ದ್ರಾವಿಡ ಸಮ್ಮೇಳನದಲ್ಲಿ ತುಳುಭಾಷೆಯ ನಿರ್ಲಕ್ಷ್ಯಕ್ಕೆ ಆಕ್ರೋಶ
Team Udayavani, Aug 24, 2018, 1:35 AM IST
ತುಳುಭಾಷೆಗೆ ತನ್ನದೇ ಆದ ಸ್ವತಂತ್ರ ಲಿಪಿಯಿದ್ದು, ಹಲವಾರು ಕೃತಿಗಳು, ಗ್ರಂಥಗಳು ರಚಿತವಾಗಿದೆ. ಹಾಗೆಯೇ ತುಳು ಲಿಪಿ ಸಾರ್ವತ್ರಿಕವಾಗಿ ಪ್ರಚಲಿತಗೊಳ್ಳುತ್ತಿದೆ. ಅಲ್ಲದೆ ಪಂಚ ದ್ರಾವಿಡ ಭಾಷೆಯಲ್ಲಿ ತುಳು ಕೂಡ ಪ್ರಧಾನ ಭಾಷೆಯಾಗಿದೆ. ತುಳುಭಾಷೆಯಲ್ಲಿ ಇಷ್ಟೆಲ್ಲಾ ಬೆಳವಣಿಗೆ ನಡೆದಿದ್ದರೂ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ನಮ್ಮದೇ ನೆಲದಲ್ಲಿ ದ್ರಾವಿಡ ಸಮ್ಮೇಳನ ಮಾಡುತ್ತಿರುವಾಗ ತುಳು ಭಾಷೆಯ ಬಗ್ಗೆ ಪ್ರಸ್ತಾವಿಸದಿರುವುದು ತುಳುವರಿಗೆ ತೀವ್ರ ನೋವು ಮತ್ತು ಸಂದೇಹವನ್ನುಂಟುಮಾಡಿದೆ.
ಕಾಸರಗೋಡು: ಕನ್ನಡ ಅಭಿವೃದ್ಧಿ ಪ್ರಾಧಿಕಾರವು ನವಂಬರ್ ತಿಂಗಳಲ್ಲಿ ಬೆಂಗಳೂರಿನಲ್ಲಿ ಆಯೋಜಿಸಿರುವ ದ್ರಾವಿಡ ಸಮ್ಮೇಳನದಲ್ಲಿ ತುಳು ಭಾಷೆಯ ಹೆಸರನ್ನು ಉಲ್ಲೇಖೀಸದೆ ನಿರ್ಲಕ್ಷಿಸಲಾಗಿದೆಯೆಂದು ತುಳುವರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಂಚ ದ್ರಾವಿಡ ಭಾಷೆಗಳೆಂದೇ ಖ್ಯಾತಿಗಳಿಸಿದ ತುಳು, ಕನ್ನಡ, ತಮಿಳು, ತೆಲುಗು, ಮಲೆಯಾಳ ಭಾಷೆಗಳು ದಕ್ಷಿಣ ಭಾರತದ ದ್ರಾವಿಡ ಸಂಸ್ಕೃತಿಯ ಪ್ರತೀಕ. ಕನ್ನಡ, ತಮಿಳು, ತೆಲುಗು, ಮಲೆಯಾಳ ಭಾಷೆಗಳಿಗೆ ಪ್ರತ್ಯೇಕ ಆಡಳಿತ ರಾಜ್ಯಗಳಿದ್ದರೂ ತುಳು ಭಾಷೆಯು ಕರ್ನಾಟಕದ ಇನ್ನೊಂದು ಪ್ರಧಾನ ಭಾಷೆಯಾಗಿ ಬೆಳೆದಿದೆ.
ತುಳು ಭಾಷೆಯು ಕರ್ನಾಟಕದಲ್ಲಿ ಇಂದು ಹತ್ತನೆ ತರಗತಿಯವರೆಗೆ ಕಲಿಯಬಹುದಾಗಿದ್ದು, ಎಂ.ಎ. ಮತ್ತು ಡಿಪ್ಲೋಮಾ ಕೋರ್ಸುಗಳೂ ಪ್ರಾರಂಭವಾಗಿದೆ. ಮಂಗಳೂರು ವಿಶ್ವವಿದ್ಯಾನಿಲಯ, ಕಣ್ಣೂರು ವಿಶ್ವವಿದ್ಯಾನಿಲಯ, ಕುಪ್ಪಂ ವಿಶ್ವವಿದ್ಯಾನಿಲಯ ಮತ್ತು ನಿಟ್ಟೆ ವಿಶ್ವವಿದ್ಯಾನಿಲಯಗಳಲ್ಲಿ ಅಧ್ಯಯನ ಪೀಠ ಪ್ರಾರಂಭವಾಗಿದೆ. ಕೇರಳ ಮತ್ತು ಕರ್ನಾಟಕದಲ್ಲಿ ಪ್ರತ್ಯೇಕ ತುಳು ಆಕಾಡೆಮಿಗಳೂ ಪ್ರಾರಂಭಗೊಂಡಿವೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರವು ತನ್ನ ಜಾಣ ಕುರುಡುತನವನ್ನು ಪ್ರಾರಂಭದಲ್ಲೇ ಸರಿಪಡಿಸಿಕೊಳ್ಳುವುದು ಒಳಿತು. ಇದು ಇನ್ನೊಂದು ಪ್ರತ್ಯೇಕತೆಯ ಹೋರಾಟಕ್ಕೆ ದಾರಿ ಮಾಡಿಕೊಡಬಹುದು. ಈ ಬಗ್ಗೆ ಎಚ್ಚೆತ್ತುಕೊಳ್ಳದಿದ್ದರೆ ಸೂಕ್ತ ಹೋರಾಟವನ್ನು ಎದುರಿಸಬೇಕಾದೀತು ಎಂದು ತುಳುವೆರೆ ಆಯನ ಕೂಟ ಕುಡ್ಲ ಮತ್ತು ತುಳುನಾಡ್ ಟ್ರಸ್ಟ್ ಹಾಗೂ ವಿವಿಧ ಸಂಘಟನೆಗಳು ಮುನ್ನೆಚ್ಚರಿಕೆ ನೀಡಿವೆ.
ಈ ಬಗ್ಗೆ ಸೇರಿದ ಸಭೆಯಲ್ಲಿ ಡಾ| ರಾಜೇಶ ಆಳ್ವ, ದಯಾನಂದ್ ಕತ್ತಲ್ಸಾರ್, ದಿನೇಶ್ ರೈ ಕಡಬ, ಹರೀಶ್ ಶೆಟ್ಟಿ ಪಣೆಯೂರು, ಜಿ.ವಿ.ಎಸ್.ಉಳ್ಳಾಲ್, ಆಶಾ ಶೆಟ್ಟಿ ಅತ್ತಾವರ, ಯಾದವ್ ಕೊಟ್ಯಾನ್ ಪದವಿನಂಗಡಿ, ಗಣೇಶ್ ಪದವಿನಂಗಡಿ, ವಿದ್ಯಾಶ್ರೀ ಎಸ್.ಉಳ್ಳಾಲ್, ಚಂದ್ರಿಕಾ ಶೆಟ್ಟಿ, ನಾಗರಾಜ್, ಭೂಷಣ್ ಕುಲಾಲ್, ಪ್ರಸಾದ್ ಕೊಂಚಾಡಿ, ಮಹೇಶ್ ಶೆಟ್ಟಿ ಮುಂಡಾಜೆ, ಚೇತನ್ ಕುಮಾರ್ ಕುಲಶೇಖರ ಮೊದಲಾದವರು ಭಾಗವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ