ಮಹಿಳೆಗೆ ಕಿರುಕುಳ ಯತ್ನ: ಪೊಲೀಸ್‌ ಕಾರ್ಯಾಚರಣೆ 


Team Udayavani, Jul 8, 2017, 2:45 AM IST

crime-news–07.jpg

ಬದಿಯಡ್ಕ: ಕೊನೆಯ ಬಸ್‌ ಕೂಡ ಸಿಗದೆ ಹೋದುದರಿಂದ ಪೇಟೆಯಲ್ಲಿ ಸಿಲುಕಿಕೊಂಡ ಮಹಿಳೆಯನ್ನು ಆಟೋ ರಿಕ್ಷಾದಲ್ಲಿ ಕರೆದೊಯ್ದು ಮನೆಯೊಳಗೆ ಕೂಡಿ ಹಾಕಿ ಕಿರುಕುಳ ನೀಡಲು ನಡೆಸಿದ ಯತ್ನವನ್ನು ಪೊಲೀಸ್‌ ಹಾಗೂ ಸಂಬಂಧಿಕರ ಸಮಯೋಚಿತ ಕಾರ್ಯಾಚರಣೆಯಿಂದ ಪರಾಭವಗೊಳಿಸಲಾಗಿದೆ.

ಘಟನೆ ಬಗ್ಗೆ ಯಾರಿಂದಲೂ ಲಿಖೀತ ದೂರು ಲಭಿಸದ ಹಿನ್ನೆಲೆಯಲ್ಲಿ ಕೇಸು ದಾಖಲಿಸಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ. ಆದರೆ ಘಟನೆ ಬಗ್ಗೆ ಪ್ರಚಾರ ಮಾಡಿ ಆರೋಪಕ್ಕೆಡೆಯಾದ ಯುವಕರು ಬದಿಯಡ್ಕ ಪೇಟೆಯಲ್ಲಿ ಅಲೆದಾಡುತ್ತಿರುವ ಕುರಿತು ಜನರು ತಿಳಿಸಿದ ಹಿನ್ನೆಲೆಯಲ್ಲಿ ಮಹಿಳೆಯ  ಸಂಬಂಧಿಕರನ್ನು ಪೊಲೀಸರು ಠಾಣೆಗೆ ಕರೆಸಿದ್ದಾರೆ. ಅವರ ಹೇಳಿಕೆ ದಾಖಲಿಸಿದ ಬಳಿಕ ಕೇಸು ದಾಖಲಿಸುವ ಬಗ್ಗೆ ಆಲೋಚಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

ಕಳೆದ ರವಿವಾರ ರಾತ್ರಿ 8.20ರ ವೇಳೆ ಬದಿಯಡ್ಕದಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬಯಲಾಗಿದೆ. ಸೀತಾಂಗೋಳಿಗೆ ಸಮೀಪದ ನಿವಾಸಿ 26ರ ಹರೆಯದ ಮಹಿಳೆ ರಾತ್ರಿ ವೇಳೆ ಮನೆಯಿಂದ ಏಕಾಂಗಿಯಾಗಿ ಹೊರಗಿಳಿದಿದ್ದು 8.15ಕ್ಕೆ ಬದಿಯಡ್ಕ ಪೇಟೆಗೆ ತಲುಪಿದ್ದಳು. ಆದರೆ ಅಷ್ಟರಲ್ಲಿ ಆಕೆಯ ತವರು ಮನೆಗೆ ತೆರಳುವ ಕೊನೆಯ ಬಸ್‌ ಕೂಡ ಹೋಗಿತ್ತು. ಅನಂತರ ಮಹಿಳೆ ಓರ್ವ ಆಟೋರಿಕ್ಷಾ ಚಾಲಕನನ್ನು ಭೇಟಿಯಾಗಿ ತನ್ನನ್ನು ಮನೆಗೆ ತಲುಪಿಸುವಂತೆ ವಿನಂತಿಸಿದ್ದಳು. ಕೂಡಲೇ ಚಾಲಕ ತನ್ನ ಸ್ನೇಹಿತನನ್ನು ಕರೆದು ಮಹಿಳೆಯನ್ನು ಆಟೋದಲ್ಲಿ ಹತ್ತಿಸಿ ಬದಿಯಡ್ಕದಿಂದ ಪ್ರಯಾಣ ಆರಂಭಿಸಿದನು. ಮೂಕಂಪಾರೆಗೆ ತಲುಪಿದಾಗ ಜನವಾಸವಿಲ್ಲದ ಮನೆಯೊಂದಕ್ಕೆ ತಲುಪಿಸಿ ಮಹಿಳೆಯನ್ನು ಅಲ್ಲಿ ಕೂಡಿ ಹಾಕಲಾಯಿತು. ಯುವತಿಯ ಕೈಯಲ್ಲಿದ್ದ ಮೊಬೈಲ್‌ ಫೋನ್‌ ಪಡೆದು ಸ್ವಿಚ್‌ಆಫ್‌ ಮಾಡಿದರು. ಅನಂತರ ಯುವಕರು ಆಟೋದೊಂದಿಗೆ ಬದಿಯಡ್ಕಕ್ಕೆ ಮರಳಿದರು. ಈ ಮಧ್ಯೆ ಮಹಿಳೆಯ ಪತಿಯ ಸಂಬಂಧಿಕರು ಆಕೆಯನ್ನು ಹುಡುಕಿ ಬದಿಯಡ್ಕಕ್ಕೆ ತಲುಪಿದ್ದು, ಮಹಿಳೆ ತವರು ಮನೆಗೆ ತಲುಪಿಲ್ಲವೆಂದು ತಿಳಿದೊಡನೆ ಬದಿಯಡ್ಕ ಪೊಲೀಸರಿಗೆ ಮಾಹಿತಿ ನೀಡಿದರು. ಈ ಮಧ್ಯೆ ಮಹಿಳೆಯ ಮೊಬೈಲ್‌ ಫೋನ್‌ ಆನ್‌ ಆಗಿದ್ದು  ಪೊಲೀಸರು ಸೈಬರ್‌ ಸೆಲ್‌ನ ಸಹಾಯದೊಂದಿಗೆ ನಡೆಸಿದ ತನಿಖೆಯಲ್ಲಿ ಮಹಿಳೆ ಮೂಕಂಪಾರೆ ಪರಿಸರದಲ್ಲಿರುವುದಾಗಿ ತಿಳಿದು ಬಂತು. 

ಪೊಲೀಸರು ಆ ಪ್ರದೇಶದಲ್ಲಿ ಶೋಧ ನಡೆಸುತ್ತಿದ್ದಂತೆ ಘಟನೆ ಅರಿತ ಯುವಕರು ಮೂಕಂಪಾರೆಗೆ ತಲುಪಿ ಮಹಿಳೆಯನ್ನು ಪುನಃ ಆಟೋಕ್ಷಾದಲ್ಲಿ ಹತ್ತಿಸಿ ರಾತ್ರಿ 10.30ಕ್ಕೆ ಬೀಂಜತ್ತಡ್ಕಕ್ಕೆ ತಲುಪಿಸಿ ಉಪೇಕ್ಷಿಸಿ ಪರಾರಿಯಾದರು. ಇದೇ ವೇಳೆ ಸಂಬಂಧಿಕರು ಹಾಗೂ ಪೊಲೀಸರು ಮಹಿಳೆಯನ್ನು ಪತ್ತೆಹಚ್ಚಿದರು. ನಡೆದ ಘಟನೆಯನ್ನು ಮಹಿಳೆ ತಿಳಿಸಿದ್ದರೂ ಲಿಖೀತವಾಗಿ ದೂರು ನೀಡದ ಹಿನ್ನೆಲೆಯಲ್ಲಿ ಪೊಲೀಸರು ಕೇಸು ದಾಖಲಿಸಿಲ್ಲ. ಬಳಿಕ ಮಹಿಳೆಯನ್ನು ಸಂಬಂಧಿಕರ ಜತೆ ಕಳುಹಿಸಲಾಯಿತು. 

ಅನಂತರ ಘಟನೆ ನಾಡಿನಾದ್ಯಂತ ಹರಡತೊಡಗಿತು. ಈ ಹಿಂದೆ ಅಬಕಾರಿ ಪ್ರಕರಣದಲ್ಲಿ ಆರೋಪಿಯಾದ ಓರ್ವ ಯುವಕ ಹಾಗೂ ಸ್ನೇಹಿತ ಸೇರಿ ಮಹಿಳೆಯನ್ನು ದಿಗ್ಬಂಧನದಲ್ಲಿರಿಸಿರುವುದಾಗಿಯೂ ಪೊಲೀಸರು ಹಾಗೂ ಸಂಬಂಧಿಕರು ಸಕಾಲದಲ್ಲಿ ಕಾರ್ಯಾಚರಿಸದಿದ್ದಲ್ಲಿ ಕಿರುಕುಳಕ್ಕೆ ಸಾಧ್ಯತೆಯಿತ್ತೆಂದು ನಾಗರಿಕರು ಅಭಿಪ್ರಾಯ ಪಡುತ್ತಿದ್ದಾರೆ. ಘಟನೆ ನಾಡಿನಾದ್ಯಂತ ಚರ್ಚೆಯಾಗುತ್ತಿದ್ದಂತೆ ಪೊಲೀಸರು ಸ್ವಯಂ ಕೇಸು ದಾಖಲಿಸುವ ಸಾಧ್ಯತೆಯಿದೆ.

ಟಾಪ್ ನ್ಯೂಸ್

Yatindra

Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ

1-ewqeqwqe

AAP ‘ಮಹಾರ್‍ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?

jds

JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

10-sulya

ಚಾರಿತ್ರಿಕ ಪರಂಪರೆಗಳ ಸಂರಕ್ಷಣೆಗಾಗಿ ಅಮರ ಸುಳ್ಯ ಹೆರಿಟೇಜ್ ಫೌಂಡೇಶನ್ (ರಿ.) ಕಾರ್ಯಾರಂಭ

Virajpet: ಲಾರಿ – ಆ್ಯಂಬುಲೆನ್ಸ್‌ ನಡುವೆ ಢಿಕ್ಕಿ; ಓರ್ವನಿಗೆ ಗಾಯ

Virajpet: ಲಾರಿ – ಆ್ಯಂಬುಲೆನ್ಸ್‌ ನಡುವೆ ಢಿಕ್ಕಿ; ಓರ್ವನಿಗೆ ಗಾಯ

ಅಂಬಲತ್ತರದಲ್ಲಿ ಪತ್ತೆಯಾದ ನೋಟುಗಳೆಲ್ಲವೂ ಖೋಟಾ ನೋಟು : ಕರ್ನಾಟಕದಲ್ಲಿ ಮುದ್ರಣ ಶಂಕೆ

ಅಂಬಲತ್ತರದಲ್ಲಿ ಪತ್ತೆಯಾದ ನೋಟುಗಳೆಲ್ಲವೂ ಖೋಟಾ ನೋಟು : ಕರ್ನಾಟಕದಲ್ಲಿ ಮುದ್ರಣ ಶಂಕೆ

Manjeshwar ವಿದ್ಯುತ್‌ ಆಘಾತ: ಯುವಕ ಸಾವು

Manjeshwar ವಿದ್ಯುತ್‌ ಆಘಾತ: ಯುವಕ ಸಾವು

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Yatindra

Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ

1-ewqeqwqe

AAP ‘ಮಹಾರ್‍ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್

Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ

Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ

Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’

Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.