ಮುಖ ತೋರಿಸಿದ್ದಕ್ಕೆ ಮರಣದಂಡನೆಯೇ?!


Team Udayavani, Aug 10, 2017, 8:40 AM IST

maranadandane.jpg

ಒಬ್ಬ ರಾಜ ಇದ್ದ. ಆತ ತನ್ನ ಬಾಲ್ಯದಿಂದಲೂ ಮೂಢನಂಬಿಕೆಗಳಿಗೆ ಪ್ರಾಶಸ್ತ್ಯ ನೀಡುತ್ತಿದ್ದ. ಬೆಳಗ್ಗೆ ಎದ್ದ ಕೂಡಲೆ ಉದ್ಯಾನದಲ್ಲಿ ನಿರ್ಮಿಸಿದ್ದ ಸೂರ್ಯದೇವನ ಮೂರ್ತಿಗೆ ನಮಸ್ಕರಿಸದೇ ಯಾರ ಮುಖವನ್ನೂ ಆತ ನೋಡುತ್ತಿರಲಿಲ್ಲ.ಸೂರ್ಯನನ್ನು ನೋಡಿದ ಮೇಲೆಯೇ ತನ್ನ ದೈನಂದಿನ ಕೆಲಸ ಆರಂಭಿಸುತ್ತಿದ್ದ. ಒಂದು ವೇಳೆ ಬೇರೆಯವರ ಮುಖ ನೋಡಿದರೆ ಅಂದಿನ ಕೆಲಸಗಳು ನಡೆಯುವುದಿಲ್ಲ ಎಂಬುದು ಆತನ ನಂಬಿಕೆಯಾಗಿತ್ತು.

ಹೀಗಿರುವಾಗ ಒಮ್ಮೆ ರಾಜ ತನ್ನ ಪರಿವಾರದೊಂದಿಗೆ ಬೇಟೆಗೆ ಕಾಡಿಗೆ ತೆರಳಿದ. ಅಂದು ಒಂದೇ ಒಂದು ಬೇಟೆಯೂ ಸಿಗಲಿಲ್ಲ. ಯಾಕೆ ಹೀಗಾಯೆ¤ಂದು ಯೋಚಿಸುತ್ತ ಕುಳಿತಿರುವಾಗ ಬೆಳಗ್ಗೆ ಎದ್ದ ತಕ್ಷಣ ರೈತನ ಮುಖ ನೋಡಿದ್ದು ನೆನಪಾಯಿತು. ಕೂಡಲೇ ರಾಜನು  ಕೋಪಗೊಂಡು, ಭಟರನ್ನು ಕರೆದು ಆ ರೈತನನ್ನು ಕರೆ ತರುವಂತೆ ಆದೇಶಿಸಿದ. ಮನೆಗೆ ಬಂದ ಭಟರಿಂದ ವಿಷಯ ತಿಳಿದ ರೈತನಿಗೂ ಒಂದು ಕ್ಷಣ ಭಯವಾಯಿತು. ಹೆದರಿಕೆಯಿಂದ ಕೈಕಾಲುಗಳೆಲ್ಲಾ ನಡುಗಿದವು. ಭಟರು ರೈತನನ್ನು ಕರೆತಂದು ರಾಜನ ಮುಂದೆ ನಿಲ್ಲಿಸಿದರು. 

“ಇಂದು ಬೆಳಗ್ಗೆ ನನ್ನ ಆರಾಧ್ಯ ದೈವವನ್ನು ನೋಡುವ ಮೊದಲೇ ನಿನ್ನ ಮುಖ ನೋಡಿದೆ. ಅದೇ ಕಾರಣದಿಂದ ಇಂದು ಹೋದ ಕೆಲಸ ಆಗಲಿಲ್ಲ. ಹಾಗಾಗಿ ನಿನಗೆ ಮರಣದಂಡನೆ ವಿಧಿಸುತ್ತಿದ್ದೇನೆ’ ಎಂದು ರಾಜ ಆದೇಶಿಸಿದ. ರೈತನಿಗೆ ಇದರಿಂದ ದುಃಖವಾಯಿತು. ಆತ ಥರಥರ ನಡುಗತೊಡಗಿದ. 

ನಂತರ ದೀನನಾಗಿ, “ಮಹಾಪ್ರಭು, ಈ ಬೆಳಗ್ಗೆ ಹೊಲದಲ್ಲಿ ಬೆಳೆದು ನಿಂತ ಬೆಳೆಯನ್ನು ನೋಡಲು ಹೊರಟಿದ್ದೆ. ನಾನು ಕೂಡ ಮೊದಲು ನಿಮ್ಮ ಮುಖವನ್ನೇ ನೋಡಿದ್ದು. ಅದರ ಫ‌ಲವಾಗಿ ಈಗ ನನಗೆ ಉಂಟಾಗಿರುವ ಪರಿಸ್ಥಿತಿಯನ್ನು ನೋಡಿ’ ಎಂದ. 

ಆಗ ಹತ್ತಿರದಲ್ಲಿದ್ದ ಅನುಭವಿ ಹಾಗೂ ಜ್ಞಾನವಂತನೂ ಆದ ಮಂತ್ರಿ ಧೈರ್ಯ ಮಾಡಿ ರಾಜನಿಗೆ ಹೀಗೆ ಸಲಹೆ ನೀಡಿದ – “ಪ್ರಭುಗಳೇ, ರೈತನ ಮಾತಿನಲ್ಲಿ ಸತ್ಯವಿದೆ. ನೀವು ಮೊದಲು ನೋಡಿದ್ದು ರೈತನನ್ನು. ರೈತನೂ ಮೊದಲು ನೋಡಿದ್ದು ನಿಮ್ಮನ್ನು. ನಿಮಗೆ ಬೇಟೆ ದೊರೆಯದಿದ್ದಕ್ಕೂ ನೀವು ರೈತನ ಮುಖ ನೋಡಿದ್ದಕ್ಕೂ ಸಂಬಂಧವಿಲ್ಲ. ರೈತನಿಗೆ ನೀವು ಶಿಕ್ಷೆ ವಿಧಿಸುವುದು ಸರಿಯಲ್ಲ. ಒಂದು ವೇಳೆ ಶಿಕ್ಷೆ ವಿಧಿಸಿದ್ದೇ ಆದರೆ, ರಾಜನ ಮುಖ ನೋಡಿದ್ದಕ್ಕೆ ರೈತನಿಗೆ ಶಿಕ್ಷೆಯಾಯಿತಂತೆ. ರಾಜನ ಮುಖ ನೋಡಿದ್ದಕ್ಕೆ ರೈತ ಸತ್ತು ಹೋದನಂತೆ ಎಂಬ ಮಾತುಗಳೆಲ್ಲ ಹುಟ್ಟಿಕೊಳ್ಳುತ್ತವೆ. ಅದರಿಂದ ನಿಮಗೆ ಕೆಟ್ಟ ಹೆಸರು ಬರುತ್ತದೆ’ ಎಂದ. ಮಂತ್ರಿಯ ಮಾತು ಕೇಳಿದ ರಾಜನಿಗೆ ತನ್ನ ತಪ್ಪಿನ ಅರಿವಾಯಿತು. ರೈತನ ಬಳಿ ಕ್ಷಮೆ ಕೋರಿ ಅವನನ್ನು ಊರಿಗೆ ಕಳಿಸಿಕೊಟ್ಟ.

– ಆದಿತ್ಯ ಹೆಚ್‌. ಎಸ್‌.

ಟಾಪ್ ನ್ಯೂಸ್

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

5

Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ

Malaysian ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

BJP ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ, ನಾಳೆ ಕಾಂಗ್ರೆಸ್ ಸೇರ್ಪಡೆ

BJP ಯಿಂದ ನಿರ್ಲಕ್ಷ್ಯ… ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ

Kollywood: ಚಿನ್ನದ ಅಡ್ಡೆಗೆ ʼಕೂಲಿʼಯಾಗಿ ಬಂದ ತಲೈವರ್; ಟೈಟಲ್‌ ಟೀಸರ್‌ ಔಟ್

Kollywood: ಚಿನ್ನದ ಅಡ್ಡೆಗೆ ʼಕೂಲಿʼಯಾಗಿ ಬಂದ ತಲೈವರ್; ಟೈಟಲ್‌ ಟೀಸರ್‌ ಔಟ್

Aravind kejriwal

Insulin: ಶುಗರ್ ಲೆವೆಲ್ ಏರಿಕೆ… ಜೈಲಿನಲ್ಲಿರುವ ಕೇಜ್ರಿವಾಲ್ ಗೆ ಇನ್ಸುಲಿನ್ ನೀಡಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Rameshwaram Cafe Case: ರಾಮೇಶ್ವರಂ ಕೆಫೆ ಸ್ಫೋಟ ಶಂಕಿತರು ಮತ್ತೆ 7 ದಿನ ಎನ್‌ಐಎ ವಶಕ್ಕೆ

Rameshwaram Cafe Case: ರಾಮೇಶ್ವರಂ ಕೆಫೆ ಸ್ಫೋಟ ಶಂಕಿತರು ಮತ್ತೆ 7 ದಿನ ಎನ್‌ಐಎ ವಶಕ್ಕೆ

FIR: ಬಾಲಕಿಗೆ ಲೈಂಗಿಕ ದೌರ್ಜನ್ಯ, ಆರೋಪಿ ಬಂಧನ: ಎಫ್ಐಆರ್‌

FIR: ಬಾಲಕಿಗೆ ಲೈಂಗಿಕ ದೌರ್ಜನ್ಯ, ಆರೋಪಿ ಬಂಧನ: ಎಫ್ಐಆರ್‌

Fraud: ಹೂಡಿಕೆ ನೆಪದಲ್ಲಿ ವ್ಯಾಪಾರಿಗೆ 5 ಕೋಟಿ ವಂಚನೆ

Fraud: ಹೂಡಿಕೆ ನೆಪದಲ್ಲಿ ವ್ಯಾಪಾರಿಗೆ 5 ಕೋಟಿ ವಂಚನೆ

Bengalur: ವೈದ್ಯರ ನಿರ್ಲಕ್ಷ್ಯಕ್ಕೆ ರೋಗಿ ಸಾವು; ಠಾಣೆ ಬಳಿ ಶವ ಇರಿಸಿ ಪ್ರತಿಭಟನೆ

Bengalur: ವೈದ್ಯರ ನಿರ್ಲಕ್ಷ್ಯಕ್ಕೆ ರೋಗಿ ಸಾವು; ಠಾಣೆ ಬಳಿ ಶವ ಇರಿಸಿ ಪ್ರತಿಭಟನೆ

Udupi-Chikmagalur Poll: ಬ್ರಹ್ಮಾವರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ- ಇಂದು ಸಾರ್ವಜನಿಕ ಸಭೆ

Udupi-Chikmagalur Poll: ಬ್ರಹ್ಮಾವರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ- ಇಂದು ಸಾರ್ವಜನಿಕ ಸಭೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.