ತೆಂಗಿನ ಮರದಿಂದ ಬಿದ್ದ “ಬಪ್ಪೇರಿಯನ್ ತೆಯ್ಯಂ’
Team Udayavani, Feb 24, 2017, 11:40 AM IST
ಕಾಸರಗೋಡು: ಸಂಪ್ರದಾಯದಂತೆ ತೆಂಗಿನ ಮರ ವೇರಿದ್ದ “ಬಪ್ಪೇರಿಯನ್’ ಎನ್ನುವ ತೆಯ್ಯಂ (ದೈವ) ಬಿದ್ದು ಗಂಭೀರ ಗಾಯಗೊಂಡಿದ್ದು, ಮಂಗಳೂರಿನ ಆಸ್ಪತ್ರೆಗೆ ಸೇರಿಸಲಾಗಿದೆ.
ಕಣ್ಣೂರು ಜಿಲ್ಲೆಯ ಅಯಿಕೋಡ್ನಲ್ಲಿ ಪಾರಂಪರಿಕವಾಗಿ ನಡೆಯುತ್ತಿರುವ ತೆಯ್ಯಂ ಉತ್ಸವದ ಸಂದರ್ಭದಲ್ಲಿ ಬಪ್ಪೇರಿಯನ್ ತೆಯ್ಯಂ ಧರಿಸಿದ್ದ ಸುಮೇಶ್ ಪಣಿಕ್ಕರ್ ಆಯತಪ್ಪಿ ತೆಂಗಿನ ಮರದಿಂದ ಬಿದ್ದು, ಗಂಭೀರ ಗಾಯಗೊಂಡಿದ್ದಾರೆ.
ಮಿನ್ಕುನ್ನು ಮುಪೆ#àರಿಯನ್ ವಯನಾಟು ಕುಲವನ್ ದೈವಸ್ಥಾನದಲ್ಲಿ ನಡೆದ ಭೂತ ಕೋಲ ಪ್ರದರ್ಶನದ ವೇಳೆ ಕೆಳಗೆ ಬಿದ್ದಿದ್ದಾರೆ. ತೆಂಗಿನ ಮರದ ಬುಡದಲ್ಲಿ ಹಾಕಲಾಗಿದ್ದ ಬೆಂಕಿಯ ಕೆಂಡದ ಮೇಲೆ ಬಿದ್ದು ಮೈಕೈ ಸುಟ್ಟ ಗಾಯಗಳಾಗಿವೆ. ಅಲ್ಲದೆ ಕಾಲಿನ ಮೂಳೆ ಮುರಿದಿದೆ. ಗಂಭೀರ ಗಾಯಗೊಂಡ ಅವರನ್ನು ಕಣ್ಣೂರಿನ ಆಸ್ಪತ್ರೆಗೆ ಕೊಂಡೊಯ್ದು ಆ ಬಳಿಕ ಮಂಗಳೂರಿನ ಆಸ್ಪತ್ರೆಗೆ ಸೇರಿಸಲಾಯಿತು. ಬಪ್ಪೇರಿಯನ್ ಭೂತ ಕೋಲದ ಸಂದರ್ಭದಲ್ಲಿ ತೆಂಗಿನ ಮರವೇರಿ ಆವೇಶ ಪ್ರದರ್ಶಿಸುವುದು ರೂಢಿ. ಇದೇ ಸಂದರ್ಭದಲ್ಲಿ ಆಯ ತಪ್ಪಿ ಕೆಳಗೆ ಬಿದ್ದಿದ್ದಾರೆ. ಸುಮಾರು 10 ಮೀಟರ್ ಎತ್ತರದ ತೆಂಗಿನ ಮರ ವೇರಿದ್ದು ಕೆಳಗ್ಗೆ ಬಿದ್ದ ಸುಮೇಶ್ ಅವರನ್ನು ಪೊಲೀಸರು ಮತ್ತು ಸ್ಥಳೀಯರು ಬೆಂಕಿಯ ಕೆಂಡದಿಂದ ರಕ್ಷಿಸಿ ಆಸ್ಪತ್ರೆಗೆ ಕೊಂಡೊಯ್ದರು. ಸುಮೇಶ್ ಕಳೆದ 20 ವರ್ಷಗಳಿಂದ ದೈವ ಕಟ್ಟುತ್ತಿದ್ದು ಇದು ಪ್ರಥಮವಾಗಿ ಅವಘಡ ಸಂಭವಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ
ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್
ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ