ಕಾಸರಗೋಡಿನ ಯಾತ್ರಾ ಕೇಂದ್ರಗಳಿಗೆ 7.77 ಕೋಟಿ ರೂ.
Team Udayavani, Jan 17, 2019, 12:30 AM IST
ಕಾಸರಗೋಡು: ಕೇಂದ್ರ ಸರಕಾರದ ಸ್ವದೇಶಿ ದರ್ಶನ್ ಯೋಜನೆ ಪ್ರಕಾರ ಕಾಸರಗೋಡು ಜಿಲ್ಲೆಯ ವಿವಿಧ ಆರಾಧನಾಲಯಗಳ ಅಭಿವೃದ್ಧಿ ಕಾರ್ಯಗಳಿಗೆ ಒಟ್ಟು 7,77,60,776 ರೂ. ಮಂಜೂರುಗೊಳಿಸಲಾಗಿದೆ.
ಕಾಸರಗೋಡು ಜಿಲ್ಲೆಯ ಇತಿಹಾಸ ಪ್ರಸಿದ್ಧವಾದ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನಕ್ಕೆ 1,05,94,616 ರೂ., ಅನಂತಪುರ ಶ್ರೀ ಪದ್ಮನಾಭ ದೇವಸ್ಥಾನಕ್ಕೆ 1,28,77,616 ರೂ., ಬೇಳ ಶೋಕಮಾತಾ ಇಗರ್ಜಿಗೆ 98,02,616 ರೂ., ಕುಂಬಾxಜೆ ಕಿಲರ್ ಜುಮಾ ಮಸ್ಜಿದ್ಗೆ 71,52,616 ರೂ., ಇತಿಹಾಸ ಪ್ರಸಿದ್ಧವಾದ ತೃಕ್ಕನ್ನಾಡು ಶ್ರೀ ತ್ರ್ಯಂಬಕೇಶ್ವರ ದೇವಸ್ಥಾನಕ್ಕೆ 78,02,616 ರೂ., ರಾಜಪುರ ಹೋಲಿ ಫ್ಯಾಮಿಲಿ ಪೊರೇನ್ ಚರ್ಚ್ಗೆ 78,02,616 ರೂ., ತ್ರಿಕ್ಕೋರಿಪುರಂ ಕಲೀಶ್ವರಂ ದೇವಸ್ಥಾನಕ್ಕೆ 78,02,616 ರೂ. ಮಂಜೂರುಗೊಳಿಸಿದೆ.
ಮಾಲಕ್ಕಲ್ಲು ಲಾರ್ಡ್ ಮಾತಾ ಕಾನಯ ಕೆಥೋಲಿಕ್ ಚರ್ಚ್ಗೆ 17,02,616.00 ರೂ., ಪೊಡಿಪಳ್ಳ ಶ್ರೀ ಭಗವತಿ ದೇವಸ್ಥಾನಕ್ಕೆ 17,02,616.00 ರೂ., ಪುದಿಯಕಂಡಂ ಶ್ರೀಮಾತಾ ಪರಶಿವ ವಿಶ್ವಕರ್ಮ ದೇವಸ್ಥಾನಕ್ಕೆ 37,82,616.00 ರೂ., ವಯಕ್ಕೋಡು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ 67,37,616.00 ರೂ. ಮಂಜೂರುಗೊಳಿಸಲಾಗಿದೆ.
ಈ ಯೋಜನೆಯಲ್ಲಿ ಅನ್ನಛತ್ರ,ಕಮ್ಯೂನಿಟಿ ಹಾಲ್, ಮಲ್ಟಿ ಪರ್ಪಸ್ ಹಾಲ್,ಶೌಚಾಲಯ,ಪಾರ್ಕಿಂಗ್ ವ್ಯವಸ್ಥೆ, ಕೆಫಿಟೀರಿಯಾ ಮೊದಲಾದವುಗಳನ್ನು ನಿರ್ಮಿಸ ಲಾಗುವುದು ಎಂದು ಕೇಂದ್ರ ಪ್ರವಾಸೋದ್ಯಮ ಸಹ ಸಚಿವ ಅಲ್ಫಾನ್ಸೋ ಕಣ್ಣಂತ್ತಾನಂ ಅವರು ಹೇಳಿದ್ದಾರೆ.