“ಕಲೆಯ ಆಸಕ್ತಿ ಇರುವವ ಮಾತ್ರ ಆಸ್ವಾದಿಸಬಲ್ಲ’
Team Udayavani, Jan 18, 2019, 12:30 AM IST
ವಿದ್ಯಾನಗರ: ಕಲೆಯ ಬಗ್ಗೆ ಆಸಕ್ತಿ ಹಾಗೂ ಕುತೂಹಲ ಇರುವ ಸಹೃದಯನಿಗೆ ಮಾತ್ರ ರಸಾಸ್ವಾದನೆ ಸಾಧ್ಯ. ಕಲೆಯನ್ನು ವೀಕ್ಷಿಸುವ ಒಳಗಿನ ಕಣ್ಣು ಜಾಗೃತವಾದಾಗಲೇ ಕಲೆ ನಮ್ಮನ್ನು ಹೆಚ್ಚು ತಿಳಿಯುವಂತೆ ಮಾಡುತ್ತದೆ ಎಂದು ವಿದ್ವಾಂಸ ಡಾ| ಎಂ. ಪ್ರಭಾಕರ ಜೋಷಿ ಅಭಿಪ್ರಾಯಪಟ್ಟಿದ್ದಾರೆ.
ಕಣ್ಣೂರು ವಿಶ್ವವಿದ್ಯಾನಿಲಯದ ಭಾರ ತೀಯ ಭಾಷಾ ಅಧ್ಯಯನಾಂಗ ಹಾಗೂ ಕಾಸರ ಗೋಡು ಸರಕಾರಿ ಕಾಲೇಜಿನ ಯಕ್ಷಗಾನ ಸಂಶೋಧನ ಕೇಂದ್ರದ ಆಶ್ರಯದಲ್ಲಿ ಚಾಲಾ ಕೇಂದ್ರದಲ್ಲಿ ನಡೆದ “ಯಕ್ಷಗಾನ ರಸಾಸ್ವಾದನೆ ಮತ್ತು ಪುಸ್ತಕ ವಿಮರ್ಶೆ’ ಕಾರ್ಯಕ್ರಮದಲ್ಲಿ ಅವರು “ಯಕ್ಷಗಾನ ರಸಾಸ್ವಾದನೆ’ ಎಂಬ ವಿಷಯದಲ್ಲಿ ವಿಶೇಷೋಪನ್ಯಾಸ ನೀಡಿ ಮಾತನಾಡಿದರು.
ಪ್ರತಿಯೊಂದು ಕಲೆಯಲ್ಲೂ ಅಭಿವ್ಯಕ್ತಿ ವಿಧಾನಗಳು ವಿಭಿನ್ನವಾಗಿರುತ್ತವೆ. ಅದೇ ರೀತಿಯಲ್ಲಿ ರಸ, ಧ್ವನಿ, ಅಲಂಕಾರ. ಅಭಿನಯ ಇನ್ನಿತ್ಯಾಇತ್ಯಾದಿಗಳಲ್ಲೂ ವ್ಯತ್ಯಾಸಗಳಿರುತ್ತವೆ. ಆಸ್ವಾದನೆಯ ರೀತಿಯೂ ಕಲೆಯಿಂದ ಕಲೆಗೆ ವಿಭಿನ್ನವಾಗಿರುತ್ತದೆ. ಒಂದು ಕಲೆಯನ್ನು ಅರ್ಥಮಾಡುವುದೆಂದರೆ ಆ ಕಲೆಯ ಘಟನೆಗಳನ್ನು ಅರ್ಥಮಾಡುವು ದೆಂದರ್ಥಎಂದರು.
ಪುತ್ತೂರು ಅಂಬಿಕಾ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಪರೀಕ್ಷಿತ್ ತೋಳ್ಪಾಡಿ ಅವರು ಡಾ| ಸುಂದರ ಕೇನಾಜೆ ಬರೆದ “ಜೋಶಿ ಆಳ ಮನದಾಳ’ ಎಂಬ ಕೃತಿಯ ಕುರಿತು ಮಾತನಾಡಿ, ವ್ಯಕ್ತಿಯ ಪರಿಚಯಾತ್ಮಕ ವಿವರಗಳನ್ನು ನೀಸಿ ಯಕ್ಷಗಾನದ ಹಲವು ಚಿಂತನೆಗಳನ್ನು ಪಡಿಮೂಡಿಸುವುದರಲ್ಲಿ ಕೃತಿ ಯಶಸ್ವಿಯಾಗಿದೆ. ಬುದ್ಧಿ ಭಾವಗಳ ಸಮತೋಲನವನ್ನು ಕೇನಾಜೆಯವರು ಕೃತಿಯಲ್ಲಿ ಕಾಯ್ದುಕೊಂಡಿದ್ದಾರೆ ಎಂದರು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾ ಟಿಸಿದ ಕಾಸರಗೋಡು ಸರಕಾರಿ ಕಾಲೇಜಿನ ಪ್ರಾಂಶುಪಾಲ ಡಾ| ಅರವಿಂದ ಕೃಷ್ಣನ್ ಮಾತನಾಡಿದರು. ಕಣ್ಣೂರು ವಿಶ್ವವಿದ್ಯಾ ನಿಲಯದ ಸಿಂಡಿಕೇಟ್ ಸದಸ್ಯ ರಾಜು ಎಂ.ಸಿ, ಕನ್ನಡ ವಿಭಾಗದ ಮುಖ್ಯಸ್ಥೆ ಸುಜಾತಾ ಎಸ್. ಮುಖ್ಯ ಅತಿಥಿಗಳಾಗಿ ಭಾಗ ವಹಿಸಿ ದ್ದರು. ಭಾರತೀಯ ಭಾಷಾ ಅಧ್ಯಯನಾಂಗ ಕನ್ನಡ ವಿಭಾಗದ ನಿರ್ದೇಶಕ ಡಾ| ರಾಜೇಶ್ ಬೆಜ್ಜಂಗಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಡಾ| ಸುಂದರ ಕೇನಾಜೆ, ಮೈಸೂರಿನ ಎಂ.ಸಿ. ಮನೋಹರ್ ಈ ಮುಂತಾದವರು ಮಾತನಾಡಿದರು.
ಸಂಶೋಧನ ಕೇಂದ್ರದ ಸಂಯೋಜನಾಧಿ ಕಾರಿ ಡಾ| ರತ್ನಾಕರ ಮಲ್ಲಮೂಲೆ ಸ್ವಾಗತಿಸಿ, ವಕ್ತಾರೆ ಸವಿತಾ ಬಿ. ವಂದಿಸಿದರು. ಪ್ರದೀಪ್ ಬಿ.ಎಸ್, ಸುಜಿತ್ ಉಪ್ಪಳ ಕಾರ್ಯಕ್ರಮ ನಿರೂಪಿಸಿದರು. ಬಿಎಡ್, ಎಂ.ಎ, ಎಂಫಿಲ್, ಪಿಎಚ್ಡಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL; ಇಂದು ಚಿನ್ನಸ್ವಾಮಿಯಲ್ಲಿ ಆರ್ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?
Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್
Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ
Politics: ಸುಮಲತಾ – ನಾವು ಶಾಶ್ವತ ಶತ್ರುಗಳಲ್ಲ: ಕುಮಾರಸ್ವಾಮಿ
Sullia: ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್ ಅಲ್ಲ