ಹರಿಕತೆ ದಾಸಯ್ಯ ಮತ್ತು ಕೆಂಡದ ಮರ!


Team Udayavani, Apr 20, 2017, 3:45 AM IST

harikate-dasayya.jpg

ಒಂದೂರಿನಲ್ಲಿ ವೆಂಕಟದಾಸರೆಂಬ ಹರಿಕಥೆ ದಾಸರಿದ್ದರು. ಅವರ ಹರಿಕೀರ್ತನೆಯೆಂದರೆ ಬಹುಪ್ರಸಿದ್ಧ. ಬೇರೆಬೇರೆ ಊರುಗಳಲ್ಲಿ ಹಬ್ಬ ಹರಿದಿನ, ವಿಶೇಷ ಸಂದರ್ಭಗಳಲ್ಲಿ ಅವರದೇ ಹರಿಕೀರ್ತನೆ. ಅದೊಂದು ಏಕಾದಶಿಯ ದಿನ. ಪಕ್ಕದ ಊರಿನ ದೇವಾಲಯದ ಸಭಾಂಗಣದಲ್ಲಿ ವೆಂಕಟದಾಸರ ಹರಿಕೀರ್ತನೆ. ಯಾವಾಗಲೂ ಏನಾದರೊಂದು ಕಾರಣಕ್ಕೆ ಕೇಳಲಿಕ್ಕೆ ಆಗಿರಲಿಲ್ಲ. ಇಂದಾದರೂ ಕೇಳ್ಳೋಣ ಎಂದು ದಾಸರ ಹೆಂಡತಿಯೂ ಆ ದಿನ ಊಟಕ್ಕೆ ಅಡುಗೆಯನ್ನೆಲ್ಲ ಸಿದ್ಧ ಮಾಡಿಟ್ಟು ಹರಿಕೀರ್ತನೆ ಕೇಳಲು ಬಂದು ಕುಳಿತಿದ್ದಳು. ದಾಸರು ಏಕಾದಶಿ ದಿನದ ಮಹಾತ್ಮೆಯನ್ನು ವರ್ಣಿಸುತ್ತಾ ಹೇಳುತ್ತಿದ್ದರು… ಏಕಾದಶಿ ದಿನ ಉಪವಾಸ ಮಾಡಬೇಕು. ಬರೇ ನೀರು ಕುಡಿದುಕೊಂಡು ಇರಬೇಕು. ಉಪವಾಸ ಮಾಡಿದರೆ ಮಹಾಪುಣ್ಯ. ಅದರಿಂದ ಸ್ವರ್ಗಸುಖ ಲಭಿಸುತ್ತದೆ. ಈ ಪುಣ್ಯ ದಿನದಂದು ಊಟ ಮಾಡುವುದು, ಅದರಲ್ಲೂ ಭಕ್ಷ್ಯ ಬೋಜನಗಳನ್ನು ಸೇವಿಸುವುದು ಮಹಾಪಾಪ. ಅಂಥವರಿಗೆ ಘೋರ ನರಕ ಪ್ರಾಪ್ತಿಯಾಗುತ್ತದೆ. ಯಮದೂತರು ಉಗ್ರಶಿಕ್ಷೆಯನ್ನು ವಿಧಿಸುತ್ತಾರೆ. ನರಕದಲ್ಲಿ ಒಂದು ಅಗ್ನಿಯ ವೃಕ್ಷ ಇದೆ. ಅದು ನಿಗಿನಿಗಿ ಕೆಂಡದಂತೆ ಉರಿಯುತ್ತಾ ಇರುತ್ತದೆ.  ಏಕಾದಶಿಯಂದು ಉಪವಾಸ ಮಾಡದವರು ಕೆಂಡದ ಮರವನ್ನು ಅಪ್ಪಿಕೊಳ್ಳಬೇಕು. ಅವರ ಎರಡೂ ಕೈಗಳನ್ನು ಇನ್ನೊಂದು ಬದಿಯಿಂದ ಹಿಡಿದುಕೊಂಡು ಯಮದೂತರು ಮಜ್ಜಿಗೆ ಕಡೆದಂತೆ ಕಡೆಯುತ್ತಾರೆ. ಆಗ ಪಾಪಿಗಳು ಬೆಂಕಿಯ ಉರಿಯನ್ನು ಸಹಿಸಲಾರದೆ ಆಕ್ರಂದನ ಮಾಡುತ್ತಾರೆ..’ ಎಂದು ಮುಂತಾಗಿ ವರ್ಣಿಸಿ ಮಂಗಳ ಹಾಡಿದರು ದಾಸರು. ಹರಿಕಥೆ ಮುಗಿಯಿತು. ಭಯಭಕ್ತಿಯಿಂದ ಜನರು ಕೈ ಮುಗಿದರು. 

ದಾಸರ ಹೆಂಡತಿ ಲಗುಬಗೆಯಿಂದ ಮನೆಗೆ ಧಾವಿಸಿದರು. ಹಿಂದೆಯೇ ದಾಸರೂ ದಕ್ಷಿಣೆ ಸ್ವೀಕರಿಸಿ ಸ್ವಲ್ಪ ಹೊತ್ತಿನಲ್ಲಿಯೇ ಮನೆಗೆ ಮರಳಿದರು. ಬೆಳಗಿನಿಂದ ಉಪವಾಸ ಇದ್ದ ದಾಸರಿಗೆ ಹೊಟ್ಟೆ ತಾಳ ಹಾಕುತ್ತಿತ್ತು. ಹರಿಕಥೆ ಮಾಡುವಾಗಲೂ ಅವರಿಗೆ ಹೊಟ್ಟೆಯದ್ದೇ ಯೋಚನೆ. ಹಸಿವಿನಿಂದ ತುಂಬಾ ಬಳಲಿದ್ದ ಅವರು ಹೆಂಡತಿಗೆ ಹೇಳಿದರು “ಬೇಗ ತಟ್ಟೆ ಹಾಕು. ಕೈಕಾಲು ಮುಖ ತೊಳೆದುಕೊಂಡು ಬರುತ್ತೇನೆ..’ ಹೆಂಡತಿ ದೇವರ ಕೋಣೆಯಿಂದಲೇ ಕೂಗಿ ಹೇಳಿದಳು: “ನೀವು ಹೇಳಿದಂತೆ ಸಂಜೆ ಅಡುಗೆ ಮಾಡಿದ್ದೆ. ಉಪವಾಸಕ್ಕೆ ಶ್ಯಾವಿಗೆ ಪಾಯಸವನ್ನೂ ಮಾಡಿದ್ದೆ. ಆದರೆ ನಿಮ್ಮ ಹರಿಕಥೆ ಕೇಳಿದ ಮೇಲೆ ಭಯವಾಯಿತು. ಬೆಂಕಿ ಮರ ಅಪ್ಪುವ ಶಿಕ್ಷೆ ನನಗೆ ಬೇಡ, ನಿಮಗೂ ಬೇಡ. ಅದಕ್ಕೆ ಮಾಡಿಟ್ಟ ಭಕ್ಷಯ ಭೋಜನವನ್ನು ಹೊರಗೆ ಚೆಲ್ಲಿಬಿಟ್ಟೆ.’ ಎಂದಳು. ದಾಸರ ಜಂಘಾಬಲವೇ ಉಡುಗಿ ಹೋಯಿತು. ಕುಸಿದು ಕುಳಿತ ಅವರು ಹೇಳಿದರು “ಆ ಬೆಂಕಿಯ ಮರವನ್ನು ಎಲ್ಲರೂ ಅಪ್ಪಿ ತಣ್ಣಗಾಗಿ ಹೋಗಿರುತ್ತಿತ್ತು. ಆದ್ದರಿಂದ ನಾವು ಊಟ ಮಾಡಬಹುದಿತ್ತು. ಪಾಯಸ ಸವಿಯಬಹುದಿತ್ತು’ ಎಂದು ನಿಡುಸುಯ್ದರು. ಹೆಂಡತಿ ದಾಸರ ಮುಖವನ್ನೇ ಮಿಕಿ ಮಿಕಿ ನೋಡುತ್ತ ನಿಂತರು.

– ವನರಾಗ ಶ‌ರ್ಮಾ

ಟಾಪ್ ನ್ಯೂಸ್

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

13-good-friday

ಶುಭ ಶುಕ್ರವಾರ: ಸಾಮಾಜಿಕ ನ್ಯಾಯದ ಪ್ರತೀಕ ಯೇಸು ಕ್ರಿಸ್ತ

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

12-kejriwal

Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.