ಮನೆಯಲ್ಲೇ ಕುಳಿತು ಬೆರಳ ತುದಿ ಎಲ್ಲ ಮಾಹಿತಿ ಲಭ್ಯ


Team Udayavani, Nov 15, 2018, 4:08 PM IST

15-november-14.gif

ಕಾಸರಗೋಡು: ತಮ್ಮ ಮಕ್ಕಳು ಶಾಲೆಗೆ ಬರುತ್ತಿದ್ದಾರೋ ಅಥವಾ ದಾರಿಯಲ್ಲೇ ಎಲ್ಲಾದರೂ ಕಾಲ ಕಳೆಯುತ್ತಿದ್ದಾರೆಯೋ ಎಂಬುದರ ಬಗ್ಗೆ ಇನ್ನು ಮುಂದೆ ರಕ್ಷಕರು ಆತಂಕಪಡಬೇಕಾಗಿಲ್ಲ. ಮನೆಯಲ್ಲೇ ಕುಳಿತು ಬೆರಳ ತುದಿಯಲ್ಲಿ ಈ ಎಲ್ಲ ಮಾಹಿತಿಗಳನ್ನು ತಿಳಿಯುವುದಕ್ಕಾಗಿ ಕ್ಲಾಸ್‌ ಬೆಲ್‌ ಎಂಬ ವ್ಯವಸ್ಥೆ ಜಾರಿಗೆ ಬರಲಿದೆ.

ನೂತನ ತಂತ್ರಜ್ಞಾನದ ಮೂಲಕ ವಿದ್ಯಾರ್ಥಿ, ಅಧ್ಯಾಪಕ, ರಕ್ಷಕರ ಸಂಬಂಧದಲ್ಲಿ ಹೊಸತನ ಸೃಷ್ಟಿಸುವ ಮೊಬೈಲ್‌ ಅಪ್ಲಿಕೇಶನ್‌ ಶೀಘ್ರದಲ್ಲೇ ಕಾರ್ಯಪ್ರವೃತ್ತವಾಗಲಿದೆ. ಕೇರಳದಲ್ಲಿ ಮೊದಲ ಬಾರಿಗೆ ಕಲ್ಲಿಕೋಟೆ ಜಿಲ್ಲೆಯ ಎಲತ್ತೂರು ವಿಧಾನಸಭಾ ಕ್ಷೇತ್ರದ ಶಾಲೆಗಳಲ್ಲಿ ಈ ಯೋಜನೆ ಯನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ.

ಸಾರಿಗೆ ಖಾತೆ ಸಚಿವ ಎ.ಕೆ. ಶಶೀಂದ್ರನ್‌ ಅವರು ತನ್ನ ಎಲತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಕ್ಲಾಸ್‌ ಬೆಲ್‌ ಎಂಬ ವಿನೂತನ ಯೋಜನೆಯನ್ನು ಕಾರ್ಯಗತಗೊಳಿಸಲು ಮುಂದೆ ಬಂದಿದ್ದಾರೆ. ಈ ಯೋಜನೆಯು ಯಶಸ್ವಿಯಾದರೆ ಇಡೀ ರಾಜ್ಯದಲ್ಲಿ ಅನುಷ್ಠಾನಕ್ಕೆ ತರಲು ಚಿಂತನೆ ನಡೆಸಲಾಗಿದೆ.

ವಿದ್ಯಾರ್ಥಿಗಳ ಸುರಕ್ಷೆ, ಅಧ್ಯಯನ ಗುಣಮಟ್ಟ, ಅಧ್ಯಾಪಕರ ಮತ್ತು ರಕ್ಷಕರ ಸಂಪರ್ಕ ಇತ್ಯಾದಿಗಳನ್ನೆಲ್ಲ ತಂತ್ರಜ್ಞಾನದ ಸಹಕಾರದೊಂದಿಗೆ ಒಂದೆಡೆ ಸೇರಿಸಲು ಉದ್ದೇಶಿಸಲಾಗಿದೆ. ಪ್ರೊ ಏಮ್ಸ್‌ ಎಂಬ ಸ್ಟಾರ್ಟಪ್‌ ಕಂಪೆನಿ ಇದಕ್ಕೆ ತಾಂತ್ರಿಕ ಸಹಾಯವನ್ನು ಒದಗಿಸಲಿದೆ. ತೀರಾ ಸರಳವಾಗಿ ಕಾರ್ಯಾಚರಿಸಲು ಸಾಧ್ಯವಾಗುವ ಅಪ್ಲೀಕೇಶನ್‌ನಲ್ಲಿ ವಿದ್ಯಾರ್ಥಿಯ ಹೆಸರು ನೀಡುವುದರೊಂದಿಗೆ ಹಾಜರಾತಿ, ಪರೀಕ್ಷೆಯ ಅಂಕ ಸಹಿತ ಕಲಿಕೆಗೆ ಸಂಬಂಧಿಸಿದ ಮಾಹಿತಿಗಳು ರಕ್ಷಕರಿಗೆ ದೊರಕಲಿವೆ.

ಅಧ್ಯಾಪಕರಿಗೆ ಹಾಗೂ ರಕ್ಷಕರಿಗೆ ಒಂದೇ ರೀತಿ ಉಪಯೋಗಿಸಲು ಸಾಧ್ಯವಾಗುವ ಅಪ್ಲಿಕೇಶನ್‌ ಇದಾಗಿದೆ. 12ರಷ್ಟು ಸೌಲಭ್ಯಗಳು ಈ ಅಪ್ಲಿಕೇಶನ್‌ ನಲ್ಲಿ ಲಭ್ಯವಿದೆ. ತರಗತಿ ಅಧ್ಯಾಪಕರೊಂದಿಗೆ ರಕ್ಷಕರಿಗೆ ಚಾಟ್‌ ಮಾಡಲಿರುವ ಸೌಕರ್ಯ ಇದರಲ್ಲಿದೆ. ಶಾಲೆಯಿಂದ ಹೊರಗೆ ಹೋದರೆ ತಮ್ಮ ಮಕ್ಕಳು ಎಲ್ಲಿಗೆ ಹೋಗಿದ್ದಾರೆ ಎಂಬುದನ್ನು ನಿಖರವಾಗಿ ತಿಳಿಯಬಹುದು. ಇದು ಕ್ಲಾಸ್‌ ಬೆಲ್‌ ನೀಡುವ ಪ್ರಧಾನ ಸುರಕ್ಷಾ ಸೌಕರ್ಯವಾಗಿದೆ.

ಶಾಲಾ ವಾಹನಗಳ ಪ್ರಯಾಣ ದಾರಿಯನ್ನು ಕೂಡ ತಿಳಿಯಲು ಈ ಮೂಲಕ ಸಾಧ್ಯವಾಗುವುದು. ಯೋಜನೆಯ ಪರೀûಾರ್ಥ ಕಾರ್ಯಕ್ರಮವು ಶೀಘ್ರದಲ್ಲೇ ಎಲತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ನಡೆಯಲಿದೆ. ಆರಂಭದಲ್ಲಿ ಯುಪಿ ಶಾಲೆಗಳಲ್ಲಿ ಪ್ರಸಕ್ತ ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಗುವುದು. ಕ್ರಿಸ್ಮಸ್‌ ರಜೆಯ ಮೊದಲು ಯೋಜನೆಯ ಉದ್ಘಾಟನೆ ಜರಗಲಿದೆ. ಸ್ಮಾರ್ಟ್‌ ಫೋನ್‌ ಇಲ್ಲದ ರಕ್ಷಕರಿಗೆ ಎಸ್‌ಎಂಎಸ್‌ ಮೂಲಕ ಸಂದೇಶ ಕಳುಹಿಸುವ ವ್ಯವಸ್ಥೆ ಕ್ಲಾಸ್‌ ಬೆಲ್‌ನಲ್ಲಿದೆ.

ಮಕ್ಕಳ ಸಂಪೂರ್ಣ ಮಾಹಿತಿ
ವಿದ್ಯಾರ್ಥಿಗಳ ಗುರುತುಚೀಟಿಯಲ್ಲಿನ ಚಿಪ್‌ನ ಸಹಾಯದೊಂದಿಗೆ ಅವರು ತರಗತಿ ಕೊಠಡಿ ಅಥವಾ ಹೊರಗೆ ಎಲ್ಲೆಲ್ಲ ಕಾಲ ಕಳೆಯುತ್ತಿದ್ದಾರೆ ಎಂಬುದನ್ನು ತಿಳಿಯಲು ಇದರಿಂದ ಸಾಧ್ಯವಾಗಲಿದೆ. ಯು.ಎಲ್‌. ಸೈಬರ್‌ ಪಾರ್ಕ್‌ನಲ್ಲಿ ಕಾರ್ಯಾಚರಿಸುತ್ತಿರುವ ಪ್ರೊ ಏಮ್ಸ್‌ ಹೊರತರುವ ಮೊಬೈಲ್‌ ಅಪ್ಲಿಕೇಶನ್‌ ಉಚಿತವಾಗಿ ಫೋನ್‌ನಲ್ಲಿ ಇನ್‌ಸ್ಟಾಲ್‌ ಮಾಡಬಹುದಾಗಿದೆ. ಈ ಮೂಲಕ ಮಕ್ಕಳ ಶೈಕ್ಷಣಿಕ ವಲಯದಲ್ಲಿ ಇನ್ನೊಂದು ನೂತನ ವ್ಯವಸ್ಥೆ ಜಾರಿಗೆ ಬರಲಿದೆ.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Electric shock: ಯುವಕನ ಸಾವು

Electric shock: ಯುವಕನ ಸಾವು

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Perla, Kasaragod; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

Perla; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.