ವಳಕುಂಜ: ಮನೆಗೆ ನಕ್ಸಲ್ ಭೇಟಿ ವದಂತಿ
Team Udayavani, Jan 17, 2019, 12:30 AM IST
ಬದಿಯಡ್ಕ: ಬಂದೂಕು ಧಾರಿ ಯುವತಿಯರನ್ನೊಳಗೊಂಡ ನಕ್ಸಲರ ತಂಡವೊಂದು ತನ್ನ ಮನೆಗೆ ಬಂದು ಅಕ್ಕಿ, ತರಕಾರಿ ಕೇಳಿ ಪಡೆದಿದೆ ಎಂದು ಪಳ್ಳತ್ತಡ್ಕ ಬಳಿಯ ವಳಕುಂಜ ನಿವಾಸಿ, ರಬ್ಬರ್ ಟ್ಯಾಪಿಂಗ್ ಕಾರ್ಮಿಕ ಜೈಸನ್ ಜೋಸೆಫ್ (55) ಅವರು ಬದಿಯಡ್ಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಜ. 15ರ ಅಪರಾಹ್ನ ಬದಿಯಡ್ಕ ಪೊಲೀಸರಿಗೆ ದೂರವಾಣಿ ಕರೆ ಮಾಡಿದ ಜೈಸನ್ ತನ್ನ ಮನೆಗೆ ನಕ್ಸಲರು ಬಂದಿದ್ದಾರೆ ಎಂದು ಮಾಹಿತಿ ನೀಡಿದ್ದರು. ಪೊಲೀಸರು ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಸಂಜೆ ಮತ್ತೆ ಕರೆ ಮಾಡಿ ಇಬ್ಬರು ಬಂದೂಕುಧಾರಿ ಮಹಿಳೆಯರು ಮನೆಗೆ ಬಂದು ಅಕ್ಕಿ, ತರಕಾರಿ ಪಡೆದುಕೊಂಡು ಹೋಗಿದ್ದಾರೆ ಎಂದು ಹೇಳಿದ ಕಾರಣ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಸ್ಥಳಕ್ಕೆ ತೆರಳಿ ಮಾಹಿತಿ ಕಲೆ ಹಾಕಿದರು. ಸ್ಥಳೀಯರೂ ಪೊಲೀಸರಿಗೆ ಕಾರ್ಯಾಚರಣೆ ನೆರವಾದರು. ಆದರೆ ನಕ್ಸಲರು ಬಂದಿರುವ ಯಾವುದೇ ಕುರುಹು ಪತ್ತೆಯಾಗಲಿಲ್ಲ. ಇದೇ ವೇಳೆ ಜೈಸನ್ ಅವರ ಪತ್ನಿ “ಅಂತಹ ಘಟನೆಯೇ ನಡೆದಿಲ್ಲ’ ಎಂದು ಪತಿಯ ಹೇಳಿಕೆಯನ್ನು ತಳ್ಳಿಹಾಕಿದ್ದಾರೆ.
ಪೊಲೀಸರಿಗೆ ಸಂಶಯ
ನಕ್ಸಲರು ಬಂದಿದ್ದಾರೆ ಎನ್ನಲಾದ ಸ್ಥಳ ಅರಣ್ಯ ಪ್ರದೇಶವನ್ನು ಹೊಂದಿಲ್ಲ.ಸಾಕಷ್ಟು ಜನವಸತಿ ಪ್ರದೇಶವಾಗಿರು ವುದರಿಂದ ಪೊಲೀಸರು ಜೈಸನ್ ಹೇಳಿಕೆಯ ಮೇಲೆ ಸಂಶಯ ವ್ಯಕ್ತಪಡಿಸಿದ್ದಾರೆ. ಸುಳ್ಳು ಮಾಹಿತಿ ನೀಡಿ ಪೊಲೀಸರನ್ನು ದಾರಿ ತಪ್ಪಿಸಿದ್ದು ದೃಢವಾದರೆ ಆತನ ಮೇಲೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ
Crime: ಕಾಸರಗೋಡು ಭಾಗದ ಅಪರಾಧ ಸುದ್ದಿಗಳು
Kasaragod ಎನ್ಡಿಎ ಅಭ್ಯರ್ಥಿ ಅಶ್ವಿನಿ ಪ್ರಚಾರಕ್ಕೆ ಅಡ್ಡಿ: ಕೇಸು ದಾಖಲು
ಸಿಡಿದ ಗ್ಯಾಸ್ ಸಿಲಿಂಡರ್; ಪಾರಾದ ಕುಟುಂಬ: ಶೇಣಿ ಬಾರೆದಳದಲ್ಲಿ ಮನೆಗೆ ತಗಲಿದ ಬೆಂಕಿ
Uppala ಮನೆಯಿಂದ ನಗ, ನಗದು ಕಳವು: ಯುವಕನಿಗೆ ಕೋವಿ ತೋರಿಸಿ ಬೆದರಿಕೆ
MUST WATCH
ಹೊಸ ಸೇರ್ಪಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ