ಹರಿಕತೆ ದಾಸಯ್ಯ ಮತ್ತು ಕೆಂಡದ ಮರ!


Team Udayavani, Apr 20, 2017, 3:45 AM IST

harikate-dasayya.jpg

ಒಂದೂರಿನಲ್ಲಿ ವೆಂಕಟದಾಸರೆಂಬ ಹರಿಕಥೆ ದಾಸರಿದ್ದರು. ಅವರ ಹರಿಕೀರ್ತನೆಯೆಂದರೆ ಬಹುಪ್ರಸಿದ್ಧ. ಬೇರೆಬೇರೆ ಊರುಗಳಲ್ಲಿ ಹಬ್ಬ ಹರಿದಿನ, ವಿಶೇಷ ಸಂದರ್ಭಗಳಲ್ಲಿ ಅವರದೇ ಹರಿಕೀರ್ತನೆ. ಅದೊಂದು ಏಕಾದಶಿಯ ದಿನ. ಪಕ್ಕದ ಊರಿನ ದೇವಾಲಯದ ಸಭಾಂಗಣದಲ್ಲಿ ವೆಂಕಟದಾಸರ ಹರಿಕೀರ್ತನೆ. ಯಾವಾಗಲೂ ಏನಾದರೊಂದು ಕಾರಣಕ್ಕೆ ಕೇಳಲಿಕ್ಕೆ ಆಗಿರಲಿಲ್ಲ. ಇಂದಾದರೂ ಕೇಳ್ಳೋಣ ಎಂದು ದಾಸರ ಹೆಂಡತಿಯೂ ಆ ದಿನ ಊಟಕ್ಕೆ ಅಡುಗೆಯನ್ನೆಲ್ಲ ಸಿದ್ಧ ಮಾಡಿಟ್ಟು ಹರಿಕೀರ್ತನೆ ಕೇಳಲು ಬಂದು ಕುಳಿತಿದ್ದಳು. ದಾಸರು ಏಕಾದಶಿ ದಿನದ ಮಹಾತ್ಮೆಯನ್ನು ವರ್ಣಿಸುತ್ತಾ ಹೇಳುತ್ತಿದ್ದರು… ಏಕಾದಶಿ ದಿನ ಉಪವಾಸ ಮಾಡಬೇಕು. ಬರೇ ನೀರು ಕುಡಿದುಕೊಂಡು ಇರಬೇಕು. ಉಪವಾಸ ಮಾಡಿದರೆ ಮಹಾಪುಣ್ಯ. ಅದರಿಂದ ಸ್ವರ್ಗಸುಖ ಲಭಿಸುತ್ತದೆ. ಈ ಪುಣ್ಯ ದಿನದಂದು ಊಟ ಮಾಡುವುದು, ಅದರಲ್ಲೂ ಭಕ್ಷ್ಯ ಬೋಜನಗಳನ್ನು ಸೇವಿಸುವುದು ಮಹಾಪಾಪ. ಅಂಥವರಿಗೆ ಘೋರ ನರಕ ಪ್ರಾಪ್ತಿಯಾಗುತ್ತದೆ. ಯಮದೂತರು ಉಗ್ರಶಿಕ್ಷೆಯನ್ನು ವಿಧಿಸುತ್ತಾರೆ. ನರಕದಲ್ಲಿ ಒಂದು ಅಗ್ನಿಯ ವೃಕ್ಷ ಇದೆ. ಅದು ನಿಗಿನಿಗಿ ಕೆಂಡದಂತೆ ಉರಿಯುತ್ತಾ ಇರುತ್ತದೆ.  ಏಕಾದಶಿಯಂದು ಉಪವಾಸ ಮಾಡದವರು ಕೆಂಡದ ಮರವನ್ನು ಅಪ್ಪಿಕೊಳ್ಳಬೇಕು. ಅವರ ಎರಡೂ ಕೈಗಳನ್ನು ಇನ್ನೊಂದು ಬದಿಯಿಂದ ಹಿಡಿದುಕೊಂಡು ಯಮದೂತರು ಮಜ್ಜಿಗೆ ಕಡೆದಂತೆ ಕಡೆಯುತ್ತಾರೆ. ಆಗ ಪಾಪಿಗಳು ಬೆಂಕಿಯ ಉರಿಯನ್ನು ಸಹಿಸಲಾರದೆ ಆಕ್ರಂದನ ಮಾಡುತ್ತಾರೆ..’ ಎಂದು ಮುಂತಾಗಿ ವರ್ಣಿಸಿ ಮಂಗಳ ಹಾಡಿದರು ದಾಸರು. ಹರಿಕಥೆ ಮುಗಿಯಿತು. ಭಯಭಕ್ತಿಯಿಂದ ಜನರು ಕೈ ಮುಗಿದರು. 

ದಾಸರ ಹೆಂಡತಿ ಲಗುಬಗೆಯಿಂದ ಮನೆಗೆ ಧಾವಿಸಿದರು. ಹಿಂದೆಯೇ ದಾಸರೂ ದಕ್ಷಿಣೆ ಸ್ವೀಕರಿಸಿ ಸ್ವಲ್ಪ ಹೊತ್ತಿನಲ್ಲಿಯೇ ಮನೆಗೆ ಮರಳಿದರು. ಬೆಳಗಿನಿಂದ ಉಪವಾಸ ಇದ್ದ ದಾಸರಿಗೆ ಹೊಟ್ಟೆ ತಾಳ ಹಾಕುತ್ತಿತ್ತು. ಹರಿಕಥೆ ಮಾಡುವಾಗಲೂ ಅವರಿಗೆ ಹೊಟ್ಟೆಯದ್ದೇ ಯೋಚನೆ. ಹಸಿವಿನಿಂದ ತುಂಬಾ ಬಳಲಿದ್ದ ಅವರು ಹೆಂಡತಿಗೆ ಹೇಳಿದರು “ಬೇಗ ತಟ್ಟೆ ಹಾಕು. ಕೈಕಾಲು ಮುಖ ತೊಳೆದುಕೊಂಡು ಬರುತ್ತೇನೆ..’ ಹೆಂಡತಿ ದೇವರ ಕೋಣೆಯಿಂದಲೇ ಕೂಗಿ ಹೇಳಿದಳು: “ನೀವು ಹೇಳಿದಂತೆ ಸಂಜೆ ಅಡುಗೆ ಮಾಡಿದ್ದೆ. ಉಪವಾಸಕ್ಕೆ ಶ್ಯಾವಿಗೆ ಪಾಯಸವನ್ನೂ ಮಾಡಿದ್ದೆ. ಆದರೆ ನಿಮ್ಮ ಹರಿಕಥೆ ಕೇಳಿದ ಮೇಲೆ ಭಯವಾಯಿತು. ಬೆಂಕಿ ಮರ ಅಪ್ಪುವ ಶಿಕ್ಷೆ ನನಗೆ ಬೇಡ, ನಿಮಗೂ ಬೇಡ. ಅದಕ್ಕೆ ಮಾಡಿಟ್ಟ ಭಕ್ಷಯ ಭೋಜನವನ್ನು ಹೊರಗೆ ಚೆಲ್ಲಿಬಿಟ್ಟೆ.’ ಎಂದಳು. ದಾಸರ ಜಂಘಾಬಲವೇ ಉಡುಗಿ ಹೋಯಿತು. ಕುಸಿದು ಕುಳಿತ ಅವರು ಹೇಳಿದರು “ಆ ಬೆಂಕಿಯ ಮರವನ್ನು ಎಲ್ಲರೂ ಅಪ್ಪಿ ತಣ್ಣಗಾಗಿ ಹೋಗಿರುತ್ತಿತ್ತು. ಆದ್ದರಿಂದ ನಾವು ಊಟ ಮಾಡಬಹುದಿತ್ತು. ಪಾಯಸ ಸವಿಯಬಹುದಿತ್ತು’ ಎಂದು ನಿಡುಸುಯ್ದರು. ಹೆಂಡತಿ ದಾಸರ ಮುಖವನ್ನೇ ಮಿಕಿ ಮಿಕಿ ನೋಡುತ್ತ ನಿಂತರು.

– ವನರಾಗ ಶ‌ರ್ಮಾ

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.