ಪುರಾಣ ಕತೆ: ದೇವವ್ರತ, ಭೀಷ್ಮನಾದ ಕಥೆ!


Team Udayavani, Nov 9, 2017, 12:21 PM IST

09-21.jpg

ಶಂತನು ಹಸ್ತಿನಾವತಿಯ ರಾಜ. ಅವನಿಗೆ ದೇವವ್ರತನೆಂಬ ಮಗ ಇದ್ದನು. ಒಂದು ದಿನ ಮಹಾರಾಜ ಶಂತನು ಯಮುನಾ
ನದಿಯ ದಡದಲ್ಲಿ ಸಂಚರಿಸುತ್ತಿದ್ದಾಗ, ಮೈ ಮರೆಸುವಂಥ ಸುಗಂಧದ ಅನುಭವವಾಯಿತು. ಅದು ಎಲ್ಲಿಂದ ಬಂದಿತು ಎಂದು ಹುಡುಕಿಕೊಂಡು ಹೋದಾಗ ಒಬ್ಬ ಬೆಸ್ತರ ಹುಡುಗಿಯನ್ನು ಕಂಡ. 

ಅವಳ ಹೆಸರು ಸತ್ಯವತಿ. ಅವಳು ಬಹು ಸುಂದರಿ. ಶಂತನು ಅವಳನ್ನು ಕುತೂಹಲದಿಂದ ಪ್ರಶ್ನಿಸಿದಾಗ ಅವಳು ಬೆಸ್ತರ ರಾಜನ ಮಗಳು, ಧರ್ಮಾರ್ಥವಾಗಿ ದೋಣಿಯನ್ನು ನಡೆಸುತ್ತಾಳೆ ಎಂದು ತಿಳಿಯಿತು. ರಾಜನು ಮೊದಲ ನೋಟದಲ್ಲೇ ಆಕೆಗೆ ಮರುಳಾದನು. “ಸುಂದರೀ ನಾನು ನಿನ್ನ ತಂದೆಯೊಡನೆ ಮಾತಾಡಬೇಕು. ನಿನ್ನ ಮನೆಗೆ ದಾರಿ ತೋರು…’ ಎಂದನು. ನಂತರ ಶಂತನುವು ಬೆಸ್ತರ ರಾಜನನ್ನು ಕಂಡು ಅವನ ಮಗಳನ್ನು ತನಗೆ ಮದುವೆ ಮಾಡಿಕೊಡಬೇಕೆಂದು ಕೇಳಿದ. 

ಬೆಸ್ತರ ರಾಜನು ಒಂದು ಷರತ್ತನ್ನು ವಿಧಿಸಿದ. ಶಂತನುವಿನ ನಂತರ ಸತ್ಯವತಿಯ ಮಗನೇ ರಾಜನಾಗಬೇಕು. ಸದ್ಗುಣಿಯಾದ, ಬೆಳೆದ ಮಗನಿರುವಾಗ ಶಂತನು ಈ ಷರತ್ತನ್ನು ಒಪ್ಪಲು ಸಾಧ್ಯವಿಲ್ಲ ಎಂದ. ಊರಿಗೆ ಬಂದ ಮೇಲೂ ಅವನು ಕೊರಗುತ್ತಲೇ ಇದ್ದ. ದೇವವ್ರತನು ಇದನ್ನು ಕಂಡು, ರಾಜನ ವೃದ್ಧ ಮಂತ್ರಿಯಿಂದ ಇದರ ಕಾರಣವನ್ನು ತಿಳಿದುಕೊಂಡ.

ಹಿರಿಯ ಕ್ಷತ್ರಿಯರೊಡನೆ ಬೆಸ್ತರ ರಾಜನ ಬಳಿಗೆ ಹೋಗಿ ಸತ್ಯವತಿಯನ್ನು ತನ್ನ ತಂದೆಗೆ ಕೊಟ್ಟು ಮದುವೆ ಮಾಡಬೇಕೆಂದು ಕೋರಿದ. ಬೆಸ್ತರ ರಾಜನು ಶಂತನುವಿಗೆ ಹೇಳಿದ್ದ ಮಾತನ್ನೇ ಈಗ ದೇವವ್ರತನಿಗೆ ಹೇಳಿದ. ದೇವವ್ರತನು “ನೀನು ಹೇಳಿದಂತೆಯೇ ಆಗಲಿ, ಈಕೆಯ ಮಗನೇ ಮುಂದೆ ರಾಜನಾಗುತ್ತಾನೆ. ನಾನು ಸಿಂಹಾಸನವನ್ನು ಬಯಸುವುದಿಲ್ಲ’ ಎಂದ. ಸತ್ಯವತಿಯ ತಂದೆ, “ನಿನ್ನ ಮಗ ಮುಂದೆ ಸಿಂಹಾಸನವನ್ನು ಕೇಳಬಹುದು’ ಎಂದ. ಆಗ ದೇವವ್ರತನು, “ನಾನು ಮದುವೆಯನ್ನೇ ಮಾಡಿಕೊಳ್ಳುವುದಿಲ್ಲ’ ಎಂದು
ಪ್ರತಿಜ್ಞೆ ಮಾಡಿದ. ಇಂಥ ಕಠಿಣವಾದ ಪ್ರತಿಜ್ಞೆಗಳನ್ನು ಮಾಡಿದುದರಿಂದ ದೇವವ್ರತನಿಗೆ ಭೀಷ್ಮ ಎಂದು ಹೆಸರು
ಬಂದಿತು.

ಸತ್ಯವತಿಯನ್ನು ಹಸ್ತಿನಾವತಿಗೆ ಕರೆದುಕೊಂಡು ಬಂದು ತಂದೆಗೆ ಒಪ್ಪಿಸಿದ. ಶಂತನುವು, ‘ನೀನು ಬಯಸಿದಾಗ ಮಾತ್ರ ಸಾವು ನಿನಗೆ ಬರಲಿ’ ಎಂದು ವರವನ್ನು ಕೊಟ್ಟ. ಶಂತನು- ಸತ್ಯವತಿಯರ ಮದುವೆಯಾಯಿತು. ಅವರಿಗೆ ಇಬ್ಬರು ಮಕ್ಕಳಾದರು. ಅವರೇ, ಚಿತ್ರವೀರ್ಯ ಮತ್ತು ವಿಚಿತ್ರವೀರ್ಯ.

ಪ್ರೊ. ಎಲ್‌. ಎಸ್‌. ಶೇಷಗಿರಿ ರಾವ್‌ ಅವರ
“ಕಿರಿಯರ ಮಹಾಭಾರತ’ ಪುಸ್ತಕದಿಂದ ಆಯ್ದ ಭಾಗ)

ಟಾಪ್ ನ್ಯೂಸ್

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು1

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.