ಅದಿರು ಲೂಟಿಯಲ್ಲಿ ರೆಡ್ಡಿಯಿಂದ ಬಿಎಸ್ವೈಗೆ ಪಾಲು: ಸಿದ್ದರಾಮಯ್ಯ
Team Udayavani, May 4, 2018, 7:40 AM IST
ದಾವಣಗೆರೆ: ಬಳ್ಳಾರಿ ಜಿಲ್ಲೆಯಲ್ಲಿ ಗಣಿಗಾರಿಕೆ ನಡೆಯುತ್ತಿದ್ದ ವೇಳೆ ಪ್ರತಿ ಟನ್ ಅದಿರಲ್ಲಿ ಶೇ.50 ರಷ್ಟು ಪಾಲನ್ನು ಮುಫತ್ತಾಗಿ ಜನಾರ್ದನ ರೆಡ್ಡಿಗೆ ನೀಡಬೇಕಿತ್ತು.ಇದರಿಂದ ರೆಡ್ಡಿಗೆ ದಿನಕ್ಕೆ 10 ಕೋಟಿ ರೂ. ಆದಾಯ ಇತ್ತು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ದಾವಣಗೆರೆ ತಾಲೂಕಿನಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಗಣಿಗಾರಿಕೆ ನಡೆಸುವವರು ಪ್ರತಿ ಟನ್ ಅದಿರಿನ ಶೇ. 50ರಷ್ಟು ಪಾಲನ್ನು ಮುಫತ್ತಾಗಿ ಜನಾರ್ದನ ರೆಡ್ಡಿಗೆ ನೀಡಬೇಕಾಗುತ್ತಿತ್ತು. ದಿನಕ್ಕೆ 10 ಕೋಟಿ ಆದಾಯ ಇತ್ತೆಂದರೆ ಅವರು ಎಷ್ಟು ಲೂಟಿ ಹೊಡೆದಿರಬಹುದು. ಅದರಲ್ಲಿ ಯಡಿಯೂರಪ್ಪಗೂ ಪಾಲಿತ್ತು ಎಂದರು.
ಜನಾರ್ದನ ರೆಡ್ಡಿ, ಬಳ್ಳಾರಿಗೆ ಬಾ ನೋಡಿಕೊಳ್ಳುತ್ತೇನೆ ಎಂದು ಸವಾಲು ಹಾಕಿದ್ದಂತೆ ನಾನು ಪಾದಯಾತ್ರೆ ನಡೆಸಿದೆ. ಎಲ್ಲವೂ ನಿಂತು ಹೋಗಿತ್ತು. ಈಗ ಮತ್ತೆ ಆಲಿಬಾಬಾ-40 ಕಳ್ಳರಂತೆ ಅವರೆಲ್ಲ ಒಂದಾಗಿದ್ದಾರೆ. ಅದೊಂದು ಬಾಗಿಲು ತೆಗಿಯೇ ಶೇಷಮ್ಮ… ಎನ್ನುವಂತಾಗಿದೆ ಎಂದು ಲೇವಡಿ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮೋದಿ 3ನೇ ಬಾರಿ ಪ್ರಧಾನಿಯಾಗಲು ಸಹಕರಿಸಿ: ಗಾಯತ್ರಿ ಸಿದ್ದೇಶ್ವರ
ಕರ್ತವ್ಯ ಲೋಪ: ಪರೀಕ್ಷಾ ಕೇಂದ್ರದ ಕೊಠಡಿ ಮೇಲ್ವಿಚಾರಕ ರಿಯಾಜ್ ಅಹಮ್ಮದ್ ಅಮಾನತು
Election Campaign: ಮೋದಿಯವರಿಂದ ಮಹಿಳಾ ಶಕ್ತಿಗೆ ಮುನ್ನುಡಿ
Davanagere: ಬಿಜೆಪಿ ಅಸಮಾಧಾನ ತಣಿಸಿದ ಬಿಎಸ್ ವೈ; ರವೀಂದ್ರನಾಥ್ ಗೆ ಚುನಾವಣೆ ಹೊಣೆ
Gayatri Siddeshwar: ಮೋದಿ ಕೈ ಬಲಪಡಿಸಲು ಬಿಜೆಪಿ ಗೆಲ್ಲಿಸಿ; ಗಾಯತ್ರಿ