ಆಲದ ಮರದಲ್ಲಿ ಬಂಗಾರದ ದೇವತೆ!


Team Udayavani, Oct 12, 2017, 11:20 AM IST

lead-story-1.jpg

ಒಬ್ಬ ಕೃಷಿ ಆಧಿಕಾರಿ ಸೂಟು ಬೂಟು ಧರಿಸಿಕೊಂಡು ಹಳ್ಳಿಯ ಅಂಚಿನ ರಸ್ತೆಯಲ್ಲಿ ಕಾರಿನಲ್ಲಿ ಸವಾರಿ ಹೊರಟಿದ್ದ. ಅವನ ಜೊತೆಗೆ ಪುಟ್ಟ ಮಗಳು ಮೃದುಲಾ ಕೂಡ ಇದ್ದಳು. ಅವಳು ದೈವಭಕ್ತೆಯಾಗಿದ್ದಳು. ಹಸಿರು ಗದ್ದೆ, ಪೈರು, ಹೊಳೆ ಮುಂತಾದವನ್ನು ಮಗಳಿಗೆ ತೋರಿಸಿಕೊಂಡು ಬರಲೆಂದೇ ಆ ಅಧಿಕಾರಿ ಹಳ್ಳಿಗೆ ಬಂದಿದ್ದರು. ಪ್ರಕೃತಿ ಸೊಬಗಿನ ಜೊತೆಗೆ ಮೃದುಲಾ ಹೊಲದಲ್ಲಿ ಬೆವರು ಹರಿಸಿ ದುಡಿಯುತ್ತಿದ್ದ ರೈತರನ್ನೂ ನೋಡಿದಳು. ಅವರಿಗೆ ಸಹಾಯ ಮಾಡುತ್ತಿದ್ದ ಪುಟ್ಟ ಮಕ್ಕಳನ್ನೂ ನೋಡಿದಳು. ಅವರ ಮುರುಕಲು ಚಿಕ್ಕ ಗುಡಿಸಲುಗಳನ್ನು ನೋಡಿದಾಗ ಅವಳಿಗೆ ಯಾಕೋ ರೈತರ ಮೇಲೆ ಕನಿಕರ ಮೂಡಿತು. 

ಮೃದುಲಾ, ಹೊಲದಲ್ಲಿ ಕೆಲಸ ಮಾಡುತ್ತಿದ್ದ ಸುಬ್ಬಯ್ಯ ಎಂಬ ರೈತನ ಬಳಿಗೆ ಹೋಗಿ, ಅವನ ಯೋಗಕ್ಷೇಮ ವಿಚಾರಿಸಿದಳು. ಅವನ ಜೀವನ ಹೇಗೆ ನಡೆಯುತ್ತಿದೆ? ಎಂದು ಕೇಳಿದಳು. ಬಹುಕಷ್ಟದಿಂದ ಅವನ ಸಂಸಾರ ಸಾಗುತ್ತಿತ್ತು. ಬೆಳೆ ಬರದಿರುವುದು ಒಂದು ಸಮಸ್ಯೆಯಾದರೆ, ಬೆಳೆ ಸರಿಯಾಗಿ ಬಂದರೂ ಅದಕ್ಕೆ ಉತ್ತಮ ಬೆಲೆ ಸಿಗದಿರುವುದು ಇನ್ನೊಂದು ಸಮಸ್ಯೆ. ಹೀಗೆ ಮುಂದುವರಿದರೆ ತಾನು ಪಟ್ಟಣಕ್ಕೆ ಹೋಗುವುದಾಗಿ ಸುಬ್ಬಯ್ಯ ಹೇಳಿಕೊಂಡ. 

ಮೃದುಲಾ ಅಪ್ಪನ ಬಳಿ ತೆರಳಿ ಈ ರೈತರಿಗೆ ಸಹಾಯ ಮಾಡುವಂತೆ ಕೇಳಿಕೊಂಡಳು. ಆದರೆ ಅಪ್ಪ ನಿರಾಸಕ್ತಿ ತೋರಿದರು. ಇದು ಮೃದುಲಾಳಿಗೆ ಇಷ್ಟವಾಗಲಿಲ್ಲ. ಬಡರೈತ ಸುಬ್ಬಯ್ಯನ ಕುಟುಂಬಕ್ಕೆ ಏನಾದರೂ ಸಹಾಯ ಮಾಡಬೇಕೆಂದು ಅವಳಿಗೆ ಅನಿಸಿತು. ಇದೇ ಸ್ಥಿತಿ ಮುಂದುವರಿದರೆ ಸುಬ್ಬಯ್ಯ ಕೃಷಿ ಮಾಡುವುದನ್ನೇ ನಿಲ್ಲಿಸಿ ಗುಳೇ ಹೊರಡುತ್ತಾರೆಂಬುದು ಮೃದುಲಾ ಪುಟ್ಟ ಮನಸ್ಸಿಗೆ ತಿಳಿದುಹೋಯಿತು. ಆದರೆ, ಹಾಗೆಂದು ಹಣ ಸಹಾಯ ಮಾಡುವ ಹಾಗಿರಲಿಲ್ಲ. ಏಕೆಂದರೆ ಅದು ಬಡತನ ನೀಗಿಸಲೆಂದು ಮಾಡಿದ ಸಹಾಯ ಎಂದು ಸುಬ್ಬಯ್ಯ ತಿಳಿಯಬಾರದು ಎಂಬುದು ಮೃದುಲಾಳ ಇಂಗಿತವಾಗಿತ್ತು. ಅದಕ್ಕೇ ಅವಳು ಒಂದು ಉಪಾಯ ಹೂಡಿದಳು.

ಮರುದಿನ ಕೊರವಂಜಿಯ ವೇಷ ಹಾಕಿಕೊಂಡು ಸುಬ್ಬಯ್ಯನ ಮನೆಗೆ ಹೋದಳು ಮೃದುಲಾ. ಸುಬ್ಬಯ್ಯನ ಪತ್ನಿ ಕೊರವಂಜಿ ಭವಿಷ್ಯ ಕೇಳಲು ಮುಂದೆ ಬಂದಳು. ಆಗ ಮೃದುಲಾ “ಊರಾಚೆ ಒಂದು ಆಲದ ಮರ ಐತೆ. ನಾಳೆ ಬೆಳಿಗ್ಗೆ 6 ಗಂಟೆಗೆ ಅದರ ಮುಂದೊØàಗಿ ಬೇಡಿಕೊಳ್ಳಿ. ನಿಮ್ಮ ಕೆಲಸಾನ ಪರಮಾತ್ಮ ಮೆಚ್ಚಿದ್ದರೆ ಬಂಗಾರದ ನಾಣ್ಯಗಳ ಮಳೆ ಸುರಿಸ್ತಾನೆ’ ಅಂದಳು. ಸಂತುಷ್ಟಳಾದ ಸುಬ್ಬಯ್ಯನ ಪತ್ನಿ ಒಳಕ್ಕೆ ಹೋಗಿ ಮೃದುಲಾಳ ಜೋಳಿಗೆ ತುಂಬುವಷ್ಟು ಅಕ್ಕಿ ಸುರಿದಳು.  

ಸುಬ್ಬಯ್ಯನಿಗೆ ಯಾಕೋ ಕೊರವಂಜಿ ಮಾತಿನ ಮೇಲೆ ನಂಬಿಕೆ ಬರಲಿಲ್ಲ. ಆದರೆ ಪತ್ನಿಯ ಒತ್ತಾಯಕ್ಕೆ ಮಣಿದು ಅವರಿಬ್ಬರೂ ಮಾರನೇ ದಿನ ಊರಾಚೆಯಿದ್ದ ಆಲದ ಮರದ ಬಳಿ ತೆರಳಿದ. ತನ್ನ ಕಷ್ಟ ನೀಗಿಸೆಂದು ದೇವರನ್ನು ಪ್ರಾರ್ಥಿಸಿದ. ಏನಾಶ್ಚರ್ಯ ಚಿನ್ನದ ನಾಣ್ಯಗಳು ಮೇಲಿಂದ ಬೀಳತೊಡಗಿದವು. ದೇವರ ಮಹಿಮೆಗೆ ತಲೆಬಾಗಿದ ಸುಬ್ಬಯ್ಯ ತಾನು ಕೃಷಿಯನ್ನು ಬಿಟ್ಟು ಪಟ್ಟಣ ಸೇರಲು ಸಿದ್ಧನಾಗಿದ್ದಕ್ಕೆ ಬೇಸರ ವ್ಯಕ್ತಪಡಿಸಿದ. ಇಲ್ಲೇ ಇದ್ದು ಕೃಷಿ ಕೆಲಸದಲ್ಲಿ ಚೆನ್ನಾಗಿ ತೊಡಗಿಸಿಕೊಳ್ಳುವೆನೆಂದು ವಾಗ್ಧಾನ ಮಾಡಿ ಚಿನ್ನದ ನಾಣ್ಯಗಳೊಂದಿಗೆ ಮನೆಗೆ ಮರಳಿದ. 
ಆವತ್ತಿನಿಂದ, “ಆಲದ ಮರದಲ್ಲಿ ಬಂಗಾರದ ದೇವತೆ ಇದ್ದಾಳೆ. ರೈತರು ಕೋರಿಕೊಂಡದ್ದನ್ನು ನೆರವೇರಿಸಿಕೊಡುತ್ತಾಳೆ’ ಗಾಳಿ ಸುದ್ದಿ ಹಳ್ಳಿಯಲ್ಲಿ ಹಬ್ಬಿತು. ಕೃಷಿ ಬಿಡಬೇಕೆಂದಿದ್ದ ಬಹಳಷ್ಟು ರೈತರು ತಮ್ಮ ನಿರ್ಧಾರವನ್ನು ಬದಲಿಸಿದರು.
ತಾನು ಆಲದ ಮರ ಹತ್ತಿ, ಸುಬ್ಬಯ್ಯನ ಮೇಲೆ ಚಿನ್ನದ ನಾಣ್ಯಗಳನ್ನು ಉದುರಿಸಿದ್ದು ತುಂಬಾ ಒಳ್ಳೆಯದಾಯೆ¤ಂದು ಮೃದುಲಾ ಹಿರಿ ಹಿರಿ ಹಿಗ್ಗಿದಳು.

– ವನರಾಗ ಶರ್ಮಾ, ಯಲ್ಲಾಪುರ

ಟಾಪ್ ನ್ಯೂಸ್

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.