ಶಾಲಾ ಆವರಣ ಗೋಡೆ ನಿರ್ಮಾಣಕ್ಕೆ ಧನ ಸಹಾಯ
Team Udayavani, Jul 7, 2017, 3:50 AM IST
ಕೋಡಿಬೈಲು: ಕೋಡಿಬೈಲು ನವೋದಯ ಎ.ಎಲ್.ಪಿ. ಶಾಲೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾಸರಗೋಡು ಘಟಕದ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ತಲಪಾಡಿ ವಲಯ ಮೇಲ್ವಿಚಾರಕರಾದ ಮೋಹನ್ ಅವರು ಶಾಲಾ ಆವರಣ ಗೋಡೆ ನಿರ್ಮಾಣಕ್ಕಾಗಿ ಪ್ರಥಮ ಹಂತದ ಧನ ಸಹಾಯದ ಚೆಕ್ನ್ನು ಶಾಲಾ ಮುಖ್ಯೋಪಾಧ್ಯಾಯರಿಗೆ ವಿತರಿಸಿದರು. ಕಾರ್ಯಕ್ರಮದಲ್ಲಿ ಕೋಡಿಬೈಲು ಕಾರ್ಯಕ್ಷೇತ್ರದ ಪ್ರತಿನಿಧಿ ವಸಂತಿ,
ಒಕ್ಕೂಟದ ಅಧ್ಯಕ್ಷೆ ವಿಜಯಲಕ್ಷಿ ಕೋಡಿಬೈಲು, ಉಪ್ಪಳ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಭಾಸ್ಕರ ಆಚಾರ್ಯ ಉಪ್ಪಳ, ಶಾಲಾ ಮೆನೇಜ್ಮೆಂಟ್ ಸದಸ್ಯ ಮೋಹನ್ದಾಸ್ ಕೊಂಡೆವೂರು ಶಾಲಾ ಅಧ್ಯಾಪಕರು ಉಪಸ್ಥಿತರಿದ್ದರು.