ಹರಿಯದ ನೋಟು


Team Udayavani, Jun 28, 2018, 6:00 AM IST

e-1.jpg

ಪೆನ್ಸಿಲ್‌ ತೆಗೆದುಕೊಂಡು, ಹಾಳೆಗೆ ಚುಚ್ಚಿದರೆ ಏನಾಗುತ್ತದೆ? ಹಾಳೆ ತೂತಾಗುತ್ತದೆ. ಅದೇ ಪೆನ್ಸಿಲ್‌ನಿಂದ ನೋಟಿಗೆ (ಕರೆನ್ಸಿ ನೋಟು) ಚುಚ್ಚಿದರೆ ಏನಾಗುತ್ತೆ? ಅದೂ ಕೂಡಾ ತೂತಾಗುತ್ತೆ ಅನ್ನೋದು ಸಾಮಾನ್ಯವಾಗಿ ಎಲ್ಲರೂ ಕೊಡುವ ಉತ್ತರ. ಆದರೆ ಏನೂ ಆಗುವುದಿಲ್ಲ ಎಂದು ನಾವು ಹೇಳುತ್ತಿದ್ದೇವೆ. ಆಶ್ಚರ್ಯ ಆಗುತ್ತಿದೆ ಇಲ್ವಾ? ಅದೇ ಈ ಮ್ಯಾಜಿಕ್‌ ಸ್ವಾರಸ್ಯ. 

ಬೇಕಾಗುವ ವಸ್ತು: ವಿದೇಶಿ ನೋಟು(ಆಟವಾಡಲು ಬಳಸುವ ಡಮ್ಮಿ ಕರೆನ್ಸಿ), ಪೆನ್ಸಿಲ್‌ ಹಾಗೂ ಪೇಪರ್‌/ ಹಾಳೆ. 

ಪ್ರದರ್ಶನ: ನೋಟಿನ ಮೇಲೆ ತೂತು ಮಾಡಬೇಕಾಗಿರುವುದರಿಂದ ಈ ಮ್ಯಾಜಿಕ್‌ಗೆ ನಿಜವಾದ ಭಾರತೀಯ ನೋಟನ್ನು ಬಳಸಬಾರದು. ಅದರ ಬದಲಾಗಿ ಫ್ಯಾನ್ಸಿ ಸ್ಟೋರುಗಳಲ್ಲಿ ದೊರೆಯುವ ಆಟದ ವಿದೇಶಿ ನೋಟನ್ನು ಬಳಸಬಹುದು. ಜಾದೂಗಾರನ ಕೈಯಲ್ಲಿ ಒಂದು ನೋಟು ಹಾಗೂ ನೋಟಿಗಿಂತ ಸ್ವಲ್ಪ ದೊಡ್ಡದಾದ ಒಂದು ಪೇಪರ್‌ ಇದೆ. ಆತ, ನೋಟನ್ನು ಪ್ರೇಕ್ಷಕರಿಗೆ ತೋರಿಸುತ್ತಾ, ಅದನ್ನು ಪೇಪರ್‌ನೊಳಗೆ ಇಟ್ಟು (ಪರ್ಸ್‌ನಲ್ಲಿ ನೋಟುಗಳನ್ನು ಒಂದರ ಮೇಲೆ ಒಂದು ಇಡುವಂತೆ) ಅದನ್ನು ಒಂದು ಬಾರಿ ಮಡಚುತ್ತಾನೆ. ನಂತರ ಚೂಪಾದ ಪೆನ್ಸಿಲ್‌ ತೆಗೆದುಕೊಂಡು, ಪೇಪರ್‌ ಹಾಗೂ ನೋಟನ್ನು ಸೇರಿಸಿ ಒಳಗಿನಿಂದ ಚುಚ್ಚುತ್ತಾನೆ. ಪೇಪರ್‌ ಹಾಗೂ ನೋಟನ್ನು ಛೇದಿಸಿಕೊಂಡು ಪೆನ್ಸಿಲ್‌ ಹೊರಕ್ಕೆ ಬರುತ್ತದೆ. ನಂತರ ಪೆನ್ಸಿಲ್‌ ಅನ್ನು ಹೊರಕ್ಕೆ ತೆಗೆದು, ಪೇಪರ್‌ ಹಾಗೂ ನೋಟನ್ನು ಬೇರೆ ಬೇರೆ ಮಾಡಿ ತೋರಿಸುತ್ತಾನೆ. ಪೆನ್ಸಿಲ್‌ನಿಂದ ಚುಚ್ಚಲ್ಪಟ್ಟ ಪೇಪರ್‌ಗೆ ರಂಧ್ರವಾಗಿರುತ್ತದೆ. ಆದರೆ, ನೋಟಿಗೆ ಯಾವುದೇ ತೊಂದರೆಯಾಗಿರುವುದಿಲ್ಲ.
  
ತಯಾರಿ: ನೀವು ತೆಗೆದುಕೊಳ್ಳುವ ನೋಟನ್ನು ಚಿತ್ರದಲ್ಲಿ ತೋರಿಸಿರುವಂತೆ ಮಧ್ಯದಲ್ಲಿ ಒಂದಿಂಚು ಉದ್ದ ಕತ್ತರಿಸಬೇಕು. ನಂತರ ನೋಟನ್ನು, ಪೇಪರ್‌ನೊಳಗೆ ಇಟ್ಟು ಮಡಚಿರಿ. ಈಗ ನೋಟಿನಲ್ಲಿ ಕೊರೆದ ರಂಧ್ರದ ಒಳಗಿನಿಂದ ಪೆನ್ಸಿಲ್‌ ತೂರಿಸಿ. ಅಲ್ಲಿಂದ ತೂರಿ ಬಂದ ಪೆನ್ಸಿಲ್‌, ಪೇಪರ್‌ ಅನ್ನು ಛೇದಿಸಿ ಹೊರಕ್ಕೆ ಬರುತ್ತದೆ. ಕೊನೆಗೆ, ಪೇಪರ್‌ ಹಾಗೂ ನೋಟನ್ನು ಪ್ರೇಕ್ಷಕರಿಗೆ ತೋರಿಸುವಾಗ, ಪೇಪರ್‌ ಮೇಲಿನ ರಂಧ್ರ ಕಾಣಿಸುತ್ತದೆ. ಆದರೆ, ನೋಟಿನ ಮೇಲೆ ನೀವು ಮೊದಲೇ ಮಾಡಿದ್ದ ಕತ್ತರಿ ಕೆಲಸ ಯಾರಿಗೂ ಕಾಣಿಸುವುದಿಲ್ಲ. ಪೆನ್ಸಿಲ್‌ಅನ್ನು ನೋಟಿನ ರಂಧ್ರದೊಳಗೆ ತೂರಿಸುವಾಗ, ಜಾಗೃತೆ ವಹಿಸಿ.

ವಿನ್ಸೆಂಟ್‌ ಲೋಬೋ

ಟಾಪ್ ನ್ಯೂಸ್

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

13

Politics: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮುಸ್ಲಿಂ ಮೂಲಭೂತವಾದಿಗಳು ಹೆಚ್ಚಳ; ಅಶೋಕ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.