ಗುರುವಿಗೇ ತಿರುಮಂತ್ರ ಹಾಕಿದ ಹುಲಿ


Team Udayavani, May 25, 2017, 10:55 AM IST

chinnari-page-1.jpg

ಅನೇಕ ವರ್ಷಗಳ ಹಿಂದೆ ಕಾಡಿನಲ್ಲಿ ಹುಲಿ ಇತ್ತು. ಅದು ಒಂಟಿಯಾಗಿ ಬೆಳೆದಿತ್ತು. ಅದಕ್ಕೆ ಜೊತೆಗಾರುರು ಯಾರೂ ಇರಲಿಲ್ಲ. ಎಲ್ಲರೂ ಪಕ್ಕದ ಕಾಡಿಗೆ ಇದೊಂದನ್ನು ಬಿಟ್ಟು ತೆರಳಿದ್ದರು. ಅದು ಸದಾ ಕಾಲ ಮರದಡಿ ನೆರಳಿನಲ್ಲಿ ಸೋಮಾರಿಯಾಗಿ ಮಲಗಿಕೊಂಡಿರುತ್ತಿತ್ತು. ಹೀಗೇ ಮಲಗಿರುವಾಗ ಅದರತ್ತ ಕಾಡುಬೆಕ್ಕೊಂದು ಬಂದಿತು.”ಏನು ಹುಲಿರಾಯರೇ, ಕ್ಷೇಮವೇ? ಹಾಯಾಗಿ ನಿದ್ದೆ ಮಾಡುತ್ತಿರುವಿರಲ್ಲಾ… ಈಗ ತಾನೇ ಭರ್ಜರಿ ಭೋಜನ ಮುಗಿಸಿರುವ ಹಾಗೆ ಕಾಣುತ್ತಿದೆ.’ 

ಕಾಡುಬೆಕ್ಕಿನ ಮಾತಿಗೆ ಹುಸಿನಕ್ಕ ಹುಲಿ “ಅಯ್ಯೋ ನನಗೆ ಬೇಟೆಯಾಡಲು ಬಂದರೆ ತಾನೇ ಭರ್ಜರಿ ಭೋಜನ ಮಾಡುವುದಕ್ಕೆ! ಹಸಿವಿನಿಂದ ಸುಸ್ತಾಗಿ ಇಲ್ಲಿ ಕುಳಿತಿದ್ದೇನೆ’ ಎಂದಿತು. ಆಶ್ಚರ್ಯಗೊಂಡ ಕಾಡುಬೆಕ್ಕಿಗೆ ಹುಲಿಯ ಸ್ಥಿತಿ ನೋಡಿ ಬೇಸರವಾಯಿತು. ಅದು ಬೇಟೆಯ ವಿದ್ಯೆಯನ್ನು ಕಲಿಸಿಕೊಡಲು ಮುಂದಾಯಿತು. ಆ ದಿನದಿಂದ ಹುಲಿಗೆ ಕಠಿಣ ತರಬೇತಿ ಪ್ರಾರಂಭವಾಯಿತು. ಅನೇಕ ತಂತ್ರಗಳನ್ನು ಕಾಡು ಬೆಕ್ಕು, ಹುಲಿಗೆ ಕಲಿಸಿತು. ದಿನೇ ದಿನೇ ಕಲಿತ ವಿದ್ಯೆಯನ್ನು ಅಬ್ಯಾಸ ಮಾಡುತ್ತಾ ಮಾಡುತ್ತಾ ಹುಲಿರಾಯ ಬೇಟೆಯಲ್ಲಿ ಪಳಗಿಬಿಟ್ಟಿತು. ಅದೊಂದು ದಿನ ಹುಲಿಗೆ ತೀವ್ರ ಹಸಿವು. ಅದು ತನ್ನ ಗುರು ಕಾಡು ಬೆಕ್ಕಿನ ಬಳಿಗೆ ತೆರಳಿ ತನಗೆ ಆಹಾರ ಬೇಕೆಂದು ಕೇಳಿತು. ಕಾಡುಬೆಕ್ಕು “ಹಾಗಾದರೆ ನಿನ್ನ ಬೇಟೆಯ ಸಾಮರ್ಥಯವನ್ನು ಪರೀಕ್ಷಿಸಲು ಇದೇ ಸುಸಂದರ್ಭ’ ಎಂದಿತು. ಗಹಗಹಿಸಿ ನಕ್ಕ ಹುಲಿ ಕಾಡು ಬೆಕ್ಕಿನತ್ತ ದಾವಿಸಿತು. ಗಾಬರಿಯಾಗ ಕಾಡುಬೆಕ್ಕು ತನ್ನ ಬಳಿ ಏಕೆ ಬರುತ್ತಿದ್ದೀಯೆಂದು ಕೇಳಿದಾಗ “ನನ್ನ ಮೊದಲ ಪ್ರಯೋಗ ನಿನ್ನ ಮೇಲೆ ಆಗಲಿ. ನಿನ್ನನ್ನೇ ಬೇಟೆಯಾಡಿ ಹಸಿವು ತೀರಿಸಿಕೊಳ್ಳುತ್ತೇನೆ’ ಎಂದಿತು ಹುಲಿ. ಭಯಗೊಂಡ ಕಾಡುಬೆಕ್ಕು “ಕಲಿತ ವಿದ್ಯೆಯನ್ನು ಗುರುವಿನ ಮೇಲೆ ಪ್ರಯೋಗಿಸುತ್ತಿರುವೆಯಲ್ಲಾ ಇದು ಸರಿಯೇ?’ ಎಂದು ಕೇಳಿತು. ಕಾಡುಬೆಕ್ಕಿನ ಯಾವ ಮಾತುಗಳನ್ನು ಕೇಳಿಸಿಕೊಳ್ಳುವ ಸಂಯಮ ಹುಲಿಗಿರಲಿಲ್ಲ. ನಿನ್ನ ಎಲ್ಲಾ ವಿದ್ಯೆಗಳೂ ನನಗೆ ಸಿದ್ಧಿಸಿದೆ ನೀನು ಏನೇ ಮಾಡಿದರೂ ನನ್ನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ದಾಳಿ ಮಾಡಲು ಮುಂದಾಯಿತು. “ಅಯ್ಯೋ ಹುಲಿರಾಯ, ನಿನಗೆ ನಾನು ಎಲ್ಲಾ ವಿದ್ಯೆಗಳನ್ನೂ ಕಲಿಸಿರುವೆ ಎಂದು ತಿಳಿದುಕೊಂಡಿರುವೆಯಲ್ಲಾ. ಅದು ತಪ್ಪು ಒಂದು ವಿದ್ಯೆಯನ್ನು ನಿನಗೆ ಕಲಿಸಿರಲಿಲ್ಲ. ಬೇಟೆಯಿಂದ ತಪ್ಪಿಸಿಕೊಳ್ಳುವ ವಿದ್ಯೆ  ನಿನಗಿನ್ನೂ ತಿಳಿದಿಲ್ಲ. ನನಗೆ ತಿಳಿದಿದೆ’ ಎಂದು ನಕ್ಕು ಒಡನೆಯೇ ಹತ್ತಿರವೇ ಇದ್ದ ಮರವನ್ನು ಸರಸರನೇ ಏರಿತು. ಹುಲಿರಾಯ ಪೆಚ್ಚಾಗಿ ತನ್ನನ್ನು ತಾನೇ ಹಳಿದುಕೊಳ್ಳುತ್ತಾ ಕಾಡಿನಲ್ಲಿ ಮರೆಯಾಯಿತು.

– ಅಮರಯ್ನಾ ಪತ್ರಿಮಠ, ಯಾದಗಿರಿ

ಟಾಪ್ ನ್ಯೂಸ್

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯಿತಿ ಸಿದ್ದೇಶ್ವರ

Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯಿತಿ ಸಿದ್ದೇಶ್ವರ

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.