ಅಕ್ರಮ ಜಾಹೀರಾತು ವಿರುದ್ಧ ದೂರು ನೀಡಲು ವಿವಿಧ ವಿಧಾನ
Team Udayavani, Mar 18, 2019, 12:30 AM IST
ಕಾಸರಗೋಡು: ಲೋಕಸಭೆ ಚುನಾವಣೆ ಸಂಬಂಧ ಅನುಮತಿಯಿಲ್ಲದೆ ಸ್ಥಾಪಿಸುವ ಪ್ರಚಾರ ಜಾಹೀರಾತುಗಳ ವಿರುದ್ಧ ದೂರು ನೀಡಲು ಬೇರೆ ಬೇರೆ ವಿಧಾನಗಳಿವೆ. ಅಕ್ರಮ ರೂಪದಲ್ಲಿ ಸ್ಥಾಪಿಸುವ ಜಾಹೀರಾತುಗಳ ವಿರುದ್ಧ ಕಠಿನ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾ ಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದ್ದಾರೆ. ಖಾಸಗಿ ಜಾಗದಲ್ಲಿ ಜಾಹೀರಾತು ಫಲಕ ಸ್ಥಾಪನೆ ನಿಟ್ಟಿನಲ್ಲಿ ರಜಕೀಯ ಪಕ್ಷಗಳು ಜಾಗದ ಮಾಲೀಕರಿಂದ ಲಿಖೀತ ರೂಪದಲ್ಲಿ ಅನುಮತಿ ಪಡೆಯಬೇಕು. ಆವರಣ ಗೋಡೆ, ಖಾಸಗಿ ಜಾಗ, ಕಟ್ಟಡ ಇತ್ಯಾದಿಗಳಲ್ಲಿ ಅನುಮತಿಯಿಲ್ಲದೆ ಚುನಾವಣೆ ಪ್ರಚಾರ ನಡೆಸಿದರೆ ಸಾರ್ವಜನಿಕರು ದೂರು ನೀಡುವಲ್ಲಿ ಅನೇಕ ವಿಧಾನಗಳಿದ್ದು, ತತ್ಕ್ಷಣ ಪರಿಹಾರ ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಸಿ ವಿಝಿಲ್
ಅಕ್ರಮ ರೂಪದಲ್ಲಿ ಸ್ಥಾಪಿಸಲಾಗುವ ಜಾಹೀರಾತು ಸಾಮಗ್ರಿಗಳ ವಿರುದ್ಧ ಸಾರ್ವಜನಿಕರು ಸಿ ವಿಝಿಲ್ ಎಂಬ ಮೊಬೈಲ್ ಆ್ಯಪ್ ಮೂಲಕ ಫೋಟೋ ಯಾ ವೀಡಿಯೋ ನಡೆಸಿ ಅಪ್ ಲೋಡ್ ನಡೆಸಿದರೆ ಅದನ್ನು ದೂರು ಎಂಬುದಾಗಿ ಪರಿಶೀಲಿಸಲಾಗುವುದು. ಜಿಯೋಗ್ರಾಫಿಕ್ ಇನಾರ್ಮೇಷನ್ ಸಿಸ್ಟಂ ಬಳಸಿ ನೀತಿಸಂಹಿತೆ ಉಲ್ಲಂಘನೆ ನಡೆದಿರುವ ಜಾಗ ಪತ್ತೆ ಮಾಡಲಾಗು ವುದು. ದೂರು ಅಪ್ ಲೋಡ್ ನಡೆಸಿದ ತಕ್ಷಣವೇ ಯೂನಿಕ್ ಐಡಿ ಒಂದು ಲಭಿಸಲಿದೆ. ನಂತರ ಈ ಮೂಲಕ ಈ ಸಂಬಂಧ ಏನೇನು ಕ್ರಮ ನಡೆಸಲಾಯಿತು ಎಂದು ತಿಳಿಯಲು ದೂರುದಾತನಿಗೆ ಸಾಧ್ಯ. 100 ನಿಮಿಷಗಳ ಅವ ಧಿಯೊಳಗೆ ದೂರಿಗೆ ಪರಿಹಾರ ಲಭಿಸಲಿದೆ. ಒಬ್ಬರಿಗೆ ಒಂದಕ್ಕಿಂತ ಅ ಧಿಕ ನೀತಿಸಂಹಿತೆ ಉಲ್ಲಂಘನೆ ಸಂಬಂಧ ದೂರು ನೀಡಲು ಸಾಧ್ಯವಾಗುವುದು ಎಂಬುದು ಈ ಆ್ಯಪ್ನ ವಿಶೇಷತೆಯಾಗಿದೆ. ದೂರುದಾತನ ಹೆಸರು, ಮಾಹಿತಿಗಳನ್ನು ಗುಪ್ತವಾಗಿರಿಸಲಾಗುವುದು.
ಟೋಲ್ ಫ್ರೀ ನಂಬ್ರ 1950
ಅಕ್ರಮ ಜಾಹೀರಾತು ಗಮನಿಸಿದಲ್ಲಿ ಸಾರ್ವಜನಿಕರು “1950′ ಟೋಲ್ ಫ್ರೀ ನಂಬ್ರಕ್ಕೆ ಕರೆಮಾಡಿ ದೂರು ಸಲ್ಲಿಸ ಬಹುದು. ಚುನಾವಣೆ ಆಯೋಗದ ದೂರಿನ ಪ್ರಕಾರ ಜಿಲ್ಲಾ ಧಿಕಾರಿ ಕಚೇರಿ ಯಲ್ಲಿ ಆರಂಭಿಸಲಾದ ಕಾಲ್ ಸೆಂಟರ್ ಮೂಲಕ ದೂರು ಸ್ವೀಕರಿಸಲಾಗುವುದು. ಬೆಳಗ್ಗೆ 9ರಿಂದ ರಾತ್ರಿ 9 ಗಂಟೆ ವರೆಗೆ ಈ ಕೇಂದ್ರ ಚಟುವಟಿಕೆ ನಡೆಸುತ್ತಿದ್ದು, ಲಭಿಸುವ ದೂರು ನೋಂದಣಿ ನಡೆಸಿ ಸಂಬಂಧಪಟ್ಟವರಿಗೆ ಹಸ್ತಾಂತರಿ ಸಲಾಗುವುದು. ಜತೆಗೆ ಮತದಾತರ ಸಂಶಯಗಳನ್ನು ಪರಿಹರಿಸಲಾಗುವುದು.
ನಿಯಂತ್ರಣ ಕೊಠಡಿ
ಚುನಾವಣೆ ಸಂಬಂಧ ದೂರುಗಳಿದ್ದಲ್ಲಿ, ಅಕ್ರಮ ಜಾಹೀರಾತು ಸಂಬಂಧ ದೂರುಗಳಿದ್ದಲ್ಲಿ ಸಾರ್ವಜನಿಕರು ಚುನಾವಣೆ ನಿಯಂತ್ರಣ ಕೊಠಡಿಗೆ ದೂರು ನೀಡಬಹುದು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಚಟುವಟಿಕೆ ನಡೆಸುತ್ತಿರುವ ನಿಯಂತ್ರಣ ಕೊಠಡಿಯ ದೂರುವಾಣಿ ಸಂಖ್ಯೆ: 04994-255825.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ