ವಿದ್ಯಾರ್ಥಿಗಳಿಂದ ನಾಲ್ಕು ದಿನ 48 ವಿಧದ ಪಕ್ಷಿಗಳ ವೀಕ್ಷಣೆ


Team Udayavani, Feb 21, 2019, 1:00 AM IST

pakshi.jpg

ಕಾಸರಗೋಡು: ಕುಂಬಳೆ ಹೋಲಿ ಫ್ಯಾಮಿಲಿ ಶಾಲಾರಂಭದ ಮೊದಲು ಮೈದಾನಕ್ಕೆ ತೆರಳಿದ ಮಕ್ಕಳು ಆಟವಾಡುವುದರ ಬದಲು ಅತ್ತಿಂದಿತ್ತ ಹಾರಾಡುವ ಬಾನಾಡಿಗಳನ್ನು ಗುರುತಿಸಿದರು. ಸಂಜೆ ಶಾಲೆ ಬಿಟ್ಟ ಬಳಿಕವೂ ಹಕ್ಕಿಗಳ ಹಿಂದೆ ಬಿದ್ದರು. ರಜಾದಿನಗಳಾದ ಶನಿವಾರ ಹಾಗೂ ರವಿವಾರಗಳಂದು  ಶಾಲೆಯ ಸುತ್ತಮುತ್ತ ನಡೆದಾಡಿದರು. ಹೀಗೆ ನಾಲ್ಕು ದಿನಗಳ ಕಾಲ ನಡೆದ ಪಕ್ಷಿ ವೀಕ್ಷಣೆಯಲ್ಲಿ 48 ವಿಧದ ಪಕ್ಷಿಗಳನ್ನು ಗುರುತಿಸಿದರು.

ಅವುಗಳ ಬಗ್ಗೆ ಮಾಹಿತಿಯನ್ನು ಕಲೆಹಾಕಿ ಇ-ಬರ್ಡ್‌ ಎಂಬ ಜಾಲ ತಾಣದಲ್ಲಿ ದಾಖಲಿಸಿಕೊಂಡರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಫೆ. 15ರಿಂದ 18ರ ವರೆಗೆ ಜರಗಿದ ಕ್ಯಾಂಪಸ್‌ ಬರ್ಡ್‌ ಕೌಂಟ್‌ 2019ರಲ್ಲಿ ಕಾಸರಗೋಡು ಜಿಲ್ಲೆಯಿಂದ ಕುಂಬಳೆ ಹೋಲಿ ಫ್ಯಾಮಿಲಿ ಶಾಲೆಯ ಪಕ್ಷಿ ವೀಕ್ಷಕರ ತಂಡ ಮಾತ್ರವೇ ಭಾಗವಹಿಸಿತ್ತು. 27 ಮಕ್ಕಳು ಗಣತಿ ಕಾರ್ಯದಲ್ಲಿ ಪಾಲ್ಗೊಂಡು ಹಕ್ಕಿಗಳ ಬಗೆಗಿನ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಂಡರು. ಶಾಲೆಯ ಆಟದ ಮೈದಾನ ಹಾಗೂ ಪೊಸ್ತಡ್ಕ ಪ್ರದೇಶದಲ್ಲಿ ಸುತ್ತಾಡಿದ ಪುಟಾಣಿಗಳಿಗೆ ಪಕ್ಷಿ ಪ್ರೇಮಿ ತಂಡದ ಸದಸ್ಯೆ ತನ್ವಿಯ ಮನೆಯವರು ಬೆಳಗ್ಗಿನ ಉಪಹಾರದ ವ್ಯವಸ್ಥೆಯನ್ನು ಮಾಡಿದರು. ಕಾಸರಗೋಡು ಪಕ್ಷಿಪ್ರೇಮಿ ತಂಡದ ಅಧ್ಯಾಪಕ ರಾಜು ಕಿದೂರು ಮಾರ್ಗದರ್ಶನ ನೀಡಿದರು.

ಮುಖ್ಯೋಪಾಧ್ಯಾಯಿನಿ ಸಿ. ಸಿಲ್ವಾ ಕ್ರಾಸ್ತಾ, ರಕ್ಷಕರಾದ ತಾರಾನಾಥ್‌, ಗೋಪಿ, ಅರುಣ್‌ ಮೊದಲಾದವರು ಸಹಕರಿಸಿದರು.

ಮೈಸೂರಿನ ಪಕ್ಷಿ ವೀಕ್ಷಕರ ಭೇಟಿ 
ಬೇಕಲಕೋಟೆ ಪ್ರವಾಸದಲ್ಲಿರುವ ಮೈಸೂರಿನ ಅಂಜಲಿ ಮುಲ್ಲತ್ತಿ ಹಾಗೂ ತಂಡ ಗಣತಿಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಬರ್ಡ್‌ ಕೌಂಟ್‌ ಇಂಡಿಯಾದ ಜಾಲತಾಣದ ಮೂಲಕ ಮಾಹಿತಿ ಪಡೆದ ಅವರು ಮಕ್ಕಳಿಗೆ ಮೈಸೂರಿನ ಹಕ್ಕಿ ಲೋಕವನ್ನು ಪರಿಚಯಿಸಿದರು. ಪುಟಾಣಿ ಪಕ್ಷಿ ವೀಕ್ಷಕರ ಉತ್ಸಾಹಕ್ಕೆ ಬೆಂಬಲವಾಗಿ ಮೈಸೂರು ಸಂದರ್ಶಿಸಲು ತಂಡವು ಆಹ್ವಾನ ನೀಡಿತು.

ಪಕ್ಷಿ ವೈವಿಧ್ಯ  
ಯುರೋಪಿಯನ್‌ ವಲಸೆ ಹಕ್ಕಿಗಳಾದ ಬೂದು ಉಲಿಯಕ್ಕಿ ಮತ್ತು ಹಸಿರು ಉಲಿಯಕ್ಕಿ, ಮರಿಯ ಜತೆಗಿದ್ದ ಕಂಚು ಕುಟಿಗ, ನಿರಂತರವಾಗಿ ಹಾಡುತ್ತಿದ್ದ ಹಳದಿ ಹುಬ್ಬಿನ ಪಿಕಲಾರ, ಸಂತಾನ ಕ್ಷೀಣಿಸುತ್ತಿರುವ ವರ್ಗಕ್ಕೆ ಸೇರಿದ ಹಳದಿ ಟಿಟ್ಟಿಭ, ಭಾಗಿಕ ವಲಸೆಗಾರರಾದ ಹೊನ್ನಕ್ಕಿ, ರಾಜ ಹಕ್ಕಿ, ನೀಲ ಬಾಲದ ಕಳ್ಳಿ ಪೀರ, ಬಿಳಿ ತಲೆ ಕಬ್ಬಕ್ಕಿ, ಕೊಂಕಣ ಪ್ರದೇಶದಲ್ಲಿ ಮಾತ್ರವೇ ಗೂಡುಕಟ್ಟುವ ಬಿಳಿ ಹೊಟ್ಟೆಯ ಮೀನು ಗಿಡುಗ, ಒಣಗಿದ ಮರದಲ್ಲಿ ಅವಿತು ಕುಳಿತ್ತಿದ್ದ ಕಂದು ನೊಣ ಹಿಡುಕ ಇವೇ ಮೊದಲಾದ ಅತ್ಯಪೂರ್ವ ಪಕ್ಷಿಗಳ ಚಲನವಲನಗಳನ್ನು ವೀಕ್ಷಿಸುವ ಸೌಭಾಗ್ಯ ಮಕ್ಕಳಿಗೆ ದೊರಕಿತು.

ಟಾಪ್ ನ್ಯೂಸ್

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

yaksh

Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Perla, Kasaragod; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

Perla; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

5-ksrgdu

Crime: ಕಾಸರಗೋಡು ಭಾಗದ ಅಪರಾಧ ಸುದ್ದಿಗಳು 

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.