ಸ್ನೇಹಿತೆಯೂ ನೀನೇ, ಪ್ರೇಯಸಿಯೂ ನೀನೇ…


Team Udayavani, Mar 12, 2019, 12:30 AM IST

m-7.jpg

ಕಾಂತಿ ಸೂಸುವ ನಿನ್ನ ಕಣ್ಣುಗಳ ನೋಟದ ಧಾಟಿ ಈಗಲೂ ಹಾಗೇ ಇದೆ. ಎಲ್ಲ ನೋವುಗಳನ್ನು ಮರೆಸುವ ಚಂದದ ನಗು ಮೊಗದಲ್ಲಿದೆ. ಆದರೆ, ಈಗ ನಮ್ಮಿಬ್ಬರ ಮನಸ್ಸುಗಳ ನಡುವಿನ ಸೇತುವೆ ಮಾತ್ರ ಬದಲಾಗಿದೆ. ಪರಸ್ಪರರ ಭಾವನೆಗಳ ಹರಿವಿಗೆ ನೆರವಾಗಿದ್ದ ಸ್ನೇಹ ಸೇತುವೆ ಈಗ ಪ್ರೀತಿಯ ರಂಗು ಪಡೆದು, ಮತ್ತಷ್ಟು ಗಟ್ಟಿಯಾಗಿದೆ. 

ಪದವಿಯಲ್ಲಿ ನಾವಿಬ್ಬರೂ ಅಕ್ಕಪಕ್ಕದ ಬೆಂಚಿನಲ್ಲಿ ಕುಳಿತಿದ್ದರೂ, ಇಬ್ಬರ ನಡುವೆ ಮಾತು ಬೆಳೆಯಲು ತಿಂಗಳುಗಳೇ ಬೇಕಾಯ್ತು. ಮೊದಲಿಗೆ, ಕೇವಲ ಓರೆ ನೋಟ, ಜೊತೆಗೆ ಮುಗುಳುನಗು ಅಷ್ಟೇ. ಮಾತನಾಡಿಸುವ ಹಂಬಲವಿದ್ದರೂ ನಿನ್ನನ್ನು ನೋಡಿದಾಗ ಎಲ್ಲ ಮಾತುಗಳೂ ಎದೆಯಲ್ಲೇ ಉಳಿದುಹೋಗುತ್ತಿದ್ದವು. ಕೊನೆಗೊಂದು ದಿನ ಲೆಕ್ಚರರ್‌ ಕೊಟ್ಟ ಮನೆಗೆಲಸದಿಂದ ಅನಿವಾರ್ಯವಾಗಿ ನಾವಿಬ್ಬರೂ ಮಾತನಾಡಬೇಕಾಯ್ತು. ಆಮೇಲೆ, ನಮ್ಮ ಮಾತಿಗೆ ಫ‌ುಲ್‌ಸ್ಟಾಪ್‌ ಹಾಕೋಕೆ ಅದೇ ಲೆಕ್ಚರರ್‌, ನನ್ನನ್ನು ಹಿಂದಿನ ಬೆಂಚ್‌ಗೆ ಕಳಿಸಿದರು!  

ನಿನ್ನ ಸ್ನೇಹದ ಬಂಧನದಲ್ಲಿ ಆ ಮೂರು ವರ್ಷಗಳು ಹೇಗೆ ಕಳೆದವೋ ಗೊತ್ತೇ ಆಗಲಿಲ್ಲ. ಪದವಿ ಮುಗಿದ ನಂತರ ಇಬ್ಬರ ದಾರಿ, ಗುರಿ, ಎರಡೂ ಬದಲಾದವು. ನಾನು ಪತ್ರಿಕೋದ್ಯಮವನ್ನು ಆಯ್ದುಕೊಂಡರೆ, ನೀನು ಸಮಾಜಶಾಸ್ತ್ರ ಅಂತ ಹೊರಟುಬಿಟ್ಟೆ. ದೂರವಿದ್ದರೂ ಹಲವು ತಿಂಗಳು ಹತ್ತಿರವಿದ್ದಂತೆಯೇ ಇದ್ದೆವು. ಅಷ್ಟರಲ್ಲಿ ಏನೇನೋ ಘಟನೆಗಳು ನಡೆದು, ಒಂದು ವರ್ಷ ಇಬ್ಬರೂ ಮಾತಾಡಲಿಲ್ಲ.

ನಿನ್ನ ನೆನಪುಗಳು ಕಾಡುತ್ತಿದ್ದರೂ, ನಾನು ಮಾತಾಡುವ ಪ್ರಯತ್ನ ಮಾಡಲಿಲ್ಲ. ಹುಡುಗ ಎಂಬ ಅಹಂ ಕಾಡಿರಬೇಕು. ನೀನೂ ನನ್ನನ್ನು ಮರೆತಿರುತ್ತೀಯಾ ಅಂದುಕೊಂಡಿದ್ದಾಗ, ದಿಢೀರನೆ ಬಂದು ನಿಂತಿದ್ದೆ. ನಿನ್ನ ಒಂದು ಮುಗುಳು ನಗೆ, ಮುರಿದು ಬಿದ್ದ ನಮ್ಮ ಸ್ನೇಹದ ಸೇತುವೆಗೆ ಬೆಸುಗೆ ಹಾಕಿತು. ಅಂದಿನಿಂದ ಮತ್ತೆ ರಾತ್ರಿಯಿಡೀ ಫೋನ್‌ನಲ್ಲಿ ಪುರಾಣ, ಸಣ್ಣ ಸಣ್ಣ ಮುನಿಸು, ಹರಟೆ… ಎಗ್ಗಿಲ್ಲದೆ ಸಾಗಿತ್ತು. ಅದೊಂದು ದಿನ ಅದ್ಯಾರಧ್ದೋ ಲವ್‌ ಸ್ಟೋರಿ ಬಗ್ಗೆ ಮಾತಾಡುವಾಗ ನಾನು, “ಐ ಲವ್‌ ಯೂ’ ಅಂದುಬಿಟ್ಟೆ! ಆಗ, ನೀನು ಕೂಡ ನಕ್ಕು ಸುಮ್ಮನಾದೆ. ಆ ನಗುವಿನಲ್ಲಿ ಸಮ್ಮತಿಯ ಸೂಚನೆಯಿತ್ತು. ಅಂದಿನಿಂದ ಕಾಳಜಿ, ಕೋಪ, ಪ್ರೀತಿ, ಗಲಾಟೆ ಹೆಚ್ಚಾದವು. ಕನಸಿನ ಮೂಟೆಗಳು ಹೆಗಲೇರಿದವು. ಈಗ ಕಾಣುವ ಪ್ರತಿ ಕನಸಿನಲ್ಲಿಯೂ ನಾವಿಬ್ಬರೇ ಇದ್ದೇವೆ. ಮುಂಬರುವ ನಾಳೆಗಳಲ್ಲಿ ಎಲ್ಲ ಕನಸನ್ನೂ ನನಸು ಮಾಡುತ್ತೇನೆ. ಕಣ್ಣಲ್ಲಿ ಕಣ್ಣಿಟ್ಟು ನಿನ್ನನ್ನು ಕಾಪಾಡಿಕೊಳ್ಳುತ್ತೇನೆ. ಅಷ್ಟು ಭರವಸೆ ಕೊಡಬಲ್ಲೆ. 

ಮಹಾಂತೇಶ ದೊಡವಾಡ

ಟಾಪ್ ನ್ಯೂಸ್

1-weewqewqe

LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

crime (2)

Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Billionaire Priyanka; Here is the property details of Satish Jarakiholi’s daughter

Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Arrested: ತಂಬಾಕು ಉತ್ಪನ್ನ ಸಹಿತ ಬಂಧನ

Arrested: ತಂಬಾಕು ಉತ್ಪನ್ನ ಸಹಿತ ಬಂಧನ

Theft: ಮನೆಯಿಂದ ಕಳವು; ಸಿಸಿ ಟಿವಿ ದೃಶ್ಯ ಕೇಂದ್ರೀಕರಿಸಿ ತನಿಖೆ

Theft: ಮನೆಯಿಂದ ಕಳವು; ಸಿಸಿ ಟಿವಿ ದೃಶ್ಯ ಕೇಂದ್ರೀಕರಿಸಿ ತನಿಖೆ

1-wqeqwew

BJP ನುಡಿದಂತೆ ನಡೆಯದ ಕೇಂದ್ರ ಸರಕಾರ, 15 ಲ.ರೂ. ಬಂದಿದೆಯೇ?: ಜೆ.ಪಿ. ಹೆಗ್ಡೆ

4

ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು

1-wewewe

Congress;ಪ್ರತಾಪ್‌ಚಂದ್ರ ಶೆಟ್ಟಿ-ಜೆ.ಪಿ.ಹೆಗ್ಡೆ ಭೇಟಿ: ಕಾರ್ಯತಂತ್ರದ ಸಮಾಲೋಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.