ಕಣಿಪುರ ದೇಗುಲಕ್ಕೆ ಪುತ್ತೂರಿನ ತಟ್ಟಿರಾಯ
Team Udayavani, Feb 7, 2019, 12:55 AM IST
ಪುತ್ತೂರು: ಕಾಸರಗೋಡಿನ ಕುಂಬ್ಳೆ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನಕ್ಕೆ ಪುತ್ತೂರಿನಲ್ಲಿ ತಟ್ಟಿರಾಯ ನಿರ್ಮಿಸಲಾಗಿದೆ.
ಬೊಳುವಾರು ಭಾವನಾ ಕಲಾ ಆರ್ಟ್ಸ್ನ ವಿಘ್ನೇಶ್ ವಿಶ್ವಕರ್ಮ ಅವರ ನೇತೃತ್ವದಲ್ಲಿ ಸುಮಾರು 10 ಅಡಿ ಎತ್ತರದ ತಟ್ಟಿರಾಯನನ್ನು ನಿರ್ಮಿಸಲಾಗಿದೆ. ಕಬ್ಬಿಣದ ಪಟ್ಟಿಯ ಸುತ್ತಳತೆಯನ್ನು ಬಳಸಿಕೊಂಡು ಕೆಲಸ ನಿರ್ವಹಿಸಲಾಗಿದೆ. ಇತ್ತೀಚೆಗೆ ಕಣಿಪುರ ದೇವಸ್ಥಾನದಲ್ಲಿ ನಡೆದ ಜಾತ್ರೆಯಲ್ಲಿ ಈ ತಟ್ಟಿರಾಯನನ್ನು ಬಳಕೆ ಮಾಡಲಾಗಿದೆ.
6 ವರ್ಷದ ಹಿಂದೆ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಗೆ ವಿಘ್ನೇಶ್ ವಿಶ್ವಕರ್ಮ ನೇತೃತ್ವದಲ್ಲಿ ಸುಮಾರು 20 ತಟ್ಟಿರಾಯ ನಿರ್ಮಾಣ ಮಾಡಿಕೊಡಲಾಗಿತ್ತು. ಇದಲ್ಲದೇ ಹಲವು ದೇವಸ್ಥಾನಗಳಿಗೂ ತಟ್ಟಿರಾಯ ನಿರ್ಮಾಣ ಮಾಡಿಕೊಟ್ಟಿದ್ದಾರೆ.
ಪೋಳ್ಯ ಶ್ರೀ ವೆಂಕಟರಮಣ ಮಠ, ಮಜಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನ, ಅಡೂರು ದೇವಸ್ಥಾನಗಳು ಇದರಲ್ಲಿ ಪ್ರಮುಖವಾದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್
Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ
AAP ‘ಮಹಾರ್ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್
Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ
Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’