ರಾಷ್ಟ್ರೀಯ ಹೆದ್ದಾರಿ ಭೂಸ್ವಾಧೀನ ಪ್ರಕ್ರಿಯೆ ವಿಳಂಬ


Team Udayavani, Feb 10, 2018, 9:20 AM IST

Highway-9-2.jpg

ಕಾಸರಗೋಡು: ಕಾಸರಗೋಡು ಹಾಗೂ ಆಸುಪಾಸಿನ ಜನರು ನೀರು ಕುಡಿಯಬೇಕಾದರೆ ಜಲ ಪ್ರಾಧಿಕಾರ ಮಾತ್ರವಲ್ಲದೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೂಡ ಮುತುವರ್ಜಿ ವಹಿಸಬೇಕಾಗಿದೆ. ಯಾಕೆಂದರೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯ ನಿಟ್ಟಿನಲ್ಲಿ  ಭೂಸ್ವಾಧೀನ ಪ್ರಕ್ರಿಯೆ ವಿಳಂಬಗೊಳ್ಳುತ್ತಿರುವುದರಿಂದ ಜಲ ಪ್ರಾಧಿಕಾರದ ನೂತನ ಪೈಪ್‌ಲೈನ್‌ ಅಳವಡಿಕೆಯೂ ವಿಳಂಬಗೊಂಡಿದೆ. ಚೆರ್ಕಳದಿಂದ ವಿದ್ಯಾನಗರ ಶುದ್ಧೀಕರಣ ನಿಲಯದವರೆಗೆ ಐದು ಕಿಲೋ ಮೀಟರ್‌ ಭಾಗದ ಈಗಿರುವ ಪೈಪ್‌ಗ್ಳನ್ನು  ಬದಲಿಸಿ ಹೊಸದಾಗಿ ಸ್ಥಾಪಿಸುವ ಪ್ರಕ್ರಿಯೆ ಸ್ಥಗಿತಗೊಂಡಿದೆ. 2018ರ ಮಾರ್ಚ್‌ನಲ್ಲಿ ಪೈಪ್‌ಲೈನ್‌ ಅಳವಡಿಸುವ ಗುತ್ತಿಗೆ ಕಾಲಾವಧಿ ಕೊನೆಗೊಳ್ಳಲಿದೆ. ಆದರೆ ಇದುವರೆಗೆ ಯೋಜನೆಗೆ ಚಾಲನೆ ನೀಡಲು ಕೂಡ ಸಾಧ್ಯವಾಗಿಲ್ಲ. 

ಭೂಸ್ವಾಧೀನಪಡಿಸುವಿಕೆ ಪೂರ್ಣವಾಗದ ಹಿನ್ನೆಲೆಯಲ್ಲಿ  ಈಗಿರುವ ಸ್ಥಳದ ಗರಿಷ್ಠ  ದೂರದಲ್ಲಿ  ಪೈಪ್‌ಲೈನ್‌ ಅಳವಡಿಸಲು ಅನುಮತಿ ನೀಡಬೇಕು ಎಂದು ಆಗ್ರಹಿಸಿ ಜಲಪ್ರಾಧಿಕಾರವು ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಧಿಕಾರಿಗಳಿಗೆ ಸುತ್ತೋಲೆ ಕಳುಹಿಸಿದ್ದರೂ ಅದಕ್ಕೆ ಕೂಡ ಇದುವರೆಗೆ ಅನುಕೂಲಕರ ಉತ್ತರ ಬಂದಿಲ್ಲ.

ಪ್ರಥಮ ಹಂತದಲ್ಲಿ  ಮುಳಿಯಾರಿನ ಬಾವಿಕ್ಕೆರೆಯಿಂದ ಚೆರ್ಕಳದ ವರೆಗಿನ ಭಾಗದಲ್ಲಿ  ಕಳೆದ ವರ್ಷ ನೂತನ ಪೈಪ್‌ಗ್ಳನ್ನು ಅಳವಡಿಸಲಾಗಿದೆ. ದ್ವಿತೀಯ ಹಂತದಲ್ಲಿ  ಚೆರ್ಕಳದಿಂದ ವಿದ್ಯಾನಗರ ತನಕದ ಪೈಪ್‌ ಬದಲಿಸಿ ನೂತನವಾಗಿ ಸ್ಥಾಪಿಸಲು ಐದು ಕೋಟಿ ರೂ. ಗಳನ್ನು  ಮಂಜೂರುಗೊಳಿಸಲಾಗಿತ್ತು. ಈ ಭಾಗದಲ್ಲಿ  ರಾಷ್ಟ್ರೀಯ ಹೆದ್ದಾರಿ ಬದಿಯಿಂದ ಪೈಪ್‌ಲೈನ್‌ ಹಾದುಹೋಗುತ್ತಿದೆ. ಹೆದ್ದಾರಿಯನ್ನು  ಚತುಷ್ಪಥಗೊಳಿಸುವ ಜಾಗದ ಸಮೀಪವಿರುವ ಒಂದೂವರೆ ಮೀಟರ್‌ ಭಾಗದ ಯುಟಿಲಿಟಿ ಕಾರಿಡಾರ್‌ನಲ್ಲಿ  ಪೈಪ್‌ ಅಳವಡಿಸಲು ತೀರ್ಮಾನಿಸಲಾಗಿದೆ. ಅಗತ್ಯವಿರುವ ಪೈಪ್‌ಗ್ಳನ್ನು ಈಗಾಗಲೇ ತಲುಪಿಸಲಾಗಿದೆ. ಆದರೆ ಈ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿಯು ಸಂಪೂರ್ಣವಾಗಿ ಖಾಸಗಿ ಸ್ಥಳದಲ್ಲೇ ಹಾದುಹೋಗುತ್ತಿದೆ. ಇದನ್ನು  ಪೂರ್ಣಗೊಳಿಸಲು ಕನಿಷ್ಠ  ಎರಡು ವರ್ಷಗಳಾದರೂ ಬೇಕಾಗಲಿದೆ. ಅದಕ್ಕಿಂತ ಮೊದಲೇ ಜಲಪ್ರಾಧಿಕಾರ ಪೈಪ್‌ ಸ್ಥಾಪಿಸಲು ನೀಡಿದ ಗುತ್ತಿಗೆ ಕಾಲಾವಧಿ ಕೊನೆಗೊಳ್ಳಲಿದೆ. 

ಮಾತ್ರವಲ್ಲದೆ ಈ ಭಾಗದಲ್ಲಿ  ಹಳೆಯ ಪೈಪ್‌ಲೈನ್‌ ಸಂಪೂರ್ಣವಾಗಿ ಹಾನಿಗೀಡಾಗಿದ್ದು, 40 ವರ್ಷಗಳ ಹಿಂದೆ ಅಳವಡಿಸಿದ ಕಬ್ಬಿಣದ ಪೈಪ್‌ ಇದಾಗಿದೆ. ಕಾಲಾವಧಿ ಕಳೆದಿರುವುದರಿಂದ ಹಲವೆಡೆ ಪೈಪ್‌ ಒಡೆದು ನೀರು ಪೋಲಾಗುತ್ತಿದೆ. ಸಾವಿರಾರು ಲೀಟರ್‌ ನೀರು ಪ್ರತಿದಿನ ರಸ್ತೆಯಲ್ಲಿ  ಹರಿದು ಹೋಗುತ್ತಿದೆ.

ಒಂದೆಡೆ ಒಡೆದ ಪೈಪ್‌ಗ್ಳನ್ನು ದುರಸ್ತಿ ಮಾಡಿದಾಗ ಇನ್ನೊಂದೆಡೆ ಹಾನಿಯಾಗಿರುವುದು ಕಂಡುಬರುತ್ತಿದೆ. ರಸ್ತೆಯ ಬದಿ ಮಣ್ಣಿನಡಿಯಲ್ಲಿ  ಪೈಪ್‌ ಅಳವಡಿಸಲಾಗಿದೆ. ಪೈಪ್‌ ಸೋರಿಕೆ ಪತ್ತೆಹಚ್ಚಬೇಕಾದರೆ ಒಂದು ಮೀಟರ್‌ನಷ್ಟು  ಅಗೆದು ನೋಡಬೇಕಾಗುತ್ತದೆ. ಇದರಿಂದಾಗಿ ಜಲಪ್ರಾಧಿಕಾರದ ಸಿಬ್ಬಂದಿಗಳಿಗೆ ನೀರು ಪೋಲಾಗುತ್ತಿರುವುದನ್ನು  ತಡೆಗಟ್ಟುವುದು ಬಹುದೊಡ್ಡ  ಸಮಸ್ಯೆಯಾಗುತ್ತಿದೆ.

ಬಾವಿಕ್ಕೆರೆಯಿಂದ ಚೆರ್ಕಳ ತನಕ ಹೊಸ ಪೈಪ್‌ಲೈನ್‌ ಅಳವಡಿಸಿರುವುದಿಂದ ನೀರಿನ ಹರಿಯುವಿಕೆ ಸಾಮರ್ಥ್ಯ ಹೆಚ್ಚಿದೆ. ಆದ್ದರಿಂದ ಚೆರ್ಕಳದಿಂದ ವಿದ್ಯಾನಗರ ತನಕದ ಹಳೆಯ ಪೈಪ್‌ ನಿರಂತರವಾಗಿ ಒಡೆಯುತ್ತಿದೆ. ನೀರಿನ ಕೊರತೆ ಇರುವಾಗ ರಸ್ತೆ  ಬದಿ ನೀರು ಪೋಲಾಗುತ್ತಿರುವುದು ನಾಗರಿಕರ ಆಕ್ರೋಶಕ್ಕೂ ಕಾರಣವಾಗುತ್ತಿದೆ. ಪೈಪ್‌ ಬದಲಿಸಿ ಸ್ಥಾಪಿಸದೆ ಇದಕ್ಕೆ ಪರಿಹಾರ ಕಲ್ಪಿಸಲು ಸಾಧ್ಯವಿಲ್ಲ  ಎಂದು ಜಲ ಪ್ರಾಧಿಕಾರ ಹೇಳುತ್ತಿದೆ.

ಪ್ರತಿಭಟನೆಯತ್ತ  ಸಾರ್ವಜನಿಕರು 
ಬೇಸಗೆ ಕಾಲ ಸಮೀಪಿಸುವುದರಿಂದ ಕಾಸರಗೋಡು ನಗರ ಮತ್ತು  ಸಮೀಪದ ಪಂಚಾಯತ್‌ಗಳಲ್ಲಿ  ನೀರಿನ ಬಳಕೆ ಹೆಚ್ಚಾಗಲಿದೆ. 24 ಗಂಟೆಗಳ ಕಾಲ ಪಂಪ್‌ ಮಾಡಿದರೂ ಅಗತ್ಯದ ನೀರು ವಿತರಿಸಲು ಸಾಧ್ಯವಾಗದೆ ಜಲ ಪ್ರಾಧಿಕಾರ ಸಮಸ್ಯೆ ಎದುರಿಸುತ್ತಿರುವಾಗ ಸಂಗ್ರಹದಲ್ಲಿರುವ ನೀರು ಕೂಡ ರಸ್ತೆ  ಬದಿ ಹರಿದು ಪೋಲಾಗುತ್ತಿದೆ. ಇದಕ್ಕೆ ಪರಿಹಾರ ಕಲ್ಪಿಸಬೇಕಾದ ಜಿಲ್ಲಾಡಳಿತ, ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಈ ವಿಷಯದಲ್ಲಿ  ನಿರ್ಲಕ್ಷ್ಯ ವಹಿಸುತ್ತಿರುವುದು ಸಾರ್ವಜನಿಕರನ್ನು ರೋಷಕ್ಕೀಡು ಮಾಡಿದೆ. ಅಲ್ಲದೆ ಈ ನಿಟ್ಟಿನಲ್ಲಿ ಪ್ರತಿಭಟನೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಟಾಪ್ ನ್ಯೂಸ್

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ತಂಬಾಕು ಉತ್ಪನ್ನ ಸಹಿತ ಬಂಧನ

Arrested: ತಂಬಾಕು ಉತ್ಪನ್ನ ಸಹಿತ ಬಂಧನ

Theft: ಮನೆಯಿಂದ ಕಳವು; ಸಿಸಿ ಟಿವಿ ದೃಶ್ಯ ಕೇಂದ್ರೀಕರಿಸಿ ತನಿಖೆ

Theft: ಮನೆಯಿಂದ ಕಳವು; ಸಿಸಿ ಟಿವಿ ದೃಶ್ಯ ಕೇಂದ್ರೀಕರಿಸಿ ತನಿಖೆ

Uppala ರೈಲ್ವೇ ಇಲಾಖೆಯ ಸ್ಥಳದಿಂದ ಮರ ಕಳವು : ಆರೋಪಿ ಬಂಧನ

Uppala ರೈಲ್ವೇ ಇಲಾಖೆಯ ಸ್ಥಳದಿಂದ ಮರ ಕಳವು : ಆರೋಪಿ ಬಂಧನ

ಮೋದಿ ಸರಕಾರದಿಂದ ಭ್ರಷ್ಟಾಚಾರ ನಿಯಂತ್ರಣ: ಎ.ಪಿ. ಅಬ್ದುಲ್ಲ ಕುಟ್ಟಿ

ಮೋದಿ ಸರಕಾರದಿಂದ ಭ್ರಷ್ಟಾಚಾರ ನಿಯಂತ್ರಣ: ಎ.ಪಿ. ಅಬ್ದುಲ್ಲ ಕುಟ್ಟಿ

ಇಂದು ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಕಾಸರಗೋಡಿಗೆ

ಇಂದು ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಕಾಸರಗೋಡಿಗೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.