ಕಾಯಕದಲ್ಲೇ ಭಗವಂತನ ಕಂಡ ಶತಾಯುಷಿ


Team Udayavani, Jan 16, 2018, 9:00 AM IST

16-1.jpg

ಕಾರವಾರ: ವಯಸ್ಸು 109. ಕಣ್ಣು ಮಂಜಾಗಿಲ್ಲ, ಕಿವಿ ಮಂದವಾಗಿಲ್ಲ. ಹೊಲದ ಕಾಯಕವೇ ಜೀವಾಳ! ಹೆಸರು ಭಗವಂತ ನೀಲು ಪಡ್ತಿ. ಅಂಕೋಲಾ ತಾಲೂಕಿನ ಅವರ್ಸಾ ಇವರ ಕರ್ಮಭೂಮಿ. ಜೀವನವಿಡೀ ಭೂಮಿ  ಯಲ್ಲಿ ಬೆವರು ಸುರಿಸುತ್ತಾರೆ. ಈಗಲೂ  ಸ್ವಂತ ದುಡಿಮೆ ನಂಬಿ ಬದುಕಿದ್ದಾರೆ. ಹೆತ್ತ ಮಕ್ಕಳು ಸ್ವಂತ ಬದುಕು ಕಟ್ಟಿಕೊಂಡು ಪಕ್ಕದ ಗ್ರಾಮದಲ್ಲಿದ್ದರೂ, ಇಳಿವಯಸ್ಸಿನಲ್ಲೂ
ದುಡಿಮೆಯನ್ನೇ ನಂಬಿರುವ ಇವರ ಬದುಕು ಯುವ ಕೃಷಿಕರಿಗೆ ಮಾದರಿ. ಈಗಲೂ ಭತ್ತ, ಕಾಯಿಪಲ್ಲೆ, ಶೇಂಗಾ, ಕಡಲೆ, ತೆಂಗು ಬೆಳೆದು ಜೀವನ ನಡೆಸುತ್ತಾರೆ. ಸುತ್ತಲಿನ ಗ್ರಾಮಸ್ಥರಿಗೆ ತರಕಾರಿ ಮಾರಿ ಬದುಕು ಕಟ್ಟಿಕೊಂಡಿದ್ದಾರೆ.

ಮಕ್ಕಳೇ ಹಿರಿಯ ನಾಗರಿಕರು: ಭಗವಂತ ಪಡ್ತಿ ಅವರಿಗೆ 109 ವಯಸ್ಸು ಎಂದು ಅಂದಾಜು. ಅವರ ಜನ್ಮದಿನಕ್ಕೆ ದಾಖಲೆಗಳಿಲ್ಲ. ಪಡ್ತಿ ಪತ್ನಿ ಆನಂದಿಗೆ 95 ವರ್ಷ. ಈ ದಂಪತಿಗಳಿಗೆ 12 ಮಕ್ಕಳು. ಈ ಪೈಕಿ ಮೂವರು ಹದಿಹರೆಯದಲ್ಲೇ ತೀರಿ ಹೋದರಂತೆ. ಬದುಕಿರುವ ಗಂಡು ಮಕ್ಕಳಲ್ಲಿ ಒಬ್ಬರಿಗೆ 85. ಮತ್ತೂಬ್ಬರಿಗೆ 75 ವರ್ಷ. 5 ಹೆಣ್ಣು ಮಕ್ಕಳಲ್ಲಿ 4 ಜನರಿಗೆ ಮದುವೆಯಾಗಿದೆ. 4
ಗಂಡು ಮಕ್ಕಳ ಪೈಕಿ ಇಬ್ಬರು ಇತ್ತೀಚೆಗೆ ನಿಧನರಾಗಿದ್ದಾರೆ. ಕೊನೆಯ ಮಗಳ ಜೊತೆ ಭಗವಂತ ಪಡ್ತಿ ಹೆಬ್ಬುಳ ಗ್ರಾಮದಲ್ಲಿ ನೆಲೆಸಿದ್ದಾರೆ. ಮೊಮ್ಮಕ್ಕಳು ಆಗಾಗ ಬಂದು ಹೋಗುತ್ತಿದ್ದಾರೆ.

ಬೆಳಗ್ಗೆ 5ಕ್ಕೆ ಏಳುವ ಭಗವಂತ 6 ಗಂಟೆ ಹೊತ್ತಿಗೆ ಹೊಲಕ್ಕೆ ತೆರಳಿ ಕಾಯಕದಲ್ಲಿ ತೊಡಗುತ್ತಾರೆ. ಅವರಿಗೆ ಜೋಡಿ ಎತ್ತುಗಳು ಸಂಗಾತಿಯಾಗಿವೆ. ಪತ್ನಿ ಕೃಷಿ ಚಟುವಟಿಕೆ  ಣಯಲ್ಲಿ ಕೈ ಜೋಡಿಸುತ್ತಾರೆ. ಗಂಜಿ ಊಟ ಮಾಡುವ ಭಗವಂತ ಪಡ್ತಿಗೆ ದುಡಿಮೆಯೇ ದೇವರು. ಬೈಕ್‌ ಮೇಲೆ ಸುತ್ತುವುದು, ಊರಿನ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಅವರಿಗೆ ತುಂಬಾ ಇಷ್ಟ. ಕಣ್ಣಿನ ದೃಷ್ಟಿ ಸಖತ್ತಾಗಿದೆ. ಕನ್ನಡಕ ಧರಿಸಲ್ಲ.

ಗುಡಿಸಲಲ್ಲಿ ಜೀವನ: ತಮ್ಮ 3 ಎಕರೆ ಕೃಷಿ ಭೂಮಿಯಲ್ಲೇ ಗುಡಿಸಲು ಹಾಕಿಕೊಂಡು ಜೀವನ ಸಾಗಿಸುತ್ತಿದ್ದಾರೆ ಭಗವಂತ ಪಡ್ತಿ. ಹೊಲಕ್ಕೆ ವಾಹನ ಹೋಗಲು ದಾರಿಯಿಲ್ಲ. ಹಾಗಾಗಿ ಸ್ವಂತ ಬಲ ಅವಲಂಬಿಸಿದ್ದಾರೆ. ಈಚೆಗೆ ಇವರ ಸಮಸ್ಯೆ ಕಂಡ ಗ್ರಾಪಂ ಮನೆ ನಿರ್ಮಾಣಕ್ಕೆ ಕೃಷಿ ಭೂಮಿಯ ಸ್ವಲ್ಪ ಭಾಗವನ್ನು ಕೃಷಿಯೇತರ ಮಾಡಿಕೊಡಲು ಮುಂದಾಗಿದೆ.

ಯುವಕರಿಗೆ ಆದರ್ಶ
ಕೃಷಿಯಿಂದ ಯುವ ಪೀಳಿಗೆ ದೂರ ವಾಗುತ್ತಿರುವ ಈ ಕಾಲದಲ್ಲಿ ಭಗವಂತ ಪಡ್ತಿ ಕೃಷಿಕರಿಗೆ ಮತ್ತು ಯುವ ಪೀಳಿಗೆಗೆ
ಆದರ್ಶವಾಗಿದ್ದಾರೆ. ಅವರನ್ನು ಪ್ರೀತಿ ಯಿಂದ ಕಾಣುವ ಗ್ರಾಮಸ್ಥರು, ಬೈಕ್‌ ನಲ್ಲಿ ಕೂರಿಸಿಕೊಂಡು ಊರಿನಲ್ಲಿ ಸುತ್ತು ಹಾಕಿಸುತ್ತಾರೆ ಎನ್ನುತ್ತಾರೆ ಗ್ರಾಮದ ಮಹೇಶ್‌ ನಾಯ್ಕ, ಹೊನ್ನಪ್ಪ ನಾಯ್ಕ 

ಭೂಮಿ ತಾಯಿ ನನ್ನ ಕೈಬಿಟ್ಟಿಲ್ಲ. ದಶಕಗಳಿಂದ ನಾನು ಭೂಮಿಯ ಜೊತೆ ಬೆರೆತಿದ್ದೇನೆ. ಭೂಮಿ ನನಗೆ ಅನ್ನ ಕೊಟ್ಟಿದೆ.
 ●ಭಗವಂತ ಪಡ್ತಿ, ಕೃಷಿಕ, ಅವರ್ಸಾ

●ನಾಗರಾಜ್‌ ಹರಪನಹಳ್ಳಿ

ಟಾಪ್ ನ್ಯೂಸ್

1-gadaga

Gadaga: ಸೈಕ್ಲಿಸ್ಟ್ ಪವಿತ್ರಾ ಕುರ್ತಕೋಟಿ ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಆಯ್ಕೆ

15

ಶರ್ಟ್‌ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Modi 3

PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?

Bhatkal: ಇಬ್ಬರು ಸಮುದ್ರಪಾಲು

Bhatkal: ಇಬ್ಬರು ಸಮುದ್ರಪಾಲು

1-weqwwqe

Joida Tragedy: ನದಿಗಿಳಿದ ಒಂದೇ ಕುಟುಂಬದ 6 ಮಂದಿ ಮೃತ್ಯು!

shiv Hebbar

BJP ಪರ ಪ್ರಚಾರಕ್ಕೆ ಹೋಗಲ್ಲ: ಶಾಸಕ ಶಿವರಾಮ್‌ ಹೆಬ್ಬಾರ್

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

1-gadaga

Gadaga: ಸೈಕ್ಲಿಸ್ಟ್ ಪವಿತ್ರಾ ಕುರ್ತಕೋಟಿ ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಆಯ್ಕೆ

15

ಶರ್ಟ್‌ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.