ಸವ್ಯಸಾಚಿ ಯಕ್ಷಗಾನ ಗುರು ಪದಕಣ್ಣಾಯರಿಗೆ ಅಭಿನಂದನೆ
Team Udayavani, Mar 14, 2019, 1:00 AM IST
ಕಾಸರಗೋಡು: ಬಂದಡ್ಕ ಸಮೀಪದ ಪಾಲಾರಿನ “ಇಂಚರ’ದಲ್ಲಿ ಕಬೆಕ್ಕೋಡಿನ ಕೃಷ್ಣ ಪ್ರಸಾದ-ವಂದನಾ ದಂಪತಿ ಪುತ್ರ ಅಂಕಿತ್ನ ಉಪನಯನ ಸಮಾರಂಭದಲ್ಲಿ ಬಾಯಾರಿನ ಸೂರ್ಯ ನಾರಾಯಣ ಪದಕಣ್ಣಾಯ ಅವರಿಗೆ ಸಮ್ಮಾನ ಕಾರ್ಯಕ್ರಮ ನಡೆಯಿತು.
ಫಾರ್ಮಾ ಸಯನ್ಸ್ನಲ್ಲಿ ಡಿಪ್ಲೋಮಾ ಪದವಿ ಪಡೆದಿದ್ದರೂ ಕಳೆದ 25 ವರ್ಷಗಳಿಂದ ತಮ್ಮನ್ನು ಯಕ್ಷಗಾನ ಕ್ಷೇತ್ರಕ್ಕೆ ಸಮರ್ಪಿಸಿಕೊಂಡ ಅವರು ಯಕ್ಷಗಾನ ರಂಗಕ್ಕೆ ಈಗಾಗಲೇ ನೂರಾರು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸಮರ್ಪಿಸಿದ್ದಾರೆ. ಪ್ರಸ್ತುತ ಬದಿಯಡ್ಕದ ರಂಗಸಿರಿ ಸಾಂಸ್ಕೃತಿಕ ವೇದಿಕೆಯ ಯಕ್ಷಗಾನ ಗುರುಗಳೂ ಆಗಿರುವ ಅವರು ಅರಿಯಪ್ಪಾಡಿ, ಅಡೂರು, ಕುಂಟಾರು ಮೊದಲಾದ ಸ್ಥಳಗಳಲ್ಲಿ ಯಕ್ಷಗಾನ ತರಬೇತಿಯನ್ನು ನೀಡುತ್ತಿದ್ದಾರೆ. ಯಕ್ಷಗಾನದ ಹಿಮ್ಮೇಳ, ಮುಮ್ಮೇಳಗಳಲ್ಲಿ ಪ್ರಬುದ್ಧರಾಗಿರುವ ಅವರು ಯಕ್ಷಗಾನ ಕ್ಷೇತ್ರದ ಸವ್ಯಸಾಚಿಯಾಗಿ ಮೆರೆಯುತ್ತಿದ್ದಾರೆ. ಶ್ರೀಶ ಕುಮಾರ ಪಂಜಿತ್ತಡ್ಕ ಸಮ್ಮಾನಪತ್ರ ವಾಚಿಸಿದರು. ಕೃಷ್ಣ ಪ್ರಸಾದ ದಂಪತಿಗಳು, ವಿದ್ಯಾ ಕುಂಟಿಕಾನಮಠ ಗುರುಗಳನ್ನು ಸಮ್ಮಾನಿಸಿದರು. ವಸುಧಾ ಕೇವಳ, ಶ್ರೀಹರಿ ಮವ್ವಾರು, ಸುಪ್ರೀತಾ, ಅಭಿಜ್ಞಾ, ಆಕಾಶ್ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು
Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್