ಮತ್ತೆ ಬಂತು ನವಹರುಷವ ಹೊತ್ತು ವಿಷುಕಣಿ ಸಂಭ್ರಮ


Team Udayavani, Apr 14, 2018, 7:20 AM IST

Vishu-Kani-600.jpg

ಇತ್ತೀಚೆಗಷ್ಟೇ ಚಾಂದ್ರಮಾನ ಯುಗಾದಿಯನ್ನು ಹಲವಾರು ಕಡೆಗಳಲ್ಲಿ ಹೊಸವರುಷವೆಂದು ಬಹಳ ಸಂಭ್ರಮದಿಂದ ಆಚರಿಸಲಾಯಿತು.ಇದೀಗ ಬಂದಿರುವುದೇ ಸೌರಯುಗಾದಿಯ ಸಂಭ್ರಮ. ‘ವಿಷು’ ಎಂದೇ ಕರೆಯಲ್ಪಡುವ ಈ ಹಬ್ಬವು ಕೇರಳೀಯರ ಹಾಗೂ ತುಳುನಾಡ ಜನರ ಪ್ರಮುಖ ಹಬ್ಬವಾಗಿದೆ.ಈ ದಿವಸವನ್ನೇ ಹೊಸವರ್ಷವೆಂದು ಆಚರಿಸುತ್ತಾರೆ. ಮೇಷಮಾಸದ ಒಂದನೇ ದಿನ ಅಂದರೆ ಸೂರ್ಯನು ಮೆಷರಾಶಿಯನ್ನು ಪ್ರವೇಶಿಸಿದ ದಿನವೇ ಸೌರಯುಗಾದಿ ಅಥವಾ ವಿಷು ಎಂದು ಕರೆಯಲ್ಪಡುವುದು.

ವಿಷು ಕಣಿ ಎಂದೇ ಪ್ರಸಿದ್ಧಿ ಪಡೆದಿರುವುದು ಈ ಹಬ್ಬದ ವಿಶೇಷ . ‘ವಿಷು ಕಣಿ’ ಎಂದರೆ ತಾವು ಬೆಳೆಸಿದ ವಿವಿಧ ಹಣ್ಣು ತರಕಾರಿಗಳನ್ನು ಅಥವಾ ಪೇಟೆಯಿಂದ ತಂದು ದೇವರ ಕೋಣೆಯಲ್ಲಿ ದೇವರ ಮುಂದೆ ಇಡುವುದು. ಗೇರುಹಣ್ಣು, ಮಾವಿನಹಣ್ಣು, ಚಿಕ್ಕು, ನೇರಳೆ, ಮುಸುಂಬಿ, ಸೌತೆಕಾಯಿ, ಮುಳ್ಳುಸೌತೆ ಚೀನಿಕಾಯಿ ಇತ್ಯಾದಿಗಳನ್ನು ಹಿಂದಿನ ದಿನ ರಾತ್ರಿಯೇ ಇಡುತ್ತಾರೆ. ಹಳದಿ ಬಣ್ಣದ ಪೊನ್ನೆ ಹೂ ಬಹಳ ವಿಶೇಷ. ಈ ಮಾಸದಲ್ಲಿ ಸಮೃದ್ಧವಾಗಿ ಅರಳಿ ಮರವೇ ಹೊನ್ನಿನಂತ ಕಾಣುತ್ತಿರುತ್ತದೆ. ವಿಷುವಿನ ದಿನ ಬೆಳಗ್ಗೆ ಬೇಗ ಎದ್ದು, ಸ್ನಾನ ಮಾಡಿ, ಹೊಸ ಬಟ್ಟೆ ಧರಿಸಿ ಬೇರೆ ಏನನ್ನೂ ನೋಡದೆ ಮೊದಲಿಗೆ ಹೂ ಹಣ್ಣುಗಳಿಂದ ಅಲಂಕೃತಗೊಂಡ ‘ವಿಷು ಕಣಿ’ಯನ್ನು ನೋಡಿ, ದೇವರಿಗೆ ನಮಸ್ಕರಿಸಿ, ಅನಂತರ ಮನೆಯ ಹಿರಿಯರೆಲ್ಲರಿಗೂ ನಮಸ್ಕರಿಸಿ ಆಶೀರ್ವಾದ ಪಡೆದುಕೊಳ್ಳುವುದು ಪದ್ಧತಿ. ಹಿರಿಯರು  ಮಕ್ಕಳಿಗೆ ಉಡುಗೊರೆ ನೀಡಿ ಹರಸಿದಾಗ ಮಕ್ಕಳಿಗೋ ಎಲ್ಲಿಲ್ಲದ ಸಂತೋಷ. ಹೊಸವರುಷದಾರಂಭದಲ್ಲಿ ಸಮೃದ್ಧಿಯ ಸಂಕೇತವಾದ ಫ‌ಲವಸ್ತುಗಳನ್ನು ದೇವರಿಗರ್ಪಿಸಿ ಬೇಡಿಕೊಂಡಲ್ಲಿ ವರುಷವಿಡೀ ಒಳ್ಳೆಯದಾಗುವುದೆಂಬ ನಂಬಿಕೆ. ಅದಕ್ಕಾಗಿಯೇ ವಿಷು ಬಂತೆಂದರೆ ನಗರವೂ ನೋಡಲು ಹೂ ಹಣ್ಣುಗಳಿಂದ ತುಂಬಿರುವುದು.ಮಾರಾಟವು ಭರದಲ್ಲಿ ಸಾಗುತ್ತಿರುವುದು.ಎಲ್ಲಾ ವಸ್ತುಗಳ ಬೆಲೆಯೂ ಗಗನಕ್ಕೇರುವುದು.

ಹಿಂದಿನ ಕಾಲದಲ್ಲಿ ಶ್ರೀ ಮಂತರಲ್ಲಿ ಎಕರೆಗಟ್ಟಲೆ ಆಸ್ತಿ ಇರುತ್ತಿದ್ದು ಹಲವಾರು ಕೃಷಿಗಳನ್ನೂ ಮಾಡುತ್ತಿದ್ದರು.ಅದನ್ನು ನೋಡಿಕೊಳ್ಳಲೆಂದು ಒಂದು ಕುಟುಂಬವೂ ಅಲ್ಲೇ ಇರುತ್ತಿತ್ತು.ಅವರನ್ನು ಒಕ್ಕಲಿಗರೆಂದು ಕರೆಯುತ್ತಿದ್ದರು.ಅವರದೇ ಜವಾಬ್ದಾರಿಯಲ್ಲಿ ಕೃಷಿಯನ್ನು ಮಾಡಿ ಬಂದ ಫ‌ಸಲಿನ ಅರ್ಧ ಭಾಗವನ್ನು ಯಜಮಾನನಿಗೆ ಕೊಡಬೇಕು. ಉಳಿದರ್ಧ ತನ್ನ ಸಂಸಾರಕ್ಕೆ ಎಂಬುದು ನಿಯಮ. ಆ ಕಾಲದಲ್ಲಿ ಒಕ್ಕಲಿಗರು ವಿಷುವಿನ ದಿವಸ ತಾವು ಬೆಳೆದ ತರಕಾರಿಯೋ,ಹಣ್ಣುಗಳ್ಳೋ,ಗೇರುಬೀಜ ಹೀಗೆ ಏನೆಲ್ಲಾ ಇವೆಯೋ ಎಲ್ಲವನ್ನು ಒಂದಷ್ಟು ಧನಿಗಳ ಮನೆಗೆ ತಂದುಕೊಟ್ಟು ಅವರ ಆಶೀರ್ವಾದ ಪಡೆದುಕೊಳ್ಳುತ್ತಿದ್ದರು. ನಂತರ ಯಜಮಾನನು ಬಂದವರಿಗೆ ತಿಂಡಿ ಸಿಹಿ ವಸ್ತು ಬಟ್ಟೆ ಇತ್ಯಾದಿಗಳನ್ನು ನೀಡಿ ಹರಸುತ್ತಿದ್ದನು. ಕೆಲಸಕ್ಕೆ ಬರುವವರೆಲ್ಲರೂ ಆ ದಿವಸ ಕಣಿ ತಂದಿಟ್ಟು ನಮಸ್ಕರಿಸಿ ತಿಂಡಿ ತಿಂದು ಮಾತಾಡಿ ಹೋಗುತ್ತಿದ್ದರು.

ಈಗ ಅಂತಹ ಒಕ್ಕಲಿಗರೆಂಬ ವ್ಯವಸ್ಥೆಯೇ ಇಲ್ಲ. ‘ಉಳುವವನೇ ಹೊಲದೊಡೆಯ’ ಎಂಬುದು ಈಗಿನ ನಿಯಮ.ಇದರಿಂದಲಾಗಿ ಸಮಯ ಸರಿದಂತೆ ಕಣಿ ತರುವ ಪದ್ಧತಿ ನಿಂತೇ ಹೋಯಿತೆನ್ನಬಹುದು. ಹುಡುಕಿದರೆ ಬೆರಳೆಣಿಕೆಯಲ್ಲಿ ಅಂತಹ ಕ್ರಮ ಈಗಲೂ ನಡೆಯುತ್ತಿರುವುದು ಕಾಣಸಿಗುವುದು. ಹಿಂದೆಲ್ಲಾ ಮಕ್ಕಳಿಗೆ ರಜೆಯ ಮಜಾದ ಜೊತೆಗೆ ಯಥೇಚ್ಛವಾಗಿ ಹಣ್ಣುಗಳೂ ದೊರೆಯುವ ಸಮಯ.ಮತ್ತೆ ಕೆಳಬೇಕೇ.ದೇವಸ್ಥಾನಕ್ಕೆ ಹೋಗಿ ಬಂದು ನೆರೆಹೊರೆಯ ಮಕ್ಕಳ ಜೊತೆ ತೋಟ ಗುಡ್ಡ ಅಂತ ಅಡ್ಡಾಡಿ  ಬಿಸಿಲಿನ ಝಳಕ್ಕೆ ತಂಪಾಗಿಸಲು ನೀರಲ್ಲಿ ಆಡುತ್ತಾ ಸಮಯ ಹೋದ ಅರಿವೇ ಇರುವುದಿಲ್ಲ.

ಅಮ್ಮ ಬಗೆ ಬಗೆ ತಿಂಡಿ ತಿನಸು ಮಾಡಿ ಮಕ್ಕಳನ್ನು ಕರೆದು ಕೊಟ್ಟ ಊಟ ಮಾಡಿ ಮತ್ತೆ ಸಂಜೆತನಕವೂ ಆಟ. ಈಗ ಇದೆಲ್ಲಾ ಬರಿಯ ನೆನಪಷ್ಟೇ ಆಗಿ ಉಳಿದಿದೆ. ಈಗಿನ ಬದುಕೇ ಧಾವಂತದ್ದು. ದಿನವೂ ಒಂದಿಲ್ಲೊಂದು ಜಂಜಾಟಗಳು. ಪ್ರಕೃತಿಯೂ ನಶಿಸಿ ಹೋಗುತ್ತಿರುವುದು ದುರಂತ. ಕೃಷಿಯ ಕಡೆಗೆ ಆಸಕ್ತಿಯೂ ಇರುವುದಿಲ್ಲ. ನಗರವಾಸಿಗಳಿಗಂತೂ ಕೇಳುದೇ ಬೇಡ.ಇಂತಹ ಸಂತೋಷಗಳು ಎಲ್ಲಿಂದ ಸಿಗಬೇಕು. ಮಕ್ಕಳು ದಿನಬೆಳಗಾದರೆ ನಾಲ್ಕು ಗೋಡೆಯ ಮಧ್ಯೆ ಕಂಪ್ಯೂಟರ್ ಮೊಬೈಲ್‌ ನಲ್ಲಿ ಆಡುತ್ತಾ ಸಿನೆಮ ನೋಡುತ್ತಾ ಕಾಲ ಕಳೆಯುದೇ ಜಾಸ್ತಿ. ನೆರೆಹೊರೆಯವರೊಂದಿಗೋ ನೆಂಟರಿಷ್ಟರೊಂದಿಗೋ ಕೂಡಿ ಆಡುವ ಮನವೇ ಇಲ್ಲ.ಮತ್ತೆಲ್ಲಿಯ ಬಾಂಧವ್ಯ ಎಲ್ಲದರಲ್ಲೂ ಯಾಂತ್ರಿಕತೆ. ಈ ವಿಷು ಹಬ್ಬದ ಸಂದರ್ಭದಲ್ಲಿ ಪೋಷಕರು ಈ ಬಗ್ಗೆ ಚಿಂತಿಸಿ ಮಕ್ಕಳೊಂದಿಗೆ ತಾವೂ ಪರಿಸರ ಬಂಧುಬಳಗದ ಜೊತೆ ಬೆರೆತು ಹೊಸ ಬಾಂಧವ್ಯವು ಬೆಳೆಯುವಂತಾಗಲಿ ಸಂಭ್ರಮವು ಮೇಳೈಸುತಿರಲಿ ಎಂದು ಆಶಿಸೋಣ.

ವಿಷು ಸದ್ಯ ಹೆಸರಿನ ವಿಶೇಷ ಊಟ
ಕೇರಳದಲ್ಲಿ ಈಗಲೂ ಹೆಚ್ಚಿನ ಜನರೂ ಈ ಒಂದು ದಿನವನ್ನು ಬಹಳ ಸಂಭ್ರಮದಿಂದ ಕಳೆಯುತ್ತಾರೆ.ವಿಷು ಸದ್ಯ ಎಂಬ ವಿಶೇಷ ಊಟದ ತಯಾರಿ ಮಾಡುತ್ತಾರೆ. ಪ್ರಮುಖವಾಗಿ ಮಧ್ಯಾಹ್ನ ಭೋಜನದಲ್ಲಿ ಅವಿಯಲಲ್, ಪುಳಿಶ್ಯೇರಿ, ಹಪ್ಪಳ, ಪಾಯಸ ಸೇರಿರುತ್ತದೆ. ಈಗೀಗ ಹೋಟೆಲ್‌ ಗಳಲ್ಲಿಯೂ ವಿಷು ಸದ್ಯ ದೊರಕುವುದರಿಂದ ಕೆಲವರು ಸುಮ್ಮಗೇ ಪ್ರಯಾಸ ಯಾಕೆ ಅಂತ ಗೆಳೆಯ ಗೆಳತಿಯರ ಜೊತೆ ಅಥವಾ ಕುಟುಂಬ ಸಮೇತರಾಗಿ ಹೋಟೆಲಿಗೆ ಹೋಗಿ ಸವಿದು ಬರುತ್ತಾರೆ.

— ಅನ್ನಪೂರ್ಣಾ ಬೆಜಪ್ಪೆ ಕಿದೂರು

ಟಾಪ್ ನ್ಯೂಸ್

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

10-sulya

ಚಾರಿತ್ರಿಕ ಪರಂಪರೆಗಳ ಸಂರಕ್ಷಣೆಗಾಗಿ ಅಮರ ಸುಳ್ಯ ಹೆರಿಟೇಜ್ ಫೌಂಡೇಶನ್ (ರಿ.) ಕಾರ್ಯಾರಂಭ

Virajpet: ಲಾರಿ – ಆ್ಯಂಬುಲೆನ್ಸ್‌ ನಡುವೆ ಢಿಕ್ಕಿ; ಓರ್ವನಿಗೆ ಗಾಯ

Virajpet: ಲಾರಿ – ಆ್ಯಂಬುಲೆನ್ಸ್‌ ನಡುವೆ ಢಿಕ್ಕಿ; ಓರ್ವನಿಗೆ ಗಾಯ

ಅಂಬಲತ್ತರದಲ್ಲಿ ಪತ್ತೆಯಾದ ನೋಟುಗಳೆಲ್ಲವೂ ಖೋಟಾ ನೋಟು : ಕರ್ನಾಟಕದಲ್ಲಿ ಮುದ್ರಣ ಶಂಕೆ

ಅಂಬಲತ್ತರದಲ್ಲಿ ಪತ್ತೆಯಾದ ನೋಟುಗಳೆಲ್ಲವೂ ಖೋಟಾ ನೋಟು : ಕರ್ನಾಟಕದಲ್ಲಿ ಮುದ್ರಣ ಶಂಕೆ

Manjeshwar ವಿದ್ಯುತ್‌ ಆಘಾತ: ಯುವಕ ಸಾವು

Manjeshwar ವಿದ್ಯುತ್‌ ಆಘಾತ: ಯುವಕ ಸಾವು

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

6-good-friday

Good Friday: ಕ್ರೈಸ್ತರಿಂದ ಕೊನೆಯ ಭೋಜನದ ಸ್ಮರಣೆ

Kannada Cinema: ತೆರೆಗೆ ಬಂತು ಯುವ, ತಾರಿಣಿ

Kannada Cinema: ತೆರೆಗೆ ಬಂತು ಯುವ, ತಾರಿಣಿ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.