ಲೋಟವನ್ನು ಗಾಳಿಯಲ್ಲಿ ತೇಲಿಸಿ ಬಿಡಿ


Team Udayavani, Apr 26, 2018, 6:00 AM IST

1.jpg

ಕೊಕೊ ಕೋಲಾ, ಮಿರಿಂಡಾ, ಥಂಬ್ಸ್ಅಪ್‌ನಂಥ ಪಾನೀಯಗಳ ಜಾಹೀರಾತನ್ನು ನೋಡಿದ್ದೀರಲ್ವಾ? ಒಂದೇ ಒಂದು ಟಿನ್‌ ಪಾನೀಯಕ್ಕೋಸ್ಕರ ಹೀರೋ, ಹತ್ತಾರು ಲಾರಿಗಳ ಮೇಲೆ ಜಿಗಿದು, ಕಟ್ಟಡಗಳನ್ನು ಹಾರಿ, ಏಳುತ್ತಾ ಬೀಳುತ್ತಾ ಕೊನೆಗೂ ಬಾಟಲಿಯನ್ನು ಎತ್ತಿ ಗಟಗಟನೆ ಕುಡಿದು ಬಿಡುತ್ತಾನೆ!…ಅಬ್ಬಬ್ಟಾ ಒಂದು ಟಿನ್‌ಗೊಸ್ಕರ ಎಷ್ಟೊಂದು ಸರ್ಕಸ್‌ ಮಾಡ್ತಾರಲ್ವಾ? ಆದರೆ, ಅದೇ ಟಿನ್‌ಗಳನ್ನು ಬಳಸಿ  ತುಂಬಾ ಸುಲಭವಾಗಿ ಮ್ಯಾಜಿಕ್‌ ಮಾಡಬಹುದು. ನೀವು ಹಾರಿ, ಎಗರೋದೇ ಬೇಡ, ಹಾಗೆಯೇ ಟಿನ್‌ ಜೊತೆಗೆ ಲೋಟವನ್ನೂ ತೇಲಿಸಿಬಿಡಬಹುದು. ಹಾಂ, ಹಾಗಂದ ಮಾತ್ರಕ್ಕೆ ಪಾನೀಯ ಕುಡಿದವರಿಗೆಲ್ಲಾ ಆ ಶಕ್ತಿ ಬರುವುದಿಲ್ಲ. ಮತ್ತೆ ಆ ಶಕ್ತಿ ಪಡೆದುಕೊಳ್ಳೋದು ಹೇಗಂತೀರಾ…  

ಬೇಕಾಗುವ ವಸ್ತುಗಳು: ಮೆಟಲ್‌ ಟಿನ್‌, ಸ್ವಲ್ಪ ದಪ್ಪನೆಯ ಪ್ಲಾಸ್ಟಿಕ್‌ ಲೋಟ, ತಂತಿ, ಕಪ್ಪು ದಾರ, ಹುಕ್‌ (ಕೊಂಡಿ)

ಪ್ರದರ್ಶನ: ಜಾದೂಗಾರನ ಬಳಿ ಮುಚ್ಚಳ ತೆಗೆದ ಒಂದು ಮೆಟಲ್‌ ಟಿನ್‌ ಹಾಗೂ ಪ್ಲಾಸ್ಟಿಕ್‌ ಲೋಟ ಇರುತ್ತದೆ. ಆತ ಟಿನ್‌ನಿಂದ ಪಾನೀಯವನ್ನು ಲೋಟಕ್ಕೆ ಸುರಿಯುತ್ತಾನೆ. ಹಾಗೆ ಸುರಿಯುತ್ತಾ ನಿಧಾನಕ್ಕೆ ಟಿನ್‌ಅನ್ನು ಮೇಲಕ್ಕೆತ್ತುತ್ತಾನೆ. ಟಿನ್‌ನ ಜೊತೆ ಜೊತೆಗೆ ಲೋಟವೂ ಕೂಡ ಗಾಳಿಯಲ್ಲಿ ಮೇಲಕ್ಕೆ ಬರುತ್ತದೆ. 

ತಯಾರಿ: ಈ ಜಾದೂವಿನ ರಹಸ್ಯ ಅಡಗಿರುವುದು ಪ್ಲಾಸ್ಟಿಕ್‌ ಲೋಟ ಮತ್ತು ದಾರವನ್ನು ಸೇರಿಸಿ ಕಟ್ಟಲಾಗಿರುವ ಒಂದು ಕಪ್ಪು ದಾರದಲ್ಲಿ. ಅಂದರೆ, ಮೊದಲಿಗೆ ಲೋಟದ ಬಾಯಿಗೆ ಅಡ್ಡಲಾಗಿ ತೆಳ್ಳನೆಯ ತಂತಿ ಕಟ್ಟಬೇಕು. ನಂತರ ಒಂದು ಕಪ್ಪು ದಾರವನ್ನು ತಂತಿ ಮತ್ತು ಟಿನ್‌ನ ನಡುವೆ ಕಟ್ಟಬೇಕು. ಪಾನೀಯವನ್ನು ಟಿನ್‌ನಿಂದ ಸುರಿಯುತ್ತಾ, ಇನ್ನೊಂದು ಕೈಯಲ್ಲಿ ಹಿಡಿರುವ ಲೋಟವನ್ನು ಸಡಿಲಬಿಡಿ. ಈಗ ಟಿನ್‌ಅನ್ನು ಮೇಲಕ್ಕೆತ್ತಿದಾಗ ಅದರ ಜೊತೆಗೆ ಲೋಟವೂ ಮೇಲಕ್ಕೆ ಬರುತ್ತದೆ. ಮೇಲಕ್ಕೆತ್ತದೆ ಅಲ್ಲೇ ಬಿಟ್ಟರು ಒಳ್ಳೆಯದೇ.  ಈ ಜಾದೂವನ್ನು ಪ್ರಯೋಗಿಸುವಾಗ ನೀವು ಯಾವ ಬಣ್ಣದ ದಾರವನ್ನು ಬಳಸುತ್ತೀರೋ, ಹಿಂಭಾಗದಲ್ಲಿ ಅದೇ ಬಣ್ಣದ ಸ್ಕ್ರೀನ್‌ ಇದ್ದರೆ ಉತ್ತಮ. ಆಗ ಕಟ್ಟಿರುವ ದಾರ ಪ್ರೇಕ್ಷಕರಿಗೆ ಕಾಣಿಸುವುದಿಲ್ಲ. ಪ್ರದರ್ಶನಕ್ಕೂ ಮೊದಲು ಪ್ರಯೋಗಿಸಿ ಕರಗತ ಮಾಡಿಕೊಳ್ಳಿ.  

ವಿನ್ಸೆಂಟ್‌ ಲೋಬೋ

ಟಾಪ್ ನ್ಯೂಸ್

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

5

Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ

Malaysian ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

BJP ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ, ನಾಳೆ ಕಾಂಗ್ರೆಸ್ ಸೇರ್ಪಡೆ

BJP ಯಿಂದ ನಿರ್ಲಕ್ಷ್ಯ… ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ

Kollywood: ಚಿನ್ನದ ಅಡ್ಡೆಗೆ ʼಕೂಲಿʼಯಾಗಿ ಬಂದ ತಲೈವರ್; ಟೈಟಲ್‌ ಟೀಸರ್‌ ಔಟ್

Kollywood: ಚಿನ್ನದ ಅಡ್ಡೆಗೆ ʼಕೂಲಿʼಯಾಗಿ ಬಂದ ತಲೈವರ್; ಟೈಟಲ್‌ ಟೀಸರ್‌ ಔಟ್

Aravind kejriwal

Insulin: ಶುಗರ್ ಲೆವೆಲ್ ಏರಿಕೆ… ಜೈಲಿನಲ್ಲಿರುವ ಕೇಜ್ರಿವಾಲ್ ಗೆ ಇನ್ಸುಲಿನ್ ನೀಡಿಕೆ

Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ

Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

BJP members: 2 ಕೋಟಿ ಪತ್ತೆ; ಬಿಜೆಪಿಯ ಮೂವರ ಮೇಲೆ ಕೇಸ್‌

BJP members: 2 ಕೋಟಿ ಪತ್ತೆ; ಬಿಜೆಪಿಯ ಮೂವರ ಮೇಲೆ ಕೇಸ್‌

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

5

Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ

ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್‌ ಹೆಗ್ಡೆ

ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್‌ ಹೆಗ್ಡೆ

Lok Sabha Election: ಕಾಂಗ್ರೆಸ್‌ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ

Lok Sabha Election: ಕಾಂಗ್ರೆಸ್‌ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.