ಮುಖ ತೋರಿಸಿದ್ದಕ್ಕೆ ಮರಣದಂಡನೆಯೇ?!


Team Udayavani, Aug 10, 2017, 8:40 AM IST

maranadandane.jpg

ಒಬ್ಬ ರಾಜ ಇದ್ದ. ಆತ ತನ್ನ ಬಾಲ್ಯದಿಂದಲೂ ಮೂಢನಂಬಿಕೆಗಳಿಗೆ ಪ್ರಾಶಸ್ತ್ಯ ನೀಡುತ್ತಿದ್ದ. ಬೆಳಗ್ಗೆ ಎದ್ದ ಕೂಡಲೆ ಉದ್ಯಾನದಲ್ಲಿ ನಿರ್ಮಿಸಿದ್ದ ಸೂರ್ಯದೇವನ ಮೂರ್ತಿಗೆ ನಮಸ್ಕರಿಸದೇ ಯಾರ ಮುಖವನ್ನೂ ಆತ ನೋಡುತ್ತಿರಲಿಲ್ಲ.ಸೂರ್ಯನನ್ನು ನೋಡಿದ ಮೇಲೆಯೇ ತನ್ನ ದೈನಂದಿನ ಕೆಲಸ ಆರಂಭಿಸುತ್ತಿದ್ದ. ಒಂದು ವೇಳೆ ಬೇರೆಯವರ ಮುಖ ನೋಡಿದರೆ ಅಂದಿನ ಕೆಲಸಗಳು ನಡೆಯುವುದಿಲ್ಲ ಎಂಬುದು ಆತನ ನಂಬಿಕೆಯಾಗಿತ್ತು.

ಹೀಗಿರುವಾಗ ಒಮ್ಮೆ ರಾಜ ತನ್ನ ಪರಿವಾರದೊಂದಿಗೆ ಬೇಟೆಗೆ ಕಾಡಿಗೆ ತೆರಳಿದ. ಅಂದು ಒಂದೇ ಒಂದು ಬೇಟೆಯೂ ಸಿಗಲಿಲ್ಲ. ಯಾಕೆ ಹೀಗಾಯೆ¤ಂದು ಯೋಚಿಸುತ್ತ ಕುಳಿತಿರುವಾಗ ಬೆಳಗ್ಗೆ ಎದ್ದ ತಕ್ಷಣ ರೈತನ ಮುಖ ನೋಡಿದ್ದು ನೆನಪಾಯಿತು. ಕೂಡಲೇ ರಾಜನು  ಕೋಪಗೊಂಡು, ಭಟರನ್ನು ಕರೆದು ಆ ರೈತನನ್ನು ಕರೆ ತರುವಂತೆ ಆದೇಶಿಸಿದ. ಮನೆಗೆ ಬಂದ ಭಟರಿಂದ ವಿಷಯ ತಿಳಿದ ರೈತನಿಗೂ ಒಂದು ಕ್ಷಣ ಭಯವಾಯಿತು. ಹೆದರಿಕೆಯಿಂದ ಕೈಕಾಲುಗಳೆಲ್ಲಾ ನಡುಗಿದವು. ಭಟರು ರೈತನನ್ನು ಕರೆತಂದು ರಾಜನ ಮುಂದೆ ನಿಲ್ಲಿಸಿದರು. 

“ಇಂದು ಬೆಳಗ್ಗೆ ನನ್ನ ಆರಾಧ್ಯ ದೈವವನ್ನು ನೋಡುವ ಮೊದಲೇ ನಿನ್ನ ಮುಖ ನೋಡಿದೆ. ಅದೇ ಕಾರಣದಿಂದ ಇಂದು ಹೋದ ಕೆಲಸ ಆಗಲಿಲ್ಲ. ಹಾಗಾಗಿ ನಿನಗೆ ಮರಣದಂಡನೆ ವಿಧಿಸುತ್ತಿದ್ದೇನೆ’ ಎಂದು ರಾಜ ಆದೇಶಿಸಿದ. ರೈತನಿಗೆ ಇದರಿಂದ ದುಃಖವಾಯಿತು. ಆತ ಥರಥರ ನಡುಗತೊಡಗಿದ. 

ನಂತರ ದೀನನಾಗಿ, “ಮಹಾಪ್ರಭು, ಈ ಬೆಳಗ್ಗೆ ಹೊಲದಲ್ಲಿ ಬೆಳೆದು ನಿಂತ ಬೆಳೆಯನ್ನು ನೋಡಲು ಹೊರಟಿದ್ದೆ. ನಾನು ಕೂಡ ಮೊದಲು ನಿಮ್ಮ ಮುಖವನ್ನೇ ನೋಡಿದ್ದು. ಅದರ ಫ‌ಲವಾಗಿ ಈಗ ನನಗೆ ಉಂಟಾಗಿರುವ ಪರಿಸ್ಥಿತಿಯನ್ನು ನೋಡಿ’ ಎಂದ. 

ಆಗ ಹತ್ತಿರದಲ್ಲಿದ್ದ ಅನುಭವಿ ಹಾಗೂ ಜ್ಞಾನವಂತನೂ ಆದ ಮಂತ್ರಿ ಧೈರ್ಯ ಮಾಡಿ ರಾಜನಿಗೆ ಹೀಗೆ ಸಲಹೆ ನೀಡಿದ – “ಪ್ರಭುಗಳೇ, ರೈತನ ಮಾತಿನಲ್ಲಿ ಸತ್ಯವಿದೆ. ನೀವು ಮೊದಲು ನೋಡಿದ್ದು ರೈತನನ್ನು. ರೈತನೂ ಮೊದಲು ನೋಡಿದ್ದು ನಿಮ್ಮನ್ನು. ನಿಮಗೆ ಬೇಟೆ ದೊರೆಯದಿದ್ದಕ್ಕೂ ನೀವು ರೈತನ ಮುಖ ನೋಡಿದ್ದಕ್ಕೂ ಸಂಬಂಧವಿಲ್ಲ. ರೈತನಿಗೆ ನೀವು ಶಿಕ್ಷೆ ವಿಧಿಸುವುದು ಸರಿಯಲ್ಲ. ಒಂದು ವೇಳೆ ಶಿಕ್ಷೆ ವಿಧಿಸಿದ್ದೇ ಆದರೆ, ರಾಜನ ಮುಖ ನೋಡಿದ್ದಕ್ಕೆ ರೈತನಿಗೆ ಶಿಕ್ಷೆಯಾಯಿತಂತೆ. ರಾಜನ ಮುಖ ನೋಡಿದ್ದಕ್ಕೆ ರೈತ ಸತ್ತು ಹೋದನಂತೆ ಎಂಬ ಮಾತುಗಳೆಲ್ಲ ಹುಟ್ಟಿಕೊಳ್ಳುತ್ತವೆ. ಅದರಿಂದ ನಿಮಗೆ ಕೆಟ್ಟ ಹೆಸರು ಬರುತ್ತದೆ’ ಎಂದ. ಮಂತ್ರಿಯ ಮಾತು ಕೇಳಿದ ರಾಜನಿಗೆ ತನ್ನ ತಪ್ಪಿನ ಅರಿವಾಯಿತು. ರೈತನ ಬಳಿ ಕ್ಷಮೆ ಕೋರಿ ಅವನನ್ನು ಊರಿಗೆ ಕಳಿಸಿಕೊಟ್ಟ.

– ಆದಿತ್ಯ ಹೆಚ್‌. ಎಸ್‌.

ಟಾಪ್ ನ್ಯೂಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.