ನೀರು ಪೂರೈಕೆ: ಜಲ ಪ್ರಾಧಿಕಾರಕ್ಕೆ 909 ಕೋಟಿ ರೂ. ಬಾಕಿ


Team Udayavani, Mar 1, 2019, 1:00 AM IST

neeru-puraike.jpg

ಕಾಸರಗೋಡು: ಕೇರಳ ರಾಜ್ಯ ಜಲ ಪ್ರಾಧಿಕಾರವು 386 ಕೋಟಿ ರೂ. ಗಳ ವಾರ್ಷಿಕ ಸಾಲ ಹೊಂದಿದೆ. ಇದೇ ಸಂದರ್ಭದಲ್ಲಿ  ನೀರು ಪೂರೈಸಿದ ಜಲ ಪ್ರಾಧಿಕಾರಕ್ಕೆ ಬರೋಬ್ಬರಿ 909 ಕೋಟಿ ರೂ. ಲಭಿಸಲು ಬಾಕಿಯಿದೆ.
ಆ ಹಣವನ್ನು  ಸರಿಯಾಗಿ ವಸೂಲು ಮಾಡಿದಲ್ಲಿ  ಜಲ ಪ್ರಾಧಿಕಾರದ ಸಾಲದ ಹೊರೆಯನ್ನು  ನೀಗಿಸಬಹುದಾಗಿದೆ. ಅಂತಹ ಕ್ರಮಗಳು ಸರಿಯಾದ ರೀತಿಯಲ್ಲಿ  ನಡೆಯದೇ ಇರುವುದು ಜಲ ಪ್ರಾಧಿಕಾರವನ್ನು  ರಾಜ್ಯದ ಕೆಎಸ್‌ಆರ್‌ಟಿಸಿ ವಿಭಾಗದಂತೆಯೇ ತೀವ್ರ ಸಂಕಷ್ಟದಲ್ಲಿ  ಸಿಲುಕುವಂತೆ ಮಾಡಿದೆ.

ಜಲ ಪ್ರಾಧಿಕಾರವು ರಾಜ್ಯಾದ್ಯಂತ ಒಟ್ಟು  21 ಲಕ್ಷ  ನಳ್ಳಿ ನೀರಿನ ಸಂಪರ್ಕಗಳನ್ನು  ಒದಗಿಸಿದೆ. ಇದರಲ್ಲಿ  ಬಹುತೇಕ ಮನೆಗಳಿಗೆ ನಳ್ಳಿ ನೀರಿನ ವ್ಯವಸ್ಥೆ  ಮಾಡಿದೆ. ಮನೆಗಳಿಂದ ನೀರಿನ ಶುಲ್ಕ ಹೆಚ್ಚು  ಕಡಿಮೆ ಪ್ರಾಧಿಕಾರಕ್ಕೆ ಲಭಿಸುತ್ತಿದೆಯಾದರೂ ಸರಕಾರಿ ಸಂಸ್ಥೆಗಳು ಮತ್ತು ಇತರ ವಿಭಾಗಗಳಿಗೆ ನೀಡಲಾದ ನಳ್ಳಿನೀರು ಸಂಪರ್ಕದ ಬಾಬ್ತು  ಹಣ ಸಂದಾಯವಾಗುತ್ತಿಲ್ಲ.

ಬಾಕಿಯಿರುವ ಒಟ್ಟು  909 ಕೋಟಿ ರೂ. ಗಳ‌ಲ್ಲಿ  715 ಕೋಟಿ ರೂ. ದೊರಕಲು ಕಷ್ಟ ಸಾಧ್ಯವಾದ ಹಣವಾಗಿ ಗುರುತಿಸಲಾಗಿದೆ. ಒಟ್ಟು  ಬಾಕಿ ಮೊತ್ತದಲ್ಲಿ  ಮನೆಗಳಿಗೆ ನೀರು ಪೂರೈಸಿದ ಅಂಗವಾಗಿ 173 ಕೋಟಿ ರೂ. ವಸೂಲಾತಿಗೆ ಬಾಕಿಯಿದೆ. ಉದ್ದಿಮೆ ಘಟಕಗಳಿಗೆ ನೀರು ಪೂರೈಸಿದ ವತಿಯಿಂದ 7.8 ಕೋಟಿ ರೂ., ಕಟ್ಟಡಗಳನ್ನು  ನಿರ್ಮಿಸಲು ತಾತ್ಕಾಲಿಕವಾಗಿ ನೀಡಲಾದ ನಳ್ಳಿನೀರು ವತಿಯಿಂದ 13 ಕೋಟಿ ರೂ. ಜಲ ಪ್ರಾಧಿಕಾರಕ್ಕೆ ದೊರಕಲು ಬಾಕಿಯಿದೆ.

ಲೋಕೋಪಯೋಗಿ ಇಲಾಖೆಯ ವಿವಿಧ ಕಚೇರಿಗಳಿಂದಲೇ ಪ್ರಾಧಿಕಾರಕ್ಕೆ 73.78 ಕೋಟಿ ರೂ. ಬಾಕಿ ಉಳಿದುಕೊಂಡಿದೆ. ತಿರುವನಂತಪುರದ ತೈಕ್ಕಾಡ್‌ ಅತಿಥಿಗೃಹಕ್ಕೆ ಪೂರೈಸಲಾದ ನೀರಿನ ವತಿಯಿಂದ ಮಾತ್ರವಾಗಿ 19.45 ಕೋಟಿ ರೂ. ಮೊತ್ತ  ದೊರಕಲು ಬಾಕಿಯಿರುವುದಾಗಿ ಅಂಕಿ ಅಂಶಗಳು ಸೂಚಿಸುತ್ತಿವೆ.

ಜಲ ಪ್ರಾಧಿಕಾರಕ್ಕೆ 1,280 ಕೋಟಿ ರೂ.ಗಳ ವಾರ್ಷಿಕ ಖರ್ಚು ಲೆಕ್ಕ ಹಾಕಲಾಗಿದೆ. ಪ್ರತೀ ವರ್ಷ ನೀರು ಪೂರೈಕೆಯಿಂದ 554 ಕೋಟಿ ರೂ. ಲಭಿಸಬೇಕು. ಇದರ ಹೊರತಾಗಿ ರಾಜ್ಯ ಸರಕಾರದ ಅನುದಾನದ ರೂಪದಲ್ಲಿ  335 ಕೋಟಿ ರೂ. ಮತ್ತಿತರ ಅನುದಾನ ವತಿಯಿಂದ 5 ಕೋಟಿ ರೂ. ಲಭಿಸುತ್ತಿದೆ. ಹೀಗೆ ಪ್ರಾಧಿಕಾರದ ಒಟ್ಟು  ವಾರ್ಷಿಕ ಆದಾಯ 894 ಕೋಟಿ ರೂ. ಆಗಿದೆ. ಆದರೆ ಖರ್ಚು ಅದಕ್ಕಿಂತಲೂ ಹೆಚ್ಚಾಗಿರುವುದನ್ನು  ಗಮನಿಸಬಹುದಾಗಿದೆ.

ಬಾಕಿ ವಸೂಲಿಗೆ ವ್ಯವಸ್ಥೆಯಿಲ್ಲ
 ನೀರು ಪೂರೈಕೆಯ ಅಂಗವಾಗಿ ಜಲ ಪ್ರಾಧಿಕಾರಕ್ಕೆ ಲಭಿಸಬೇಕಾದ ಹಣದಲ್ಲಿ  ಕನಿಷ್ಠ  ಶೇಕಡಾ 50ರಷ್ಟು  ವಸೂಲು ಮಾಡಲು ಸಾಧ್ಯವಾದಲ್ಲಿ  ಪ್ರಾಧಿಕಾರವು ಎದುರಿಸುತ್ತಿರುವ ನಷ್ಟವನ್ನು ಅಲ್ಪ ಪ್ರಮಾಣದಲ್ಲಾದರೂ ನೀಗಿಸಬಹುದು. ಆದರೆ ಅದಕ್ಕಿರುವ ಕ್ರಮಗಳಿಗೆ ಚಾಲನೆ ನೀಡಲಾಗಿದ್ದರೂ ಕ್ಷಿಪ್ರಗತಿಯ ಯಾವುದೇ ಯೋಜನೆಗಳನ್ನು  ಹಾಕಿಕೊಳ್ಳಲಾಗಿಲ್ಲ. ಅಲ್ಲದೆ ನೀರು ಪೂರೈಕೆ  ವತಿಯಿಂದ ಹಣ ಪಾವತಿಸದ ಸಂಸ್ಥೆಗಳಿಗೆ ಯಾವುದೇ ಎಚ್ಚರಿಕೆಯ ನೋಟಿಸುಗಳನ್ನು  ನೀಡಲಾಗಿಲ್ಲ.

ಟಾಪ್ ನ್ಯೂಸ್

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kasaragod ವಿವಿಪ್ಯಾಟ್‌ಗಳಲ್ಲಿ ದೋಷಗಳಿಲ್ಲ: ಚುನಾವಣಾಧಿಕಾರಿ

Kasaragod ವಿವಿಪ್ಯಾಟ್‌ಗಳಲ್ಲಿ ದೋಷಗಳಿಲ್ಲ: ಚುನಾವಣಾಧಿಕಾರಿ

Lok Sabha Election ಫ‌ಲಿತಾಂಶದ ಬೆನ್ನಲ್ಲೇ ಮುಖ್ಯಮಂತ್ರಿ ಕುರ್ಚಿ ಅಲುಗಾಡಲಿದೆ: ಡಿ.ವಿ.

Lok Sabha Election ಫ‌ಲಿತಾಂಶದ ಬೆನ್ನಲ್ಲೇ ಮುಖ್ಯಮಂತ್ರಿ ಕುರ್ಚಿ ಅಲುಗಾಡಲಿದೆ: ಡಿ.ವಿ.

Arrested: ತಂಬಾಕು ಉತ್ಪನ್ನ ಸಹಿತ ಬಂಧನ

Arrested: ತಂಬಾಕು ಉತ್ಪನ್ನ ಸಹಿತ ಬಂಧನ

Theft: ಮನೆಯಿಂದ ಕಳವು; ಸಿಸಿ ಟಿವಿ ದೃಶ್ಯ ಕೇಂದ್ರೀಕರಿಸಿ ತನಿಖೆ

Theft: ಮನೆಯಿಂದ ಕಳವು; ಸಿಸಿ ಟಿವಿ ದೃಶ್ಯ ಕೇಂದ್ರೀಕರಿಸಿ ತನಿಖೆ

Uppala ರೈಲ್ವೇ ಇಲಾಖೆಯ ಸ್ಥಳದಿಂದ ಮರ ಕಳವು : ಆರೋಪಿ ಬಂಧನ

Uppala ರೈಲ್ವೇ ಇಲಾಖೆಯ ಸ್ಥಳದಿಂದ ಮರ ಕಳವು : ಆರೋಪಿ ಬಂಧನ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.