ರಾಷ್ಟ್ರೀಯ ಹೆದ್ದಾರಿ: ಹೊಂಡ ಮುಚ್ಚಿ ಕೆಸರು ಗದ್ದೆ ಸೃಷ್ಟಿ
Team Udayavani, Jul 28, 2018, 6:10 AM IST
ಆದರೆ ಹೊಂಡ ಮುಚ್ಚುತ್ತಿದ್ದಂತೆ ಮಳೆ ಸುರಿದಿರುವುದರಿಂದ ಮಳೆ ನೀರಿನಲ್ಲಿ ಮಣ್ಣು, ಜಲ್ಲಿ ಹುಡಿ, ಕಲ್ಲು ಮಿಶ್ರಣಗೊಂಡು ಕೆಸರು ಗದ್ದೆ ಯಂತಾಗಿದೆ. ಈ ಕಾರಣದಿಂದ ವಾಹನ ಪ್ರಯಾಣ ಸಮಸ್ಯೆಯಾಗಿದೆ. ಈ ಕೆಸರು ಗದ್ದೆಯಲ್ಲಿ ವಾಹನಗಳ ಚಕ್ರ ಮುಂದೆ ಸಾಗದೆ ಅಲ್ಲಲ್ಲಿ ಉಳಿದು ಕೊಳ್ಳುತ್ತಿದೆ. ಕೆಸರು ಗದ್ದೆಯಂತಾಗಿರುವುದರಿಂದ ರಸ್ತೆ ಬದಿಯಲ್ಲಿ ನಡೆದು ಹೋಗುವ ಪಾದಚಾರಿಗಳ ಮೇಲೆ ಕೆಸರು ನೀರಿನ ಸಿಂಚನವಾಗುತ್ತಿದೆ. ಇದೀಗ ವಾಹನ ಅಪಘಾತ ಸಾಧ್ಯತೆ ಇಮ್ಮಡಿಯಾಗಿದೆ. ದ್ವಿಚಕ್ರ ವಾಹನಗಳು ಸ್ಕಿಡ್ ಆಗುತ್ತಿವೆ.
ಕಾಸರಗೋಡು: ತಲಪಾಡಿಯಿಂದ ಕಾಲಿಕಡವಿನ ವರೆಗೆ ರಾಷ್ಟ್ರೀಯ ಹೆದ್ದಾರಿ ಶೋಚನೀಯ ಸ್ಥಿತಿಗೆ ತಲುಪಿದ್ದು, ರಸ್ತೆಯುದ್ದಕ್ಕೂ ಬೃಹತ್ ಗಾತ್ರದ ಹೊಂಡಗಳು ಸೃಷ್ಟಿಯಾಗಿ ರಸ್ತೆಯೇ ಇಲ್ಲ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಪ್ಯಾಚ್ವರ್ಕ್ನಿಂದಾಗಿ ಮತ್ತಷ್ಟು ತೊಂದರೆ
ಹೊಂಡಗುಂಡಿಗಳಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿದಿನ ವಾಹನ ಅಪಘಾತ ಸಂಭವಿಸುತ್ತಿದ್ದು, ಈಗಾಗಲೇ ಹಲವು ಮಂದಿ ಬಲಿಯಾಗಿದ್ದು, ಹಲವಾರು ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ರಸ್ತೆಯಲ್ಲಿ ವಾಹನ ಚಲಾಯಿಸಲು ಸಾಧ್ಯವಿಲ್ಲದಂತೆ ರಸ್ತೆ ಅತ್ಯಂತ ಕೆಟ್ಟು ಹೋಗಿದ್ದು, ರಸ್ತೆಯ ಶೋಚನೀಯ ಸ್ಥಿತಿಯನ್ನು ಪ್ರತಿಭಟಿಸಿ ರಸ್ತೆ ತಡೆ, ಲೋಕೋಪಯೋಗಿ ಇಲಾಖೆ ದಿಗ್ಬಂಧನ ಮೊದಲಾದ ಪ್ರತಿಭಟನೆಯ ಹಿನ್ನೆಲೆಯಲ್ಲಿ ರಸ್ತೆ ಹೊಂಡಕ್ಕೆ ತಾತ್ಕಾಲಿಕ ಪ್ಯಾಚ್ ವರ್ಕ್ ಮಾಡಲಾಗಿದೆ. ಇದರಿಂದಾಗಿ ಇಂತಹ ಸ್ಥಳಗಳು ಇದೀಗ ಕೆಸರು ಗದ್ದೆಯಂತಾಗಿದೆ.
ತೇಪೆ ಕಾರ್ಯ ತಡೆದ ಸ್ಥಳೀಯರು
ಗುರುವಾರ ಬೆಳಗ್ಗೆ ರಾಷ್ಟ್ರೀಯ ಹೆದ್ದಾರಿಯ ಕುಂಬಳೆ ಪೆರುವಾಡಿನಿಂದ ಕಾಸರಗೋಡಿನ ಅಣಂಗೂರುವರೆಗೆ ಲೋಕೋಪಯೋಗಿ ಇಲಾಖೆಯ (ರಾಷ್ಟ್ರೀಯ ಹೆದ್ದಾರಿ ವಿಭಾಗ) ವ್ಯಾಪ್ತಿಯ ರಸ್ತೆಯಲ್ಲಿರುವ ಹೊಂಡಗಳನ್ನು ಮುಚ್ಚುವ ಪ್ರಯತ್ನ ಮಾಡಲಾಯಿತು. ಹೊಂಡ ಮುಚ್ಚುವ ಪ್ರಕ್ರಿಯೆಯನ್ನು ಕೆಲವೆಡೆ ಸ್ಥಳೀಯರು ತಡೆದಿದ್ದಾರೆ. ರಸ್ತೆಯಲ್ಲಿ ಸೃಷ್ಟಿಯಾಗಿರುವ ದೊಡ್ಡ ಗಾತ್ರದ ಹೊಂಡಗಳಿಗೆ ಮಣ್ಣು, ಜಲ್ಲಿ ಹುಡಿ, ಕಲ್ಲಿನ ಹುಡಿಯನ್ನು ಮಿಶ್ರಣ ಮಾಡಿ ನೀರು ಬೆರೆಸಿ ಹೊಂಡವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.
ಮಳೆ ಬಿಟ್ಟು ಬಿಸಿಲು ಕಾಣಿಸಿ ಕೊಂಡಿದ್ದರಿಂದ ಕೆಲವೆಡೆ ಕೆಸರು ಮಣ್ಣು ಒಣಗಿ ವಾಹನಗಳು ಸಾಗುವಾಗ ಮಣ್ಣಿನ ಧೂಳು ಪಾದಚಾರಿಗಳ ಕಣ್ಣಿಗೆರಾಚುತ್ತದೆ. ಇದರಿಂದ ಕಣ್ಣಿಗೂ ಅಪಾಯಕಾರಿಯಾಗಿದೆ.
ಕಾಮಗಾರಿಗೆ ಟೆಂಡರ್
ಗುರುವಾರ ನಡೆಸಿದ ಕಾಮಗಾರಿ ತಾತ್ಕಾಲಿಕವಾಗಿದೆಯೆಂದೂ, ರಾಷ್ಟ್ರೀಯ ಹೆದ್ದಾರಿಯ ಅಧಿಕೃತ ಕಾಮಗಾರಿ ನಡೆಸ ಬೇಕಿದ್ದರೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳಬೇಕಾಗಿದೆ ಎಂದು ಅಧಿಕೃತರು ಹೇಳುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ
Crime: ಕಾಸರಗೋಡು ಭಾಗದ ಅಪರಾಧ ಸುದ್ದಿಗಳು
Kasaragod ಎನ್ಡಿಎ ಅಭ್ಯರ್ಥಿ ಅಶ್ವಿನಿ ಪ್ರಚಾರಕ್ಕೆ ಅಡ್ಡಿ: ಕೇಸು ದಾಖಲು
ಸಿಡಿದ ಗ್ಯಾಸ್ ಸಿಲಿಂಡರ್; ಪಾರಾದ ಕುಟುಂಬ: ಶೇಣಿ ಬಾರೆದಳದಲ್ಲಿ ಮನೆಗೆ ತಗಲಿದ ಬೆಂಕಿ
Uppala ಮನೆಯಿಂದ ನಗ, ನಗದು ಕಳವು: ಯುವಕನಿಗೆ ಕೋವಿ ತೋರಿಸಿ ಬೆದರಿಕೆ