ಬೆದ್ರಂಪಳ್ಳ: ಶಾಸ್ತ್ರೀಯ,ಜಾನಪದ ನೃತ್ಯ ವೈವಿಧ್ಯ ಪ್ರದರ್ಶನ, ಸಮ್ಮಾನ


Team Udayavani, Feb 23, 2019, 12:30 AM IST

22vnr-pic01.jpg

ವಿದ್ಯಾನಗರ: ಬೆದ್ರಂಪಳ್ಳ ಗಣೇಶ ಭಜನಾ ಮಂದಿರದ ಲೋಕಾರ್ಪಣೆ ಹಾಗೂ ದೇವರ ಛಾಯಾಚಿತ್ರ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ಕಲಾತಪಸ್ವಿ ಬಾಲಕೃಷ್ಣ ಮಾಸ್ಟರ್‌ ಮಂಜೇಶ್ವರ ಇವರ ಶಿಷ್ಯ ವೃಂದದವರಿಂದ ಶಾಸ್ತ್ರೀಯ ಜಾನಪದ ನೃತ್ಯಗಳನ್ನೊಳಗೊಂಡ  ವೈವಿಧ್ಯ ನೃತ್ಯ ಪ್ರದರ್ಶನವು ಜರಗಿತು. 

ಗಣೇಶನ ಸ್ತುತಿಯೊಂದಿಗೆ ಆರಂಭವಾದ ನೃತ್ಯ ಪ್ರದರ್ಶನದಲ್ಲಿ ನೃತ್ಯದ ವಿಭಿನ್ನ ಸಾಧ್ಯತೆಗಳನ್ನು ಪ್ರದರ್ಶಿಸುವ ನೃತ್ಯದ ಹಾವಭಾವಗಳು ನರ್ತಕರ ಪ್ರಬುದ್ಧತೆಯನ್ನೂ ತೆರೆದಿಡುವಲ್ಲಿ ಯಶಸ್ವಿಯಾಯಿತು. ಸಂಚಾರಿ ತಂಡಗಳ ಆಕರ್ಷಕ ಪ್ರಸ್ತುತಿ ಜನಮನ ಗೆದ್ದರೆ ನಾಟ್ಯನಿಲಯಂನ ಸಾತ್ವಿಕಾಕೃಷ್ಣ ಅವರ ಕೂಚುಪುಡಿ ಮತ್ತು ಜಾನಪದ ನೃತ್ಯ ಮೈನವಿರೇಳುವಂತೆ ಮಾಡಿತು.

ನೃತ್ಯ  ಕಾರ್ಯಕ್ರಮದಲ್ಲಿ ಸಂಚಲನ ಮೂಡಿಸಿ, ಕುತೂಹಲ ಕೆರಳಿಸಿ, ಮೈಮರೆತು ಪ್ರೇಕ್ಷಕರು ವೀಕ್ಷಿಸುವಂತೆ ಮಾಡಿದ ಬನ್ನಿ ಕಾಸರಗೋಡಿಗೆ ಎಂಬ ನೃತ್ಯದ ಮೊದಲ ಪ್ರದರ್ಶನಕ್ಕೆ ಈ ವೇದಿಕೆ ಸಾಕ್ಷಿಯಾಯಿತು. ಸಂಧ್ಯಾಗೀತಾ ಬಾಯರು ರಚಿಸಿದ ಕಾಸರಗೋಡಿನ ಸಂಪೂರ್ಣ ಚಿತ್ರಣವನ್ನು ಒಳಗೊಂಡ ಕವನವನ್ನು ನೃತ್ಯ ಸಂಯೋಜನೆಯ ಮೂಲಕ ಜೀವಂತವಾಗಿಸುವ ಪ್ರಯತ್ನ ಎಲ್ಲರ ಮೆಚ್ಚುಗೆಗೆ ಕಾರಣವಾಯಿತು. 

ದೇವರ ನಾಡೆಂಬ ಹೆಗ್ಗಳಿಕೆಗೆ ಪಾತ್ರವಾದ ಕೇರಳದಲ್ಲಿ ಕಾಸರಗೋಡು ಅತ್ಯಂತ ಹೆಚ್ಚು ಜನಪ್ರಿಯ ಹಾಗೂ ಹಲವು ವೈಶಿಷ್ಟಗಳಿಂದ ಕೂಡಿದ್ದು ಹಲವು ಭಾಷೆಗಳ ಸಂಗಮ ಕ್ಷೇತ್ರ. ಇಲ್ಲಿ ಹಲವಾರು ಕಲಾಪ್ರಕಾರಗಳು,ಪುಣಕ್ಷೇತ್ರಗಳು, ನದಿಗಳು, ಪ್ರವಾಸಿತಾಣಗಳು ಮೊದಲಾದವು ಧಾರಾಳವಿದೆ. ಇವುಗಳನ್ನೆಲ್ಲಾ ಮನದಲ್ಲಿಟ್ಟು ನೃತ್ಯರೂಪಕದ ಮೂಲಕ ಪ್ರಸ್ತುತಪಡಿಸಿದ್ದು ವಿಶೇಷವೇ ಸರಿ. ಉಣ್ಣಿಕೃಷ್ಣನ್‌ ವೀಣಾಲಯಂ ಅವರ ರಾಗ ಸಂಯೋಜನೆ ಹಾಗೂ ಇಂಪಾದ ಹಾಡುಗಾರಿಕೆಯಲ್ಲಿ ಒಂದು ವಿನೂತನ ಪ್ರಯೋಗವಾಗಿ ಮೂಡುಬಂದಿದೆ.

ಭಾಗ್ಯಶ್ರೀ ಮುಳ್ಳೇರಿಯ ಹಾಗೂ ಕೃಷ್ಣ ಕೃಷ್ಣನ ಬಾಲಲೀಲೆಗಳನ್ನು ಸೊಗಸಾಗಿ ಬಿಂಬಿಸಿದರು. ಕಿರಣ್‌ ಕುಮಾರ್‌ ಶಿವತಾಂಡವವಾಡಿದರು.  ಎಲ್ಲಾ ನೃತ್ಯಗಳೂ ಪುರಾಣ ಕಥೆಯಾಧರಿತವಾಗಿದ್ದರೆ  ಜನಮನದಲ್ಲಿ ಶಾಶ್ವತವಾಗುಳಿಯುವ ವಿಶಿಷ್ಟ ನೃತ್ಯ ಪ್ರದರ್ಶನಕ್ಕೆ ಬೆದ್ರಂಪಳ್ಳ ವೇದಿಕೆಯಾಯಿತು. ಇದೇಸಃದರ್ಭಲ್ಲಿ‌ಂಧ್ಯಾಗೀತಾ ಬಾಯರು ಅವರನ್ನು ಸಮ್ಮಾನಿಸಲಾಯಿತು.

ಸೃಜನಶೀಲತೆ ಮೆಚ್ಚುವ,ತಹದ್ದು
ಸೃಜನಶೀಲತೆಯನ್ನು, ಸೂಕ್ಷ್ಮತೆಯನ್ನು. ವಿಶಾಲ ದೃಷ್ಟಿಕೋನ ಹಾಗೂ ಕವಿತೆಕಟ್ಟುವ ಕಲೆಯಲ್ಲಿ ಅಡಕವಾಗಿರುವ ಜಾಣತನವನ್ನು ಈ ಹಾಡು ಸ್ಪಷ್ಟಪಡಿಸುತ್ತದೆ. ಕೊಟ್ಟ ಕೆಲವೇ ಸೂಚನೆಗಳಿಗೆ ಸರಿಯಾದ ರೀತಿಯಲ್ಲಿ ವಿಸ್ತಾರವಾದ ಚೌಕಟ್ಟಿನೊಳಗೆ ಹಾಡನ್ನು ರಚಿಸಿದ ಸಂಧ್ಯಾ ಅವರ ಕ್ರಿಯಾಶೀಲತೆ ಮೆಚ್ಚತಕ್ಕದ್ದು 
– ಬಾಲಕೃಷ್ಣ ಮಾಸ್ಟರ್‌ ಮಂಜೇಶ್ವರ.

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

10-sulya

ಚಾರಿತ್ರಿಕ ಪರಂಪರೆಗಳ ಸಂರಕ್ಷಣೆಗಾಗಿ ಅಮರ ಸುಳ್ಯ ಹೆರಿಟೇಜ್ ಫೌಂಡೇಶನ್ (ರಿ.) ಕಾರ್ಯಾರಂಭ

Virajpet: ಲಾರಿ – ಆ್ಯಂಬುಲೆನ್ಸ್‌ ನಡುವೆ ಢಿಕ್ಕಿ; ಓರ್ವನಿಗೆ ಗಾಯ

Virajpet: ಲಾರಿ – ಆ್ಯಂಬುಲೆನ್ಸ್‌ ನಡುವೆ ಢಿಕ್ಕಿ; ಓರ್ವನಿಗೆ ಗಾಯ

ಅಂಬಲತ್ತರದಲ್ಲಿ ಪತ್ತೆಯಾದ ನೋಟುಗಳೆಲ್ಲವೂ ಖೋಟಾ ನೋಟು : ಕರ್ನಾಟಕದಲ್ಲಿ ಮುದ್ರಣ ಶಂಕೆ

ಅಂಬಲತ್ತರದಲ್ಲಿ ಪತ್ತೆಯಾದ ನೋಟುಗಳೆಲ್ಲವೂ ಖೋಟಾ ನೋಟು : ಕರ್ನಾಟಕದಲ್ಲಿ ಮುದ್ರಣ ಶಂಕೆ

Manjeshwar ವಿದ್ಯುತ್‌ ಆಘಾತ: ಯುವಕ ಸಾವು

Manjeshwar ವಿದ್ಯುತ್‌ ಆಘಾತ: ಯುವಕ ಸಾವು

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.