ರಬ್ಬರ್‌ ಉತ್ಪಾದನೆ ವೆಚ್ಚ 174 ರೂ.; ಕೃಷಿಕನಿಗೆ ಕೇವಲ 125 ರೂ.


Team Udayavani, Jun 23, 2018, 6:00 AM IST

rubber.jpg

ಕಾಸರಗೋಡು: ರಬ್ಬರ್‌ ಕೃಷಿಕನಿಗೆ ರಬ್ಬರ್‌ ಉತ್ಪಾದನೆ ವೆಚ್ಚದಷ್ಟೂ ಹಣ ಲಭಿಸದಿರುವುದರಿಂದ ರಬ್ಬರ್‌ ಕೃಷಿಕರು ಸಂದಿಗ್ಧ ಸ್ಥಿತಿಯಲ್ಲಿದ್ದಾರೆ. ಒಂದು ಕಿಲೋ ರಬ್ಬರ್‌ ಉತ್ಪಾದಿಸಲು 174 ರೂಪಾಯಿ ಬೇಕಾಗಿದ್ದರೆ, ಒಂದು ಕಿಲೋ ರಬ್ಬರ್‌ಗೆ ಕೃಷಿಕನಿಗೆ ಲಭಿಸುವುದು ಕೇವಲ 125 ರೂ. ಅಂದರೆ ಒಂದು ಕಿಲೋ ರಬ್ಬರ್‌ನಲ್ಲಿ ಕೃಷಿಕನಿಗೆ 49 ರೂ. ನಷ್ಟ ಸಂಭವಿಸುತ್ತದೆ. ಈ ಹಿನ್ನೆಯಲ್ಲಿ ಕೃಷಿಕರು ರಬ್ಬರ್‌ ಬೆಳೆಯುವುದರಿಂದ ಹಿಂದೆ ಸರಿಯುತ್ತಿದ್ದಾರೆ.

ರಬ್ಬರ್‌ ಬೋರ್ಡ್‌ ಮತ್ತು ಕೇರಳ ಸರಕಾರ ಅಂಗೀಕರಿಸಿದ ಒಂದು ಕಿಲೋ ರಬ್ಬರ್‌ ಉತ್ಪಾದಿಸಲು ತಗಲುವ ವೆಚ್ಚ 174 ರೂಪಾಯಿಯಾಗಿದೆ. ನಾಲ್ಕನೇ ಶ್ರೇಣಿಯ ರಬ್ಬರ್‌ಗೆ ಕೃಷಿಕನಿಗೆ ಲಭಿಸುವ ಮೊತ್ತ ಕೇವಲ 125 ರೂ.

ಕೇಂದ್ರ ಸರಕಾರ ರಬ್ಬರ್‌ ಕೈಗಾರಿಕಾ ಘಟಕಗಳಿಗಿರುವ ಅಸಂಸ್ಕೃತ ವಸ್ತುವಾಗಿ ಪರಿಗಣಿಸಿದೆ. ರಬ್ಬರ್‌ ಕೃಷಿ ಬೆಳೆಯಾಗಿ ಕೇರಳ ಸರಕಾರ ಅಂಗೀಕರಿಸಿದರೆ ಸ್ವಾಮಿನಾಥನ್‌ ಆಯೋಗ ಶಿಫಾರಸು ಪ್ರಕಾರ ರಬ್ಬರ್‌ ಕಿಲೋ ಒಂದಕ್ಕೆ 261 ರೂಪಾಯಿ ಲಭಿಸಬೇಕಾಗಿತ್ತು. ಬೆಲೆ ಸ್ಥಿರತೆ ನಿಧಿ ಬಳಸಿ ಕಿಲೋ ಒಂದಕ್ಕೆ 200 ರೂ. ನೀಡಬೇಕೆಂದು ಕೃಷಿಕರು ಬೇಡಿಕೆಯಿಟ್ಟಿದ್ದರೂ ಪರಿಗಣಿಸಿಲ್ಲ. 150 ರೂಪಾಯಿ ಲಭಿಸುವ ರೀತಿಯಲ್ಲಿ ಸಬ್ಸಿಡಿ ವಿತರಣೆಗೆ ಯಾವುದೇ ಸಮಯ ಮಿತಿ ಇಲ್ಲ. ಇದರಿಂದಾಗಿ ಕೃಷಿಕರು ಹೈರಾಣಾಗಿದ್ದಾರೆ.

ಮಳೆಯ ಕಾರಣದಿಂದ ಕೃಷಿಕರು ಸಂದಿಗ್ಧ ಸ್ಥಿತಿಗೆ ತಳ್ಳಲ್ಪಟ್ಟಿದ್ದಾರೆ. ಪ್ರಸ್ತುತ ರಬ್ಬರ್‌ಗೆ ರೈನ್‌ ಗಾರ್ಡ್‌ ಹಾಕಲು ಸಾಧ್ಯವಾಗುತ್ತಿಲ್ಲ. ಮಳೆಗಾಲದಲ್ಲಿ ಟ್ಯಾಪಿಂಗ್‌ ನಡೆಸಲು ಸಾಧ್ಯವಾಗದ ಸ್ಥಿತಿಯಿದೆ. ಇದರಿಂದ ಕೃಷಿಕರಿಗೆ ಇನ್ನಷ್ಟು ನಷ್ಟ ಸಂಭವಿಸಲಿದೆ ಎಂದು ರಬ್ಬರ್‌ ಕೃಷಿಕರ ಅಂಬೋಣ.

ಕಬ್ಬು ಕೃಷಿಕರಿಗೆ ಹಲವು ಸವಲತ್ತುಗಳನ್ನು ಸರಕಾರ ಘೋಷಿಸಿದೆ. ಆದರೆ ರಬ್ಬರ್‌ ಕೃಷಿಕರಿಗೆ ಯಾವುದೇ ಸವಲತ್ತು ಘೋಷಿಸಿಲ್ಲ. ನ್ಯಾಯ ಬೆಲೆ ಲಭಿಸಿದರೆ ದೇಶದಲ್ಲಿ ರಬ್ಬರ್‌ ಉತ್ಪಾದನೆಯಲ್ಲಿ ಹೆಚ್ಚಳವಾಗಲಿದೆ. ನಾಲ್ಕು ವರ್ಷಗಳ ಹಿಂದೆ ಇದ್ದ ರಬ್ಬರ್‌ ಬೆಲೆ ಇದೀಗ ಅರ್ಧಕ್ಕಿಳಿದಿದೆ. ಆದರೆ ಇದೇ ವೇಳೆ ಟರ್‌ – ಟ್ಯೂಬ್‌ ಬೆಲೆ ಶೇ. 20 ರಷ್ಟು ಹೆಚ್ಚಳವಾಗಿದೆ.

ಲಾಭ ಟಯರ್‌ ಕಂಪೆನಿಗಳಿಗೆ  
ಒಟ್ಟು 12.56 ಲಕ್ಷ ರಬ್ಬರ್‌ ಕೃಷಿಕ ರಿದ್ದು, ಇವರಿಗೆ ನಷ್ಟ ಸಂಭವಿಸುತ್ತಿದೆ. ಇದೇ ವೇಳೆ 8 ಟಯರ್‌ ಕಂಪೆನಿಗಳಿಗೆ ಲಾಭ ತಂದು ಕೊಡುತ್ತಿದೆ. ರಬ್ಬರ್‌ ಆಮದು ಮಾಡಿಕೊಳ್ಳುವುದರಿಂದ ಈ ಕಂಪೆನಿಗಳಿಗೆ 10,800 ಕೋಟಿ ರೂಪಾಯಿ ಲಾಭವಾಗುತ್ತದೆ. ಈ ಮೂಲಕ ಸರಕಾರಕ್ಕೆ ಸುಂಕವಾಗಿ ಒಂದು ಟನ್‌ಗೆ 42,000 ರೂ. ಲಭಿಸುತ್ತದೆ.

ಟಾಪ್ ನ್ಯೂಸ್

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ

1-qqwewqe

Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್

1-eewqe

BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

10-sulya

ಚಾರಿತ್ರಿಕ ಪರಂಪರೆಗಳ ಸಂರಕ್ಷಣೆಗಾಗಿ ಅಮರ ಸುಳ್ಯ ಹೆರಿಟೇಜ್ ಫೌಂಡೇಶನ್ (ರಿ.) ಕಾರ್ಯಾರಂಭ

Virajpet: ಲಾರಿ – ಆ್ಯಂಬುಲೆನ್ಸ್‌ ನಡುವೆ ಢಿಕ್ಕಿ; ಓರ್ವನಿಗೆ ಗಾಯ

Virajpet: ಲಾರಿ – ಆ್ಯಂಬುಲೆನ್ಸ್‌ ನಡುವೆ ಢಿಕ್ಕಿ; ಓರ್ವನಿಗೆ ಗಾಯ

ಅಂಬಲತ್ತರದಲ್ಲಿ ಪತ್ತೆಯಾದ ನೋಟುಗಳೆಲ್ಲವೂ ಖೋಟಾ ನೋಟು : ಕರ್ನಾಟಕದಲ್ಲಿ ಮುದ್ರಣ ಶಂಕೆ

ಅಂಬಲತ್ತರದಲ್ಲಿ ಪತ್ತೆಯಾದ ನೋಟುಗಳೆಲ್ಲವೂ ಖೋಟಾ ನೋಟು : ಕರ್ನಾಟಕದಲ್ಲಿ ಮುದ್ರಣ ಶಂಕೆ

Manjeshwar ವಿದ್ಯುತ್‌ ಆಘಾತ: ಯುವಕ ಸಾವು

Manjeshwar ವಿದ್ಯುತ್‌ ಆಘಾತ: ಯುವಕ ಸಾವು

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Checkbounce case: ಆರೋಪಿ ಮಹಿಳೆ ಖುಲಾಸೆ

Checkbounce case: ಆರೋಪಿ ಮಹಿಳೆ ಖುಲಾಸೆ

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ

Fraud: ಸರಕಾರಿ ಉದ್ಯೋಗ ಆಮಿಷ: ಲಕ್ಷಾಂತರ ರೂಪಾಯಿ ವಂಚನೆ

Fraud: ಸರಕಾರಿ ಉದ್ಯೋಗ ಆಮಿಷ: ಲಕ್ಷಾಂತರ ರೂಪಾಯಿ ವಂಚನೆ

Kokkada: ತೋಟದಲ್ಲಿ ಕಟ್ಟಿದ್ದ ದನ ಕಳವು

Kokkada: ತೋಟದಲ್ಲಿ ಕಟ್ಟಿದ್ದ ದನ ಕಳವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.