ವರಹಾವತಾರ


Team Udayavani, Mar 9, 2017, 3:45 AM IST

purana.jpg

ಸನಕ ಮೊದಲಾದ ನಾಲ್ವರು ಋಷಿಗಳು ವಿಷ್ಣುವನ್ನು ಕಾಣಲು ವೈಕುಂಠಕ್ಕೆ ಹೋದರು. ವಿಷ್ಣುವಿನ ಅಂತಃಪುರದ ಮಹಾದ್ವಾರದಲ್ಲಿ ಜಯ ಮತ್ತು ವಿಜಯ ಎಂಬ ದ್ವಾರಪಾಲಕರು ನಿಂತಿದ್ದರು. ಅವರು ಋಷಿಗಳನ್ನು ತಡೆದರು. ಋಷಿಗಳು ಕೋಪದಿಂದ ಅವರಿಗೆ ಭೂಲೋಕದಲ್ಲಿ ಹುಟ್ಟುವಂತೆ ಶಾಪ ಕೊಟ್ಟರು. ಜಯವಿಜಯರಿಗೆ ಪಶ್ಚಾತ್ತಾಪವಾಯಿತು. ಋಷಿಗಳಿಗೂ ತಾವು ಕೋಪ ಮಾಡಿಕೊಂಡದ್ದಕ್ಕೆ ವಿಷಾದವಾಯಿತು. ಆ ಹೊತ್ತಿಗೆ ಮಹಾವಿಷ್ಣುವು ಅಲ್ಲಿ ಕಾಣಿಸಿಕೊಂಡು, ಜಯ ವಿಜಯರು ಭೂಲೋಕದಲ್ಲಿ ಹುಟ್ಟಿ ತನ್ನನ್ನು ದ್ವೇಷಿಸುತ್ತ, ಆ ದ್ವೇಷದಿಂದ ಯಾವಾಗಲೂ ತನ್ನ ವಿಷಯವನ್ನೇ ಯೋಚಿಸುತ್ತಾ ಕಡೆಗೆ ತನ್ನ ಬಳಿಗೇ ಹಿಂದಿರುಗುವರೆಂದು ಹೇಳಿದನು.

ಜಯವಿಜಯರು ಭೋಲೋಕದಲ್ಲಿ ಹಿರಣ್ಯಾಕ್ಷ, ಹಿರಣ್ಯ ಕಶಿಪು ಹೆಸರುಗಳನ್ನು ಪಡೆದರು. ಪರ್ವತಾಕಾರದಲ್ಲಿ ಬೆಳೆದರು. ಹಿರಣ್ಯ ಕಶಿಪು ಬ್ರಹ್ಮನನ್ನು ಕುರಿತು ಉಗ್ರ ತಪಸ್ಸು ಮಾಡಿ ದೇವತೆಗಳು, ಮನುಷ್ಯರು ಯಾರಿಂದಲೂ ತನಗೆ ಸಾವು ಬರದಂತೆ ವರವನ್ನು ಪಡೆದನು. ಎಲ್ಲ ಲೋಕಪಾಲಕರನ್ನು ಜಯಿಸಿ ಮೂರು ಲೋಕಗಳಿಗೂ ಸಾರ್ವಭೌಮನಾದನು. ಹಿರಣ್ಯಾಕ್ಷನು ಅವನಿಗಿಂತ ಬಲಶಾಲಿಯಾಗಿ ಮೆರೆದ. ಅವನು ಸಮುದ್ರರಾಜನಾದ ವರುಣನನ್ನು ಯುದ್ಧಕ್ಕೆ ಕರೆದ.

ವರುಣನು, “ನಿನ್ನೊಡನೆ ಪರಮಾತ್ಮ ಮಾತ್ರ ಯುದ್ಧ ಮಾಡಬಲ್ಲ’ ಎಂದು ಹೇಳಿದ. ಹಿರಣ್ಯಾಕ್ಷನು ಪರಮಾತ್ಮನನ್ನು ಹುಡುಕುತ್ತಾ ಹೊರಟ. ಭಯಂಕರ ರೂಪದ ನರಾಹವು ಭೂಮಿಯನ್ನು ತನ್ನ ಕೋರೆ ದವಡೆಯ ಮೇಲೆ ಭೂಮಿಯನ್ನು ಎಲ್ಲಿ ತೆಗೆದುಕೊಂಡು ಹೋಗುತ್ತೀಯೆ? ಇಲ್ಲಿಯೇ ಇಟ್ಟು ಹಿಂದಕ್ಕೆ ವರಾಹಮೂರ್ತಿಯು ಅವನನ್ನು ಲಕ್ಷ್ಯ ಮಾಡಲಿಲ್ಲ.

ಹಿರಣ್ಯಾಕ್ಷನು ಅದನ್ನು ಅಟ್ಟಿಸಿಕೊಂಡು ಹೋಗಿ ಕೆಣಕಿದ. ಅವರಿಬ್ಬರಿಗೂ ಭಯಂಕರ ಹೋರಾಟವಾಯಿತು. ರಾಕ್ಷಸನು ವರಾಹಮೂರ್ತಿಯ ಗದೆಯನ್ನು ನೆಲಕ್ಕೆ ಕೆಡವಿದ. ವರಾಹಮೂರ್ತಿಯು ಚಕ್ರಾಯುಧವನ್ನು ಪ್ರಯೋಗಿಸಿದ. ಅದರಿಂದ ಹಿರಣ್ಯಾಕ್ಷನ ಎಲ್ಲ ಆಯುಧಗಳು ವ್ಯರ್ಥವಾದವು. ಹಿರಣ್ಯಾಕ್ಷನು ವರಾಹಮೂರ್ತಿಯನ್ನು ತನ್ನ ತೋಳುಗಳಲ್ಲಿ ಹಿಡಿದು ಅಮುಕಿ ಕೊಲ್ಲಲು ಪ್ರಯತ್ನಿಸಿದನು. ವರಾಹಮೂರ್ತಿಯು ಅವನ ಕಪಾಷಕ್ಕೆ ಹೊಡೆದ. ಹಿರಣ್ಯಾಕ್ಷನು ಕೆಳಕ್ಕೆ ಬಿದ್ದು ಪ್ರಾಣ ಬಿಟ್ಟ. ಭೂಮಿಯು ತನ್ನ ಸ್ಥಾನವನ್ನು ಸೇರಿತು.

– ಪ್ರೊ. ಎಲ್‌. ಎಸ್‌. ಶೇಷಗಿರಿರಾವ್‌ ಅವರ
“ಕಿರಿಯರ ಭಾಗವತ’ ಪುಸ್ತಕದಿಂದ)

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.