ನಾನಲ್ದೆ  ನಿಂಗೆ ಇನ್ಯಾರು ಬೈಬೇಕು?


Team Udayavani, Feb 12, 2019, 12:30 AM IST

x-10.jpg

ನಾನು ನಿನ್ನನ್ನು ತುಂಬಾ ಕೇರ್‌ ಮಾಡ್ತೀನಿ. ನಿನ್ನ ಬಗೆಗಿನ ಸಣ್ಣಪುಟ್ಟ ವಿಷಯಗಳನ್ನು ಅತಿಯಾಗಿ ಮನಸ್ಸಿಗೆ ತಗೋತೀನಿ. ಅದೆಲ್ಲಾ ನಿಂಗೆ ಹಿಂಸೆ ಅನ್ನಿಸಿದ್ರೆ ನಂಗೆ ನೇರವಾಗಿ ಹೇಳು. 

ಹೇ ಮುದ್ದೂ, ಹೇ ಬಂಗಾರ, ಹೇ ಚಿನ್ನಾ, ಹೇ ಬೇಬಿ…. ಹೀಗೆ ದಿನಕ್ಕೆ ಹತ್ತಾರು ಬಾರಿ ನೀ ಕಳಿಸುತ್ತಿದ್ದ ಸಂದೇಶಗಳೆಲ್ಲ ನಿಂತು ಹೋಗಿ, ಕೇವಲ ಹ್‌ಂ , ಹೂ, ಹಾಂ, ಹೌದಾ.. ಅಂತ ಪ್ರತಿಕ್ರಿಯೆಗಳು ಬರತೊಡಗಿದಾಗಲೇ ಗೊತ್ತಾಯ್ತು ನಿಂಗೆ ನನ್ನ ಮೇಲೆ ಕೋಪ ಬಂದಿದೆ ಅಂತ. ಯಾಕೆ ನಿಂಗೆ, ಇಷ್ಟೊಂದು ಕೋಪ?

ನಾನೇನಾದ್ರು ನಿಂಗೆ ಬೈದಿದ್ರೆ, ಅದು ನಿನ್ನ ಮೇಲೆ ಇರುವ ಪ್ರೀತಿಯಿಂದ ಮಾತ್ರ. ನೀ ತಪ್ಪು ಮಾಡಿದಾಗ ಕಾಳಜಿಯಿಂದ ಬೈದು, ಬುದ್ಧಿ ಹೇಳಬೇಕಾದವನು ನಾನಲ್ಲದೆ ಮತ್ಯಾರು? ಇದನ್ನೆಲ್ಲ ಹೇಳ್ತಾ ಇರೋದು ನಿನ್ನ ಒಳ್ಳೆಯದಕ್ಕೆ. ನಿಂಗೆ ಚೂರು ನೋವಾದರೂ ನನಗೆ ತಡ್ಕೊಳ್ಳೋಕೆ ಆಗಲ್ಲ. ಯಾಕೆಂದರೆ ನೀನೇ ನನ್ನ ಪ್ರಪಂಚ!

ದಯವಿಟ್ಟು ನಿನ್ನ ಕೋಪವನ್ನು ಸ್ವಲ್ಪ ಕಮ್ಮಿ ಮಾಡ್ಕೊ. ಕೋಪ ಒಳ್ಳೆಯದಲ್ಲ. ಅತಿಯಾದ ಕೋಪ ಅಮೃತವನ್ನೂ ವಿಷವಾಗಿಸಿ ಬಿಡುತ್ತೆ. ಕೋಪ ಬಂದಾಗ ಬುದ್ಧಿಗೂ- ಬಾಯಿಗೂ ಸಂಬಂಧವೇ ಇರೋದಿಲ್ಲ. ಏನೇನೋ ಬಡಬಡಿಸ್ತೀಯ. ಅದರಿಂದ ನಿನ್ನೆದುರಿಗೆ ಇರೋರಿಗಷ್ಟೇ ಅಲ್ಲ, ಕೋಪ ಇಳಿದ ಮೇಲೆ ನಿನಗೂ ನೋವಾಗುತ್ತೆ. ಇದನ್ನೇ ತಾನೆ ನಾನು ಮೊನ್ನೆ ನಿಂಗೆ ಹೇಳಿದ್ದು. ಅದಕ್ಕೂ ಸಿಟ್ಟು ಮಾಡಿಕೊಂಡರೆ ಹೇಗೆ? 

ನಾನು ನಿನ್ನನ್ನು ತುಂಬಾ ಕೇರ್‌ ಮಾಡ್ತೀನಿ. ನಿನ್ನ ಬಗೆಗಿನ ಸಣ್ಣಪುಟ್ಟ ವಿಷಯಗಳನ್ನು ಅತಿಯಾಗಿ ಮನಸ್ಸಿಗೆ ತಗೋತೀನಿ. ಅದೆಲ್ಲಾ ನಿಂಗೆ ಹಿಂಸೆ ಅನ್ನಿಸಿದ್ರೆ ನಂಗೆ ನೇರವಾಗಿ ಹೇಳು. ಕೋಪ ಮಾತ್ರ ಮಾಡ್ಕೊàಬೇಡ.

ಇಂತಿ ನಿನ್ನ ಪ್ರೀತಿಯ
ಮಹಮ್ಮದ್‌ ಅಲ್ಪಾಜ್‌

ಟಾಪ್ ನ್ಯೂಸ್

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.