ದೇವರೇಕೆ ಹೀಗೆ ಮಾಡಿದ?


Team Udayavani, Jan 4, 2018, 11:13 AM IST

04-15.jpg

ದಟ್ಟವಾದ ಅರಣ್ಯದಲ್ಲಿ ಒಂದು ವಿಶೇಷ ಮರವಿತ್ತು. ಮಾವಿನ ಮರ, ಗಂಧದ ಮರ, ಹಲಸಿನ ಮರಗಳಿಂದ ಈ ವಿಶೇಷ ಮರ ಸುತ್ತುವರಿದಿತ್ತು. ಆ ಮರದ ವಿಶೇಷತೆಯೆಂದರೆ ಅದು ಕುರೂಪಿ ಮರವಾಗಿತ್ತು. ಎಲ್ಲಾ ನೇರಕ್ಕೆ ಬೆಳೆದು, ವಿಸ್ತಾರವಾಗಿ ಹಬ್ಬಿದ್ದರೆ ಇದೊಂದು ಮರ ಮಾತ್ರ ಸೊಟ್ಟಗೆ, ವಿಕಾರವಾಗಿ ಬೆಳೆದಿತ್ತು. ಇದೇ ಕಾರಣಕ್ಕೆ ಸುತ್ತಲಿನ ಮರಗಳೆಲ್ಲಾ ಕುರೂಪಿ ಮರವನ್ನು ಸದಾ ಅಪಹಾಸ್ಯ ಮಾಡುತ್ತಿದ್ದವು. ಆ ಬೇಜಾರು ಕುರೂಪಿ ಮರಕ್ಕೂ ಇತ್ತು. ಮೊದ ಮೊದಲು ಆ ದೇವರು ತನಗೊಬ್ಬನಿಗೆ ಮಾತ್ರ ಏಕೆ ಈ ದುಸ್ಥಿತಿ ತಂದ ಎಂದು ಪ್ರಶ್ನೆ ಹಾಕಿಕೊಳ್ಳುತ್ತಿತ್ತು. ಆದರೆ ನಂತರ ಆ ಕುರಿತು ಚಿಂತಿಸಿ ಫ‌ಲವಿಲ್ಲ ಎಂದರಿತು ಇತರರ ಹೀಯಾಳಿಕೆಗಳಿಗೆ ಬೇಜಾರು ಪಟ್ಟುಕೊಳ್ಳುವುದನ್ನು ನಿಲ್ಲಿಸಿತು.

ಒಂದು ದಿನ ವ್ಯಕ್ತಿಯೊಬ್ಬ ಕಾಡಿಗೆ ಬಂದನು. ಮರಗಳೆಲ್ಲವೂ “ಯಾರಪ್ಪಾ ಈ ದಟ್ಟಾರಣ್ಯಕ್ಕೆ ಬಂದಿರುವವರು’ ಎಂದು ಆಶ್ಚರ್ಯದಿಂದ ಅವನನ್ನೇ ನೋಡಿದವು. ಅವನು ಮರ ಕಡಿಯುವವನಾಗಿದ್ದನು. ಅವನು ತನ್ನ ಚೀಲದಿಂದ ಕೊಡಲಿಯನ್ನು ಹೊರತೆಗೆಯುತ್ತಿದ್ದಂತೆ ಮರಗಳೆಲ್ಲಾ ಹೌಹಾರಿದವು. ಅವನು ಹತ್ತಿರದ ಎಲ್ಲಾ ಮರಗಳನ್ನು ಗಮನಿಸುತ್ತಾ ಹೋದನು. ಸೊಟ್ಟದಾಗಿದ್ದ, ಕುರೂಪಿ ಮರವೂ ಅವನ ಕಣ್ಣಿಗೆ ಬಿತ್ತು. ಇತರೆ ಮರಗಳೆಲ್ಲಾ ಕುರೂಪಿ ಮರವನ್ನು ಕಡಿಯುತ್ತಾನೆಂದುಕೊಂಡು ಹಾಸ್ಯ ಮಾಡಿದವು. ಆದರೆ ಆತ, ಸೊಟ್ಟ ಮರದಿಂದ ತನಗೇನೂ ಉಪಯೋಗವಿಲ್ಲವೆಂದು ಕುರೂಪಿ ಮರವೊಂದನ್ನು ಬಿಟ್ಟು ಅದರ ಸುತ್ತಮುತ್ತಲಿದ್ದ ಮರಗಳನ್ನು ಕಡಿದು ಹಾಕಿದನು. ದೇವರು ಎಲ್ಲವನ್ನೂ ಒಳ್ಳೆಯದಕ್ಕೆ ಮಾಡಿರುತ್ತಾನೆ, ತನ್ನ ಕುರೂಪವೇ ಇಂದು ತನ್ನನ್ನು ಕಾಪಾಡಿತೆಂದು ಕುರೂಪಿ ಮರ ದೇವರಿಗೆ ಕೃತಘ್ನತೆ ಸಲ್ಲಿಸಿತು.

ವೇದಾವತಿ ಹೆಚ್‌. ಎಸ್‌.

ಟಾಪ್ ನ್ಯೂಸ್

Mangaluru: ಕಳವು ಮಾಡಿದ ಯುವಕನಿಗೆ ಹಲ್ಲೆ… ವೀಡಿಯೋ ವೈರಲ್‌

Mangaluru: ಕಳವು ಮಾಡಿದ ಯುವಕನಿಗೆ ಹಲ್ಲೆ… ವೀಡಿಯೋ ವೈರಲ್‌

yatnal

LS ಚುನಾವಣೆ ಬಳಿಕ ಬಿಜೆಪಿ ರಾಜ್ಯ ನಾಯಕತ್ವ ಬದಲಾವಣೆ ಕೂಗು: ಯತ್ನಾಳ್

Belthangady: ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದು ಕಾರು, ತಪ್ಪಿದ ದುರಂತ

Belthangady: ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದು ಕಾರು, ತಪ್ಪಿದ ದುರಂತ

1-sadadas

NDA;ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವವರು ಮೋದಿ ಮತ್ತು ಶಾ ಮಾತ್ರ: ದೇವೇಗೌಡ

Arrested: 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Arrested: 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Padubidri: ಬೈಕಿಗೆ ಡಿಕ್ಕಿ ಹೊಡೆದ ಕಾರು… ಪೊಲೀಸ್‌ ಕಾನ್‌ಸ್ಟೆಬಲ್‌ ಗೆ ಗಾಯ

Padubidri: ಬೈಕಿಗೆ ಡಿಕ್ಕಿ ಹೊಡೆದ ಕಾರು… ಪೊಲೀಸ್‌ ಕಾನ್‌ಸ್ಟೆಬಲ್‌ ಗೆ ಗಾಯ

sumalata

Vijayendra ಜತೆ ಚರ್ಚೆ: ಮಂಡ್ಯದಲ್ಲೇ ನಿರ್ಧಾರ ತಿಳಿಸುತ್ತೇನೆ ಎಂದ ಸುಮಲತಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Mangaluru: ಕಳವು ಮಾಡಿದ ಯುವಕನಿಗೆ ಹಲ್ಲೆ… ವೀಡಿಯೋ ವೈರಲ್‌

Mangaluru: ಕಳವು ಮಾಡಿದ ಯುವಕನಿಗೆ ಹಲ್ಲೆ… ವೀಡಿಯೋ ವೈರಲ್‌

orangrapady

Udupi: ಕಾರು ಢಿಕ್ಕಿ… ಗಂಭೀರ ಗಾಯಗೊಂಡಿದ್ದ ಸ್ಕೂಟರ್‌ ಸವಾರ ಮೃತ್ಯು

yatnal

LS ಚುನಾವಣೆ ಬಳಿಕ ಬಿಜೆಪಿ ರಾಜ್ಯ ನಾಯಕತ್ವ ಬದಲಾವಣೆ ಕೂಗು: ಯತ್ನಾಳ್

Belthangady: ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದು ಕಾರು, ತಪ್ಪಿದ ದುರಂತ

Belthangady: ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದು ಕಾರು, ತಪ್ಪಿದ ದುರಂತ

1-sadadas

NDA;ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವವರು ಮೋದಿ ಮತ್ತು ಶಾ ಮಾತ್ರ: ದೇವೇಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.