ಜಾಣೆಯ ಕಥೆಗೆ ಮನಸೋತ ರಾಜ


Team Udayavani, Jun 29, 2017, 3:45 AM IST

lead.jpg

ಒಂದೂರಿನಲ್ಲಿ ಒಬ್ಬ ರಾಜನಿದ್ದ. ಅವನ ಹೆಸರು ಶಹರ್ಯಾರ್‌. ರಾಜನಿಗೆ ತನ್ನ ತಮ್ಮ ಶಾಜಮಾನ್‌ ಎಂದರೆ ಬಲುಪ್ರೀತಿ. ಇಬ್ಬರು ಸಹೋದರಿಯರನ್ನು ನೋಡಿ ಶಹರ್ಯಾರ್‌ ಮತ್ತು ಶಾಜಮಾನ್‌ ಮದುವೆಯಾಗುತ್ತಾರೆ. ಆದರೆ, ಆ ಸಹೋದರಿಯರಿಬ್ಬರೂ ದುಷ್ಟರಾಗಿರುತ್ತಾರೆ. ಒಂದು ದಿನ ಶಾಜಮಾನ್‌ನ ಪತ್ನಿ, ತನ್ನ ಪತಿಯನ್ನೇ ಕೊಲೆ ಮಾಡುತ್ತಾಳೆ. ಈ ವಿಚಾರ ಗೊತ್ತಾಗುತ್ತಿದ್ದಂತೆ ರಾಜ ಶಹರ್ಯಾರ್‌ಗೆ ಸಹಿಸಲು ಆಗುವುದಿಲ್ಲ. ಪ್ರೀತಿಯ ತಮ್ಮನನ್ನು ಕಳೆದುಕೊಂಡ ನೋವು ಕಾಡಲಾರಂಭಿಸುತ್ತದೆ. ಆಕ್ರೋಶಭರಿತನಾದ ಶಹರ್ಯಾರ್‌ ತನ್ನ ತಮ್ಮನ ಕೊಲೆಗೆ ಶಿಕ್ಷೆಯಾಗಿ ಆತನ ಪತ್ನಿಯನ್ನು ಕೊಲ್ಲುವಂತೆ ಆದೇಶಿಸುತ್ತಾನೆ.

ಅದೇ ಸಮಯದಲ್ಲಿ ಆಸ್ಥಾನಕ್ಕೆ ಬಂದ ಹಿರಿಯರನ್ನು ರಾಜ ಶಹರ್ಯಾರ್‌ನ ಪತ್ನಿಯೂ ನಿಂದಿಸಿ, ಅವಮಾನಿಸಿ ಕಳುಹಿಸುತ್ತಾಳೆ. ಮೊದಲೇ ಕೋಪದಲ್ಲಿದ್ದ ರಾಜ ಶಹರ್ಯಾರ್‌ಗೆ ತನ್ನ ಪತ್ನಿಯ ವರ್ತನೆಯಿಂದ ಸಿಟ್ಟು ನೆತ್ತಿಗೇರುತ್ತದೆ. ಆಕೆಯನ್ನೂ ಕೊಲ್ಲುವಂತೆ ಆದೇಶಿಸುತ್ತಾನೆ. ತನ್ನ ಹಾಗೂ ತಮ್ಮನ ಪತ್ನಿಯರನ್ನು ಕೊಂದರೂ, ರಾಜನ ಕೋಪ ಇಳಿಯುವುದಿಲ್ಲ. ಮಹಿಳೆಯರೆಲ್ಲರೂ ಕೆಟ್ಟವರು ಎಂದು ತಿಳಿಯುವ ರಾಜ ಶಹರ್ಯಾರ್‌, ತನ್ನ ರಾಜ್ಯದಲ್ಲಿದ್ದ ಎಲ್ಲ ಮಹಿಳೆಯರನ್ನೂ ಕೊಲ್ಲುವ ನಿರ್ಧಾರಕ್ಕೆ ಬರುತ್ತಾನೆ. ಪ್ರತಿ ದಿನಕ್ಕೊಬ್ಬ ಯುವತಿಯನ್ನು ಮದುವೆಯಾಗಿ, ಆ ದಿನ ರಾತ್ರಿಯೇ ಅವಳನ್ನು ಕೊಲ್ಲುತ್ತೇನೆ ಎಂದು ಶಪಥ ಮಾಡುತ್ತಾನೆ.

ಮಾರನೇ ದಿನದಿಂದಲೇ ಈ ನರಹತ್ಯೆ ಆರಂಭವಾಗುತ್ತದೆ. ಪ್ರತಿ ದಿನ ಒಬ್ಬಳನ್ನು ಮದುವೆಯಾಗಿ ಕೊಲ್ಲಲು ಶುರುವಿಡುತ್ತಾನೆ. ಹೀಗೇ ದಿನಗಳು ಉರುಳುತ್ತವೆ. ಒಬ್ಬಳು ಯುವತಿ ಹೊರತುಪಡಿಸಿ ರಾಜ್ಯದಲ್ಲಿನ ಉಳಿದ ಎಲ್ಲ ಯುವತಿಯರೂ ಸಾಯುತ್ತಾರೆ. ಉಳಿದಿರುವ ಏಕೈಕ ಯುವತಿಯೆಂದರೆ ಆ ರಾಜ್ಯದ ಮಂತ್ರಿಯ ಮಗಳು ಶಾಹಿತಾ ಬಾನು. ಆಕೆ ಬುದ್ಧಿವಂತೆ ಮತ್ತು ಕಥೆ ಹೇಳುವುದರಲ್ಲಿ ನಿಪುಣೆಯಾಗಿರುತ್ತಾಳೆ.

ಕೊನೆಯದಾಗಿ, ಆಕೆಯ ಸರದಿಯೂ ಬರುತ್ತದೆ. ರಾಜನು ಶಾಹಿತಾ ಬಾನುವನ್ನು ಮದುವೆಯಾಗುತ್ತಾನೆ. ಅಪ್ಪ ಮಂತ್ರಿಯಾಗಿದ್ದ ಕಾರಣ ರಾಜನ ಕೃತ್ಯವನ್ನೆಲ್ಲ ತಿಳಿದುಕೊಂಡಿದ್ದ ಆಕೆ, ಮೊದಲೇ ಒಂದು ಉಪಾಯ ಹೂಡಿರುತ್ತಾಳೆ. ಅಂದು ಮದುವೆಯಾದ ಮೊದಲ ರಾತ್ರಿ. ರಾಜ ಶಹರ್ಯಾರ್‌ ಮತ್ತು ಪತ್ನಿ ಶಾಹಿತಾ ಕೋಣೆಯೊಳಗೆ ಹೋಗುತ್ತಾರೆ. ಇವಳನ್ನು ಕೊಲೆ ಮಾಡಲು ರಾಜ ಯೋಚಿಸುತ್ತಿರುವಾಗಲೇ, ಆಕೆ, “ದೊರೆಯೇ, ನಾನು ನಿಮಗೊಂದು ಆಸಕ್ತಿದಾಯಕ ಕಥೆ ಹೇಳಲು ಬಯಸುತ್ತೇನೆ. ಆಲಿಸುತ್ತೀರಾ’ ಎಂದು ಕೇಳುತ್ತಾಳೆ. ಅದಕ್ಕೆ ರಾಜ ಒಪ್ಪುತ್ತಾನೆ.

ಶಾಹಿತಾ ಕಥೆ ಹೇಳಲು ಶುರುವಿಟ್ಟುಕೊಳ್ಳುತ್ತಾಳೆ- “ಒಂದಾನೊಂದು ಕಾಲದಲ್ಲಿ ಅಕºರ್‌ ಎಂಬ ರಾಜನಿದ್ದ. ಅವನಿಗೆ ಮೂವರು ಮಕ್ಕಳು…’ ಹೀಗೆ ಆಕೆ ಕಥೆ ಮುಂದುವರಿಸುತ್ತಾಳೆ. ಕಥೆ ತಡರಾತ್ರಿವರೆಗೆ, ನಂತರ ಮುಂಜಾನೆಯವರೆಗೂ ಮುಂದುವರಿಯುತ್ತದೆ. ಆದರೂ, ಅದು ಮುಗಿಯುವುದಿಲ್ಲ. ಬೆಳಕು ಹರಿಯುತ್ತಿದ್ದಂತೆ ಕಥೆಯನ್ನು ಅರ್ಧಕ್ಕೆ ನಿಲ್ಲಿಸುವ ಶಾಹಿತಾ, “ಓ, ಬೆಳಗಾಯಿತು. ನೀವೀಗ ಆಸ್ಥಾನಕ್ಕೆ ಹೋಗುವ ಸಮಯವಾಯಿತು. ಕಥೆಯನ್ನು ಇವತ್ತು ರಾತ್ರಿ ಮುಂದುವರಿಸುತ್ತೇನೆ’ ಎನ್ನುತ್ತಾಳೆ.

ರಾಣಿ ಶಾಹಿತಾಳನ್ನು ಆಗಲೇ ಕೊಲ್ಲಬೇಕೆಂದು ಅನಿಸಿದರೂ, ಕುತೂಹಲಭರಿತ ಕಥೆಯ ಪೂರ್ಣಭಾಗ ಕೇಳದೇ ಕೊಲ್ಲುವುದು ಬೇಡ ಎಂಬ ನಿರ್ಧಾರಕ್ಕೆ ಶಹರ್ಯಾರ್‌ ಬರುತ್ತಾನೆ. ಅಂದು ರಾತ್ರಿಯೂ ಶಾಹಿತಾ ತನ್ನ ಕಥೆ ಮುಂದುವರಿಸುತ್ತಾಳೆ, ಮಾರನೇ ದಿನವೂ ಅದನ್ನು ಮುಗಿಸುವುದಿಲ್ಲ. ಇದೇ ರೀತಿ ಹಲವು ತಿಂಗಳುಗಳ ಕಾಲ ಆಕೆ ಅದೇ ಕಥೆಯ ಎಳೆಯನ್ನು ಮುಂದುವರಿಸುತ್ತಾ ಹೋಗುತ್ತಾಳೆಯೇ ಹೊರತು ಅದನ್ನು ಮುಗಿಸುವ ಗೋಜಿಗೆ ಹೋಗುವುದಿಲ್ಲ. ದಿನಗಳು, ತಿಂಗಳುಗಳು ಉರುಳಿದಂತೆ ರಾಜನಿಗೆ ರಾಣಿಯ ಮೇಲೆ ಕ್ರಮೇಣ ಪ್ರೀತಿಯಾಗುತ್ತದೆ.

ಆಕೆಯ ಬಗ್ಗೆ ಏನೋ ಒಂದು ರೀತಿಯ ಅಪ್ಯಾಯಮಾನತೆ ಮೂಡುತ್ತದೆ. ಹೀಗಾಗಿ, ಪ್ರೀತಿಪಾತ್ರಳಾದ ರಾಣಿಯನ್ನು ಕೊಲ್ಲುವುದು ಬೇಡ ಎಂದು ನಿರ್ಧರಿಸುತ್ತಾನೆ. ಶಾಹಿತಾ ತನ್ನ ಜಾಣ್ಮೆಭರಿತ ಕಥೆಯಿಂದ ರಾಜನ ಮನಸ್ಸನ್ನು ಗೆಲ್ಲುತ್ತಾಳೆ. ಕೊನೆಗೆ ರಾಜ ಶಹರ್ಯಾರ್‌ ಬದಲಾಗಿದ್ದಾನೆ ಎಂಬುದು ಗೊತ್ತಾದೊಡನೆ, ಎಲ್ಲ ಸ್ತ್ರೀಯರೂ ಕೆಟ್ಟವರಲ್ಲ ಎಂಬುದನ್ನು ರಾಜನಿಗೆ ಆಕೆ ಮನವರಿಕೆ ಮಾಡುತ್ತಾಳೆ. ತದನಂದರ ರಾಜ ಶಹರ್ಯಾರ್‌ ಮತ್ತು ರಾಣಿ ಶಾಹಿತಾ ಒಂದಾಗಿ ಪ್ರೀತಿಯಿಂದ ಬಾಳುತ್ತಾರೆ.

– ಹಲೀಮತ್‌ ಸ ಅದಿಯಾ

ಟಾಪ್ ನ್ಯೂಸ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

6-jp-hegde

Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

5-karkala

Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್‌; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ

Fraud: ರೈಸ್‌ ಪುಲ್ಲಿಂಗ್‌ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ

Fraud: ರೈಸ್‌ ಪುಲ್ಲಿಂಗ್‌ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ

Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ

Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.