ತರಕಾರಿ ಧಾರಣೆ ಗಗನಕ್ಕೆ : ಮತ್ತೆ ತತ್ತರಿಸಿದ ಜನತೆ


Team Udayavani, Aug 31, 2018, 6:00 AM IST

30ksde5.jpg

ಕಾಸರಗೋಡು: ಪ್ರಾಕೃತಿಕ ವಿಕೋಪದಿಂದ ಸಂಭವಿಸಿದ ನೆರೆ ಯಿಂದಾಗಿ ಕೇರಳದಲ್ಲಿ ತರಕಾರಿ ಧಾರಣೆ ಗಗನಕ್ಕೇರುತ್ತಿದೆ. ಕರ್ನಾಟಕದ ಕೊಡಗು ಮತ್ತು ಕೇರಳದ ವಯನಾಡಿನಲ್ಲಿ ನೆರೆಯಿಂದಾಗಿ ಭಾರೀ ಪ್ರಮಾಣದಲ್ಲಿ ಕೃಷಿ ನಾಶನಷ್ಟ ಸಂಭವಿಸಿದ ಪರಿಣಾಮವಾಗಿ ತರಕಾರಿ ಧಾರಣೆ ಗಗನಕ್ಕೇರುವ ಮೂಲಕ ಈಗಾಗಲೇ ತತ್ತರಿಸಿರುವ ಜನರ ಮೇಲೆ ಇನ್ನೊಂದು ಹೊಡೆತ ಬಿದ್ದಿದೆ.

ಬಹುತೇಕ ಕೃಷಿ ನಾಶ
ನೆರೆಯಿಂದಾಗಿ ಬಹುತೇಕ ಕೃಷಿ ನಾಶ-ನಷ್ಟ ಸಂಭವಿಸಿದ್ದು ಈ ಕಾರಣದಿಂದ ಕ್ಯಾರೆಟ್‌ ಸಹಿತ ಬಹುತೇಕ ಎಲ್ಲÉ ತರಕಾರಿಗಳ ಬೆಲೆಹೆಚ್ಚಳವಾಗಿದೆ. ಅದೇ ವೇಳೆ ಕೆಲವೊಂದು ತರಕಾರಿ ಧಾರಣೆ ಕುಸಿಯುತ್ತಿದೆ. ಕ್ಯಾರೆಟ್‌ ಧಾರಣೆ ಬಹಳಷ್ಟು ಗಗನಕ್ಕೇರಿದೆ. ವಾರದ ಹಿಂದೆ ಕ್ಯಾರೆಟ್‌ ಕಿಲೋ ಒಂದಕ್ಕೆ 34 ರೂ. ಇತ್ತು. ಇದೀಗ ಕಾಸರಗೋಡಿನಲ್ಲಿ ಈ ಧಾರಣೆ 80 ರೂ.ಗೇರಿದೆ. ಸಾಮಾನ್ಯವಾಗಿ ಲಿಂಬೆಗೆ ಮಳೆಗಾಲದಲ್ಲಿ ಧಾರಣೆ ಕುಸಿಯುವುದು ಸಾಮಾನ್ಯವಾಗಿದೆ. ಆದರೆ ಈ ಬಾರಿ ಲಿಂಬೆಗೆ ಧಾರಣೆ ಹೆಚ್ಚಳವಾಗಿದೆ. ಕಿಲೋ ಒಂದಕ್ಕೆ 40 ರೂ.ಯಿಂದ 60 ರೂ.ಗೇರಿದೆ. ಬೆಂಡೆ ಧಾರಣೆ 30 ರೂ.ಯಿಂದ 50 ರೂ.ಗೇರಿದೆ. ತೊಂಡೆಕಾಯಿ ಧಾರಣೆ 40 ರೂ. ಯಿಂದ 56 ಕ್ಕೇರಿದೆ. ಪಡುವಲ ಕಾಯಿ ಧಾರಣೆ 40 ರೂ.ಯಿಂದ 60 ರೂ.ಗೇರಿದೆ. ಕ್ಯಾಪ್ಸಿಕೋ ಧಾರಣೆ 60 ರೂ.ಯಿಂದ 80 ಕ್ಕೇರಿದೆ. ಗೆಣಸು ಧಾರಣೆ 20 ರೂ. ಯಿಂದ 30 ರೂ.ಗೇರಿದೆ.

ಇದೇ ವೇಳೆ ಟೊಮೆಟೋ ಧಾರಣೆ ಕುಸಿದಿದೆ. ಟೊಮೆಟೋ ಧಾರಣೆ 20 ರೂ.ಯಿಂದ 10ಕ್ಕಿಳಿದಿದೆ. ಇದರಿಂದ ಗ್ರಾಹಕರು ತಕ್ಕ ಮಟ್ಟಿಗೆ ನಿಟ್ಟುಸಿರು ಬಿಡುವಂತಾಗಿದೆ. ಅಲಸಂಡೆ, ಸಣ್ಣ ನೀರುಳ್ಳಿ, ಹಸಿ ಮೆಣಸು, ಬಟಾಟೆ ಮೊದಲಾದವುಗಳ ಧಾರಣೆ ತಕ್ಕ ಮಟ್ಟಿಗೆ ಕುಸಿದಿದೆ. ಅದೇ ಸಂದರ್ಭದಲ್ಲಿ ಹಣ್ಣುಹಂಪಲು ಧಾರಣೆ ಗಗನಕ್ಕೇರುತ್ತಿದೆ. ಕದಳಿ, ನೇಂದ್ರ, ಮೈಸೂರು ಬಾಳೆ ಹಣ್ಣು ಮೊದಲಾದವುಗಳ ಧಾರಣೆ ಹೆಚ್ಚಳವಾಗಿದೆ. ಮೈಸೂರು ಕಿಲೋಗೆ 40 ರೂ. ಇದ್ದರೆ, ನೇಂದ್ರ ಕಿಲೋ ಒಂದಕ್ಕೆ 50 ರೂ. ಇದ್ದರೆ ಕದಳಿಗೆ 65 ರೂ. ಇದೆ. ಮುಸುಂಬಿಗೆ 60 ರೂ., ಆರೆಂಜ್‌ಗೆ 80 ರೂ., ದಾಳಿಂಬೆಗೆ 80 ರೂ., ದ್ರಾಕ್ಷೆಗೆ 80 ರೂ., ಚಿಕ್ಕುಗೆ 80 ರೂ. ಧಾರಣೆಯಿದೆ.

ಮೀನು ಧಾರಣೆ ಕುಸಿತ  
ಟ್ರಾಲಿಂಗ್‌ ಸಂದರ್ಭದಲ್ಲಿ ಮೀನಿನ ಧಾರಣೆ ಗಗನಕ್ಕೇರಿತು. ಆದರೆ ಟ್ರಾಲಿಂಗ್‌ ನಿಷೇಧ ಹಿಂದೆೆಗೆದುಕೊಂಡ ಬಳಿಕ ಕೆಲವು ದಿನಗಳಲ್ಲಿ ಮೀನಿನ ಧಾರಣೆಯಲ್ಲಿ ಮತ್ತೆ ಹೆಚ್ಚಳವಾಗಿತ್ತು. ಆದರೆ ದಿನಕಳೆದಂತೆ ಮೀನಿನ ಧಾರಣೆ ಕುಸಿಯುತ್ತಾ ಬಂದಿದೆ. ಸಮುದ್ರದಲ್ಲಿ ಭಾರೀ ಪ್ರಮಾಣದಲ್ಲಿ ಮೀನು ಲಭಿಸುತ್ತಿರುವುದರಿಂದ ಮೀನಿನ ಧಾರಣೆ ಕುಸಿಯಲು ಕಾರಣವಾಗಿದೆ ಎಂದು ಬೆಸ್ತರು ಹೇಳುತ್ತಿದ್ದಾರೆ. ಮೀನಿನ ಧಾರಣೆ ಕುಸಿತದಿಂದಾಗಿ ಬೆಸ್ತರಿಗೆ ಸೂಕ್ತ ಲಾಭ ಲಭಿಸುತ್ತಿಲ್ಲ. ಮೀನುಗಾರಿಕೆಗೆ ಹಾಕಿದ ಹಣವೂ ಲಭಿಸುತ್ತಿಲ್ಲ ಎಂಬುದು ಬೆಸ್ತರ ಅಂಬೋಣ.

ಕೇರಳದ ಕಾಸರಗೋಡು ಮತ್ತು ತಿರುವನಂತಪುರ ಹೊರತು ಪಡಿಸಿ 12 ಜಿಲ್ಲೆಗಳಲ್ಲಿ ಹಿಂದೆಂದೂ ಕಾಣದ ನೆರೆ ಮತ್ತು ಕರ್ನಾಟಕದ ಕೊಡಗಿನಲ್ಲಿ ಜಲ ಪ್ರಳಯದ ಹಿನ್ನೆಲೆಯಲ್ಲಿ ತರಕಾರಿ ಧಾರಣೆ ಹೆಚ್ಚಳವಾಗಿದೆ. ಇದರಿಂದಾಗಿ ತರಕಾರಿ ಮಾರಾಟ ಕೂಡಾ ಕುಸಿದಿದೆ. ತರಕಾರಿ ಖರೀದಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ಭಯವಾಗುತ್ತಿದೆ. ತರಕಾರಿ ಧಾರಣೆ ಹೆಚ್ಚಳದಿಂದ ಗ್ರಾಹಕರು, ವರ್ತಕರೂ ಸಾಕಷ್ಟು ತೊಂದರೆಗೆ ಸಿಲುಕಿದ್ದಾರೆ.
– ರಾಮಚಂದ್ರ
ತರಕಾರಿ ವ್ಯಾಪಾರಿ

ಟಾಪ್ ನ್ಯೂಸ್

banPuttur ಚುನಾವಣೆ ಕರ್ತವ್ಯ ನಿರತ ಅಂಗನವಾಡಿ ಕಾರ್ಯಕರ್ತೆಗೆ ಹಲ್ಲೆ

Puttur ಚುನಾವಣೆ ಕರ್ತವ್ಯ ನಿರತ ಅಂಗನವಾಡಿ ಕಾರ್ಯಕರ್ತೆಗೆ ಹಲ್ಲೆ

Kota ಮತದಾನ ಮಾಡಿ ಕೊನೆಯುಸಿರೆಳೆದ ಅಜ್ಜಿ!

Kota ಮತದಾನ ಮಾಡಿ ಕೊನೆಯುಸಿರೆಳೆದ ಅಜ್ಜಿ!

Bantwal: ಮನೆಯಲ್ಲೇ ಮತ ಚಲಾಯಿಸಿದ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ

Bantwal: ಮನೆಯಲ್ಲೇ ಮತ ಚಲಾಯಿಸಿದ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ

PM ಮೋದಿಯಿಂದ ಚುನಾವಣ ಗಿಮಿಕ್‌: ವಿನಯ ಕುಮಾರ್‌ ಸೊರಕೆ

PM ಮೋದಿಯಿಂದ ಚುನಾವಣ ಗಿಮಿಕ್‌: ವಿನಯ ಕುಮಾರ್‌ ಸೊರಕೆ

ಇಂದು ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಕಾಸರಗೋಡಿಗೆ

ಇಂದು ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಕಾಸರಗೋಡಿಗೆ

Election Campaign 25 ವರ್ಷಗಳ ಹಿಂದೆ; ಆಗ ದುಡ್ಡಿನ ಆಸೆ ಇರಲಿಲ್ಲ…! 

Election Campaign 25 ವರ್ಷಗಳ ಹಿಂದೆ; ಆಗ ದುಡ್ಡಿನ ಆಸೆ ಇರಲಿಲ್ಲ…! 

Madikeri; ಅಯ್ಯಂಗೇರಿ ಕಳ್ಳತನ ಪ್ರಕರಣ : ಇಬ್ಬರು ಆರೋಪಿಗಳ ಸೆರೆ

Madikeri; ಅಯ್ಯಂಗೇರಿ ಕಳ್ಳತನ ಪ್ರಕರಣ : ಇಬ್ಬರು ಆರೋಪಿಗಳ ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇಂದು ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಕಾಸರಗೋಡಿಗೆ

ಇಂದು ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಕಾಸರಗೋಡಿಗೆ

Madikeri; ಅಯ್ಯಂಗೇರಿ ಕಳ್ಳತನ ಪ್ರಕರಣ : ಇಬ್ಬರು ಆರೋಪಿಗಳ ಸೆರೆ

Madikeri; ಅಯ್ಯಂಗೇರಿ ಕಳ್ಳತನ ಪ್ರಕರಣ : ಇಬ್ಬರು ಆರೋಪಿಗಳ ಸೆರೆ

14-

Kasaragodu: ಹಣದ ವಿವಾದ: ಪೆಟ್ರೋಲ್‌ ಸುರಿದು ಮಹಿಳೆಯ ಕೊಲೆಗೆ ಯತ್ನ

13-mulleria

Mulleria: ವ್ಯಕ್ತಿಯ ನಿಗೂಢ ಸಾವು : ತಲೆಗೆ ಗಂಭೀರ ಗಾಯ ಮರಣಕ್ಕೆ ಕಾರಣ

Madikeri ಕಾಡಾನೆ ದಾಳಿ: ಬೆಳೆಗಾರ ಸಾವು: ಆನೆಗಳನ್ನು ಕಾಡಿಗಟ್ಟಲು ಗ್ರಾಮಸ್ಥರ ಆಗ್ರಹ

Madikeri ಕಾಡಾನೆ ದಾಳಿ: ಬೆಳೆಗಾರ ಸಾವು: ಆನೆಗಳನ್ನು ಕಾಡಿಗಟ್ಟಲು ಗ್ರಾಮಸ್ಥರ ಆಗ್ರಹ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

banPuttur ಚುನಾವಣೆ ಕರ್ತವ್ಯ ನಿರತ ಅಂಗನವಾಡಿ ಕಾರ್ಯಕರ್ತೆಗೆ ಹಲ್ಲೆ

Puttur ಚುನಾವಣೆ ಕರ್ತವ್ಯ ನಿರತ ಅಂಗನವಾಡಿ ಕಾರ್ಯಕರ್ತೆಗೆ ಹಲ್ಲೆ

Kota ಮತದಾನ ಮಾಡಿ ಕೊನೆಯುಸಿರೆಳೆದ ಅಜ್ಜಿ!

Kota ಮತದಾನ ಮಾಡಿ ಕೊನೆಯುಸಿರೆಳೆದ ಅಜ್ಜಿ!

Bantwal: ಮನೆಯಲ್ಲೇ ಮತ ಚಲಾಯಿಸಿದ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ

Bantwal: ಮನೆಯಲ್ಲೇ ಮತ ಚಲಾಯಿಸಿದ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ

PM ಮೋದಿಯಿಂದ ಚುನಾವಣ ಗಿಮಿಕ್‌: ವಿನಯ ಕುಮಾರ್‌ ಸೊರಕೆ

PM ಮೋದಿಯಿಂದ ಚುನಾವಣ ಗಿಮಿಕ್‌: ವಿನಯ ಕುಮಾರ್‌ ಸೊರಕೆ

ಇಂದು ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಕಾಸರಗೋಡಿಗೆ

ಇಂದು ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಕಾಸರಗೋಡಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.