ಮರಿಯಾನೆಯ ದೊಡ್ಡ ಮನಸ್ಸು


Team Udayavani, Nov 30, 2017, 11:01 AM IST

30-21.jpg

ಒಂಟಿ ಮರಿ ಆನೆಯೊಂದು ಗೆಳೆಯರಿಗಾಗಿ ಕಾಡಿನಲ್ಲೆಲ್ಲ ಓಡಾಡುತ್ತಿತ್ತು. ಅದಕ್ಕೆ ಮರದ ಮೇಲೆ ಮಂಗವೊಂದು ಕಾಣಿಸಿತು. “ನೀನು ನನ್ನ ಗೆಳೆಯನಾಗ್ತಿಯಾ?’ ಅಂತ ಆಸೆಯಿಂದ ಕೇಳಿತು ಆನೆ. ಪಕ್ಕದ ಮರಕ್ಕೆ ಜಿಗಿದ ಮಂಗ, “ನೀನೂ ಹೀಗೆ ಮರದಿಂದ ಮರಕ್ಕೆ ಹಾರಿದರೆ ಮಾತ್ರ’ ಎಂದು ಅದನ್ನು ಅಣಕಿಸಿತು. ಮುಂದೆ ಆನೆಗೆ ಮೊಲವೊಂದು ಎದುರಾಯಿತು. ಆನೆ ಮತ್ತೆ “ನಾನೂ ನೀನು ಗೆಳೆಯರಾಗೋಣ’ ಎಂದಿತು. “ಅಯ್ಯೋ, ನಿನ್ನಂಥ ಡುಮ್ಮನೊಂದಿಗೆ ನನಗೆ ಗೆಳೆತನ ಬೇಡ’ ಎಂದು ಮೊಲ ಕುಪ್ಪಳಿಸುತ್ತಾ ಮರೆಯಾಯಿತು. ಕಪ್ಪೆ, ನರಿ, ಗಿಳಿ, ನವಿಲು, ಕಾಗೆ, ತೋಳ, ಆಮೆ… ಹೀಗೆ ಯಾರೂ ಆನೆಯೊಂದಿಗೆ ಸ್ನೇಹ ಮಾಡಲು ಮುಂದಾಗಲಿಲ್ಲ. ಆನೆಗಂತೂ ಅಳುವೇ ಬಂದುಬಿಟ್ಟಿತು. ಅದು ಅಳುತ್ತಳುತ್ತಾ ಒಂದೆಡೆ ಮಲಗಿಬಿಟ್ಟಿತು. 

ಸ್ವಲ್ಪ ಹೊತ್ತಿನ ನಂತರ ಅದಕ್ಕೆ ಎಚ್ಚರವಾಯ್ತು. ಆಗ ಕಾಡಿನ ಪ್ರಾಣಿಗಳೆಲ್ಲವೂ ದಿಕ್ಕಾಪಾಲಾಗಿ ಓಡುತ್ತಿರುವುದು ಕಾಣಿಸಿತು. ಓಡುತ್ತಿದ್ದ ಜಿಂಕೆಯನ್ನು ತಡೆದು ನಿಲ್ಲಿಸಿದಾಗ ಅದು, “ಪಕ್ಕದ ಕಾಡಿನಿಂದ ಬಂದ ಹುಲಿ ನಮ್ಮನ್ನೆಲ್ಲ ಬೇಟೆಯಾಡಿ ತಿನ್ನುತ್ತಿದೆ’ ಎಂದು ಹೇಳಿ ಓಡಿಹೋಯ್ತು. ಸಣ್ಣ ಗಾತ್ರದ ಪ್ರಾಣಿಗಳು ಹುಲಿಗೆ ಹೆದರುತ್ತಿರುವುದನ್ನು ನೋಡಿ ಮರಿಯಾನೆಗೆ ದುಃಖವಾಯ್ತು. ಅದು ಹುಲಿಯಲ್ಲಿಗೆ ಹೋಗಿ, ಪ್ರಾಣಿಗಳಿಗೆ ತೊಂದರೆ ಕೊಡದಂತೆ ಕೇಳಿಕೊಂಡಿತು. ಹುಲಿ ಅದರ ಮಾತನ್ನು ಕೇಳದಿದ್ದಾಗ ಜೋರಾಗಿ ಒಂದು ಒದೆ ಕೊಟ್ಟು ಅದನ್ನು ಕಾಡಿನಿಂದ ಆಚೆಗಟ್ಟಿತು. ಆನೆಮರಿಯ ಒಳ್ಳೆತನವನ್ನು ಕಂಡು ಎಲ್ಲ ಪ್ರಾಣಿಗಳಿಗೆ ತಮ್ಮ ಸಣ್ಣತನದ ಬಗ್ಗೆ ಪಶ್ಚಾತ್ತಾಪವಾಯ್ತು. “ನಿನ್ನ ದೇಹದಷ್ಟೇ ನಿನ್ನ ಮನಸ್ಸೂ ದೊಡ್ಡದು’ ಎಂದು ಮರಿಯಾನೆಯಲ್ಲಿ ಕ್ಷಮೆ ಕೇಳಿದವು.

ಪ್ರಿಯಾ 

ಟಾಪ್ ನ್ಯೂಸ್

8-pavagada

Pavagada: ಬೈಕ್ ಗೆ ‌ಕಾಡು ಹಂದಿ ‌ಡಿಕ್ಕಿಯಾಗಿ ಸವಾರ ಸಾವು

Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ

Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ

Virat Kohli and Rohit to open in t20 world cup; report

T20 World Cup; ರೋಹಿತ್‌, ವಿರಾಟ್‌ ಆರಂಭಿಕರು? ಅಚ್ಚರಿಯ ಮುಖಗಳಿಲ್ಲ?

Jammu and Kashmir: ಉಗ್ರರ ಗುಂಡಿನ ದಾಳಿಗೆ ಬಿಹಾರದ ವಲಸೆ ಕಾರ್ಮಿಕ ಮೃತ್ಯು

Jammu and Kashmir: ಉಗ್ರರ ಗುಂಡಿನ ದಾಳಿಗೆ ಬಲಿಯಾದ ವಲಸೆ ಕಾರ್ಮಿಕ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

7-thekkatte

Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ganihara

Vijayapura; ವಿಕಸಿತ ಭಾರತದಲ್ಲಾಗಿರುವ ಅಭಿವೃದ್ಧಿ ಏನು: ಕೆಪಿಸಿಸಿ ವಕ್ತಾರ ಗಣಿಹಾರ ಪ್ರಶ್ನೆ

8-pavagada

Pavagada: ಬೈಕ್ ಗೆ ‌ಕಾಡು ಹಂದಿ ‌ಡಿಕ್ಕಿಯಾಗಿ ಸವಾರ ಸಾವು

Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ

Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ

Virat Kohli and Rohit to open in t20 world cup; report

T20 World Cup; ರೋಹಿತ್‌, ವಿರಾಟ್‌ ಆರಂಭಿಕರು? ಅಚ್ಚರಿಯ ಮುಖಗಳಿಲ್ಲ?

The Very Best Payment Techniques for Online Casinos

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.