ನಿಂಬೆ ಹಣ್ಣಿನಂಥಾ ಹಬ್ಬ ಬಂತು ನೋಡಿ! 


Team Udayavani, Apr 19, 2018, 7:00 AM IST

9.jpg

ಬೇಸಿಗೆಯ ಬಾಯಾರಿಕೆ ತಣಿಸುವ ಅತ್ಯುತ್ತಮ ಮಾರ್ಗವೆಂದರೆ ನಿಂಬೆ ಹಣ್ಣಿನ ಪಾನಕ. ನಿಂಬೆ ಹಣ್ಣನ್ನು ಯಾವುದಕ್ಕೆಲ್ಲಾ ಬಳಸುತ್ತೇವೆ ಎಂದು ಯೋಚಿಸಿದರೆ ಅಚ್ಚರಿಯಾಗುತ್ತೆ. ಬಾಯಾರಿಕೆ ನೀಗಿಸಲು ಬೇಕು, ಚಿತ್ರಾನ್ನಕ್ಕೂ ಬೇಕು, ವಾಹನ ಪೂಜೆ ಮಾಡುವಾಗಲೂ ಬೇಕು. ಆದರೆ ಇಲ್ಲೊಂದು ನಗರದಲ್ಲಿ ನಿಂಬೆ ಹಣ್ಣಿನ ಕಲಾಕೃತಿಗಳನ್ನು ನೋಡಬಹುದು. ಅಲ್ಲಿ ನಿಂಬೆ ಹಣ್ಣಿನ ಹಬ್ಬವನ್ನೇ ಆಚರಿಸಲಾಗುತ್ತದೆ.

ಫ್ರಾನ್ಸ್‌ನ ಮೆಂಟನ್‌ ನಗರದಲ್ಲಿ ನಿಂಬೆ ಹಣ್ಣಿನ ಹಬ್ಬ ನಡೆಯುತ್ತದೆ. ಆ ಸಂದರ್ಭದಲ್ಲಿ  ಇಡೀ ನಗರ ನಿಂಬೆ ಹಣ್ಣುಗಳಿಂದ ಕಂಗೊಳಿಸುತ್ತದೆ. ಆ ಹಬ್ಬದ ಹೆಸರು “ಫೆಟೆ ಡು ಸಿ ಸಿಟ್ರೊನ್‌’. ನಗರವಾಸಿಗಳು ಈ ಹಬ್ಬದ ಆಚರಣೆಯಲ್ಲಿ ಸಂಭ್ರಮದಿಂದ ತೊಡಗಿಕೊಳ್ಳುತ್ತಾರೆ. ಈ ನಗರದ ಪ್ರತಿಯೊಂದು ಕಡೆಗಳಲ್ಲಿ ನಿಂಬೆ ಹಣ್ಣಿನಿಂದ ನಿರ್ಮಿತಗೊಂಡ ಸುಂದರ ಕಲಾಕೃತಿಗಳು ಕಂಗೊಳಿಸುತ್ತವೆ. ಅದರ ಜೊತೆಗೆ ರಾತ್ರಿಯಲ್ಲಿ ನಿಂಬೆ ಬಣ್ಣವಾದ ಹಳದಿಯ ದೀಪಾಲಂಕಾರದ ರಂಗು ನೋಡುಗರ ಕಣ್ಮನ ಸೆಳೆಯುತ್ತದೆ.

ಏನೇನ್‌ ಮಾಡ್ತಾರೆ?
ಫ್ರೆಂಚರು ಬಹಳ ಸಡಗರ ಸಂಭ್ರಮದಿಂದ ಆಚರಿಸುವ  ಫೆಟೆ ಡು ಸಿ ಸಿಟ್ರೊನ್‌ ಎಂಬ ಹಬ್ಬವು ಇಂದು ವಿಶ್ವದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಈ ಹಬ್ಬದಲ್ಲಿ ಜಗತ್ತಿನ ಪ್ರಸಿದ್ದ ಸ್ಮಾರಕಗಳು, ಕಟ್ಟಡಗಳು, ವಿವಿಧ ಪ್ರಾಣಿಪಕ್ಷಿಗಳು, ಗೊಂಬೆಗಳು, ವಾದ್ಯ ಪರಿಕರಗಳು… ಹೀಗೆ ಬಗೆ ಬಗೆಯ ವಿನ್ಯಾಸದ ಕಲಾಕೃತಿಗಳು ನಿಂಬೆ ಹಣ್ಣುಗಳಿಂದ ನಿರ್ಮಾಣಗೊಂಡು ಜನರಲ್ಲಿ ಅಚ್ಚರಿ ಮೂಡಿಸುತ್ತವೆ. ಕಲಾಕೃತಿಗಳ ರಚನೆಯಲ್ಲಿ ನಿಂಬೆ ಹಣ್ಣುಗಳ ಜೊತೆಗೆ ಕಿತ್ತಳೆ ಹಣ್ಣನ್ನೂ ಬಳಸಲಾಗುತ್ತದೆ. ಪ್ರತಿ ವರ್ಷ ವಿಷಯವೊಂದನ್ನು ಆರಿಸಿಕೊಂಡು ಆ ವಿಷಯಕ್ಕೆ ಸಂಬಂಧಿಸಿದ ಕಲಾಕೃತಿಗಳನ್ನು ಮೂಡಿಸಲಾಗುತ್ತದೆ. 2015ರಲ್ಲಿ  ನಿಂಬೆ ಹಬ್ಬದ ವಿಷಯ “ಭಾರತ’ ಆಗಿತ್ತು. ಆ ವರ್ಷ ಭಾರತದ ಸ್ಮಾರಕಗಳನ್ನು ನಿಂಬೆಹಣ್ಣಿನಲ್ಲಿ ತಯಾರಿಸಿ ಸಂಭ್ರಮಿಸಿದ್ದರು. 

ನಿಂಬೆ ಹಣ್ಣಿನ ಮೆರವಣಿಗೆ
ಈ ನಿಂಬೆ ಹಬ್ಬ ಮೊದಲು ಶುರುವಾಗಿದ್ದು 1935ರಲ್ಲಿ. ಚಿಕ್ಕದಾಗಿ ಪ್ರಾರಂಭಗೊಂಡ ಈ ಹಬ್ಬಕ್ಕೆ ಈಗ ಪ್ರತಿ ವರ್ಷ ವಿಶ್ವದ ಹಲವೆಡೆಗಳಿಂದ ಸುಮಾರು ಒಂದೂವರೆ ಲಕ್ಷದಷ್ಟು ಪ್ರವಾಸಿಗರು ಬರುತ್ತಾರೆ. ಮೂರು ವಾರಗಳ ನಡೆಯುವ ಈ ಹಬ್ಬದಲ್ಲಿ ನಿಂಬೆಯ ಕಲಾಕೃತಿ ಪ್ರದರ್ಶನ ಮಾತ್ರವಲ್ಲ, ಮೆರವಣಿಗೆಯೂ ನಡೆಯುತ್ತೆ. ಈ ನಿಂಬೆ ಉತ್ಸವದಲ್ಲಿ ಹಲವು ಜಾನಪದ ಕಲೆಗಳ ಪ್ರದರ್ಶನವನ್ನೂ ನೋಡಬಹುದು. ಇಡೀ ಮೆಂಟನ್‌ ನಗರದ ರಸ್ತೆಗಳು, ಉದ್ಯಾನವನಗಳು, ಕಟ್ಟಡಗಳು ಬರೀ ನಿಂಬೆ ಹಣ್ಣುಗಳಿಂದಲೇ ಅಲಂಕಾರಗೊಂಡು, ಹಳದಿ ಮತ್ತು ಕೇಸರಿ ಬಣ್ಣದ ದೀಪಗಳಿಂದ ನೋಡುಗರ ಮನಸೂರೆಗೊಳ್ಳುತ್ತವೆ. ಕಲಾಕೃತಿಗಳ ತಯಾರಿಕೆಗೆ ಬಳಕೆಯಾಗುವ ನಿಂಬೆ ಹಣ್ಣುಗಳ ತೂಕ ಸುಮಾರು 145 ಟನ್‌ಗಳು! 300ಕ್ಕೂ ಹೆಚ್ಚು ಪರಿಣತರು ಈ ಕಲಾಕೃತಿಗಳ ತಯಾರಿಕೆಯಲ್ಲಿ ತೊಡಗುತ್ತಾರೆ.

ದಂಡಿನಶಿವರ ಮಂಜುನಾಥ್‌

ಟಾಪ್ ನ್ಯೂಸ್

4-dandeli

Dandeli: ಯಂತ್ರದಡಿ ಸಿಲುಕಿದ ಕಾರ್ಮಿಕ: ಕಾಲುಗಳಿಗೆ ಗಂಭೀರ ಗಾಯ

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

4-dandeli

Dandeli: ಯಂತ್ರದಡಿ ಸಿಲುಕಿದ ಕಾರ್ಮಿಕ: ಕಾಲುಗಳಿಗೆ ಗಂಭೀರ ಗಾಯ

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.