ಕಾಸರಗೋಡು ಅಪರಾಧ ಸುದ್ದಿಗಳು 


Team Udayavani, Feb 9, 2019, 12:30 AM IST

crime-new.jpg

ಅಡೂರಿನ ಅರಣ್ಯದಲ್ಲಿ ಪತ್ತೆಯಾಗಿದ್ದ ಶವ ಕಲ್ಲಿನಿಂದ ತಲೆಗೆ ಹೊಡೆದು ಕೊಲೆ: ಓರ್ವ ವಶಕ್ಕೆ
ಅಡೂರು:
ಅಡೂರು ಕಾಟಿಕಜೆ ಮಾವಿನಡಿಯ ಕುಂಞಪ್ಪ ನಾಯ್ಕ ಅವರ ಪುತ್ರ ಎಂ.ಕೆ. ಚಿದಾನಂದ ಯಾನೆ ಸುಧಾಕರ (36)  ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ನೆರೆಮನೆಯ ನಿವಾಸಿ ಗಣಪ ನಾಯ್ಕ (35)ನನ್ನು ಆದೂರು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. 

ಕೂಲಿ ಕೆಲಸಕ್ಕೆಂದು  ಹೋಗಿದ್ದ ಸುಧಾಕರ ಮರಳಿ ಬಾರದ ಹಿನ್ನೆಲೆಯಲ್ಲಿ ಮನೆಯವರು ಹುಡುಕಾಡಿದಾಗ ಅವರ ಮೃತದೇಹ ಅರಣ್ಯದಲ್ಲಿ ಪತ್ತೆಯಾಗಿತ್ತು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

ಅಡೂರು ಬಳಿಯ ಬಳ್ಳಕಾನದ ಸರಕಾರಿ ಅರಣ್ಯದೊಳಗೆ ಸುಧಾಕರ ಅವರ ಮೃತ ದೇಹ ಫೆ.7ರಂದು ಸಂಜೆ ಪತ್ತೆಯಾಗಿತ್ತು. ಮೃತದೇಹ ಕವುಚಿ ಮಲಗಿದ ಸ್ಥಿತಿಯಲ್ಲಿದ್ದು, ತಲೆಯಲ್ಲಿ ಕಲ್ಲಿನಿಂದ ಉಂಟಾದ ಏಟಿನ ಗಾಯ ಕಂಡು ಬಂದಿ ತ್ತು. ಸಮೀಪದಲ್ಲೇ ರಕ್ತ ಮಿಶ್ರಿತ ಕಲ್ಲು,  ಸುಧಾಕರ ಅವರ ಪಾದರಕ್ಷೆ, ಅಲ್ಲದೆ ಬೇರೆ ವ್ಯಕ್ತಿ ಯ ಒಂದು ಜತೆ ಪಾದರಕ್ಷೆ ಹಾಗೂ ಬೈರಾಸು  ಪತ್ತೆಯಾಗಿದೆ.

ಆದೂರು ಎಸ್‌.ಐ. ನಿಬಿನ್‌ ಜೋಯ್‌, ಇನ್‌ಸ್ಪೆಕ್ಟರ್‌ ಎಂ. ಎ. ಮ್ಯಾಥ್ಯೂ, ಜಿಲ್ಲಾ  ಕ್ರೈಂಬ್ರಾಂಚ್‌ ಡಿವೈಎಸ್‌ಪಿ ಪ್ರದೀಪ್‌ ಕುಮಾರ್‌ ನೇತೃತ್ವದಲ್ಲಿ ಪೊಲೀಸರು ಹಾಗೂ ಶ್ವಾನದಳ ಸ್ಥಳಕ್ಕೆ ತೆರಳಿ ತನಿಖೆ ನಡೆಸಿದರು.

ಪೊಲೀಸರು ನೀಡಿದ ಮಾಹಿತಿ
ಗಣಪನ  ತೋಟದಿಂದ ಹಲವು ಬಾರಿ ಅಡಿಕೆ ಕಳವಾಗಿದ್ದು, ಈ ಬಗ್ಗೆ ಸುಧಾಕರನ ಮೇಲೆ  ಸಂಶಯವಿತ್ತು. ಅಲ್ಲದೆ ಸುಧಾಕರನು ತನ್ನ ಸ್ನೇಹಿತನೊಂದಿಗೆ  ಗಣಪನ ಅಡಿಕೆ ತೋಟದಲ್ಲಿ ಮದ್ಯ ಸೇವಿಸುತ್ತಿದ್ದ. ಇದನ್ನು ಪ್ರಶ್ನಿಸಿದಾಗ ಗಣಪ ಹಾಗೂ ಸುಧಾಕರನ ಮಧ್ಯೆ ಮಾತಿನ ಚಕ ಮಕಿ ನಡೆದಿತ್ತು. ಬುಧವಾರ ಸಂಜೆ 5.30ಕ್ಕೆ ಗಣಪ ಮದ್ಯ ಸೇವಿಸಿ ಬರುತ್ತಿದ್ದಾಗ ಸುಧಾಕರನೂ ಕಾಡಿ ನಲ್ಲಿ ಕುಳಿತು ಮದ್ಯ ಸೇವಿಸುತ್ತಿದ್ದ. ಈ ಸಂದರ್ಭದಲ್ಲಿ ಅವರಿಬ್ಬರ ನಡುವೆ ಹೊಕೈ ನಡೆದಿದ್ದು, ಗಣಪ ಕಲ್ಲಿನಿಂದ ಸುಧಾಕರನ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆಂದು  ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಆದೂರು ಪೊಲೀಸರು ತಿಳಿಸಿದ್ದಾರೆ.

ಮನೆಯಿಂದ ಕಳವು
ಕಾಸರಗೋಡು:
ನಗರದ ತೆರುವತ್ತ್ ಹೊನ್ನೆಮೂಲೆಯ ಅಬ್ದುಲ್‌ ಖಾದರ್‌ ಅವರ ಮನೆಯಿಂದ ಫೆ. 7ರಂದು ರಾತ್ರಿ ಬಾಗ್‌ನ್ನು ಕಳವು ಮಾಡಿದ ಘಟನೆ ನಡೆದಿದೆ. ಬ್ಯಾಗ್‌ನಲ್ಲಿ 20 ಸಾವಿರ ರೂ. ನಗದು ಮತ್ತು ಒಂದು ಪಾಸ್‌ಪೋರ್ಟ್‌ ಇತ್ತೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಅಡುಗೆ ಕೋಣೆಯ ಗ್ರಿಲ್ಸ್‌ ಮುರಿದು ಮಾಡಿ ಒಳನುಗ್ಗಿದ ಕಳ್ಳ ಕಪಾಟಿನಲ್ಲಿದ್ದ ಚಿನ್ನವನ್ನು ತೆಗೆಯುತ್ತಿದ್ದ ವೇಳೆ ಎಚ್ಚೆತ್ತ ಮನೆಯವರು ಬೊಬ್ಬೆ ಹಾಕಿದಾಗ ಚಿನ್ನವನ್ನು ಅಲ್ಲೇ ಬಿಸಾಡಿ ಕಳ್ಳ ಕೈಗೆ ಸಿಕ್ಕಿದ ಬ್ಯಾಗನ್ನು ಕದ್ದೊಯ್ದಿದ್ದಾನೆ.

ಅಲ್ಲಿಲ್ಲಿ ಬೆಂಕಿ ಅನಾಹುತ
ಕಾಸರಗೋಡು
: ಕಾಸರಗೋಡು ಮತ್ತು ಪರಿಸರ ಪ್ರದೇಶದಲ್ಲಿ ಏಳು ಕಡೆಗಳಲ್ಲಿ ಬೆಂಕಿ ಅನಾಹುತ ಸಂಭವಿಸಿದೆ. ಬೋವಿಕ್ಕಾನ ಮೊದಲಪ್ಪಾರೆಯಲ್ಲಿರುವ ತೋಟಗಾರಿಕಾ ನಿಗಮದ ಮೂರು ಎಕ್ರೆಯಷ್ಟು ಗೇರು ತೋಟಕ್ಕೆ ಬೆಂಕಿ ಹತ್ತಿಕೊಂಡಿದೆ. ಕಳನಾಡು ರೆೈಲ್ವೇ ಮೇಲ್ಸೇತುವೆ ರೈಲ್ವೇ ಟ್ರಾÂಕ್‌ ಬಳಿ, ಚೆರ್ಕಳ ಕೆ.ಕೆ. ಪುರ, ಚೌಕಿ ಬದಿಯಲ್ಲಿರುವ ಮರಕ್ಕೆ, ಚೆಂಗಳ ಬೇರ್ಕ ಮತ್ತು ಚೆರ್ಕಳದ ಬೇರ್ಕದ ಹಿತ್ತಿಲಿಗೂ ಬೆಂಕಿ ಹತ್ತಿಕೊಂಡಿದ್ದು ಕಾಸರಗೋಡು ಅಗ್ನಿಶಾಮಕ ದಳ ಬೆಂಕಿಯನ್ನು ಆರಿಸಿತು.

ವ್ಯಾಪಾರಿಗೆ ಹಲ್ಲೆ
ಬದಿಯಡ್ಕ
: ಚರ್ಲಡ್ಕದ ವ್ಯಾಪಾರಿ, ಕೊಲ್ಲಂಗಾನ ನಿವಾಸಿ ಹಸೈನಾರ್‌(45) ಅವರಿಗೆ ತಂಡವೊಂದು ಹಲ್ಲೆ ಮಾಡಿದ ಘಟನೆ ನಡೆದಿದೆ. ಗಾಯಾಳುವನ್ನು ಮಂಗಳೂರಿನ ಆಸ್ಪತ್ರೆಗೆ ಸೇರಿಸಲಾಗಿದೆ. ಆರು ಮಂದಿಯ ತಂಡ ಅಂಗಡಿಗೆ ಬಂದು ಸಿಗರೇಟ್‌ ಪಡೆದಕೊಂಡು ಸಾಲ ನೀಡದಿದ್ದಾಗ ಹಲ್ಲೆ ಮಾಡಿದರೆಂದು ಗಾಯಾಳು ಆರೋಪಿಸಿದ್ದಾರೆ.

ಸುಬೈದಾ ಕೊಲೆ ಪ್ರಕರಣ : ಆರೋಪಿಯ ಬಂಧನ
ಕಾಸರಗೋಡು:
ಬೇಕಲ ಪೆರಿಯ ಆಯಂಪಾರ ಚೆಕ್ಕಿಪಳ್ಳದ ಸುಬೈದಾ (65) ಅವರನ್ನು 2018 ಜ.17 ರಂದು ಕೈಕಾಲು ಕಟ್ಟಿ ಹಾಕಿ ಕುತ್ತಿಗೆ ಬಿಗಿದು ಕೊಲೆಗೈದು ಚಿನ್ನಾಭರಣ ದರೋಡೆ ಮಾಡಿದ ಪ್ರಕರಣದ ಆರೋಪಿಯಾಗಿದ್ದು, ಪೊಲೀಸ್‌ ಕಸ್ಟಡಿಯಿಂದ ಪರಾರಿಯಾಗಿದ್ದ ಮೂಲತಏ ಕರ್ನಾಟಕ ಸುಳ್ಯ ಅಜ್ಜಾವರ ಗುಳಿಂಬೆ ನಿವಾಸಿ, ಮಧೂರು ಪಟ್ಲದ ಬಾಡಿಗೆ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದ ಅಸೀಸ್‌ ಆಲಿಯಾಸ್‌ ಕರ್ನಾಟಕ ಅಸೀಸ್‌(30)ನನ್ನು ಕರ್ನಾಟಕದಿಂದ ಪೊಲೀಸರು ಬಂಧಿಸಿದ್ದಾರೆ. 2018 ಸೆ.14 ರಂದು ಪೊಲೀಸ್‌ ಕಸ್ಟಡಿಯಿಂದ  ಈತ ಪರಾರಿಯಾಗಿದ್ದ.

ಜುಗಾರಿ : ಯುವಕನ ಬಂಧನ
ಕುಂಬಳೆ:
ಶಾಂತಿಪಳ್ಳದ ಕಾಡಿನಲ್ಲಿ ಜುಗಾರಿ ದಂಧೆಯಲ್ಲಿ ನಿರತನಾಗಿದ್ದ ಮಧೂರು ನಿವಾಸಿ ಅಜೀಶ್‌(31)ನನ್ನು ಪೊಲೀಸರು ಬಂಧಿಸಿದ್ದಾರೆ. ಇದೇ ವೇಳೆ ಇಬ್ಬರು ಪರಾರಿಯಾಗಿದ್ದಾರೆ. ಜುಗಾರಿ ಸ್ಥಳದಿಂದ 4, 000 ರೂ. ವಶಪಡಿಸಿಕೊಳ್ಳಲಾಗಿದೆ.

ಟಾಪ್ ನ್ಯೂಸ್

Bhojshala: ASI seeks 8 weeks time for scientific survey

Bhojshala: ವೈಜ್ಞಾನಿಕ ಸಮೀಕ್ಷೆಗೆ 8 ವಾರ ಕಾಲಾವಕಾಶ ಕೋರಿದ ಎಎಸ್‌ಐ

Kollam; ಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

5-ksrgdu

Crime: ಕಾಸರಗೋಡು ಭಾಗದ ಅಪರಾಧ ಸುದ್ದಿಗಳು 

Kasaragod ಎನ್‌ಡಿಎ ಅಭ್ಯರ್ಥಿ ಅಶ್ವಿ‌ನಿ ಪ್ರಚಾರಕ್ಕೆ ಅಡ್ಡಿ: ಕೇಸು ದಾಖಲು

Kasaragod ಎನ್‌ಡಿಎ ಅಭ್ಯರ್ಥಿ ಅಶ್ವಿ‌ನಿ ಪ್ರಚಾರಕ್ಕೆ ಅಡ್ಡಿ: ಕೇಸು ದಾಖಲು

ಸಿಡಿದ ಗ್ಯಾಸ್‌ ಸಿಲಿಂಡರ್‌; ಪಾರಾದ ಕುಟುಂಬ: ಶೇಣಿ ಬಾರೆದಳದಲ್ಲಿ ಮನೆಗೆ ತಗಲಿದ ಬೆಂಕಿ

ಸಿಡಿದ ಗ್ಯಾಸ್‌ ಸಿಲಿಂಡರ್‌; ಪಾರಾದ ಕುಟುಂಬ: ಶೇಣಿ ಬಾರೆದಳದಲ್ಲಿ ಮನೆಗೆ ತಗಲಿದ ಬೆಂಕಿ

banUppala ಮನೆಯಿಂದ ನಗ, ನಗದು ಕಳವು: ಯುವಕನಿಗೆ ಕೋವಿ ತೋರಿಸಿ ಬೆದರಿಕೆ

Uppala ಮನೆಯಿಂದ ನಗ, ನಗದು ಕಳವು: ಯುವಕನಿಗೆ ಕೋವಿ ತೋರಿಸಿ ಬೆದರಿಕೆ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Bhojshala: ASI seeks 8 weeks time for scientific survey

Bhojshala: ವೈಜ್ಞಾನಿಕ ಸಮೀಕ್ಷೆಗೆ 8 ವಾರ ಕಾಲಾವಕಾಶ ಕೋರಿದ ಎಎಸ್‌ಐ

Kollam; ಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.