ಭೂಮಿ ಮೇಲೆ ಯಾರು ಸುಖಿಗಳು?


Team Udayavani, Dec 14, 2017, 1:30 PM IST

lead.jpg

ಕಂಪಲಾಪುರ ಎಂಬ ರಾಜ್ಯವನ್ನು ಚಂದ್ರಸೇನ ಎಂಬ ರಾಜ ಆಳುತ್ತಿದ್ದ. ಅವನ ರಾಜ್ಯದಲ್ಲಿ ಸುಖ-ಶಾಂತಿ ನೆಲೆಸಿತ್ತು. ಆದರೆ, ರಾಜಾ ಚಂದ್ರಸೇನನಿಗೆ ಮಾತ್ರ ಸುಖ- ಶಾಂತಿ ಎಂಬುದೇ ಇರಲಿಲ್ಲ. ಆ ಕುರಿತು ರಾಜಗುರುಗಳ ಸಲಹೆ ಕೇಳಿದಾಗ, ಅವರು “ರಾಜ್ಯದ ಹೊರವಲಯದಲ್ಲಿ ವನದ ಹತ್ತಿರ ಗಿಡಮೊಂದರ ಕೆಳಗೆ ಓರ್ವ ಸನ್ಯಾಸಿ ಇದ್ದಾನೆ. ಅವನು ನಿಮ್ಮ ಪ್ರಶ್ನೆಗಳಿಗೆಲ್ಲಾ ಉತ್ತರ ಕೊಡಬಹುದು’ ಎಂದರು. ಅದರಂತೆ ರಾಜ ಕುದುರೆಯನ್ನೇರಿ, ಸನ್ಯಾಸಿಯನ್ನು ಹುಡುಕಿಕೊಂಡು ಹೋದ. ರಾಜಗುರು ಹೇಳಿದ್ದ ಜಾಗದಲ್ಲಿಯೇ ಸನ್ಯಾಸಿ ಬಿಡಾರ ಹೂಡಿದ್ದ. ಸನ್ಯಾಸಿಯನ್ನು ಕಾಣುತ್ತಲೇ ರಾಜಾ ಚಂದ್ರಸೇನ “ಮಹಾತ್ಮರೇ, ನಾನು ಈ ದೇಶದ ರಾಜ. ನನ್ನ ಬಳಿ ಧನ-ಕನಕಾದಿ ಸಂಪತ್ತು, ಅರಮನೆ, ಆಳುಕಾಳು ಎಲ್ಲವೂ ಇದೆ.

ಆದರೆ ಸುಖ ಮಾತ್ರ ಇಲ್ಲ. ನಿದ್ದೆಯೂ ಬರುತ್ತಿಲ್ಲ. ಸುಖವನ್ನು ಪಡೆಯಲು ಏನಾದರೂ ಉಪಾಯ ಹೇಳಿ’ ಎಂದು ಬೇಡಿಕೊಂಡನು. ಕ್ಷಣಹೊತ್ತು ಸುಮ್ಮನಿದ್ದ ಸನ್ಯಾಸಿ ರಾಜನ ಮುಖವನ್ನೇ ದಿಟ್ಟಿಸುತ್ತಾ ಗಂಭೀರವಾಗಿ ಹೇಳಿದನು, “ಯಾರಾದರೂ ಸುಖವಾಗಿರುವ ವ್ಯಕ್ತಿಯು ಹಾಕಿಕೊಂಡಿರುವ ಅಂಗಿಯನ್ನು ಹಾಕಿಕೊಂಡರೆ ಸುಖ ಶಾಂತಿ ದೊರಕುತ್ತದೆ.’ 

ಸನ್ಯಾಸಿಗೆ ನಮಸ್ಕರಿಸಿದ ರಾಜ ಒಡನೆಯೇ ಸುಖದ ಅಂಗಿಯನ್ನು ಹುಡುಕುತ್ತಾ ಹೊರಟನು. ದಾರಿಯಲ್ಲಿ ಮೊದಲು ಸಂಗೀತಗಾರನೊಬ್ಬ ಸಿಕ್ಕಿದ “ನೀವು ಸುಖವಾಗಿದ್ದೀರ? ಇದ್ದರೆ ನಿಮ್ಮ ಅಂಗಿಯೊಂದನ್ನು ಕೊಡಿ…’ ಎಂದು ಕೇಳಿದ ರಾಜ.

ಆದಕ್ಕಾತ “ನಾನು ಸುಖವಾಗಿಯೇನೋ ಇದ್ದೇನೆ. ಆದರೆ, ನನಗೆ ಇಲ್ಲಿಯವರೆಗೆ ಯಾವ ಪ್ರಶಸ್ತಿಯೂ ಸಿಕ್ಕಿಲ್ಲ ಎಂಬುದೊಂದೇ ಚಿಂತೆ’ ಎಂದ ಸಂಗೀತಗಾರ. ರಾಜ ಮುಂದೆ ನಡೆದ. ಒಬ್ಬ ಸಾಹುಕಾರ ಸಿಕ್ಕಿದ. ಅವನು “ನಾನು ಸುಖವಾಗಿಯೇನೋ ಇದ್ದೇನೆ… ಆದರೆ, ನೂರು ಕೋಟಿ ರೂಪಾಯಿಗೆ ಐದು ಲಕ್ಷ ಕಮ್ಮಿ ಇದೆ. ಅದೊಂದೇ ಚಿಂತೆ.’ ಎಂದ. ಕವಿಯೊಬ್ಬ “ನನಗೆ ಒಂದು ಚೆಂದದ ಮನೆಯಿಲ್ಲ. ಅಲ್ಲದೆ ನನ್ನ ಎದುರಾಳಿ ನನಗೆ ರಾಜಾಶ್ರಯ ತಪ್ಪಿಸಿದ್ದಾನೆ’ ಎಂದ.   

ಹೀಗೆ ದಾರಿಯಲ್ಲಿ ಸಿಕ್ಕ ಪ್ರತಿಯೊಬ್ಬರೂ ಒಂದಿಲ್ಲೊಂದು ಸಂಕಷ್ಟ ತೋಡಿಕೊಂಡರು. ರಾಜನಿಗೆ ಸುಖದ ಅಂಗಿಯನ್ನು ದಯಪಾಲಿಸುವವರು ಸಿಕ್ಕದೆ ಬೇಸರವಾಯಿತು. ತಿರುಗಿ ತಿರುಗಿ ಬೇಸತ್ತು ಕೊನೆಗೆ ರಾಜ ಮರಳಿ ಸನ್ಯಾಸಿಯ ಬಳಿಗೆ ಬಂದ. ಬೆಳಗ್ಗಿನಿಂದ ನಡೆದುದೆಲ್ಲವನ್ನೂ ವಿವರಿಸಿ “ಸುಖೀಗಳು ಒಬ್ಬರೂ ಸಿಗಲಿಲ್ಲ’ ಎಂದ. ಇದನ್ನೆಲ್ಲ ಮೌನವಾಗಿ ಕೇಳಿಸಿಕೊಂಡ ಸನ್ಯಾಸಿ ನಗುತ್ತಾ ನುಡಿದ “ರಾಜ, ಸುಖ ಎಂಬುದು ಹೊರಗಡೆ ಎಲ್ಲೂ ಇಲ್ಲ, ಅದು ನಮ್ಮ ಒಳಗೇ ಇದೆ.

ಸುಖವೆಂದು ಭಾವಿಸಿದರೆ ಸುಖ; ದುಃಖವೆಂದು ಭಾವಿಸಿದರೆ ದುಃಖ’. ಸನ್ಯಾಸಿಯ ಈ ಎರಡು ಮಾತಿನಿಂದಲೇ ರಾಜನ ಮನಸ್ಸು ಹಗುರಾಯಿತು. ಸನ್ಯಾಸಿಗೆ ವಂದಿಸಿ, “ನಾನೀಗ ಸುಖೀ’ ಎನ್ನುತ್ತಾ ಸಂತೋಷದಿಂದ ಅರಮನೆಯತ್ತ ಕುದುರೆ ಓಡಿಸಿದ.

– ವನರಾಗ ಶರ್ಮಾ

ಟಾಪ್ ನ್ಯೂಸ್

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

19-sagara

LS Polls: ರಾಜ್ಯದ ಜನರಿಗೆ ಈಶ್ವರಪ್ಪ ಸ್ಪರ್ಧೆ ವಿಷಯ ಈಗ ಖಚಿತ: ಈಶ್ವರಪ್ಪ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

18-uv-fusion

Clay Pot: ಬಡವರ ಫ್ರಿಡ್ಜ್ ಮಣ್ಣಿನ ಮಡಕೆ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.