ಮನು


Team Udayavani, Jul 27, 2017, 7:20 AM IST

purana1.jpg

ಸೂರ್ಯನ ಮಗನಾದ ಮನುವು ಮಹರ್ಷಿ. ಮಹಾ ತೇಜಸ್ವಿ. ಅವನು ಒಂದು ದಿನ ಸಂಜೆ ಚಿರಿಣಿ ನದಿಯ ಬಳಿ ತಪಸ್ಸು ಮಾಡುತ್ತಿದ್ದಾಗ ಪುಟ್ಟ ಮೀನೊಂದು, “ಮಹರ್ಷಿಗಳೇ, ನನಗೆ ನದಿಯಲ್ಲಿರುವ ದೊಡ್ಡ ಪ್ರಾಣಿಗಳನ್ನು ಕಂಡರೆ ಭಯ, ನನ್ನನ್ನು ಕಾಪಾಡಿ’ ಎಂದು ಬೇಡಿಕೊಂಡಿತು. ಮನುವು ಅದನ್ನು ಒಂದು ಮಣ್ಣಿನ ಪಾತ್ರೆಯ ನೀರಿನಲ್ಲಿ ಬಿಟ್ಟನು. ಕೆಲವು ವರ್ಷಗಳಲ್ಲಿ ಅದು ದೊಡ್ಡದಾಯಿತು. ಮಣ್ಣಿನ ಪಾತ್ರೆಯು ಅದಕ್ಕೆ ಸಾಲದಾಯಿತು. ಅದರ ಪ್ರಾರ್ಥನೆಯಂತೆ ಮನುವು ಅದನ್ನು ಒಂದು ದೊಡ್ಡ ಬಾವಿಯಲ್ಲಿ ಬಿಟ್ಟು ಕೆಲವು ವರ್ಷಗಳ ನಂತರ ಬಾವಿಯೂ ಸಾಲದಾಗಿ ಅದನ್ನು ಗಂಗಾ ನದಿಯಲ್ಲಿ ಬಿಟ್ಟ. ಕೆಲವು ವರ್ಷಗಳಲ್ಲಿ ಅದು ಗಂಗಾ ನದಿಯ ವಿಸ್ತಾರವನ್ನೂ ಮೀರಿ ಬೆಳೆಯಿತು. ಮನುವು ಅದನ್ನು ಸಮುದ್ರದಲ್ಲಿ ಬಿಟ್ಟನು. ಮೀನು ಅವನಿಗೆ, “ನೀವು ನನಗೆ ಬಹಳ ಉಪಕಾರ ಮಾಡಿದ್ದೀರಿ. ನನ್ನ ಮಾತನ್ನು ತಪ್ಪದೆ ಪಾಲಿಸಿ. ಇನ್ನು ಸ್ವಲ್ಪ ಕಾಲದಲ್ಲಿ ಮಹಾ ಜಲಪ್ರಳಯ ಆಗಲಿದೆ. ಚರಾಚರ ವಸ್ತುಗಳನ್ನೆಲ್ಲ ಅದು ಕೊಚ್ಚಿಕೊಂಡು ಹೋಗುತ್ತದೆ. ನೀವು ಒಂದು ಬೃಹತ್ತಾದ ಹಡಗನ್ನು ನಿರ್ಮಿಸಿ, ಅದಕ್ಕೆ ಒಂದು ಬಲವಾದ ಹಗ್ಗವನ್ನು ಕಟ್ಟಿ. ಸಪ್ತರ್ಷಿಗಳನ್ನು ನಿಮ್ಮ ಜತೆಗೆ ಕರೆದುಕೊಳ್ಳಿ. ಜಲಪ್ರಳಯ ಬಂದಾಗ ನಾನು ಬರುತ್ತೇನೆ. ನನಗಾಗಿ ಕಾದಿರಿ ನನ್ನ ತಲೆಯ ಮೇಲಿನ ಕೊಂಬಿನಿಂದ ನನ್ನನ್ನು ಗುರುತಿಸಬಹುದು. ನನ್ನ ಆದೇಶಗಳನ್ನು ಒಂದಿಷ್ಟೂ ತಪ್ಪದೆ ಪಾಲಿಸಿ, ಇಲ್ಲವಾದರೆ ನೀವು ಉಳಿಯಲಾರಿರಿ’ ಎಂದು ಹೇಳಿತು.

ಕೆಲವು ವರ್ಷಗಳಲ್ಲಿ ಅತ್ಯಂತ ವಿನಾಶಕಾರಕ ಜಲಪ್ರಳಯವಾಯಿತು. ಇಡೀ ಜಗತ್ತೇ ಅದರಲ್ಲಿ ಮುಳುಗಿತು. ಮನುವು ಮೀನಿನ ಆದೇಶಗಳನ್ನು ತಪ್ಪದೇ ಪಾಲಿಸಿದ. ಮೀನು ಈಗ ಚಲಿಸುವ ಪರ್ವತದಂತೆ ಕಾಣುತ್ತಿತ್ತು. ಅದು ಮನುವಿನ ಹಡಗನ್ನು ಸಮುದ್ರದ ಮಧ್ಯಕ್ಕೆ ಎಳೆದುಕೊಂಡುಹೋಯಿತು. ಎಲ್ಲೆಲ್ಲೂ ನೀರು. ಭೂಮಿ ಆಕಾಶಗಳು ಒಂದಾಗಿದ್ದವು.

ಮನು ಮತ್ತು ಸಪ್ತಋಷಿಗಳಲ್ಲದೆ ಯಾವ ಜೀವಿಯೂ ಇರಲಿಲ್ಲ. ಹಲವು ವರ್ಷಗಳ ನಂತರ ನೀರು ಇಳಿಯಲು ಪ್ರಾರಂಭವಾಯಿತು. ಹಿಮಾಲಯದ ಶಿಖರ ಕಾಣಿಸಿತು. ಮೀನು ಹಡಗನ್ನು ಅಲ್ಲಿಗೆ ಒಯ್ದು, ಅದರಲ್ಲಿ ಇದ್ದವರಿಗೆ ಅದನ್ನು ಶಿಖರಕ್ಕೆ ಕಟ್ಟುವಂತೆ ಹೇಳಿತು. ಅನಂತರ ಮೀನು ಹೀಗೆ ಹೇಳಿತ್ತು: “ನಾನು ಎಲ್ಲ ಜೀವಿಗಳ ಒಡೆಯನಾದ ಬ್ರಹ್ಮ. ನಿಮ್ಮನ್ನು ಈ ವಿಪತ್ತಿನಿಂದ ರಕ್ಷಿಸಲು ನಾನು ಮೀನಿನ ರೂಪದಲ್ಲಿ ಬಂದೆ. ಈ ಹಡಗಿನಲ್ಲಿರುವ ಬೀಜಗಳ ಮೂಲಕ ಮನುವು ದೇವತೆಗಳನ್ನೂ, ಅಸುರರನ್ನೂ ಸಕಲ ಚರಾಚರಗಳನ್ನೂ ಸೃಷ್ಟಿಸುತ್ತಾನೆ. ಇದಕ್ಕೆ ಅಗತ್ಯವಾದ ಸಾಮರ್ಥ್ಯವನ್ನು ತಪಸ್ಸು ಮಾಡಿ ಸಂಪಾದಿಸುತ್ತಾನೆ. ನನ್ನ ಕೃಪೆಯಿಂದ ಅವನು ಮಾಯೆಗೆ ವಶವಾಗುವುದಿಲ್ಲ’. ಈ ಮಾತುಗಳನ್ನು ಹೇಳಿ ಮೀನು ಮಾಯವಾಯಿತು.

ಮನುವು ತಪಸ್ಸನ್ನು ಮಾಡದೆ ಸೃಷ್ಟಿಕಾರ್ಯದಲ್ಲಿ ತೊಡಗಿದ. ಇದರಿಂದ ಅವನನ್ನು ಮಾಯೆಯು ಕವಿಯಿತು. ಸೃಷ್ಟಿಕಾರ್ಯವು ಮುಂದುವರೆಯಲಿಲ್ಲ. ಆಗ ಅವನು ಬ್ರಹ್ಮನ ಮಾತುಗಳನ್ನು ಸ್ಮರಿಸಿದ. ಕಠೊರ ತಪಸ್ಸನ್ನು ಕೈಗೊಂಡು ಪುಣ್ಯವನ್ನು ಗಳಿಸಿ ಸೃಷ್ಟಿಯ ಕಾರ್ಯದಲ್ಲಿ ಪ್ರವೃತ್ತನಾದ.

– ಪ್ರೊ. ಎಲ್‌. ಎನ್‌ ಶೇಷಗಿರಿರಾವ್‌ ಅವರ “ಕಿರಿಯರ ಭಾಗವತ’ ಪುಸ್ತಕದಿಂದ

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.