ಕಾಸರಗೋಡು ಅಪರಾಧ ಸುದ್ದಿಗಳು 


Team Udayavani, Feb 9, 2019, 12:30 AM IST

crime-new.jpg

ಅಡೂರಿನ ಅರಣ್ಯದಲ್ಲಿ ಪತ್ತೆಯಾಗಿದ್ದ ಶವ ಕಲ್ಲಿನಿಂದ ತಲೆಗೆ ಹೊಡೆದು ಕೊಲೆ: ಓರ್ವ ವಶಕ್ಕೆ
ಅಡೂರು:
ಅಡೂರು ಕಾಟಿಕಜೆ ಮಾವಿನಡಿಯ ಕುಂಞಪ್ಪ ನಾಯ್ಕ ಅವರ ಪುತ್ರ ಎಂ.ಕೆ. ಚಿದಾನಂದ ಯಾನೆ ಸುಧಾಕರ (36)  ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ನೆರೆಮನೆಯ ನಿವಾಸಿ ಗಣಪ ನಾಯ್ಕ (35)ನನ್ನು ಆದೂರು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. 

ಕೂಲಿ ಕೆಲಸಕ್ಕೆಂದು  ಹೋಗಿದ್ದ ಸುಧಾಕರ ಮರಳಿ ಬಾರದ ಹಿನ್ನೆಲೆಯಲ್ಲಿ ಮನೆಯವರು ಹುಡುಕಾಡಿದಾಗ ಅವರ ಮೃತದೇಹ ಅರಣ್ಯದಲ್ಲಿ ಪತ್ತೆಯಾಗಿತ್ತು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

ಅಡೂರು ಬಳಿಯ ಬಳ್ಳಕಾನದ ಸರಕಾರಿ ಅರಣ್ಯದೊಳಗೆ ಸುಧಾಕರ ಅವರ ಮೃತ ದೇಹ ಫೆ.7ರಂದು ಸಂಜೆ ಪತ್ತೆಯಾಗಿತ್ತು. ಮೃತದೇಹ ಕವುಚಿ ಮಲಗಿದ ಸ್ಥಿತಿಯಲ್ಲಿದ್ದು, ತಲೆಯಲ್ಲಿ ಕಲ್ಲಿನಿಂದ ಉಂಟಾದ ಏಟಿನ ಗಾಯ ಕಂಡು ಬಂದಿ ತ್ತು. ಸಮೀಪದಲ್ಲೇ ರಕ್ತ ಮಿಶ್ರಿತ ಕಲ್ಲು,  ಸುಧಾಕರ ಅವರ ಪಾದರಕ್ಷೆ, ಅಲ್ಲದೆ ಬೇರೆ ವ್ಯಕ್ತಿ ಯ ಒಂದು ಜತೆ ಪಾದರಕ್ಷೆ ಹಾಗೂ ಬೈರಾಸು  ಪತ್ತೆಯಾಗಿದೆ.

ಆದೂರು ಎಸ್‌.ಐ. ನಿಬಿನ್‌ ಜೋಯ್‌, ಇನ್‌ಸ್ಪೆಕ್ಟರ್‌ ಎಂ. ಎ. ಮ್ಯಾಥ್ಯೂ, ಜಿಲ್ಲಾ  ಕ್ರೈಂಬ್ರಾಂಚ್‌ ಡಿವೈಎಸ್‌ಪಿ ಪ್ರದೀಪ್‌ ಕುಮಾರ್‌ ನೇತೃತ್ವದಲ್ಲಿ ಪೊಲೀಸರು ಹಾಗೂ ಶ್ವಾನದಳ ಸ್ಥಳಕ್ಕೆ ತೆರಳಿ ತನಿಖೆ ನಡೆಸಿದರು.

ಪೊಲೀಸರು ನೀಡಿದ ಮಾಹಿತಿ
ಗಣಪನ  ತೋಟದಿಂದ ಹಲವು ಬಾರಿ ಅಡಿಕೆ ಕಳವಾಗಿದ್ದು, ಈ ಬಗ್ಗೆ ಸುಧಾಕರನ ಮೇಲೆ  ಸಂಶಯವಿತ್ತು. ಅಲ್ಲದೆ ಸುಧಾಕರನು ತನ್ನ ಸ್ನೇಹಿತನೊಂದಿಗೆ  ಗಣಪನ ಅಡಿಕೆ ತೋಟದಲ್ಲಿ ಮದ್ಯ ಸೇವಿಸುತ್ತಿದ್ದ. ಇದನ್ನು ಪ್ರಶ್ನಿಸಿದಾಗ ಗಣಪ ಹಾಗೂ ಸುಧಾಕರನ ಮಧ್ಯೆ ಮಾತಿನ ಚಕ ಮಕಿ ನಡೆದಿತ್ತು. ಬುಧವಾರ ಸಂಜೆ 5.30ಕ್ಕೆ ಗಣಪ ಮದ್ಯ ಸೇವಿಸಿ ಬರುತ್ತಿದ್ದಾಗ ಸುಧಾಕರನೂ ಕಾಡಿ ನಲ್ಲಿ ಕುಳಿತು ಮದ್ಯ ಸೇವಿಸುತ್ತಿದ್ದ. ಈ ಸಂದರ್ಭದಲ್ಲಿ ಅವರಿಬ್ಬರ ನಡುವೆ ಹೊಕೈ ನಡೆದಿದ್ದು, ಗಣಪ ಕಲ್ಲಿನಿಂದ ಸುಧಾಕರನ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆಂದು  ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಆದೂರು ಪೊಲೀಸರು ತಿಳಿಸಿದ್ದಾರೆ.

ಮನೆಯಿಂದ ಕಳವು
ಕಾಸರಗೋಡು:
ನಗರದ ತೆರುವತ್ತ್ ಹೊನ್ನೆಮೂಲೆಯ ಅಬ್ದುಲ್‌ ಖಾದರ್‌ ಅವರ ಮನೆಯಿಂದ ಫೆ. 7ರಂದು ರಾತ್ರಿ ಬಾಗ್‌ನ್ನು ಕಳವು ಮಾಡಿದ ಘಟನೆ ನಡೆದಿದೆ. ಬ್ಯಾಗ್‌ನಲ್ಲಿ 20 ಸಾವಿರ ರೂ. ನಗದು ಮತ್ತು ಒಂದು ಪಾಸ್‌ಪೋರ್ಟ್‌ ಇತ್ತೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಅಡುಗೆ ಕೋಣೆಯ ಗ್ರಿಲ್ಸ್‌ ಮುರಿದು ಮಾಡಿ ಒಳನುಗ್ಗಿದ ಕಳ್ಳ ಕಪಾಟಿನಲ್ಲಿದ್ದ ಚಿನ್ನವನ್ನು ತೆಗೆಯುತ್ತಿದ್ದ ವೇಳೆ ಎಚ್ಚೆತ್ತ ಮನೆಯವರು ಬೊಬ್ಬೆ ಹಾಕಿದಾಗ ಚಿನ್ನವನ್ನು ಅಲ್ಲೇ ಬಿಸಾಡಿ ಕಳ್ಳ ಕೈಗೆ ಸಿಕ್ಕಿದ ಬ್ಯಾಗನ್ನು ಕದ್ದೊಯ್ದಿದ್ದಾನೆ.

ಅಲ್ಲಿಲ್ಲಿ ಬೆಂಕಿ ಅನಾಹುತ
ಕಾಸರಗೋಡು
: ಕಾಸರಗೋಡು ಮತ್ತು ಪರಿಸರ ಪ್ರದೇಶದಲ್ಲಿ ಏಳು ಕಡೆಗಳಲ್ಲಿ ಬೆಂಕಿ ಅನಾಹುತ ಸಂಭವಿಸಿದೆ. ಬೋವಿಕ್ಕಾನ ಮೊದಲಪ್ಪಾರೆಯಲ್ಲಿರುವ ತೋಟಗಾರಿಕಾ ನಿಗಮದ ಮೂರು ಎಕ್ರೆಯಷ್ಟು ಗೇರು ತೋಟಕ್ಕೆ ಬೆಂಕಿ ಹತ್ತಿಕೊಂಡಿದೆ. ಕಳನಾಡು ರೆೈಲ್ವೇ ಮೇಲ್ಸೇತುವೆ ರೈಲ್ವೇ ಟ್ರಾÂಕ್‌ ಬಳಿ, ಚೆರ್ಕಳ ಕೆ.ಕೆ. ಪುರ, ಚೌಕಿ ಬದಿಯಲ್ಲಿರುವ ಮರಕ್ಕೆ, ಚೆಂಗಳ ಬೇರ್ಕ ಮತ್ತು ಚೆರ್ಕಳದ ಬೇರ್ಕದ ಹಿತ್ತಿಲಿಗೂ ಬೆಂಕಿ ಹತ್ತಿಕೊಂಡಿದ್ದು ಕಾಸರಗೋಡು ಅಗ್ನಿಶಾಮಕ ದಳ ಬೆಂಕಿಯನ್ನು ಆರಿಸಿತು.

ವ್ಯಾಪಾರಿಗೆ ಹಲ್ಲೆ
ಬದಿಯಡ್ಕ
: ಚರ್ಲಡ್ಕದ ವ್ಯಾಪಾರಿ, ಕೊಲ್ಲಂಗಾನ ನಿವಾಸಿ ಹಸೈನಾರ್‌(45) ಅವರಿಗೆ ತಂಡವೊಂದು ಹಲ್ಲೆ ಮಾಡಿದ ಘಟನೆ ನಡೆದಿದೆ. ಗಾಯಾಳುವನ್ನು ಮಂಗಳೂರಿನ ಆಸ್ಪತ್ರೆಗೆ ಸೇರಿಸಲಾಗಿದೆ. ಆರು ಮಂದಿಯ ತಂಡ ಅಂಗಡಿಗೆ ಬಂದು ಸಿಗರೇಟ್‌ ಪಡೆದಕೊಂಡು ಸಾಲ ನೀಡದಿದ್ದಾಗ ಹಲ್ಲೆ ಮಾಡಿದರೆಂದು ಗಾಯಾಳು ಆರೋಪಿಸಿದ್ದಾರೆ.

ಸುಬೈದಾ ಕೊಲೆ ಪ್ರಕರಣ : ಆರೋಪಿಯ ಬಂಧನ
ಕಾಸರಗೋಡು:
ಬೇಕಲ ಪೆರಿಯ ಆಯಂಪಾರ ಚೆಕ್ಕಿಪಳ್ಳದ ಸುಬೈದಾ (65) ಅವರನ್ನು 2018 ಜ.17 ರಂದು ಕೈಕಾಲು ಕಟ್ಟಿ ಹಾಕಿ ಕುತ್ತಿಗೆ ಬಿಗಿದು ಕೊಲೆಗೈದು ಚಿನ್ನಾಭರಣ ದರೋಡೆ ಮಾಡಿದ ಪ್ರಕರಣದ ಆರೋಪಿಯಾಗಿದ್ದು, ಪೊಲೀಸ್‌ ಕಸ್ಟಡಿಯಿಂದ ಪರಾರಿಯಾಗಿದ್ದ ಮೂಲತಏ ಕರ್ನಾಟಕ ಸುಳ್ಯ ಅಜ್ಜಾವರ ಗುಳಿಂಬೆ ನಿವಾಸಿ, ಮಧೂರು ಪಟ್ಲದ ಬಾಡಿಗೆ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದ ಅಸೀಸ್‌ ಆಲಿಯಾಸ್‌ ಕರ್ನಾಟಕ ಅಸೀಸ್‌(30)ನನ್ನು ಕರ್ನಾಟಕದಿಂದ ಪೊಲೀಸರು ಬಂಧಿಸಿದ್ದಾರೆ. 2018 ಸೆ.14 ರಂದು ಪೊಲೀಸ್‌ ಕಸ್ಟಡಿಯಿಂದ  ಈತ ಪರಾರಿಯಾಗಿದ್ದ.

ಜುಗಾರಿ : ಯುವಕನ ಬಂಧನ
ಕುಂಬಳೆ:
ಶಾಂತಿಪಳ್ಳದ ಕಾಡಿನಲ್ಲಿ ಜುಗಾರಿ ದಂಧೆಯಲ್ಲಿ ನಿರತನಾಗಿದ್ದ ಮಧೂರು ನಿವಾಸಿ ಅಜೀಶ್‌(31)ನನ್ನು ಪೊಲೀಸರು ಬಂಧಿಸಿದ್ದಾರೆ. ಇದೇ ವೇಳೆ ಇಬ್ಬರು ಪರಾರಿಯಾಗಿದ್ದಾರೆ. ಜುಗಾರಿ ಸ್ಥಳದಿಂದ 4, 000 ರೂ. ವಶಪಡಿಸಿಕೊಳ್ಳಲಾಗಿದೆ.

ಟಾಪ್ ನ್ಯೂಸ್

IPL 2024; ಮುಂಬೈ ಪಂದ್ಯದ ಟಾಸ್ ಕಳ್ಳಾಟ ಬಿಚ್ಚಿಟ್ಟ ಆರ್ ಸಿಬಿ ನಾಯಕ ಫಾಫ್| Video

IPL 2024; ಮುಂಬೈ ಪಂದ್ಯದ ಟಾಸ್ ಕಳ್ಳಾಟ ಬಿಚ್ಚಿಟ್ಟ ಆರ್ ಸಿಬಿ ನಾಯಕ ಫಾಫ್| Video

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

Bus Falls From Bridge In Odisha’s Jajpur

Jajpur; ಸೇತುವೆಯಿಂದ ಬಿದ್ದ ಬಸ್; ಐವರು ಸಾವು, ಹಲವರಿಗೆ ಗಾಯ

‘Please sell the RCB team to someone else’; Tennis star appeal

IPL 2024; ‘ದಯವಿಟ್ಟು ಆರ್ ಸಿಬಿ ತಂಡವನ್ನು ಬೇರೆಯವರಿಗೆ ಮಾರಿ ಬಿಡಿ’; ಟೆನ್ನಿಸ್ ತಾರೆ ಮನವಿ

Lok Sabha Elections ಈಶ್ವರಪ್ಪ ಸ್ಪರ್ಧೆಯಿಂದ ಬಿಜೆಪಿಗೆ ಲಾಭ: ಆರ್‌. ಅಶೋಕ್‌

Lok Sabha Elections ಈಶ್ವರಪ್ಪ ಸ್ಪರ್ಧೆಯಿಂದ ಬಿಜೆಪಿಗೆ ಲಾಭ: ಆರ್‌. ಅಶೋಕ್‌

ಎ. 20ರಂದು ಮತ್ತೆ ರಾಜ್ಯಕ್ಕೆ ಪ್ರಧಾನಿ ಮೋದಿ?

Lok Sabha Election; ಎ. 20ರಂದು ಮತ್ತೆ ರಾಜ್ಯಕ್ಕೆ ಪ್ರಧಾನಿ ಮೋದಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Madikeri ಕಾಡಾನೆ ದಾಳಿ: ಬೆಳೆಗಾರ ಸಾವು: ಆನೆಗಳನ್ನು ಕಾಡಿಗಟ್ಟಲು ಗ್ರಾಮಸ್ಥರ ಆಗ್ರಹ

Madikeri ಕಾಡಾನೆ ದಾಳಿ: ಬೆಳೆಗಾರ ಸಾವು: ಆನೆಗಳನ್ನು ಕಾಡಿಗಟ್ಟಲು ಗ್ರಾಮಸ್ಥರ ಆಗ್ರಹ

ಪುತ್ತಿಗೆ ಗ್ರಾಮ ಪಂಚಾಯತ್‌ ಸದಸ್ಯೆಯ ಮನೆ ಬೆಂಕಿಗಾಹುತಿ

ಪುತ್ತಿಗೆ ಗ್ರಾಮ ಪಂಚಾಯತ್‌ ಸದಸ್ಯೆಯ ಮನೆ ಬೆಂಕಿಗಾಹುತಿ

ಬೋವಿಕ್ಕಾನ: ವ್ಯಕ್ತಿ ನಿಗೂಢ ಸಾವುಬೋವಿಕ್ಕಾನ: ವ್ಯಕ್ತಿ ನಿಗೂಢ ಸಾವು

ಬೋವಿಕ್ಕಾನ: ವ್ಯಕ್ತಿ ನಿಗೂಢ ಸಾವು

ಅತ್ತಿಮಂಗಲ: ಬೈಕ್‌ನಲ್ಲಿ ಹೋಗುತ್ತಿದ್ದಾಗ ಕಾಡಾನೆ ದಾಳಿ : ಸಹೋದರರು ಪ್ರಾಣಾಪಾಯದಿಂದ ಪಾರು

ಅತ್ತಿಮಂಗಲ: ಬೈಕ್‌ನಲ್ಲಿ ಹೋಗುತ್ತಿದ್ದಾಗ ಕಾಡಾನೆ ದಾಳಿ : ಸಹೋದರರು ಪ್ರಾಣಾಪಾಯದಿಂದ ಪಾರು

Madikeri ಕಾಡುಕೋಣ ಹತ್ಯೆ: ಇಬ್ಬರ ಸೆರೆ; 6 ಮಂದಿಗೆ ಶೋಧ

Madikeri ಕಾಡುಕೋಣ ಹತ್ಯೆ: ಇಬ್ಬರ ಸೆರೆ; 6 ಮಂದಿಗೆ ಶೋಧ

MUST WATCH

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

udayavani youtube

ಶ್ರೀ ವೈಷ್ಣವಿ ದುರ್ಗಾ ದೇವಾಲಯ

udayavani youtube

ಟೈಟನ್ ಕಂಪೆನಿಯ Xylys ವಾಚ್ ವಿಶೇಷತೆಗಳೇನು ?

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

ಹೊಸ ಸೇರ್ಪಡೆ

IPL 2024; ಮುಂಬೈ ಪಂದ್ಯದ ಟಾಸ್ ಕಳ್ಳಾಟ ಬಿಚ್ಚಿಟ್ಟ ಆರ್ ಸಿಬಿ ನಾಯಕ ಫಾಫ್| Video

IPL 2024; ಮುಂಬೈ ಪಂದ್ಯದ ಟಾಸ್ ಕಳ್ಳಾಟ ಬಿಚ್ಚಿಟ್ಟ ಆರ್ ಸಿಬಿ ನಾಯಕ ಫಾಫ್| Video

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

Bus Falls From Bridge In Odisha’s Jajpur

Jajpur; ಸೇತುವೆಯಿಂದ ಬಿದ್ದ ಬಸ್; ಐವರು ಸಾವು, ಹಲವರಿಗೆ ಗಾಯ

‘Please sell the RCB team to someone else’; Tennis star appeal

IPL 2024; ‘ದಯವಿಟ್ಟು ಆರ್ ಸಿಬಿ ತಂಡವನ್ನು ಬೇರೆಯವರಿಗೆ ಮಾರಿ ಬಿಡಿ’; ಟೆನ್ನಿಸ್ ತಾರೆ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.