ನಿತ್ಯಾನಂದ ಸ್ವಾಮಿ ಜತೆ ಡಿ.ಕೆ.ಶಿವಕುಮಾರ್ ಚರ್ಚೆ
Team Udayavani, Apr 20, 2018, 7:00 AM IST
ರಾಮನಗರ: ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರು ಬಿಡದಿಯ ಧ್ಯಾನಪೀಠದ ನಿತ್ಯಾನಂದ ಸ್ವಾಮಿ ಅವರನ್ನು ಭೇಟಿ ಮಾಡಿ ಚುನಾವಣೆ ಹಿನ್ನೆಲೆಯಲ್ಲಿ ಆಶೀರ್ವಾದ ಪಡೆದಿದ್ದಾರೆ.
ಬುಧವಾರ ಸಂಜೆ ಬಿಡದಿಯ ನಿತ್ಯಾನಂದ ಧ್ಯಾನಪೀಠಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದ ಡಿಕೆಶಿ ಅರ್ಧ ಗಂಟೆಗೂ ಹೆಚ್ಚು ಕಾಲ ನಿತ್ಯಾನಂದ ಸ್ವಾಮಿ ಅವರ ಜತೆ ಚರ್ಚಿಸಿದ್ದಾರೆ.
ನಿತ್ಯಾನಂದ ಆಶ್ರಮಕ್ಕೆ ಹೋಗಿದ್ದು ನಿಜ: ನಿತ್ಯಾನಂದ ಆಶ್ರಮಕ್ಕೆ ಹೋಗಿದ್ದು ನಿಜ. ನಿತ್ಯಾನಂದ ಆಶ್ರಮದಲ್ಲಿ ನೂರಾರು ಮತದಾರರಿದ್ದಾರೆ. ಮತ ಕೇಳಲು ಎಲ್ಲ ಕಡೆ ಭೇಟಿ ನೀಡುತಿದ್ದೇನೆ. ಹೀಗಾಗಿ ಧ್ಯಾನಪೀಠಕ್ಕೂ ಹೋಗಿದ್ದಾಗಿ ಡಿ.ಕೆ. ಶಿವಕುಮಾರ್ ಕನಕಪುರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದರು.
ಚುನಾವಣೆಯಲ್ಲಿ ಒಂದೊಂದು ಮತವೂ ಮುಖ್ಯ, ಹೀಗಾಗಿ ಮರಳಿಗವಿ ಮಠ ಸೇರಿ ತಮ್ಮ ಕ್ಷೇತ್ರ ವ್ಯಾಪ್ತಿಯ ಎಲ್ಲ ಆಶ್ರಮಗಳಿಗೆ ಭೇಟಿ ನೀಡಿ ಮತಯಾಚನೆ ಮಾಡುತ್ತಿರುವುದಾಗಿ ತಿಳಿಸಿದರು.