ಅಕ್ಷರಗಳಲ್ಲಿ ಅಮರರಾದ ಕಲಾವಿದ


Team Udayavani, Dec 9, 2018, 6:00 AM IST

yakshagana-sss.jpg

ಯಕ್ಷಗಾನ ರಂಗದಲ್ಲಿ ತಮ್ಮ ವಿಶಿಷ್ಟ ಶೈಲಿಯ ಲಯಸಂಪನ್ನ ನೃತ್ಯ ಭಂಗಿ-ಹಾವ-ಭಾವಗಳಿಂದಲೇ ಪ್ರೇಕ್ಷಕರನ್ನು ಪ್ರಬಲವಾಗಿ ಸೆಳೆದುಕೊಂಡವರು ಚಿಟ್ಟಾಣಿ ರಾಮಚಂದ್ರ ಹೆಗಡೆ. ಸಾಂಪ್ರದಾಯಿಕ ಹೆಜ್ಜೆಗಾರಿಕೆಯೊಂದಿಗೆ ಹೊಸ ಕಲ್ಪನೆಯ ಹೆಜ್ಜೆಗತಿಗಳನ್ನು ಬೆರೆಸಿ ಯಕ್ಷನೃತ್ಯದ ಹೊಸ ಪರಿಭಾಷೆಯನ್ನು ಹುಟ್ಟುಹಾಕಿ ಪ್ರೇಕ್ಷಕರಲ್ಲಿ ರೋಮಾಂಚನಕಾರಿ ಅನುಭವವನ್ನು ಮೂಡಿಸಿದವರು. ಪದ್ಮಶ್ರೀ ಪುರಸ್ಕೃತರಾಗಿ ಈ ಕ್ಷೇತ್ರಕ್ಕೆ ವಿಶೇಷ ಗೌರವದ ಕಿರೀಟವನ್ನು ತೊಡಿಸಿದವರು. 

ಕಳೆದ ವರ್ಷವಷ್ಟೆ ನಿಧನರಾದ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರ ಆರು ದಶಕ ಕಾಲದ ಕಲಾಯಾನದ ವಿವಿಧ ಮಗ್ಗುಲುಗಳನ್ನು ನೋಡಿ, ಮೆಚ್ಚಿ ಆನಂದಿಸಿದ ಅವರ ಅಭಿಮಾನಿಗಳು, ಸಹಕಲಾವಿದರು, ಮೇಳ-ಪ್ರದರ್ಶನಗಳಲ್ಲಿ ಸಹಯಾನ ನಡೆಸಿದ ಭಾಗವತರು, ಯಕ್ಷಗಾನ ಕಲಾವಿಮರ್ಶಕರು, ಮಕ್ಕಳು, ಬಂದು-ಮಿತ್ರರು ಸಲ್ಲಿಸಿರುವ ನುಡಿ-ನಮನಗಳ ಸಂಕಲನ ಇದು. ಇಲ್ಲಿನ ಹೆಚ್ಚಿನ ಬರಹಗಳಲ್ಲಿ ಜೀವಂತರಾಗಿದ್ದಾಗಲೇ ದಂತಕತೆಯಾಗಿದ್ದ ಚಿಟ್ಟಾಣಿಯವರ ಬಗೆಗಿನ ಅಭಿಮಾನ ಹೇಗೋ ಹಾಗೆಯೇ ಅವರ ಕಲೆಗಾರಿಕೆ-ಕಸುಬುಗಾರಿಕೆಯ ವಸ್ತುನಿಷ್ಠ ಅವಲೋಕನವೂ ಇದೆ. ಅವರು ಯಕ್ಷಕ್ಷೇತ್ರಕ್ಕೆ ನೀಡಿದ ಕೊಡುಗೆಗಳ ಬಗ್ಗೆ ಅಧ್ಯಯನ ನಡೆಸಿ ಡಾಕ್ಟರೇಟ್‌ ಪದವಿ ಗಳಿಸಿರುವ ಸಂಪಾದಕರು ಇಲ್ಲಿ ತಾವು ಸಂಕಲಿಸಿರುವ ಬರಹಗಳ ಬಗ್ಗೆ ಹೇಳುತ್ತ “ಚಿಟ್ಟಾಣಿಯವರ ಲಯಸಿದ್ಧಿ’ ನೃತ್ಯದ ಲಯದಲ್ಲಿ ಮಾತ್ರವಲ್ಲ, ಅದು ಪಾತ್ರಗಳ ಶೀಲಸ್ವಭಾವವೂ ಹೌದು; ಸಾಂಪ್ರದಾಯಿಕ ಕುಣಿತದೊಂದಿಗೆ ಹೊಸ ಕುಣಿತವನ್ನೂ ನೀಡಿದರು; ಅದಿಂದು “ಚಿಟ್ಟಾಣಿ ಕುಣಿತ’ವೆಂದೇ ಕರೆಸಿಕೊಳ್ಳುವಷ್ಟು ಪ್ರಸಿದ್ಧವಾಗಿದೆ’ ಎನ್ನುತ್ತಾರೆ. ಈ ಸಂಕಲದಲ್ಲಿರುವ “ನವರಸ ನಾಯಕ ಚಿಟ್ಟಾಣಿ’ ಎಂಬ ಅವರದೇ ಬರಹ ಈ ಮಾತಿಗೆ ಪುರಾವೆಗಳನ್ನು ಒದಗಿಸುತ್ತದೆ. 

“ಉದ್ಭವ ಕಲಾವಿದ’ (ಕಡತೋಕ ಗೋಪಾಲಕೃಷ್ಣ ಭಾಗವತ), “ಯಕ್ಷಗಾನದ ಕೋಲಿ¾ಂಚು-ಚಿಟ್ಟಾಣಿ’ (ಅಂಬಾತನಯ ಮುದ್ರಾಡಿ), “ರಂಗಮಂಚದ ಮಿಂಚು’ (ಉಮಾಕಾಂತ ಭಟ್ಟ), “ಮಮತೆಯ ಕಡಲು’ (ಸುಶೀಲಾ ರಾಮಚಂದ್ರ ಹೆಗಡೆ) ಮುಂತಾದ ಇಲ್ಲಿನ ನುಡಿಚಿತ್ರಗಳು ಅಭಿಮಾನದ ಅತಿರೇಕವಿಲ್ಲದೆ ಕಲಾ ಸಾಧಕನೊಬ್ಬನನ್ನು ಬೇರೆ ಬೇರೆ ನೆಲೆಗಳಿಂದ ಹೇಗೆ ನೋಡಬಹುದೆಂಬುದನ್ನು ಶ್ರುತಪಡಿಸುವ ಅಕ್ಷರರೂಪೀ ಗೌರವಾರ್ಪಣೆಯ ನುಡಿಕುಸುಮಗಳಾಗಿ ಸಾರ್ಥಕತೆ ಪಡೆದಿವೆ. ಜತೆಗೆ ಅವರ ನಿಲುವನ್ನು ಕಾಣಿಸುವ ಸಂದರ್ಶನ ಬರಹಗಳು, ಕಾವ್ಯರೂಪಿ ಶ್ರದ್ಧಾಂಜಲಿಗಳು, ಅವರ ಕಲಾಯಾನದ ಮಹಣ್ತೀದ ಕ್ಷಣಗಳನ್ನು ಕಾಣಿಸುವ ಅಪರೂಪದ ಛಾಯಾಚಿತ್ರಗಳು, ಅವರು ಪಡೆದ ವಿಶೇಷ ಪ್ರಶಸ್ತಿಗಳ ಪಟ್ಟಿ ಕೂಡ ಇದ್ದು , ಇವೆಲ್ಲವೂ ಈ ಗ್ರಂಥಕ್ಕೆ ಸೊಬಗು ಹಾಗೂ ಘನತೆಯನ್ನು ನೀಡಿವೆ.

– ಜಕಾ

ಟಾಪ್ ನ್ಯೂಸ್

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

11-

Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ

Tollywood: ಸಿದ್ಧಾರ್ಥ್ – ಅದಿತಿ ರಾವ್ ಮದುವೆ ಆಗಿಲ್ಲ: ಎಂಗೇಜ್‌ ಮೆಂಟ್‌ ಮಾಡಿಕೊಂಡ ಜೋಡಿ

Tollywood: ಸಿದ್ಧಾರ್ಥ್ – ಅದಿತಿ ರಾವ್ ಮದುವೆ ಆಗಿಲ್ಲ: ಎಂಗೇಜ್‌ ಮೆಂಟ್‌ ಮಾಡಿಕೊಂಡ ಜೋಡಿ

10-hunasagi-crime

Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

9-joshi

ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World Theatre Day: ರಂಗದಿಂದಷ್ಟು ದೂರ…

World Theatre Day: ರಂಗದಿಂದಷ್ಟು ದೂರ…

Bhuvaneshwari hegde: ಓದುಗರ ಅಭಿರುಚಿಯ ಮಟ್ಟ ಹೆಚ್ಚಿಸುವ  ಹೊಣೆ ಬರಹಗಾರರ ಮೇಲಿದೆ…

Bhuvaneshwari hegde: ಓದುಗರ ಅಭಿರುಚಿಯ ಮಟ್ಟ ಹೆಚ್ಚಿಸುವ  ಹೊಣೆ ಬರಹಗಾರರ ಮೇಲಿದೆ…

Girish Kasaravalli: ತೆರೆ ಸರಿಯುವ ಮುನ್ನ…!

Girish Kasaravalli: ತೆರೆ ಸರಿಯುವ ಮುನ್ನ…!

Holi celebration: ಹೋಳಿ ಎಂಬ ಬಣ್ಣದೋಕುಳಿ!

Holi celebration: ಹೋಳಿ ಎಂಬ ಬಣ್ಣದೋಕುಳಿ!

13

World Sparrow Day: ಮತ್ತೆ ಮನೆಗೆ ಮರಳಲಿ ಗುಬ್ಬಚ್ಚಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

11-

Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ

Tollywood: ಸಿದ್ಧಾರ್ಥ್ – ಅದಿತಿ ರಾವ್ ಮದುವೆ ಆಗಿಲ್ಲ: ಎಂಗೇಜ್‌ ಮೆಂಟ್‌ ಮಾಡಿಕೊಂಡ ಜೋಡಿ

Tollywood: ಸಿದ್ಧಾರ್ಥ್ – ಅದಿತಿ ರಾವ್ ಮದುವೆ ಆಗಿಲ್ಲ: ಎಂಗೇಜ್‌ ಮೆಂಟ್‌ ಮಾಡಿಕೊಂಡ ಜೋಡಿ

RC 17: ಮತ್ತೆ ಒಂದಾದ ರಂಗಸ್ಥಳಂ ತಂಡ

RC 17: ಮತ್ತೆ ಒಂದಾದ ರಂಗಸ್ಥಳಂ ತಂಡ

10-hunasagi-crime

Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.