಲ. ಆ ದಿನ ಮಳೆ ಬೀಳುವ ಹೊತ್ತಿಗೆ ನಾನೇ ಕರೆ ಮಾಡಿದೆ. ನೀನು ಕುಂಟು ನೆಪ ಹೇಳಿ ತಪ್ಪಿಸಿಕೊಂಡೆ. ಮತ್ತೆ ನಿನ್ನಿಂದ ಕರೆ, ಸಂದೇಶ ಬಂದರೂ ನಾನು ಮಹಾಮೌನಿಯಂತೆ ನಟಿಸಿದೆ. ಅದೊಂಥರಾ ಅಪ್ಯಾಯಮಾನ ಘಳಿಗೆ. ಮೊದಲ ಬಾರಿಗೆ ಮೌನದ ಹಿತ ಅನುಭವಿಸಿದೆ. “ನಿಮ್ಮ ಮನೆಯಲ್ಲಿ ಏನಂದ್ರು?’ ಅಂತ ನೀನು ಮೆಸೇಜ್‌ ಮಾಡಿದಾಗ, “ಗೊತ್ತಿಲ್ಲ’ ಎಂದು ಸುಳ್ಳು ಹೇಳಿದೆ. ಆದಾಗಲೇ ಮನೆಯಲ್ಲಿ ನಿನ್ನನ್ನು ಒಪ್ಪಾಗಿತ್ತು. ನನ್ನ ಒಪ್ಪಿಗೆಯ ಮುದ್ರೆಗಾಗಿ ಅವರೆಲ್ಲ ಕಾಯುತ್ತಿದ್ದರು. ಪರವಾಗಿಲ್ಲ, ಕಡೆಗೂ ನೀನು ನನ್ನ ಒಲಿಸಿಕೊಂಡುಬಿಟ್ಟೆ!

ಆ ದಿನ ನೀನು ಹೊಸ ನಂಬರ್‌ನಿಂದ ಕರೆ ಮಾಡಿ ಮಾತಾಡಿದಾಗಲೇ ನಿನ್ನ ದನಿಗೆ ಸೋತು ಹೋಗಿದ್ದೆ. ಅಷ್ಟು ಚಂದನೆಯ ನಿನ್ನ ಮನಕ್ಕೆ ಅರಸಿಯಾಗದಿರಲು ಮನಸ್ಸಾಗಲಿಲ್ಲ. ನನ್ನ ವೃತ್ತಿ ಬಗ್ಗೆ ಗೌರವ, ಕೋಳಿ ಪ್ರೀತಿ ಬಗ್ಗೆ ನಿಂಗಿಲ್ಲದ ಬೇಸರ, ಎಲ್ಲಕ್ಕಿಂತ ಹೆಚ್ಚಾಗಿ ನನ್ನ ಬಾಲ್ಯದ ಸ್ನೇಹಿತರ ಬಗ್ಗೆ ನೀ ತೋರಿದ ಅಭಿಮಾನ ನನ್ನಲ್ಲಿ ಆತ್ಮವಿಶ್ವಾಸ ಮೂಡಿಸಿತ್ತು. ಇವೆಲ್ಲ ಕಾರಣಗಳಿಂದಲೇ ನಿನ್ನನ್ನು ಒಪ್ಪಿಬಿಟ್ಟೆ ಕಣೋ. ನಿನಗಾಗಿ ಹಂಬಲಿಸಿದ್ದು, ಧ್ಯಾನಿಸಿದ್ದು ಗುಟ್ಟಾಗಿ ಪ್ರಾರ್ಥಿಸಿದ್ದು ಯಾಕೇಂತ ಈಗಲಾದ್ರೂ ಗೊತ್ತಾಯ್ತ? 

ಇಂತಿ ನಿನ್ನವಳು 
ಶ್ರುತಿ ಮಲೆನಾಡತಿ

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.