ಅಸಾಪ್‌ ಕಮ್ಯೂನಿಟಿ ಸ್ಕಿಲ್‌ ಪಾರ್ಕ್‌ನಿಂದ ಉದ್ಯೋಗ ತರಬೇತಿ


Team Udayavani, Feb 17, 2019, 12:30 AM IST

14ksde2.jpg

ಕಾಸರಗೋಡು: ಶಿಕ್ಷಣಾನಂತರ ಉದ್ಯೋಗಕ್ಕಾಗಿ ಏನು ಮಾಡಬೇಕು? ದೇಶದಲ್ಲೇ ಉಳಿಯಬೇಕೇ? ವಿದೇಶಕ್ಕೆ ತೆರಳಿ ಕಾಯಕ ನಿರತನಾಗಬೇಕೇ? ಎಂಬ ವಿಚಾರದಲ್ಲಿ ಇನ್ನು ಆತಂಕ ಬೇಡ. ಅಸಾಪ್‌ ಕಮ್ಯೂನಿಟಿ ಸೆಂಟರ್‌ಗೆ ಬನ್ನಿ, ಅಲ್ಲಿ ನಿಮ್ಮ ಉದ್ಯೋಗ ಸಂಬಂಧ ಭವಿತವ್ಯ ಬೆಳಗಲಿದೆ.

ನೌಕರಿಯ ನೈಪುಣ್ಯದೊಂದಿಗೆ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಉದ್ಯೋಗ ಒದಗಿಸುವ ಉದ್ದೇಶ ದೊಂದಿಗೆ ಅಸಾಪ್‌ ಕಮ್ಯೂನಿಟಿ ಸ್ಕಿಲ್‌ ಪಾರ್ಕ್‌ ಶೀಘ್ರದಲ್ಲಿ ಜಿಲ್ಲೆಯಲ್ಲಿ ಪುನರಾರಂಭಗೊಳ್ಳಲಿದೆ. ವಿದ್ಯಾನಗರದ ಸೀತಾಂಗೋಳಿ ರಸ್ತೆಯಲ್ಲಿ ಸ್ಕಿಲ್‌ ಪಾರ್ಕ್‌ನ ಪುನರಾರಂಭ ನಡೆಯಲಿದೆ.ವೈವಿಧ್ಯಮಯ ವೃತ್ತಿಪರ ಕೋರ್ಸ್‌ಗಳ ಮೂಲಕ ವಿದ್ಯಾರ್ಥಿಗಳಿಗೆ ಉತ್ತಮ ತರಬೇತಿ ನೀಡಿ ಉದ್ಯೋಗ ದೊರೆಯುವಂತೆ ಮಾಡುವುದು ಇಲ್ಲಿನ ಪ್ರಧಾನ ಉದ್ದೇಶ.
 
ವಿಶೇಷ ಚೇತನರಿಗೆ ಪ್ರತ್ಯೇಕ ತರಬೇತಿಗಳೂ ಇಲ್ಲಿನ ವಿಶೇಷತೆಯಾಗಿದೆ. ಎ.ಡಿ.ಬಿ. ಸಹಾಯ ದೊಂದಿಗೆ ರಾಜ್ಯ ಸರಕಾರ 13 ಕೋಟಿ ರೂ.   ವೆಚ್ಚದಲ್ಲಿ   ಈ   ಕೇಂದ್ರ  ಜಾರಿಗೊಳಿಸುತ್ತಿದೆ. ಜಿಲ್ಲೆಯ ವಿದ್ಯಾರ್ಥಿಗಳಿಗೆ ಉತ್ತಮ ನೌಕರಿ ಎಂಬ ಕನಸು ನನಸಾಗಿಸುವ ವೇಳೆ ಬಹುತೇಕ  ಬಾರಿ ಇತರ ಜಿಲ್ಲೆಗಳ ಯಾ ಇತರ ರಾಜ್ಯಗಳಿಗೆ ತೆರಳಿ ಕಲಿಕೆ ನಡೆಸಬೇಕಾದ ಪರಿಸ್ಥಿತಿ ಇಲ್ಲಿದೆ. ಇಂಥ ಸ್ಥಿತಿಯನ್ನು ಬದಲಿಸಲು ಅಸಾಪ್‌ ಯೋಜನೆ ಪೂರಕವಾಗಿದೆ. ಮೂರು ತಿಂಗಳ ಅವ ಧಿಯ ತರಬೇತಿಯಿಂದ ತೊಡಗಿ ಒಂದು ವರ್ಷದ ತರಬೇತಿ ವರೆಗೆ ಇಲ್ಲಿರುವುದು. 

ಪ್ರತಿ ವಿಷಯದಲ್ಲೂ ಪರಿಣತರು ತರಬೇತಿ ನಡೆಸುವರು.ಕೊಯಮತ್ತೂರು ಮೆರೈನ್‌ ಕಾಲೇಜು ನೇತೃತ್ವದಲ್ಲಿ ಎಲ್ಲ ತರಬೇತಿಗಳೂ ಇಲ್ಲಿ ನಡೆಯಲಿವೆ. ತಿರುವನಂತಪುರದಲ್ಲಿ ಸ್ಕಿಲ್‌ ಪಾರ್ಕ್‌ ಪ್ರಧಾನ ಕಚೇರಿಯಿದೆ.

ಕಟ್ಟಡದ ವಿಶೇಷಗಳು
ಎರಡು ಅಂತಸ್ತಿನ ಕಟ್ಟಡದಲ್ಲಿ 5 ತರಗತಿ ಕೊಠಡಿಗಳು, ನಾಲ್ಕು ತರಬೇತಿ (ಪ್ರಾಕ್ಟಿಕಲ್‌) ಕೊಠಡಿಗಳು, ಕನಿಷ್ಠ 40 ಕಂಪ್ಯೂಟರ್‌ಗಳು ಇರುವ ಅತ್ಯಾಧುನಿಕ ಐ.ಟಿ. ರೂಂ, ವಿಶೇಷ ಚೇತನರಿಗೆ ಪ್ರತ್ಯೇಕ ಶೌಚಾಲಯಗಳು, ಲಿಫ್ಟ್‌ ಸೌಲಭ್ಯ ಸಹಿತ ನಾನಾ ಸೌಲಭ್ಯಗಳು ಸ್ಕಿಲ್‌ ಪಾರ್ಕ್‌ನಲ್ಲಿರುವುವು. ಈ ಮೂಲಕ ಜಿಲ್ಲೆಯ ವಿವಿಧ ವಲಯಗಳ  ಪ್ರತಿಭೆಗಳನ್ನು ಒಂದೇ ಛಾವಣಿಯಡಿ ತರುವ ಸಾಧ್ಯತೆ ಅಪಾರ ನಿರೀಕ್ಷೆಗೆ ಕಾರಣವಾಗಿದೆ.

ಟಾಪ್ ನ್ಯೂಸ್

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Electric shock: ಯುವಕನ ಸಾವು

Electric shock: ಯುವಕನ ಸಾವು

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Perla, Kasaragod; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

Perla; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

12

B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್‌ವೈ ಗರಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.