ಕಪಾಟಿನಲ್ಲಿ ಸಿಕ್ಕಿತು ಕಳೆದು ಹೋಗದ ಪ್ರೀತಿ


Team Udayavani, Feb 26, 2019, 12:30 AM IST

x-9.jpg

ಕಳೆದ ವಾರ ಪ್ರವಾಸ ಹೋಗಿದ್ದಾಗ ರಾತ್ರಿ ಕ್ಯಾಂಪ್‌ ಫೈರ್‌ ಹಾಕಿ, ನಮ್ಮ ಮನೋರಂಜನೆಯ ಆಟ, ಹುಡುಗಾಟಗಳು ನಡೆದವು. ನಿನ್ನ ಪಾಳಿ ಬಂದಾಗ “ಕಲ್ಪನಾ ಛಾಯೆಯಲಿ, ನಲ್ಮೆಯ ನೌಕೆಯಲಿ’ ಗೀತೆಯನ್ನು ಅದೆಷ್ಟು ಭಾವಪೂರ್ಣವಾಗಿ ಅನುಭವಿಸಿ ಹಾಡಿದ್ದೆ ನೀನು. ನಾನಂತೂ ಮೈಮರೆತು ಚಪ್ಪಾಳೆ ಹೊಡೆದಿದ್ದೇ, ಹೊಡೆದಿದ್ದು. 

ಪ್ರೀತಿಯ ಮೊದಲ ಬೆಂಚ್‌ ಹುಡುಗನಿಗೆ, 
ನೆಲ ನೋಡಿಕೋತಾ ಬರ್ತಿದ್ದೆ, ನೆಲ ನೋಡಿಕೋತ ಹೋಗ್ತಿದ್ದೆ, ಸಂಕೋಚದ ಮುದ್ದೆ ನೀನು. ಯಾರಿಗೂ ಬೇಡದ ಫ‌ಸ್ಟ್ ಬೆಂಚ್‌ ನಿನಗೆ ಮಾತ್ರ ಸಿಂಹಾಸನ. ಕಾಫಿ, ಲಂಚ್‌ ಬ್ರೇಕ್‌ಗೂ ಕ್ಲಾಸ್‌ರೂಮ್‌ನಿಂದ ಹೊರಗೆ ಕಾಲಿಡದ ವಿಧೇಯ “ಕುಡುಮಿ’ ಎಂದೇ ಎಲ್ಲರೂ ನಿನ್ನನ್ನು ಚುಡಾಯಿಸುತ್ತಿದ್ದರು. 

ಎಲ್ಲರಂತೆ ನಿನ್ನನ್ನು ಜೀನ್ಸ್ ಪ್ಯಾಂಟ್‌, ಟಿ ಶರ್ಟ್‌ನಲ್ಲಿ ಕಂಡದ್ದೇ ಇಲ್ಲ. ಸಾದಾ ಉಡುಗೆ. ಆದರೇನು? ಎಲ್ಲರೂ ನಿನ್ನತ್ತ ತಿರುಗಿ ನೋಡುವಂತೆ ಮಾಡಿದ್ದು ನಿನ್ನ ವಾರ್ಷಿಕ ಫ‌ಲಿತಾಂಶ. ಯಾವುದೇ ಬ್ಯಾಕ್‌ ಲಾಗ್ಸ್‌ ಇಲ್ಲದೆ ಪಾಸ್‌ ಆದ  ಕೆಲವೇ ಪ್ರತಿಭಾವಂತರಲ್ಲಿ ನೀನು ಮೊದಲಿಗ. ಓದಿಗೂ ಉಡುಗೆಗೂ ಸಂಬಂಧ ಇಲ್ಲ ಅಂತ ನೀನು ಸಾಧಿಸಿ ತೋರಿಸಿದ್ದೆ. 

ಪಾರ್ಟ್‌ ಟೈಮ್‌ ಕೆಲಸ ಮಾಡಿ ಹಳ್ಳಿಯಲ್ಲಿರೋ ನಿನ್ನ ಮನೆಯವರಿಗೆ ನೆರವಾಗ್ತಿದ್ದೀಯ ಅಂತೆಲ್ಲ ಗುಸುಗುಸು ಕೇಳ್ಪಟ್ಟೆ. ನಿನ್ನ ಕಠಿಣ ಪರಿಶ್ರಮ ನನಗಂತೂ ತುಂಬಾ ಹಿಡಿಸಿದೆ. ಇನ್ನೇನು ಎರಡು  ತಿಂಗಳಲ್ಲಿ ನಮ್ಮ ಓದು ಮುಗಿದು ಕಾಲೇಜಿಗೆ ವಿದಾಯ ಹೇಳ್ತೀವಿ. ಅಷ್ಟರಲ್ಲಿ ನನ್ನ ಮನದ ಮಾತು ನಿನಗೆ ಹೇಳಲೇಬೇಕು. 

ನೆನಪಿದೆಯಾ, ಕಳೆದ ವಾರ ಪ್ರವಾಸ ಹೋಗಿದ್ದಾಗ ರಾತ್ರಿ ಕ್ಯಾಂಪ್‌ ಫೈರ್‌ ಹಾಕಿ, ನಮ್ಮ ಮನೋರಂಜನೆಯ ಆಟ, ಹುಡುಗಾಟಗಳು ನಡೆದವು. ನಿನ್ನ ಪಾಳಿ ಬಂದಾಗ “ಕಲ್ಪನಾ ಛಾಯೆಯಲಿ, ನಲ್ಮೆಯ ನೌಕೆಯಲಿ’ ಗೀತೆಯನ್ನು ಅದೆಷ್ಟು ಭಾವಪೂರ್ಣವಾಗಿ ಅನುಭವಿಸಿ ಹಾಡಿದ್ದೆ ನೀನು. ನಾನಂತೂ ಮೈಮರೆತು ಚಪ್ಪಾಳೆ ಹೊಡೆದಿದ್ದೇ, ಹೊಡೆದಿದ್ದು. ಆಗಲೇ ನಮ್ಮಿಬ್ಬರ ಕಂಗಳು ಪರಸ್ಪರ ಸಂಧಿಸಿದವು. ತಕ್ಷಣ ನಾನು ನಾಚಿ ತಲೆ ತಗ್ಗಿಸಿದೆ. ಆ ಕ್ಷಣವೇ ತೀರ್ಮಾನಿಸಿಬಿಟ್ಟೆ, ಮುಗುಳುನಗೆ ಚೆಲ್ಲುವಷ್ಟಾದರೂ ನಿನ್ನೊಂದಿಗೆ ಸ್ನೇಹ ಗಳಿಸಬೇಕು.

ನನ್ನ ಪುಣ್ಯ, ನಂತರದ ದಿನಗಳಲ್ಲಿ ಸಂಕೋಚದಿಂದಲೇ ನನ್ನತ್ತ ಕಣ್ಣರಳಿಸಿ, ತುಟಿ ಬಿಚ್ಚಿ ಹಲೋ ಹೇಳುವಷ್ಟು ಧೈರ್ಯ ಮಾಡಿದೆಯಲ್ಲ, ಅಷ್ಟು ಸಾಕು ನನಗೆ. ರೇಡಿಯೋದಲ್ಲಿ “ನೀನಂದ್ರೆ ನಂಗಿಷ್ಟ’ ಹಾಡು ಬರುವಾಗ ಕಲ್ಪನೆಯಲ್ಲಿ ನಾವಿಬ್ಬರೇ. ನನ್ನ ಭಾವನೆಗಳಿಗೆ ನೀನು ಸ್ಪಂದಿಸಬಲ್ಲೆ ಎಂದು ನನ್ನ ಮನಸ್ಸು ಹೇಳ್ತಿದೆ. ನಿನ್ನ ಮುಕ್ತ ಮಾತುಗಳಿಗೆ ಕಾಯುತ್ತಿರುವ ಭಾವಜೀವಿ’. 

ಲೈಬ್ರರಿಯಲ್ಲಿ ಅವನಿಗೆ ಅವಳು ಕೊಟ್ಟ ಪತ್ರ, ಮೂರು ವರ್ಷಗಳ ನಂತರ ಮತ್ತೆ ಅವಳ ಕೈಗೆ ಸಿಕ್ಕಿತ್ತು, ಅವನ ಕಪಾಟಿನಲ್ಲಿ.
 “ಏನದು ?’ ಅವನು ಕೇಳಿದ. 
“ಅಪ್ಲಿಕೇಷನ್‌. ನಿನ್ನ ಸಂಗಾತಿಯಾಗೋಕ್ಕೆ ಹಾಕಿದ್ನಲ್ಲ, ಅದು’ ನಕ್ಕಳು, “ಹುಚ್ಚು ಖೋಡಿ ಮನಸು, ಅದು ಹದಿನಾರರ ವಯಸು’ ಗುನುಗುತ್ತ. 

ಕೆ.ವಿ. ರಾಜಲಕ್ಷ್ಮಿ, ಬೆಂಗಳೂರು.  

ಟಾಪ್ ನ್ಯೂಸ್

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

38

Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್‌

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!

Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.