ಸಮುದ್ರ ಉಪ್ಪಾಗಿದ್ದೇಕೆ?


Team Udayavani, Jun 14, 2018, 6:00 AM IST

m-12.jpg

ಬಹಳ ಹಿಂದೆ ಸಮುದ್ರದ ನೀರು ಸಿಹಿಯಾಗಿತ್ತಂತೆ. ಜನರು ವಾರಕ್ಕೊಮ್ಮೆ ದೋಣಿ ಮೂಲಕ ಸಮುದ್ರ ದಾಟಿ ದ್ವೀಪವೊಂದರಲ್ಲಿದ್ದ ಉಪ್ಪಿನ ಬೆಟ್ಟದಿಂದ ಉಪ್ಪನ್ನು ಹೊತ್ತುತರುತ್ತಿದ್ದರು. ಒಮ್ಮೆ ಹಳ್ಳಿಯಲ್ಲಿ ಉಪ್ಪು ಖಾಲಿಯಾಗಿತ್ತು. ಎಂದಿನಂತೆ ಬೆಟ್ಟಕ್ಕೆ ಹೋಗೋಣಎಂದರೆ ವಿಪರೀತ ಗಾಳಿ. ಸಣ್ಣ ಪುಟ್ಟ ದೋಣಿಗಳು ಮುಳುಗುವ ಅಪಾಯ ಹೆಚ್ಚಾಗಿತ್ತು. ಹಳ್ಳಿಯ ಮುಖಂಡರು ಸಭೆ ಸೇರಿದರು. ಎಲ್ಲರೂ ಚರ್ಚಿಸಿ ಊರ ಹೊರಗೆ ಕಾಡಿನಲ್ಲಿದ್ದ ರಾಕ್ಷಸನ ಸಹಾಯ ಪಡೆಯುವ ತೀರ್ಮಾನಕ್ಕೆ ಬಂದರು. ಅಂಗಾಲೋ ಎಂಬ ಆ ರಾಕ್ಷಸ, ದೈತ್ಯದೇಹಿ. ಆತ ನಡೆದರೆ ಭೂಮಿ ನಡುಗುತ್ತಿತ್ತು. ಅವನ ಕೈಗಳು ನಾಲ್ಕೆçದು ತೆಂಗಿನ ಮರಗಳಷ್ಟು ಉದ್ದವಾಗಿದ್ದವು. ಆದರೆ ಅಂಗಾಲೋ ಮೃದು ಸ್ವಭಾವದವನಾಗಿದ್ದ. ಹಳ್ಳಿಯವರು ಸಹಾಯ ಕೇಳಿದಾಗ ಅವನು ಒಪ್ಪಿದ. ಅದರಂತೆ ಅಂಗಾಲೊ ತನ್ನ ಕಾಲನ್ನು ಸಮುದ್ರದಲ್ಲಿಟ್ಟ. ಊರವರು ಅವನ ಕಾಲನ್ನು ಸೇತುವೆಯಾಗಿ ಬಳಸಿಕೊಂಡರು.

ಅದೇ ಸಮಯದಲ್ಲಿ ಅವನ ಹೆಬ್ಬೆರಳು ಕೆಂಪಿರುವೆಯ ಗೂಡಿನ ಮೇಲೆ ಬಿತ್ತು. ಇರುವೆಗಳು ಅವನ ಕಾಲುಗಳ ಮೇಲೆ ಹರಿದಾಡತೊಡಗಿದವು. ಅಂಗಾಲೋಗೆ ಇರುವೆಯೆಂದರೆ ಎಲ್ಲಿಲ್ಲದ ಭಯ. ಆದರೆ ಕಾಲು ಅಲುಗಾಡಿಸಿದರೆ ಅದರ ಮೇಲೆ ಉಪ್ಪು ಸಾಗಿಸುತ್ತಿದ್ದ ಹಳ್ಳಿಗರು ಸಮುದ್ರ ಪಾಲಾಗುವುದು ಖಚಿತವಾಗಿತ್ತು. ಹೀಗಾಗಿ ಹಳ್ಳಿಗರು ದ್ವೀಪ ತಲುಪುವವರೆಗೆ ಕಾದು ನಂತರ ಕಾಲನ್ನು ನೀರಿನಲ್ಲಿ ಮುಳುಗಿಸಿದ. ಇತ್ತ ಹಳ್ಳಿಗರು ಉಪ್ಪು ತೆಗೆದುಕೊಂಡು ವಾಪಸ್‌ ಮರಳಲು ಅಂಗಾಲೋಗಾಗಿ ಕಾದರು. ಈ ಬಾರಿ ಹಳ್ಳಿಗರು ದೊಡ್ಡ ಪ್ರಮಾಣದಲ್ಲಿ ಉಪ್ಪನ್ನು ತಂದಿದ್ದರು. ಅಂಗಾಲೋ ಬಂದು ಕಾಲನ್ನಿಟ್ಟ. ಹಳ್ಳಿಗರು ಅದರ ಮೇಲೆ ನಡೆಯುತ್ತಿದ್ದಾಗ ಕೆಂಪಿರುವೆಗಳು ಮತ್ತೆ ದಾಳಿ ನಡೆಸಿದವು. ಅಂಗಾಲೋ ಕಾಲು ಕೊಡವಿದ. ಇರುವೆ ಜೊತೆಗೆ ಉಪ್ಪು ಸಮುದ್ರ ಪಾಲಾಯಿತು. ನೀರಿನಲ್ಲಿ ಬಿದ್ದ ಹಳ್ಳಿಗರನ್ನು ತಾನೇ ರಕ್ಷಣೆ ಮಾಡಿದ. ಉಪ್ಪು ನೀರಿಗೆ ಬಿದ್ದಿದ್ದರಿಂದ ಸಮುದ್ರ ಆವತ್ತಿನಿಂದ ಉಪ್ಪಾಯಿತು.

ಡಾ. ಕೆ. ಎಸ್‌. ಚೈತ್ರಾ

ಟಾಪ್ ನ್ಯೂಸ್

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.