ದೇಗುಲಗಳು ನ್ಯಾಯಾಲಯಗಳಾಗಬೇಕು : ಡಾ| ನಾರಾಯಣನ್‌ 


Team Udayavani, Mar 15, 2019, 1:00 AM IST

degula.jpg

ಕಾಸರಗೋಡು: ಭಾರತವು ಪುಣ್ಯ ತೀರ್ಥಗಳ ನಾಡು. ಇದು ಯಜ್ಞ ಭೂಮಿಯೂ ಹೌದು. ಆಚಾರ್ಯತ್ವ, ಆಮ್ನಾಯ ಜಪ, ಉತ್ಸವ, ಅನ್ನದಾನ, ನಿಯಮ (ಆಚಾರ) ಇವು ಪಂಚತತ್ವಗಳೇ ವಿಗ್ರಹಗಳಿಗೆ ಜೀವಕಳೆ ತುಂಬುವ ಮತ್ತು ಚೈತನ್ಯ ವೃದ್ಧಿಸುವ ಘಟಕಗಳು. ಯಾವುದೇ ವೈರುಧ್ಯಗಳಿದ್ದರೂ ಪರಸ್ಪರ ಸಹಕರಿಸಿ ಜೀವಿಸುವ ಕಲೆಯನ್ನು “ಶಿವ ಕುಟುಂಬ’ ದಾರಿ ತೋರಿಸುತ್ತದೆ. ಶ್ರೀ ರುದ್ರವನ್ನು ಮನನ ಮಾಡಿಕೊಂಡು ಪಂಚಾಕ್ಷರಿ ನಾಮದೊಂದಿಗೆ ಶಿವೋಪಾಸನೆಗೈಯಬೇಕು.

ಉತ್ಸವಗಳೆಂದರೆ ಶ್ರೀ ದೇವರು ಸಂತೋಷದಿಂದಿರುವ    ಸಂದರ್ಭ ಎಂದರ್ಥ. ದೇಗುಲಗಳು ವೈದ್ಯಾಲಯಗಳಾಗುವಂತೆ ಭಗವದ್ಭಕ್ತರ ಪಾಲಿಗೆ ನ್ಯಾಯಾಲಯವೂ ಆಗಬೇಕು. ಸಣ್ಣಪುಟ್ಟ ಕೌಟುಂಬಿಕ ಸಮಸ್ಯೆಗಳಿಗೆ ಪೊಲೀಸ್‌ ಠಾಣೆಗೆ ಹೋಗುವ ಬದಲು, ಪರಿಹಾರಗಳಿಗೆ ದೇಗುಲಗಳು  ನ್ಯಾಯಾಲಯಗಳಾಗಿ ಪರಿವರ್ತಿಸಿ ಕೊಳ್ಳಬೇಕು. ಭಕ್ತರಿಗೆ ಸಹಬಾಳ್ವೆಯ ಸಂದೇಶ ನೀಡಲು ಸತ್ಸಂಗಗಳನ್ನು ಏರ್ಪಡಿಸಬೇಕು. ನಮ್ಮೆಲ್ಲರ ಜೀವನವು ಶಿವಮಯವಾಗಲಿ ಎಂದು ಕೇರಳ ಕ್ಷೇತ್ರ ಸಂರಕ್ಷಣಾ ಸಮಿತಿ ಕೋ-ಆರ್ಡಿನೇಟರ್‌ ಡಾ| ಎಂ. ನಾರಾಯಣನ್‌ ಭಟ್ಟತ್ತಿರಿಪ್ಪಾಡ್‌ ಹೇಳಿದರು.

ನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಆಯೋಜಿಸಿದ ಧಾರ್ಮಿಕ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಧಾರ್ಮಿಕ ಉಪನ್ಯಾಸ ನೀಡಿ ಮಾತನಾಡಿದರು.

ರಾಷ್ಟ್ರ ನಿರ್ಮಾಣ  
ಕಾಸರಗೋಡಿನಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ ಎಂಬುದಕ್ಕೆ ಕಾವಿಮಯ ಅಲಂಕಾರವೇ ಸಾಕ್ಷಿ.   ರಾಷ್ಟ್ರ ನಿರ್ಮಾಣ ಕಾರ್ಯಕ್ಕೆ ದೇಗುಲ ಜೀರ್ಣೋದ್ಧಾರದಿಂದ  ಪ್ರೇರಣೆ ಲಭಿಸಲಿ ಎಂದು ಮುಖ್ಯ ಅತಿಥಿಯಾಗಿ ಭಾಗವಹಿಸಿದ ವಿಶ್ವ ಹಿಂದೂ ಪರಿಷತ್‌ ಕರ್ನಾಟಕ ಪ್ರಾಂತ್ಯ ಅಧ್ಯಕ್ಷ ಎಂ.ಬಿ. ಪುರಾಣಿಕ್‌ ಹೇಳಿದರು.

ಕಾರ್ಯಕ್ರಮದಲ್ಲಿ ಸಹಕಾರ ಭಾರತಿ ರಾಷ್ಟ್ರೀಯ ಕಾರ್ಯದರ್ಶಿ ನ್ಯಾಯವಾದಿ ಕರುಣಾಕರನ್‌ ನಂಬ್ಯಾರ್‌ ಅಧ್ಯಕ್ಷತೆ ವಹಿಸಿದರು. ವರದರಾಜ ವೆಂಕಟರಮಣ ದೇವಸ್ಥಾನದ ಟ್ರಸ್ಟಿ ವಿದ್ಯಾಕರ ಮಲ್ಯ, ಕಾಸರಗೋಡು ವೈದ್ಯಾಧಿಕಾರಿ ಡಾ| ಜನಾದ‌ìನ ನಾಯ್ಕ, ಕರಂದಕ್ಕಾಡು ಶ್ರೀ ವೀರಹನುಮಾನ್‌ ಮಂದಿರ ಮತ್ತು ವ್ಯಾಯಾಮ ಶಾಲೆಯ ಕಾರ್ಯದರ್ಶಿ ಗಣೇಶ್‌ ಕೆ, ನೆಲ್ಲಿಕುಂಜೆ ಓಂ ಭಗವತಿ ಪ್ರಭಾ ಭಜನ ಮಂದಿರದ ಅಧ್ಯಕ್ಷ ಭಾಸ್ಕರ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ದಿನೇಶ್‌ ಎಂ.ಟಿ., ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸಿ.ವಿ. ಪೊದುವಾಳ್‌ ಮೊದಲಾದವರು ಉಪಸ್ಥಿತರಿದ್ದರು.

ಬ್ರಹ್ಮಕಲಶೋತ್ಸವ ಸಮಿತಿ ಜತೆ ಕಾರ್ಯದರ್ಶಿ ನಾರಾಯಣ ಕೆ. ಸ್ವಾಗತಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಜಯರಾಮ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಜತೆ ಕಾರ್ಯದರ್ಶಿ ವರಪ್ರಸಾದ್‌ ಕೋಟೆಕಣಿ ವಂದಿಸಿದರು. 

ಜ್ಞಾನ ಕೊಟ್ಟ ಗುರು ಗ್ರಾಮದ ದೇವಸ್ಥಾನ ಹೆತ್ತ ತಾಯಿ. ಜ್ಞಾನಕೊಟ್ಟ ಗುರು. ಇವರ ಋಣವನ್ನು ತೀರಿಸಲು ಸಾಧ್ಯವುಂಟೇ? ತಲೆಮಾರಿಗೆ ಅಪೂರ್ವವಾಗಿ ಲಭಿಸುವ ಸೌಭಾಗ್ಯವಿದು. ನಾವೆಲ್ಲ ನಿಮಿತ್ತ ಮಾತ್ರ. ಒಂದು ಕ್ಷೇತ್ರ ಜೀರ್ಣೋದ್ಧಾರವಾಯಿತೆಂದರೆ ಭಗವದ್ಭಕ್ತರಿಗೆ ಅನುಗ್ರಹ ಪ್ರಾಪ್ತಿಯಾಗಿದೆ ಎಂದರ್ಥ. ಇಲ್ಲಿ ನಾನು ಎಂಬುದು ಶೂನ್ಯ. ವಿನಾಯಾಸ ಜೀವನ, ಅನಾಯಾಸ ಮರಣ ಪ್ರಾಪ್ತಿಗಾಗಿ ನಾವು ಪ್ರಾರ್ಥಿಸಬೇಕು. ನಾವು ಮಾಡುವ ಕ್ರಿಯೆ ಮುಖ್ಯವಲ್ಲ. ಬದಲು ಭಾವನೆ ಮುಖ್ಯ. ಸದ್ಭಾವನೆಯಿಂದಗೈದ ಕರ್ಮಗಳೆಲ್ಲವೂ ಭಗವದರ್ಪಿತ .

-ವಸಂತ ಪೈ ಬದಿಯಡ್ಕ ಉದ್ಯಮಿ 
 

ಟಾಪ್ ನ್ಯೂಸ್

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

13

Politics: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮುಸ್ಲಿಂ ಮೂಲಭೂತವಾದಿಗಳು ಹೆಚ್ಚಳ; ಅಶೋಕ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ತಂಬಾಕು ಉತ್ಪನ್ನ ಸಹಿತ ಬಂಧನ

Arrested: ತಂಬಾಕು ಉತ್ಪನ್ನ ಸಹಿತ ಬಂಧನ

Theft: ಮನೆಯಿಂದ ಕಳವು; ಸಿಸಿ ಟಿವಿ ದೃಶ್ಯ ಕೇಂದ್ರೀಕರಿಸಿ ತನಿಖೆ

Theft: ಮನೆಯಿಂದ ಕಳವು; ಸಿಸಿ ಟಿವಿ ದೃಶ್ಯ ಕೇಂದ್ರೀಕರಿಸಿ ತನಿಖೆ

Uppala ರೈಲ್ವೇ ಇಲಾಖೆಯ ಸ್ಥಳದಿಂದ ಮರ ಕಳವು : ಆರೋಪಿ ಬಂಧನ

Uppala ರೈಲ್ವೇ ಇಲಾಖೆಯ ಸ್ಥಳದಿಂದ ಮರ ಕಳವು : ಆರೋಪಿ ಬಂಧನ

ಮೋದಿ ಸರಕಾರದಿಂದ ಭ್ರಷ್ಟಾಚಾರ ನಿಯಂತ್ರಣ: ಎ.ಪಿ. ಅಬ್ದುಲ್ಲ ಕುಟ್ಟಿ

ಮೋದಿ ಸರಕಾರದಿಂದ ಭ್ರಷ್ಟಾಚಾರ ನಿಯಂತ್ರಣ: ಎ.ಪಿ. ಅಬ್ದುಲ್ಲ ಕುಟ್ಟಿ

ಇಂದು ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಕಾಸರಗೋಡಿಗೆ

ಇಂದು ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಕಾಸರಗೋಡಿಗೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.